ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ನಾಯಕ

ಅವನೇನು ಸಾಮಾನ್ಯನಲ್ಲ;
ಅಚ್ಯುತನ ಜನನ ತಾಣ ಪ್ರಾಪ್ತಿ ಕೆಲಸಗಳಲಿ
ಅನವರತ ನಿರತನಾದರೂ ಸಿಕ್ಕಿಬೀಳದವ

ಮಾತಾಗುವ ಮೌನ ಮತ್ತು ಮೌನದೊಳಗಣ ಮಾತು

ವೇದಿಕೆಯಲ್ಲಿದ್ದ ಮತ್ತೊಬ್ಬ ಮುಖಂಡ ಮೌನವಾಗಿ ಗಲ್ಲದ ಮೇಲೆ ಕೈಯ್ಯಿಟ್ಟು ಕುಳಿತಿದ್ದ. ತನ್ನ ವಿರುದ್ಧ ಬಂದ ಅಭಿಪ್ರಾಯಗಳನ್ನು ಆತ ಮನಸ್ಸಿಗೆ ಹಚ್ಚಿಕೊಂಡಂತೆ ಕಾಣಿಸಲೇ ಇಲ್ಲ. ಆತನ ಮೌನಪರ್ವತವನ್ನು ಮೀರುವುದು ತಮ್ಮಿಂದಾಗದ ಕೆಲಸ ಎಂದುಕೊಂಡ ಭಿನ್ನಾಭಿಪ್ರಾಯಿಗಳು ಆತನನ್ನು ಕೆಣಕುವುದಕ್ಕೆ ಹೋಗಲೇ ಇಲ್ಲ.

ನೆನಪುಗಳು

ಕಾವ್ಯಯಾನ ನೆನಪುಗಳು ಅಕ್ಷತಾ ಜಗದೀಶ ಮರಳಿ ಬಾರದ ಕ್ಷಣಗಳುನೆನಪಿನ‌ ಅಲೆಗಳಾಗಿಮತ್ತೆ ಮತ್ತೆ ಮನದ ಅಂಗಳದಿರಂಗವಲ್ಲಿ ಮೂಡಿಸುತಿದೆ… ನೋವು- ನಲಿವಿನ‌ ದಿನಗಳುನನ್ನವರೊಡನೆ ಕಳೆದ ಕ್ಷಣಗಳುಹುಡುಗಾಟದ ಬಾಲ್ಯವುಹುಡುಕಾಟದ ಯೌವನವು… ಅಮ್ಮನ ಬೆಚ್ಚನೆಯ ಅಪ್ಪುಗೆಅಪ್ಪನ ಅಕ್ಕರೆಯ ಮಾತುಗಳುಮರಳಿ ನೆನಪಾಗುತಿದೆಅಲೆಗಳಾಗಿ ಹೃದಯಕೆ ಅಪ್ಪಳಿಸುತಿದೆ… ಮನದ ಪುಟ ತಿರುವಿದಾಗನೆನಪಿನ ನೆನಪುಗಳೆಲ್ಲಾಕಣ್ಣೀರ ಹನಿಗಳಾಗಿ‌ ಹರಿದುಮರಳಿ ನೆನಪಿನ ಪುಟಸೇರಿ ಅಮರವಾಗಿದೆ……..

ಆಶಾವಾದ ಹೊತ್ತು ಹರಿವ ‘ಜೀವಧಾರೆ’!!

ನೊಂದು ಅಪಮಾನಿತರಾಗಿ ಕುಗ್ಗಿದ ಹೆಣ್ಣುಮಕ್ಕಳು ಈ ಕಥಾ ಸಂಕಲನವನ್ನು ಆಪ್ತಸಂಗಾತಿಯ ಸಂತೈಕೆಯ ನುಡಿಗಳಂತೆ ಓದಿ ಸಮಾಧಾನ ಕಾಣಬಹುದು. ಡಾ. ಜಿ ಸುಧಾ ಅವರು ಸ್ವಲ್ಪವೇ ಪರಿಶ್ರಮ ಪಟ್ಟರೆ, ಅವರಿಂದ ಮತ್ತಷ್ಟು ಅನನ್ಯ ಕೃತಿಗಳನ್ನು ನಿರೀಕ್ಷಿಸಬಹುದು

ನುಡಿ- ಕಾರಣ.

“ಅನುವಾದದ ಹಿಂದೆ …….”. ಯಲ್ಲಿ ಬರುವ, ಅವರದೇ ಮಾತುಗಳಲ್ಲಿ, ” ಅವರ ಕವಿತೆಗಳಲ್ಲಿ ನವಿರಾದ ಒಲವು ಇದೆ ವಿರಹವಿದೆ , ಯುದ್ಧದ ಉನ್ಮಾದವಿದೆ, ಬಡವರ,ಬವಣೆಯಿದೆ.ದೇಶಾಭಿಮಾನ ವಿದೆ.ಕವಿತೆ ನಮ್ಮನ್ನು ಹಿಡಿದಿಡುತ್ತದೆ.ಕಾವ್ಯ ದೋಣಿಯ ಪಯಣಿಗರು”. ಎನ್ನುವ ಸಾಲುಗಳು, ಕವಿತೆಗಳನ್ನು ಓದುವ , ಓದುಗರ ಸಾಲುಗಳೂ ಆಗಿಬಿಡುತ್ತವೆ.

ರಾಕ್ಷಸ ಸಂಹಾರಕ್ಕೆ ವೀರರಾದ ಬಾಲಕರನ್ನು ಕಳಿಸಿಕೊಡೆಂದು ಕೇಳಿದಾಗ ದಶರಥ ಮಹಾರಾಜ ಹೌಹಾರಿದ್ದನೆಂದೇ ರಾಮಾಯಣ ಹೇಳುತ್ತದೆ. ‘ಮಕ್ಕಳಿನ್ನೂ ಹಾಲುಗಲ್ಲದ ಹಸುಗೂಸುಗಳು, ನಾನೇ ಬರುವೆ, ಸೈನ್ಯ ತರುವೆ..‘ ಎಂದು ಚಡಪಡಿಸಿ ಬಡಬಡಾಯಿಸಿದ್ದ ಎಂದು ತಿಳಿದಾಗ, ಎಂಥಾ ರಾಜಾಧಿರಾಜ ಆದರೂ ಅಪ್ಪನೆಂಬ ಅಂತಃಕರಣ ಮೀರಲಾದೀತೇ ಎನಿಸುತ್ತದೆ.

Back To Top