ಸಂತೋಷಕುಮಾರ ಅತ್ತಿವೇರಿ-ನೆಮ್ಮದಿಯ ಹೋಮ

attiveri

ಕಾವ್ಯಸಂಗಾತಿ

ನೆಮ್ಮದಿಯ ಹೋಮ

ಸಂತೋಷಕುಮಾರ ಅತ್ತಿವೇರಿ

s.

ಕಣ್ಣುರಿಸುವ ಹೊಗೆ-ಬೆಂಕಿ ಮನೆಯಲ್ಲಿ
ಸುರುಕು-ಸುರ್ವಾಗಳ ಎಡೆಬಿಡದ ಏರಿಳಿತ ಅರ್ಘ್ಯಾದಿ ಐವತ್ನಾಲ್ಕು ಸಂಯುಕ್ತಗಳು ಅಗ್ನಿ ಪಾಲು,
ಸುರುಕುಗಳ ಲೆಕ್ಕಕ್ಕೆ ಪ್ರತಿಯಾಗಿ ಮನೋವಾಂಛೆಗಳನೆಲ್ಲ ವರವಾಗಿಸುವ ದ್ವಿಪಕ್ಷ ಒಪ್ಪಂದ ದೇವರೊಡನೆ…
ಅಗ್ನಿದೇವನ ಪ್ರೀತ್ಯರ್ಥ
ಹವಿಸ್ಸುಗಳ ಪ್ರದಾನ ಮನೆಯಲ್ಲಿ
ಅನಿಷ್ಟಗಳ ಕಳೆಯಲು, ಮನದಲ್ಲಲ್ಲ..!ಮನೆಯಲ್ಲಿ ನೆಮ್ಮದಿ ಮನೆ ಮಾಡಲು..!

ಈ ಸದ್ದು ಗದ್ದಲದ‌ ನಡುವೆ ಫೋನು ರಿಂಗಣಿಸಿತು ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು….
ಅರೇ ಹಿತವಾಗಿದೆ ದನಿ ; ಭಾವ ಕೂಡ ; ಧರ್ಮ-ದೇಶ-ಕಾಲಾತೀತ ದೃಷ್ಟಿ. ಆದರೇನು? ಅದರದೇನು ಮಹತ್ವ? ಏಕೆಂದರೆ ಅದು ತಿಳಿಯುವಂತಿದೆ, ಗೊಂದಲಗಳಿಲ್ಲದೆ ಮನ ಮುಟ್ಟುವಂತಿದೆ..
ನಮಗೋ ತಿಳಿಯದ ಗೊಂದಲದಲ್ಲೇ ಸುಖ,
ಶೋ ಆಫುಗಳಿಗಷ್ಟೇ ಲೆಕ್ಕ.


7 thoughts on “ಸಂತೋಷಕುಮಾರ ಅತ್ತಿವೇರಿ-ನೆಮ್ಮದಿಯ ಹೋಮ

    1. ತುಂಬಾ ಆಳದ ಅನುಭವಿಕ ಕವಿತೆ……

      ಓದಿನ ಆಳದಿಂದ, ಅನುಭವದಿಂದ ಮೇಳೈಸಿದ ಕವಿತೆ….

      ಶುಭಾಶಯಗಳು… ಶುಭವಾಗಲಿ….

  1. ಗಟ್ಟಿ ಕಾಳು ಕವಿತೆ…….ಅಭಿನಂದನೆಗಳು.

  2. ಕಾವ್ಯವು ಕೈಮಾಡಿ ಕರೆಯುವುದು ಹಲವರನ್ನಾದರೂ …
    ಕೆಲವರ ಕೈಹಿಡಿದು ನಡೆಯುವುದು ಅವಳ ಗಾಂಭೀರ್ಯ, ಗುಣ, ಸೌಂದರ್ಯ ಸೊಬಗಿಗೆ ಸಾಕ್ಷಿ… ಅಂತಹ ಕಾವ್ಯ ದೇವತೆ ನಿನ್ನ ಕೈಹಿಡಿದು ನಡೆಸುತ್ತಿರುವುದು ನಿನ್ನ ಭಾವಮಿಡಿತಜೀವನಕ್ಕೆ ಸಾಕ್ಷಿ ಈ ನಡೆ ಇನ್ನೂ ಕೆಲವೇ ದಿನಗಳಲ್ಲಿ ರಾಜಬೀದಿ, ರಥಬೀದಿಯಲಿ ಸರಾಗವಾಗಿ ಸಾಗುವಂತಾಗಲಿ…

Leave a Reply

Back To Top