ಕಾವ್ಯಯಾನ

ಯಾನ

It is a rare honour to inaugurate Dasara": Prof. K.S. Nissar Ahmed ...

ಪ್ರೊ.ಕವಿತಾ ಸಾರಂಗಮಠ

ಲೋಕದಿ ಆವರಿಸಿದೆ ಕೊರೊನಾ ಛಾಯೆ
ನಿತ್ಯೋತ್ಸವದ ಬೆಳಕು ಆರಿತಾವ ಮಾಯೆ!

ನವ್ಯ ಕಾವ್ಯದ ನೇತಾರ
ಕನ್ನಡದ ಕುರಿತ ಪ್ರೀತಿ ಅಪಾರ!

ಕುರಿಗಳು ಸಾರ್ ಕುರಿಗಳು ರಾಜಕೀಯ ವಿಡಂಬನೆ
ಮನದಲಿಲ್ಲ ನಾ ಸಾಹಿತಿ ಎಂಬ ಅಹಂಭಾವನೆ!

ಪಡೆದದ್ದು ಪದವಿ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ
ಕನ್ನಡ ಸಾಹಿತ್ಯದಲ್ಲಿ ಏರಿದರು ಶಿಖರ!

ನಗುವಿನ ದಿನವೇ ನಿಧನ
ಇದುವೇ ವಿಧಿಯ ವಿಧಾನ!

ಕನ್ನಡ ಸಾಹಿತ್ಯದಲ್ಲಿ ಮಾಡಿದರು ಕ್ರಾಂತಿ
ವಿಧಿವಶರಾದ ಇವರ ಆತ್ಮಕ್ಕೆ ದೊರೆಯಲಿ ಶಾಂತಿ!

ಒಮ್ಮೆ ನಗು ಒಮ್ಮೆ ಅಳು ಜೀವನಕ್ಕಿರಲಿ ನಿಧಾನ
ಇದೇ ಜೀವನದ
ಬಹುಮೂಲ್ಯ ಸಮಾಧಾನ!

*******

Leave a Reply

Back To Top