ಕಾವ್ಯಯಾನ

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಗದಗ ಹೊಲದ ಇಳಿಜಾರಿಗೆ ಅಡ್ಡ ನೇಗಿಲ ಸಾಲುಗಳ ತೆರೆದ ಮಣ್ಣಿನ ಮಗ| ಅಂಬರದ ಎದೆ ಸೀಳಿ ಮುಗಿಲ್ವನಿಗಳ ಗೂಡು ಕಟ್ಟಿದ ಮಣ್ಣಿನ ಮಗ|| ಒಕ್ಕಲುತನ ಕಲೆ ವಿಜ್ಞಾನ ವಾಣಿಜ್ಯಗಳ ಸಂಗಮ ಎಂದು ತೋರಿಸಿದ ಜಂಗಮ| ನೆಲದ ಜ್ವರದ ಪರಿಗೆ ವಲಸೆ ಹೋಗುವ ತಥಿಗಳಿಗೆ ಲಗಾಮ ಜಡಿದ ಮಣ್ಣಿನ ಮಗ|| ಆಗಮೆ ಮಾಡಿದರೂ ಬೀಯಕ್ಕೆ ಭತ್ತವಿಲ್ಲದೆ ಅಗುಳು ಅನ್ನಕ್ಕಾಗಿ ಚೀರಾಟ| ಮೋಡಗಳ ಮೈಥುನವನ್ನು ಕೆರೆ ಕಟ್ಟೆ ಬಾವಿಗಳಲ್ಲಿ ಸಂಗ್ರಹಿಸಿದ ಮಣ್ಣಿನ ಮಗ|| ಗಡಿಯಾರದಂತೆ ತಿರುಗುವ […]

ಕಾವ್ಯಯಾನ

ಋಜುವಾತು ಮಾಡಬೇಕಿದೆ ರೇಶ್ಮಾಗುಳೇದಗುಡ್ಡಾಕರ್ ನನ್ನೊಳಗಿನ ನಾನುಋಜುವಾತು ಮಾಡಬೇಕಿದೆ ನನ್ನೊಳಗಿನ ನಾನು ಋಜುವಾತುಮಾಡಬೇಕಿದೆಎದೆಗೆ ಇಟ್ಟ ಕೊಳ್ಳಿಅರುವ ಮುನ್ನಹರಳುಗಟ್ಟಿದ ನೆನಪುಗಳುಹನಿಯಾಗಿ ಹರಿಯುವ ಮುನ್ನಸೋಗಿನ ಕಡಲಲ್ಲಿ ಅಲೆಯಾಗುವ ಮುನ್ನನನ್ನೊಳಗಿನ ನಾನುಋಜುವಾತು ಮಾಡಬೇಕಿದೆ ….. ಬಣ್ಣ ಬಣ್ಣದ ನೋಟಗಳುಮನದ ಹಂದರ ಸೇರುವ ಮುನ್ನಮೋಹ ಸಲೆಗೆ ಅಡಿಯಾಳಾಗುವ ಮುನ್ನವಾಸ್ತವದ ತಳಹದಿಯ ಮರೆಮಾಚಿಭ್ರಮರ ಲೋಕಕೆ ಕಾಲಿಡುವ ಮುನ್ನಬಾಂಧವ್ಯ ದ ಆಚೆಗೊಸ್ನೇಹದ ಸೆಳೆತದಾಚೆಗೊ ನನ್ನ ನಾಋಜುವಾತು ಮಾಡಬೇಕಿದೆ …. ಏಳಿಗೆಯ ಬೇರುಗಳ ಕತ್ತರಿಸಿಹಿಂದೆ ಮುಂದೆ ನಿಂದನೆಗೆ ಆಹಾರಮಾಡಿ ನಾಜೂಕು ಮಾತುಗಳಾಡುತನಮ್ಮೊಳಗೆ ಬೇರೆತು ದೂರ ಇರುವವರುಕತ್ತಿಮಸೆಯುವ ಮುನ್ನ ನನ್ನೊಳಗಿನನಾನು […]

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಬಾಳಿನೆಲ್ಲ ಏಳುಬೀಳುಗಳ ದಾಟಿದ್ದೇನೆ ಕಾಲವೇ ಮುನ್ನಡೆಸು ನನ್ನ ಗೋಳಿನೆಲ್ಲ ಸರಮಾಲೆಗಳ ಬಿಸುಟಿದ್ದೇನೆ ಕಾಲವೇ ಮುನ್ನಡೆಸು ನನ್ನ ನಂಜಾದ ಅವನ ಕಹಿನೆನಪುಗಳು ಅಸ್ತಿತ್ವವನ್ನೇ ಬಲಿಪಡೆಯುತ್ತಿವೆ ಅಂತರಾಳದಿ ನೋವನ್ನೆಲ್ಲ ಹೂಳಿದ್ದೇನೆ ಕಾಲವೇ ಮುನ್ನಡೆಸು ನನ್ನ ಹೂವಿಂದ ಹೂವಿಗೆ ಹಾರುವ ದುಂಬಿ ಅವನೆಂದು ತಿಳಿಯಲಿಲ್ಲ ತಪ್ಪಿನ ಅರಿವಾಗಿ ಎಚ್ಚೆತ್ತುಕೊಂಡಿದ್ದೇನೆ ಕಾಲವೇ ಮುನ್ನಡೆಸು ನನ್ನ ವಂಚನೆಯ ಕತ್ತಿಯೇಟಿಗೆ ಹೃದಯದ ಗಾಯವಿನ್ನೂ ಮಾಯಬೇಕಿದೆ ಸತ್ತ ಕನಸಿಗೆ ಜೀವ ತುಂಬಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ ಜೀವನಕ್ಕೆ ಬೆನ್ನು ತಿರುಗಿಸಿ ಹೇಡಿಯಂತೆ ಸಾವ ಬಯಸದಿರು […]

ಕಾವ್ಯಯಾನ

ಇವನೊಂದಿಗೆ ಅವನನ್ನೂ ಧಾಮಿನಿ ಸತ್ತಂತಿದ್ದೆನು ನಾನುಅದಕೆ ಕಾರಣ ನೀನು ಏನೊಂದೂ ಅರಿವಾಗಲಿಲ್ಲತಿಳಿಯುವಷ್ಟರಲ್ಲಿ ಮುಗಿದಿತ್ತೆಲ್ಲ ಮೈ ತುಂಬಾ ಚೇಳುಅದಕಿಂತ ಸಾವೇ ಮೇಲು ಮೈಯೋ ಬೆಣ್ಣೆಯಂತೆ ಮೃದುಮನಸೋ ಕಲ್ಲಿನಂತೆ ಕಠಿಣ ತಾನಾಗಿ ಚಲಿಸಲಿಲ್ಲ ಒಂದೂ ಬೆರಳುಬಲವಂತಕ್ಕಾಗಿ ಚೀರಿದವುಎಲ್ಲಾ ನರಳು ಸತ್ತಂತಿದ್ದೆನು ನಾನುಅದಕೆ ಕಾರಣ ನೀನು. ಹುಚ್ಚಿಇವನನ್ನು ಅವನೆಂದು ತಿಳಿಯಬಾರದಿತ್ತೇಹಬ್ಬವೇ ಆಗಿಹೋಗುತಿತ್ತಲ್ಲೆ! ಬರೀ ಗಂಡಸರಷ್ಟೇ ಇವಳೊಂದಿಗೆ ಅವಳನ್ನುಹೋಲಿಸಿಕೊಳ್ಳುವುದೇ? ನಮಗೇನು ಹಕ್ಕಿಲ್ಲವೇಇವನೊಂದಿಗೆ ಅವನನ್ನೂ ಮುಡಿದುಕೊಳ್ಳುವುದು. ********

ಕಾವ್ಯಯಾನ

ನಿಸಾರ ನಮನ ಗಝಲ್ ರೇಮಾಸಂ ಹತ್ತನೇ ವಯಸ್ಸಲೇ ಮಿಂದೆದ್ದ ಕಾವ್ಯ ಕವಿ ಅಹ್ಮದ ನಿಸಾರ ನಿತ್ಯೋತ್ಸವ/ ಜಲಪಾತ ಪ್ರಥಮ ಭಾವಗೀತೆ ಪತ್ರಿಕೆಲಿ ಪ್ರಕಟಿಸಿದ ಹರಿಕಾರ ನಿತ್ಯೋತ್ಸವ// ಮೃದು ಮಾತಿನ ಭಾವುಕದ ಸಾಹಿತಿಯೇ ಮೋಡದಲೇಕೆ ಮರೆಯಾದಿರಿ/ ಬುದ್ದಿಜೀವಿ ಸಂವೇದನಾಶೀಲ ಭಾವದ ಚಿಂತನಕಾರ ನಿತ್ಯೋತ್ಸವ// ರಾಜಕೀಯ ಸಮರ್ಥ ವಿಡಂಬನೆಯಲಿ ಕುರಿಗಳು ಸಾರ್ ಕುರಿಗಳು ಎಷ್ಟು ಚಂದ/ ಬೆಣ್ಣೆ ಕದ್ದವ ಕೃಷ್ಣನೆಂದು ತೋರಿದ ಪ್ರತಿಭಾಕಾರ ನಿತ್ಯೋತ್ಸವ// ಭಾವೈಕ್ಯದ ರುವಾರಿ ಕರುನಾಡಿನ ರಾಯಭಾರಿಯು ನೀವಲ್ಲವೇ/ ಕನ್ನಡದಲ್ಲಿ ಸಾರೆ ಜಹಾಂಸೆ ಅಛ್ಛಾ ನುಡಿಸಿದ ಗೀತಕಾರ […]

ನಿತ್ಯೋತ್ಸವ ಕವಿ

ಬದುಕು-ಬರಹ ನಿತ್ಯೋತ್ಸವ ಕವಿ ಹಾಗೂ ವಿಮರ್ಶಕ ಮತ್ತು ವೈಚಾರಿಕ ಬರಹಗಾರ ಪ್ರೊ.ಕೆ.ಎಸ್. ನಿಸಾರ್ ಮಹಮದ್..! ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ 05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು… ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ, ಪ್ರೌಢಶಾಲೆಗೆ ಹೊಸಕೋಟೆ […]

ಗುರುವಂದನೆ

ಗುರುವಂದನೆ ಪೂರ್ಣಿಮ ಸುರೇಶ್ ಗೃಹಬಂಧಿಯಾಗಿ ಕರೋನ ಪೊಸಿಟಿವ್,ನೆಗಟಿವ್,ಹಸಿರು,ಹಳದಿ,ಕೆಂಪು ಅನ್ನುವ ಸುದ್ದಿಮಾಯೆಯ ಸೆಳೆತಕ್ಕೆ ಹೊಂದಿಸಿಕೊಂಡು.ಮೌನ ಹೊದ್ದ ದಿನಗಳು ತೆವಳುತ್ತಿದೆ. ಇಂತಹ ಸಮಯದಲ್ಲೇ ಬೆಂಗಳೂರಿನ ಗೆಳೆಯರೊಬ್ಬರು ಕರೆ ಮಾಡಿ ‘ನಿಸಾರ್ ಹೋಗಿಬಿಟ್ರಲ್ವಾ’..ಮನಸ್ಸು ಒಪ್ಪಲಾರದ,ಬುದ್ದಿ ಗ್ರಹಿಸಲಾರದ ಏನನ್ನೋ ಆಡುತ್ತಿದ್ದಾರೆ. ಉತ್ತರಿಸಲಾಗದ ಮಂಕು ಕವಿಯಿತು. ವಾಟ್ಸಫ್ ತೆರೆದರೆ ಆಗಲೇ ಹಲವಾರು ಸ್ನೇಹಿತರು ಸಂದೇಶ ಕಳುಹಿಸಿದ್ರು. ಒಳಹೊರಗೆಲ್ಲ ಸೂತಕ. ಸಾರ್..ಹೋಗಿಬಿಟ್ರೇ..ಸಾಧ್ಯವೇ ಇದು..ಟಿ.ವಿಯಲ್ಲೂ ಅದೇ ಸುದ್ದಿ..ಬಂಧು,ಗುರು,ಮಾರ್ಗದರ್ಶಿ..ಇನ್ನಿಲ್ಲ. ಹೇಗೆ ನಂಬಲಿದನ್ನು..ಸುಳ್ಳಾಗಬಾರದೇ.. ಅಂತರಂಗದಲ್ಲಿ ಕಚ್ಚಿಕೊಂಡ ನೆನಪುಗಳು,ಬರಹಗಳು ಮಾತ್ರ ನಮ್ಮ ಜೊತೆ. ನಿಸಾರ್ ಸಾರ್ ಗೆ ನಮ್ಮ ಉಡುಪಿಯ ಜೊತೆ […]

ಕಾವ್ಯಯಾನ

ಯಾನ ಪ್ರೊ.ಕವಿತಾ ಸಾರಂಗಮಠ ಲೋಕದಿ ಆವರಿಸಿದೆ ಕೊರೊನಾ ಛಾಯೆ ನಿತ್ಯೋತ್ಸವದ ಬೆಳಕು ಆರಿತಾವ ಮಾಯೆ! ನವ್ಯ ಕಾವ್ಯದ ನೇತಾರ ಕನ್ನಡದ ಕುರಿತ ಪ್ರೀತಿ ಅಪಾರ! ಕುರಿಗಳು ಸಾರ್ ಕುರಿಗಳು ರಾಜಕೀಯ ವಿಡಂಬನೆ ಮನದಲಿಲ್ಲ ನಾ ಸಾಹಿತಿ ಎಂಬ ಅಹಂಭಾವನೆ! ಪಡೆದದ್ದು ಪದವಿ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಕನ್ನಡ ಸಾಹಿತ್ಯದಲ್ಲಿ ಏರಿದರು ಶಿಖರ! ನಗುವಿನ ದಿನವೇ ನಿಧನ ಇದುವೇ ವಿಧಿಯ ವಿಧಾನ! ಕನ್ನಡ ಸಾಹಿತ್ಯದಲ್ಲಿ ಮಾಡಿದರು ಕ್ರಾಂತಿ ವಿಧಿವಶರಾದ ಇವರ ಆತ್ಮಕ್ಕೆ ದೊರೆಯಲಿ ಶಾಂತಿ! ಒಮ್ಮೆ ನಗು ಒಮ್ಮೆ […]

ನಿತ್ಯೋತ್ಸವವಿನ್ನು ನೆನಪು

ನಿಂತು ಹೋದ ನಿತ್ಯೋತ್ಸವ ಕೆ.ಎಸ್.ನಿಸಾರ್ ಅಹಮದ್ ನಿತ್ಯೋತ್ಸವ ಕವನ’ ನಿಲ್ಲಿಸಿದ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್..! ನಿತ್ಯೋತ್ಸವದ ಕವಿ ಎಂದೇ ಖ್ಯಾತರಾದ ಕನ್ನಡ ಹಿರಿಯ ಕವಿ ಪ್ರೊ. ಕೆ.ಎಸ್‌ ನಿಸಾರ್ ಅಹಮದ್ ಅವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು… ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆಬ್ರುವರಿ 5ರಂದು ಜನಿಸಿದವರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ […]

ನುಡಿ ನಮನ

ನುಡಿ ನಮನ ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು ಕಾಣುವುದು ಎಲ್ಲೆಲ್ಲು ವಿಶ್ವರೂಪ_ _ಕೆ.ಎಸ್.ನಿಸ್ಸಾರ ಒಬ್ಬ ಕವಿಯಾಗಿ,ಭಾವ ಜೀವಿಯಾಗಿ,ನಾನೆಂಬ ಪರಕೀಯರೊಳು ಒಂದಾಗಿ,ಪ್ರೇಮ ಕವಿಯಾಗಿ, ನಿತ್ಯೋತ್ಸವದ ಜೀವವಾದ ಕವಿ,ಲೇಖಕನ ಸೇವೆ ಅಗಣಿತವಾದ ಪರಿಧಿಯೋಳು ನೆಲೆನಿಲ್ಲಲು ಇವರ ಕವಿತೆಗಳೇ ಸಾಕ್ಷಿ..! ನಾಡು ನುಡಿಗೆ ಕಹಳೆಯುದಿದ ನಿಷ್ಠಾವಂತ ಯೋಧ… ** “ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ನೀರೆಂದರೆ ಬರಿ ಜಲವಲ್ಲ ಅದು ಪಾವನತೀರ್ಥ”…. ಇಡೀ ಕರುನಾಡ ಸೊಗಡನ್ನು ಕನ್ನಡಿಗರಿಗೆ ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ.ಕನ್ನಡ ನಾಡಲ್ಲಿ ಹುಟ್ಟುವುದೇ ಪುಣ್ಯ.ಇದು ಬರಿ ಗಡಿನಾಡಲ್ಲಿ ಗುರುತಿಸಿದ ನಾಡಲ್ಲ..ಕನ್ನಡಿಗರ […]

Back To Top