ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕಲ್ಲಾಗಿಯೇ ಇರಬೇಕಿತ್ತು!

ರಾಜೇಶ್ವರಿ ಭೋಗಯ್ಯ

Real Story of Ahalya in Ramayana, not turned into Stone ! - Puranas

ಇದ್ದದ್ದು ನಿಜವಾಗಿದ್ದರೆ ಅಹಲ್ಯೆ
ಹೇಗೆ ಸಹಿಸಿಕೊಂಡಳೋ
ನೋವನ್ನೂ ಅವಮಾನವನ್ನು

ತನ್ನ ತಪ್ಪಿಲ್ಲದಿದ್ದರೂ ಶಾಪವಿಟ್ಟ ಅವಮಾನಕ್ಕೆ
ವಿನಾಕಾರಣ ಕಲ್ಲಾಗಿಸಿದ ನೋವಿಗೆ
ಹೇಗೆ ಸಹಿಸಿಕೊಂಡಳೋ ಅಬಲೆ

ಹೆಂಡತಿಯನ್ನು ನೆಲಕ್ಕೆ ತುಳಿದು
ನಿನ್ನನ್ನು ಮೇಲಕ್ಕೆತ್ತುವ ಹಿಂದೆ
ಯಾವ ಲೋಕ ಕಲ್ಯಾಣದ ಸಂಚಿತ್ತು

ಗೌತಮ ಸಹಕರಿಸಲಿಲ್ಲ
ಇಂದ್ರನೂ ಕಾಪಾಡಲಿಲ್ಲ
ವ್ರತಕೆಟ್ಟರೂ ಸುಖಪಡಲಿಲ್ಲ
ಅನ್ಯಾಯವ ಸಹಿಸಿಕೊಂಡು ಸುಮ್ಮನಿರಬಾರದಿತ್ತು

ಕಲ್ಲಾಗಿಯೇ ಇರಬೇಕಿತ್ತು ನೀನು
ರಾಮನ ಪಾದಸ್ಪರ್ಶ ಯಾಕೆ ಬೇಕಿತ್ತು
ಒಳಗೇ ಹುದುಗಿರಬೇಕಿತ್ತು ನೀನು
ನಿಜ ಧರ್ಮ ತಿಳಿದವ ಬುದ್ದ
ಬಂದು ನಿನ್ನ ಮೈ ದಡವುವವರೆಗೂ.

**********************

About The Author

5 thoughts on “ಕಲ್ಲಾಗಿಯೇ ಇರಬೇಕಿತ್ತು!”

  1. ಸಂಗಮಸುತ

    ಪುರುಷ ಸಮಾಜದ ‌ದೌರ್ಜನ್ಯಕ್ಕೆ ಹಿಡಿದ ಕನ್ನಡಿ,‌ ಜೊತೆಗೆ ಕವಿತೆ ಕೇಳುವ ಪ್ರಶ್ನೆಗಳಿಗೆ ನಾವು ತಲೆ ತಗ್ಗಿಸಿದ್ದೇವೆ, ಉತ್ತರವಿಲ್ಲದ ಅಸಹಾಯಕರಾಗಿದ್ದೆವೆ. ಚೆನ್ನಾಗಿದೆ

Leave a Reply

You cannot copy content of this page

Scroll to Top