ಚೆಗುವೆರ ಎಂಬ ಮುಗಿಯದ ಪಯಣ

ಚೆಗುವೆರ ಎಂಬ ಮುಗಿಯದ ಪಯಣ

ಕವಿತೆ ಚೆಗುವೆರ ಎಂಬ ಮುಗಿಯದ ಪಯಣ ಚೆ ಗುವೆರ ೧೯೨೮ ಲ್ಲಿ ರೊಸಾರಿಯೋ,ಅರ್ಜೆಂಟೀನದಲ್ಲಿ ಹುಟ್ಟಿದರು. ಇವರು ಜನಪ್ರಿಯವಾಗಿ ಚೇ ಗುವಾರ, ಎಲ್ ಚೇ ಅಥವ ಬರಿ ಚೇ ಎಂದು ಕರೆಯಲ್ಪಡುತ್ತಾರೆ. ಅರ್ಜೆಂಟೀನಾದಲ್ಲಿ ಹುಟ್ಟಿದ ಮಾರ್ಕ್ಸ್ ವಾದಿ, ಕ್ರಾಂತಿವಾದಿ, ರಾಜಕೀಯ ವ್ಯಕ್ತಿ, ಮತ್ತು ಕ್ಯೂಬ ಮತ್ತು ಅಂತರರಾಷ್ಟ್ರೀಯ ಗೆರಿಲ್ಲಾಗಳ ನಾಯಕ.  ಅವರು ಬ್ಯೂನಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆದರು. ವೈದ್ಯನಾಗಲು ಕನಸುಕಂಡಿದ್ದ ಆತ ತನ್ನ ರಜಾದಿನಗಳಲ್ಲಿ ಲ್ಯಾಟಿನ್ ಅಮೆರಿಕದ ಉದ್ದಕ್ಕೂ ಪ್ರವಾಸ ಕೈಗೊಂಡಿದ್ದ.  ಈ ಸಮಯದಲ್ಲಿ ಆತನಲ್ಲಿ ಆದ ಅನುಭವಗಳು […]

ಅಮೃತಾ ಮೆಹಂದಳೆ ಹೊಸ ಕವಿತೆ

ಕವಿತೆ ಅಮೃತಾ ಮೆಹಂದಳೆ ಹೊಸ ಕವಿತೆ ಕೋಮುದಂಗೆಗೆಆಕ್ರೋಶಗೊಳ್ಳುವ ನಾನುಸಹಿಷ್ಣುತೆಯ ಕವಿತೆ ಬರೆವೆಸಾಮಾಜಿಕ ಕಾಳಜಿಯಬಗ್ಗೆ ಬರೆವ ನಾನುಇಂದು ನೋಡಬೇಕಾದಹೊಸ ಚಿತ್ರದ ಪಟ್ಟಿ ಮಾಡುವೆಸೀರೆ ಚಾಲೆಂಜ್ ಗೆಸಿಡಿಮಿಡಿಗೊಳ್ಳುವ ನಾನುಸೆಲ್ಫೀಯಲ್ಲಿ ಮೈಮರೆವೆಹಸಿದವರ ವಿಡಿಯೋಗೆಕಣ್ಣೀರ್ಗರೆಯುವ ನಾನುಪಾನಿಪುರಿಗೆ ಪುದಿನಾ ಜೋಡಿಸುವೆರಾಜಕೀಯ ದೊಂಬರಾಟಕ್ಕೆಅಸಹ್ಯಿಸಿಕೊಳ್ಳುವ ನಾನುಭಾಷಣಕ್ಕೆ ಕೈತಟ್ಟುವೆಉಚಿತ ಭಾಗ್ಯಗಳ ಬಗ್ಗೆಮೆಚ್ಚುಗೆ ತೋರುವ ನಾನುಪರಿಣಾಮಗಳಿಗೆ ಕುರುಡಳಾಗುವೆಬೇಕಿಂಗ್ ನ್ಯೂಸ್ಹಂಚಿಕೊಳ್ಳುವ ನಾನುಹಕ್ಕಿಗಾಗಿ ನೀರಿಡಲು ಮರೆವೆಆರ್ಥಿಕ ಮುಗ್ಗಟ್ಟಿಗೆಚಿಂತಿತಳಾಗುವ ನಾನುಬಾರದ ಪಾರ್ಸೆಲ್ಲಿಗೆ ಮರುಗುವೆನಾಳಿನ ಭವಿಷ್ಯಕ್ಕೆಸಿನಿಕಳಾಗುವ ನಾನುಹಪ್ಪಳಕ್ಕೆ ಅಕ್ಕಿ ನೆನೆಸುವೆಆಧುನಿಕ ಜೀವನಶೈಲಿಗೆಹಿಡಿಶಾಪ ಹಾಕುವ ನಾನುಪಿಜ್ಜಾ ಆಫರಿಗೆ ಕಣ್ಣರಳಿಸುವೆದೇಶಪ್ರೇಮದ ರೀಮೇಕ್ ಹಾಡಿಗೆಲವ್ ಇಮೋಜಿ ಒತ್ತುವ ನಾನುಮೆಚ್ಚಿನ ನಟನ […]

ಒಲವಿನ ಭೇಟಿ

ಕವಿತೆ ಒಲವಿನ ಭೇಟಿ ಆಸೀಫಾ ಮಂದಹಾಸದ ಮುಖವೇನೋ ಶಾಂತವಿತ್ತುಕಂಗಳು ಸಾವಿರಸಾವಿರ ಮಾತು ಹೇಳುತ್ತಿತ್ತುಮನದ ತಲ್ಲಣಗಳು ಮುಖವಾಡ ಧರಿಸಿತ್ತುಅಸಹಾಯಕತೆ ನನ್ನಲಿ ತಾಂಡವಾಡುತಿತ್ತು ಪರಿಚಿತ ಸ್ಪರ್ಷವೊಂದು ನನ್ನ ಕರೆದಂತಿತ್ತುಅಧರದ ಸಕ್ಕರೆ ಸವಿವ ಬಯಕೆಯುಇರಿದಿರಿದು ತಿವಿದು ಕೊಲ್ಲುವಂತಿತ್ತುಮತ್ತದೇ ಅಸಹಾಯಕತೆ ಕಾಡುತಿತ್ತು ನೋಡಿದಷ್ಟೂ ನೋಡಬೇಕೆನಿಸುವ ನೋಟಕಣ್ಣುಕಣ್ಣಲ್ಲೇ ಸಂಭಾಷಣೆಯ ಸವಿಯೂಟಸನಿಹ ಸರಿದುಹೋದಾಗ ಹೆಚ್ಚಿದ ಪುಳಕಜಗಕೆ ಕಾಣದು ಪ್ರೇಮದ ವಿಚಿತ್ರ ಹೋರಾಟ ಬಹುದಿನಗಳ ನಂತರದ ಮುಖಾಮುಖಿ ಭೇಟಿಹಸಿರಾಗಿಸಿತು ಕಳೆದ ಕ್ಷಣಗಳ ಅಮೃತ ಸ್ಮೃತಿತಣಿಯಿತು ಅವನ ಕೊರಗಿನ ಹಂಬಲದ ಸ್ಥಿತಿಅಂತೂ ಒಲವಿಗೆ ಆಯಿತು ಒಲವಿನ ಭೇಟಿ **********

ಗಜಲ್

ಗಜಲ್ ರೇಮಾಸಂ ಹಳೆಯ ಹೊಸತುಗಳ ಜಗಳದಲಿ ಬೆಸೆದಿರಲಿ ಸಮರಸ/ಬೆರೆತು ಅರಿತ ಬಾಳುವೆಯಲಿ ಜಿನುಗುತಿರಲಿ ಮಧುರಸ// ಹಮ್ಮು ಬಿಮ್ಮಿನ ಜಗ್ಗಾಟದಲಿ ನುಗ್ಗಾಗದಿರಲಿ ಜೀವನ/ಪ್ರೀತಿಯು ಸವೆಯಲು ಬಿಡದೆ ಚಿಮ್ಮುತಿರಲಿ ಪ್ರೇಮರಸ// ಹೂಡಿಕೆಯಾಗಲಿ ಅನುರಾಗದ ರಿಂಗಣವು ಅನುದಿನವು/ನೋವುಗಳು ಬೇವು ಬೆಲ್ಲದಂತೆ ಸುರಿಯುತಿರಲಿ ನವರಸ// ವಿರಸವು ತರುವ ಮಾತಿಗೆಲ್ಲ ವಿರಾಮದ ಚಿಹ್ನೆ ಇಡುತಿರಲಿ/ಸರಸ-ಸಲ್ಲಾಪದ ಪದಗಳು ಪುಟಿದು ಚೆಲ್ಲುತಿರಲಿ ಗಾನರಸ// ತಾಯಿಯ ಸೆರಗು ಹೊದಿಕೆಯಂತಿರಲಿ ಪ್ರೇಮದ ಚಪ್ಪರವು/ಗಂಧದಂತೆ ಜೀವಗಳು ಪಸರಿಸುತ ತೇಯುತಿರಲಿ ದ್ರವ್ಯರಸ/ ***************************

ಅಂಕಣ ಬರಹ ಕಾಲೆಳೆವ ಕೈಗಳೇ ಮೆಟ್ಟಿಲಾಗಲಿ     ಸಾಮಾನ್ಯವಾಗಿ ಕಾಲೆಳುವುದು ಅಥಬಾ ಲೆಗ್ ಪುಲ್ಲಿಂಗ್ ಎಂದರೆ ಕೀಟಲೆ ಮಾಡುವುದು ಅಥವಾ ಇಲ್ಲದ್ದನ್ನು ಇದೆ ಎಂದು ತಮಾಷೆಗಾಗಿ ನಂಬಿಸುವುದು ಎಂದರ್ಥವಿದೆ. ಆದರೆ ಇಲ್ಲಿ ಕಾಲೆಳುವುದೆಂದರೆ ಹಗುರ ಅರ್ಥದಲ್ಲಿ ಇಲ್ಲ. ಮುನ್ನಡೆವವನ ದಾರಿಗೆ ಅಡ್ಡ ಹಾಕುವುದಿ ಎಂಬರ್ಥದಲ್ಲಿ ಬಳಸಲಾಗಿದೆ. ಬಹಳ ಹಿಂದೆ ಕೇಳಿದ್ದ ಕಥೆಯೊಂದು ನೆನಪಾಗುತ್ತಿದೆ. ಒಂದು ಕಾಡಿನಲ್ಲಿ ಒಂದು ಬಾವಿ. ಆ ಬಾವಿಯಲ್ಲಿ ನೂರಾರು ಕಪ್ಪೆಗಳು. ಬಾವಿಯನ್ನೇ ಪ್ರಪಂಚವೆಂದುಕೊಂಡು ನೆಮ್ಮದಿಯಿಂದಿದ್ದವು. ಒಮ್ಮೆ ಅಲ್ಲಿದ್ದ ಒಂದು  ಕಪ್ಪೆಗೆ ಯಾಕೋ ಆ […]

ಲಾಕ್ಡೌನ್ ಕಾಲಘಟ್ಟದ ದಾಂಪತ್ಯ

ಲೇಖನ ಲಾಕ್ಡೌನ್ ಕಾಲಘಟ್ಟದ ದಾಂಪತ್ಯ ಅಂಜಲಿ ರಾಮಣ್ಣ ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ  ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ […]

ಪರಿಣಾಮ

ಲೇಖನ ಪರಿಣಾಮ ಡಾ. ಅರಕಲಗೂಡು ನೀಲಕಂಠ ಮೂರ್ತಿ ಮನುಷ್ಯ ಸಾಮಾನ್ಯವಾಗಿ ಯಾವುದೇ ಕೆಲಸ ಮಾಡಬೇಕಾದರೆ, ಅಥವ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು, ಅದರ ಪರಿಣಾಮದ ಬಗ್ಗೆ ಖಂಡಿತ ಕೂಲಂಕುಷವಾಗಿ ಚಿಂತಿಸುತ್ತಾನೆ. ಆದರೆ ಎಂಥ ಸಂದರ್ಭಗಳಲ್ಲೂ ಸಹ ಕೆಲವರು, ಉಡಾಫೆ ಬದುಕಿನವರು, ಪ್ರಪ್ರಥಮವಾಗಿ ಆಳವನ್ನೂ ಅಂದಾಜಿಸದೆ, ನೇರ ಭಾವಿಗೇ ದಿಢೀರಂತ ಧುಮಿಕಿಬಿಡುತ್ತಾರೆ. ನಂತರ ಪರಿಣಾಮದತ್ತ ಗಮನ ಹರಿಸಿದ ಹಾಗೆ, ಕೈಕಾಲುಗಳನ್ನು ಆತುರಾತುರವಾಗಿ ಬಡಿಯತೊಡಗುತ್ತಾರೆ. ಆಗ ತುಂಬ ತಡವಾಗಿ ಪಶ್ಚಾತ್ತಾಪ ಪಟ್ಟು ಸಂಕಟದ ಕೆಸರೊಳಗೆ ಒದ್ದಾಡುತ್ತಾರೆ. ಬಹಳ ಒಳ್ಳೆಯ, ಆದರೆ […]

ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು

ಪುಸ್ತಕ ಸಂಗಾತಿ ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು ಈಗಾಗಲೇ ಆರು ಕೃತಿಗಳನ್ನು ಬರೆದಿರುವ ಅಕ್ಷತಾ ಕೃಷ್ಣಮೂರ್ತಿ ನಾಡಿಗೆ ಚಿರಪರಿಚಿತರು. ನಾನು ದೀಪ ಹಚ್ಚಬೇಕೆಂದಿದ್ದೆ ಇವರ ಏಳನೇ ಪುಸ್ತಕ. ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ ಪಡೆದ ಕೃತಿ ಇದು. ಅಂಕಣ, ವ್ಯಕ್ತಿಚಿತ್ರ, ವಿಮರ್ಶೆ, ಸಂಪಾದನೆ, ಕವಿತೆ ಹೀಗೆ ಅಕ್ಷತಾ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.  ೪೨ ಕವಿತೆಗಳ ಈ ಸಂಕಲನದಲ್ಲಿ ಮಕ್ಕಳ ಕವನಗಳು ಇವೆ. ನನ್ನ `ವಿಷಕನ್ಯೆ’ಯ `ಅವನು’ ಇಲ್ಲಿಯೂ ಪ್ರಧಾನವಾಗಿರುವುದು ನನಗೆ ಖುಷಿಯೆನಿಸಿತು. ಹರೆಯದ […]

ಮಣ್ಣು ,ಅನ್ನ ಮತ್ತು ಪ್ರಭು

ಕವಿತೆ ಮಣ್ಣು ,ಅನ್ನ ಮತ್ತು ಪ್ರಭು ಬಿ.ಶ್ರೀನಿವಾಸ ನೆಲಕೆ ಬಿದ್ದರೆ ಅನ್ನದಾತದಂಗೆಯೇಳುತ್ತದೆ ಅನ್ನ * ಮಕ್ಕಳ ಮುಂದೆ ಅಪ್ಪ ಅಳಬಾರದು ಅಪ್ಪನ ಮುಂದೆ ಮಕ್ಕಳು ಸಾಯಬಾರದು ಪ್ರಭುಗಳ ಮುಂದೆ ಪ್ರಜೆಗಳು ನರಳಬಾರದು ಸುಳ್ಳಾಯಿತುಲೋಕರೂಢಿಯ ಮಾತು. * ಮಣ್ಣಿನೆದೆಯ ಮೇಲೆಯೆ ಇದ್ದವು ಪಾದಗಳುನೆಲದ ಮೇಲಿರುವ ತನಕ ಅದೇ ಮಣ್ಣಿನ ಮೃದು ಪಾದಗಳುನೆಲದಡಿಗೆ ಸೇರಿದವನ ಎದೆಯ ಮೇಲೆ * ಮಣ್ಣಿಗೂಅಪ್ಪನಿಗೂ ಸಂಬಂಧ ಕೇಳುವಿರಿ ನೀವು ಇದೆಅಜ್ಜ-ಮೊಮ್ಮಗನ ಸಂಬಂಧ! * ಉಣ್ಣುವ ಅನ್ನದ ಕಣ್ಣುಎದುರಿಸಲಾಗದ ಕೊಲೆಗಾರ ಹೇಡಿಹೇಡಿಯೆಂದು ಕಿರುಚಾಡುತ್ತಾನೆ * ಕಳಚಿ […]

ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ

ಕವಿತೆ ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ ನಾಗರಾಜ್ ಹರಪನಹಳ್ಳಿ. ಆಗೋ ನೋಡುಈ ಉರಿಬಿಸಿಲಲ್ಲಿ ಸಮುದ್ರ ನಿದ್ದೆ ಹೋಗಿದೆ ||ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ|| ತಂಗಾಳಿ ನಿನ್ನ ಪ್ರೀತಿಯ ಮಿಂದು ಬಂದಿದೆ ||ಈ ಕಾರಣಮರಗಿಡಗಳು ಹೂ ಬಟ್ಟೆ ತೊಟ್ಟಿದೆ ||ಮೈತುಂಬಿದ ಮಾವುಬಯಲಲಿ ನಿಂತು ನಕ್ಕಿದೆ || ನೀನಲ್ಲಿ ಕೈ ತುಂಬಾ ಬಳೆ ತೊಟ್ಟು ||ತೆಳು ನೀಲಿ ಮಿಶ್ರಿತ ಹಳದಿ ಬಣ್ಣದ ರೇಶಿಮೆ‌ ಸೀರೆಯುಟ್ಟು ||ಹೊಸದಾಗಿ ತಂದ ಬಂಗಾರದ ಓಲೆ ತೊಟ್ಟು ||ನಿನ್ನ ನೀನೇ ಕನ್ನಡಿಯಲ್ಲಿ ದೃಷ್ಟಿ […]

Back To Top