ಅಂಕಣ ಬರಹ ಸೋತು ಗೆದ್ದ ಮನುಷ್ಯ ಸೋತು ಗೆದ್ದ ಮನುಷ್ಯತೆಲುಗು ಮೂಲ : ಮಲ್ಲಾರೆಡ್ಡಿಅನುವಾದ : ಕಸ್ತೂರಿಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೧೦೪ ¥ಪುಟಗಳು :೧೫೨ ಇದು ತೆಲುಗು ಮೂಲದ ಮಲ್ಲಾರೆಡ್ಡಿಯವರ ಆತ್ಮಕಥೆ. ವಿಷಮ ಪರಿಸ್ಥಿತಿಗಳು ತಂದ ನೋವು-ಸಂಕಷ್ಟಗಳಿಂದಾಗಿ ಮಾನಸಿಕವಾಗಿ ನೊಂದು ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡು ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯೊಬ್ಬ ತನ್ನ ಎಲ್ಲಾ ಅನುಭವಗಳನ್ನು ಇಲ್ಲಿ ವಿವರವಾಗಿ ಮನಮುಟ್ಟುವಂತೆ ಹೇಳುತ್ತಾನೆ. ತೀರಾ ಎಳೆಯ ಹುಡುಗನಾಗಿದ್ದಾಗಲೇ ಸೂಕ್ಷ್ಮ ಸಂವೇದನೆಯುಳ್ಳವನಾಗಿದ್ದರಿಂದ ತನ್ನ ಸುತ್ತ ಮುತ್ತ […]

ಗಜಲ್

ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ನೀವು ಒಂದು ದಿನ ನನಗೆ ಒಪ್ಪಿಗೆ ಕೊಟ್ಟರೆ ನನ್ನ ಕಬ್ರ್ ನಾನೇ ತೋಡಿಕೊಳ್ಳುತ್ತೇನೆ.ನನ್ನ ಗೋರಿ ಕಟ್ಟಲು ತಂದ ಈ ಬಂಡೆಗಲ್ಲಿನ ಮೇಲೆ ನಾ ಹಿಂದೂಸ್ತಾನಿ ಎಂದು ನಾನೇ ಕೆತ್ತಿಕೊಳ್ಳುತ್ತೇನೆ. ನೀವು ಸುಮ್ಮನಿದ್ದರೆ ನನ್ನ ಮಸಣ ನಾನೇ ನಿರ್ಮಿಸಿಕೊಳ್ಳುತ್ತೇನೆ.ನಾಳೆ ನನ್ನ ಗಜಲ್ ಓದುವಾಗ ಯಾರೂ ಧರ್ಮ ಹುಡುಕಬಾರದೆಂದು ಬೇಡಿಕೊಳ್ಳುತ್ತೇನೆ. ನೀವು ದೂರವಿದ್ದರೆ ನನ್ನ ಗೋರಿ ಮೇಲೆ ಬಿಳಿ ಹೂ ಹುಟ್ಟಲು ಕೇಳಿಕೊಳ್ಳುತ್ತೇನೆ.ನನ್ನ ಗೋರಿ ಬಳಿ ಯಾವ ಧರ್ಮದ ಝಂಡಾ ಹಾರದಿರಲಿಯೆಂದು ವಿನಂತಿಸಿಕೊಳ್ಳುತ್ತೇನೆ. ನೀವು ಬರುವುದಾದರೆ […]

ಕಾದಂಬರಿ ಕುರಿತು ಸು ನಾನು ಪ್ರತಿ ಪುಸ್ತಕ ಓದಿದಾಗಲೂ ಅದರಲ್ಲಿ ಬರುವ ಒಂದು ಪಾತ್ರ ನಾನೇ ಎನ್ನಿಸಿಬಿಡುವಷ್ಟು ಕೆಲವೊಂದು ಪಾತ್ರಗಳು ಕಾಡುತ್ತವೆ. ಇಲ್ಲಿ ಸು ಕಥಾನಾಯಕನಾದರೂ ನನಗ್ಯಾಕೊ ಪ್ರಕಾಶ್ ಪಾತ್ರ ಬಹಳ ಹಿಡಿಸಿತು. ಇಡೀ ಸು ಕಾದಂಬರಿ ಪ್ರಕಾಶ್ ಪಾತ್ರವೇ ನಿರೂಪಣೆ ಮಾಡಿದ್ದು ಅಂತ ನನಗೆ ಭಾಸವಾಯಿತು. ಇದನ್ನ ಕಾದಂಬರಿ ಅನ್ನೋದಕ್ಕಿಂತ ಒಂದು ಅನುಭವ ಕಥನ ಅಂತ ಕರೆಯೋದು ಹೆಚ್ಚು ಸೂಕ್ತ ಅನ್ನಿಸಿತು ನನಗೆ. ಕಡೆಯ ಎರಡು ಅಧ್ಯಾಯಗಳಲ್ಲಿ ಸು ಮತ್ತು ಪ್ರಕಾಶ್ ಮನಸ್ಸಿನ ತಳಮಳಗಳು ಬಹಳ […]

ಕಪ್ಪುಬಿಳುಪಿನ ಚಿತ್ರ

ಕವಿತೆ ಕಪ್ಪುಬಿಳುಪಿನ ಚಿತ್ರ ಬಿದಲೋಟಿ ರಂಗನಾಥ್ ಅವಳಿಗಾಗಿ ಕಾದ ಭರವಸೆಯ ದೀಪಹೊಯ್ಲಾಡುತ್ತಿರುವಾಗಲೇಇರುವೆಯೊಂದು ಕೂತು ಮೂತಿ ತೀಡಿಮುಂಗೈ ಮೇಲಿನ ಗುರುತ ನೋಡಿ ಕಣ್ಣ ಮಿಟುಕಿಸಿತು ಕಾದ ತಂಗೂದಾಣದ ಗೋಡೆಯ ತೊಡೆಗೀಚಿದ ಅಕ್ಷರಗಳ ಮೌನ ಮುರಿದುಬರುವ ಬಸ್ಸಿನ ಸೌಂಡಿಗೆಉಗುರ ಬಣ್ಣ ಕಚಗುಳಿಯಿಟ್ಟುಬೆರಳ ತುದಿಯ ಅವಳ ಸ್ಪರ್ಶದ ನಗುತುಟಿಯ ಕಚ್ಚಿ ಬೆಳಕಾಡಿತು ಆ ಸಂದಣಿಯಲ್ಲೂ ಸೂಟಿಯಿಟ್ಟ ಕಣ್ಣುಕೆನ್ನೆಕಚ್ಚಿದ ಗುರುತನು ಹುಡುಕಿಭಾವಜಾಡಿನ ಬಲೆನೇಯ್ದುಹಕ್ಕಿಮರಿಯ ಪ್ರೇಮದಂಚು ಹೊಳೆದುಚಂದ್ರಗೆರೆಯ ಕರುಣೆ ಮುದ್ದಾಡಿಕಾಲನ ಕರುಳು ಮರುಗಿನೆಲದ ಬೆವರು ಚಿಗುರಿಸಿದ ಕನಸು ಒಂಟಿ ಚಿಪ್ಪಿನಲಿ ನಿಲ್ಲದ ತೂಕದ ಬೊಟ್ಟುಸತ್ಯದ […]

ಕಲ್ಲಾಗಿಯೇ ಇರಬೇಕಿತ್ತು!

ಕವಿತೆ ಕಲ್ಲಾಗಿಯೇ ಇರಬೇಕಿತ್ತು! ರಾಜೇಶ್ವರಿ ಭೋಗಯ್ಯ ಇದ್ದದ್ದು ನಿಜವಾಗಿದ್ದರೆ ಅಹಲ್ಯೆಹೇಗೆ ಸಹಿಸಿಕೊಂಡಳೋನೋವನ್ನೂ ಅವಮಾನವನ್ನು ತನ್ನ ತಪ್ಪಿಲ್ಲದಿದ್ದರೂ ಶಾಪವಿಟ್ಟ ಅವಮಾನಕ್ಕೆವಿನಾಕಾರಣ ಕಲ್ಲಾಗಿಸಿದ ನೋವಿಗೆಹೇಗೆ ಸಹಿಸಿಕೊಂಡಳೋ ಅಬಲೆ ಹೆಂಡತಿಯನ್ನು ನೆಲಕ್ಕೆ ತುಳಿದುನಿನ್ನನ್ನು ಮೇಲಕ್ಕೆತ್ತುವ ಹಿಂದೆಯಾವ ಲೋಕ ಕಲ್ಯಾಣದ ಸಂಚಿತ್ತು ಗೌತಮ ಸಹಕರಿಸಲಿಲ್ಲಇಂದ್ರನೂ ಕಾಪಾಡಲಿಲ್ಲವ್ರತಕೆಟ್ಟರೂ ಸುಖಪಡಲಿಲ್ಲಅನ್ಯಾಯವ ಸಹಿಸಿಕೊಂಡು ಸುಮ್ಮನಿರಬಾರದಿತ್ತು ಕಲ್ಲಾಗಿಯೇ ಇರಬೇಕಿತ್ತು ನೀನುರಾಮನ ಪಾದಸ್ಪರ್ಶ ಯಾಕೆ ಬೇಕಿತ್ತುಒಳಗೇ ಹುದುಗಿರಬೇಕಿತ್ತು ನೀನುನಿಜ ಧರ್ಮ ತಿಳಿದವ ಬುದ್ದಬಂದು ನಿನ್ನ ಮೈ ದಡವುವವರೆಗೂ. **********************

ಅಂಕಣ ಬರಹ ಪ್ರಶ್ನೆಯ ಜರೂರಿ ಕೆಲವು ವರ್ಷಗಳ ಹಿಂದೆ ಎರಡು ವಿದ್ಯಮಾನ ಜರುಗಿದವು. ಒಂದು- ತಾನು ಓದುವ ಶಾಲೆಯನ್ನು ತಾಲಿಬಾನಿಗಳು ಯಾಕೆ ಕೆಡವಬೇಕು ಎಂದು ಪ್ರಶ್ನಿಸಿದ ಪುಟ್ಟಬಾಲೆ ಮಲಾಲಳದು. ಎರಡು-ಬಾಳಾಸಾಹೇಬ್ ಠಾಕರೆ ತೀರಿಕೊಂಡರೆ ಮುಂಬೈ ಬಂದ್ ಯಾಕೆ ಮಾಡಬೇಕು ಎಂದು ಚರ್ಚಿಸಿದ ಇಬ್ಬರು ತರುಣಿಯರದು. ಸುತ್ತಮುತ್ತ ಬದುಕುತ್ತಿರುವ ಲಕ್ಷಾಂತರ ಜನರಲ್ಲಿ ಹುಟ್ಟದ ಪ್ರಶ್ನೆಗಳು ಈ ಹುಡುಗಿಯರಲ್ಲಿ ಸಹಜವಾಗಿ ಹೇಗೆ ಹುಟ್ಟಿಕೊಂಡವು? ನಮಗೇತಕ್ಕೆ ಇಲ್ಲದ ರಗಳೆ ಎಂದು ಬಹುಸಂಖ್ಯಾತ ಸಾರ್ವಜನಿಕರು ಸುರಕ್ಷಿತಮೌನ ತಾಳಿರುವಾಗ ಕೆಲವರೇಕೆ ಕೇಳುವ ದಿಟ್ಟತನ ತೋರುತ್ತಾರೆ? […]

ಅಂಕಣ ಬರಹ ಕಬ್ಬಿಗರ ಅಬ್ಬಿ ಹಣತೆ ಹಚ್ಚಿದ ಅಕ್ಷರ ದೀಪ ನಮ್ಮ ಅಜ್ಜಿ ಹಚ್ಚಿ  ಹಣತೆ ಬೆಳಕಲ್ಲಿ ತೆರೆದಳು ರಾಮಾಯಣ. ಹಣತೆ ಸಣ್ಣಗೆ ಬೆಳಗುವಾಗ ರಾಮ ಪುಟು ಪುಟು ಹೆಜ್ಜೆ ಹಾಕುತ್ತಿದ್ದ.ಜತೆಗೆ ಇನ್ನೂ ಮೂರು ತಮ್ಮ ತಮ್ಮ ತಮ್ಮಂದಿರು. ಎಷ್ಟು ಪ್ರೀತಿ ಮುಗ್ಧ ಬೆಳಕಿತ್ತು. ಕತೆ ಕೇಳುತ್ತಾ ನಮಗೆಲ್ಲ ಪುಳಕ. ಹಣತೆಯ ಬೆಳಕೂ ರಾಮನೂ ಜತೆ ಜತೆ ಬೆಳೆದರು. ವಿಶ್ವಾಮಿತ್ರನ ಕೈ ಹಿಡಿದು ಅಣ್ಣ ತಮ್ಮ ಗುರು ತೋರಿದ ಕಾಡುಹಾದಿಯಲ್ಲಿ ತಿಳಿವಿನ ಬೆಳದಿಂಗಳಿತ್ತು. ಕೆಂಗಣ್ಣ ದೈತ್ಯೆ ತಾಟಕಿಯ […]

ಸಾಕು ಬಳುಬಳಿ…

ಕವಿತೆ ಸಾಕು ಬಳುಬಳಿ… ಕೃಷ್ಣಮೂರ್ತಿ ಕುಲಕರ್ಣಿ ಸಾಲು ದೀಪ ಉರಿಯುವಾಗಒಂದಕಂಟಿದೆ ಸೊಡರುಮಕ್ಕು ಕವಿದು ಬಿಕ್ಕುವಾಗಅದ್ಯಾರು ನೋಡ್ವರು ಹೇಳುದೀಪಗಳು ಪ್ರಜ್ವಲತೆಯಲಿಸುತ್ತ ಬೆಳಗುವಾಗಹಬ್ಬದ ಸಡಗರ ಹಬ್ಬಿರುವಾಗಆರ್ಥ ಧ್ವನಿಯತ್ತಹರಡದು ಯಾರ ಚಿತ್ತಈ ತನಕ ಬೆಳಗಿದೆಬೇಕಿದೆ ಈಗ ವಿರಾಮಎಂದಾರುತಿದೆ ಬಸವಳಿದ ದೀಪಅದಕು ಮುನ್ನ ಬೆಳಗಿಸಿದೆಇನ್ನೊಂದು ರೂಪದೀಪದಿಂದ ದೀಪಹಚ್ಚಬೇಕು ಮಾನವಅದೆ ದೀಪ ಉಳಿಯಲೆಂಬಸೊಲ್ಲು ಬೇಡಾ ಕೇಳುವಬೆಳಕು ಮುಖ್ಯ ಬದುಕಿನಲ್ಲಿಅಂಧತೆಯ ತೊಡೆಯಲುನಾನು ನನದು ಎಂಬುದೆಲ್ಲಬತ್ತಿಯಾಗಿ ಉರಿಯಲುಶಕ್ತಿ ಕೊಡು ದೀಪಾವಳಿಸಾಕು ಇದೇ ಬಳುವಳಿ… **********************

ಬೆಳಕು

ಕವಿತೆ ಬೆಳಕು ಬಸವರಾಜ ಕಾಸೆ ಕತ್ತಲು ಎಲ್ಲೆಲ್ಲಿ ಇದೀಯೋಅಲ್ಲಿ ಎಲ್ಲಾ ಒಮ್ಮೆಯಾದರೂತೂಗಿ ಬಿಡಬೇಕು ಆಕಾಶಬುಟ್ಟಿಮಮತೆಯ ತೊಟ್ಟಿಲಂತೆ* ನಾ ಬೆಳಕು ಬಯಸಿದೆಕತ್ತಲೆಯಲ್ಲಿ ನಿಂತುಒಂದು ಹಣತೆ ಹಿಡಿದುಆದರೆ ಆ ಕತ್ತಲೆತಾನೇ ಬೆಳಗಾಗ ಬಯಸಿತ್ತು* ಮನೆಯೊಳಗಿನ ಮನಗಳ ದೀಪಹಪಾಹಪಿಸುತ್ತಿತ್ತುಹೊರಗೂ ಬೆಳಕಾಗಲುಅದಕ್ಕಾಗಿಯೇ ಹಚ್ಚಿದರುಹೆಚ್ಚು ಸಾಲುಗಳ ದೀಪ* ನಾವು ಹಚ್ಚಿದೆವೆಂದು ಹತ್ತು ದೀಪಅಲ್ಲೊಬ್ಬ ಹಚ್ಚಿದ ಇಪ್ಪತ್ತು ದೀಪ ಆದರೆ ಬೆಳಕು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆಸದ್ದಿಲ್ಲದೆ ಪ್ರಸಾರವಾಗಿಪರಸ್ಪರ ವಿನಿಮಯವಾಗುತ್ತಿತ್ತು* ಅತ್ತಿತ್ತ ಓಲಾಡಿ ಕುಲುಕುವ ದೀಪಕ್ಷಣ ಕ್ಷಣ ಚಂಚಲವಾಗಿಮತ್ತೆ ಧೃಡವಾಗುವಈ ಮನಸ್ಸಿನ ವಯ್ಯಾರದಷ್ಟೆ ಸಹಜ* ಕತ್ತಲೆಗೆ ತೋರಿಸಬೇಕು ಅಲ್ವಾಬೆಳಕು […]

ವಾರದ ಕವಿತೆ

ವಾರದ ಕವಿತೆ ಆಟ ದೀಪ್ತಿ ಭದ್ರಾವತಿ ಸಾವಿನ ಆಟವಾಡುವಾಗನಿಶ್ಯಬ್ಧ ನಿಶ್ಯಬ್ಧ ಮತ್ತು ನಿಶ್ಯಬ್ಧತೂಕದ ತೋಳುಗಳಹವಣಿಕೆಗೆ ನಿಲುಕದ್ದುಯಾವುದಿದೆ ಇಲ್ಲಿ? ಮರೆ ಮರೆವ ಆಟಬಿಟ್ಟು ಹೋಗುವ ಆಟಸುತ್ತೆಲ್ಲ ಸಮಚಿತ್ತದಲಿಕೂತ ಕೊಕ್ಕೆಗಳನೂರು ಚಿತ್ತಾರಕೆಇಹಪರದ ತರತಮವೆಲ್ಲಿ? ಜೊತೆಗಿದ್ದವರು ಕೈ ಬೀಸುವಬೆನ್ನು ಬಿದ್ದವರುಹೆಗಲು ನೀಡುವ ಸಾಕಾರ ಕ್ರಿಯೆಗಿಲ್ಲಿಸಾವಿರದ ಸಾಸಿವೆ ದೀಕ್ಷೆಬಿಟ್ಟು ಬಿಡುವ ರೆಕ್ಕೆಗಳಪೇರಿಸಿಟ್ಟುಕೊಳ್ಳುವ ಸಾಹಸಕ್ಕೆತುದಿ ಮೊದಲೇ ಭಾವ ಭಂಗಿ? ಆದಿ ಅನಾದಿಗಳ ಲಕ್ಷ ಪ್ರಶ್ನೆಗೆಉತ್ತರ ಹುಡುಹುಡುಕಿ ಸೋತವರಪಟ್ಟಿಯೊಂದೆಜಗದ ಜಂತಿಯಲಿ ನೇತುಬೀಳುವಹೊಸ ಅಂಗಿ ******************************

Back To Top