Month: December 2023

ಸುಪ್ತದೀಪ್ತಿ ಅವರ ಕವಿತೆ-ನೆಲೆ

ಕಾರಮರ್ಮರವೆಲ್ಲ ತಲೆಯೊಳಗೆ ಗುಂಯ್ಗುಟ್ಟಿ
ಸುರಿಯುವುದು ಜಗದತ್ತ ಹೆಪ್ಪುಗಟ್ಟಿ
ಕಾವ್ಯ ಸಂಗಾತಿ

ಸುಪ್ತದೀಪ್ತಿ

ನೆಲೆ

ಹೆಚ್.ಎಸ್. ಪ್ರತಿಮಾ ಹಾಸನ್ ಕವಿತೆ-ಮಡಿಲಲ್ಲಿ ಮಗುವಾಗಿ ನೀನು

ಕಾವ್ಯ ಸಂಗಾತಿ

ಹೆಚ್.ಎಸ್. ಪ್ರತಿಮಾ ಹಾಸನ್

 ಮನ್ಸೂರ್ ಮುಲ್ಕಿ ಮೋಡದ ಮಳೆ 

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ ಮೋಡದ ಮಳೆ ಕೋಗಿಲೆ ನೀನು ಹಾಡುವಾಗಮಾತುಗಳೆಲ್ಲ ಮೌನವುನವಿಲೇ ನೀನು ನಲಿಯುವಾಗರೆಪ್ಪೆಯು ಕೂಡ ಮುಚ್ಚದು. ಚಂದಿರನೇ ನೀನು ಕಾಣುವಾಗಸೂರ್ಯನು ಕೂಡ ನಾಚುವನುಬೆಳಕೆ ನೀನು ತೋರುವಾಗಕತ್ತಲೆ ಕೂಡ ಕರಗುವುದು. ಸರಸರ ಗಾಳಿಯು ಬೀಸುವಾಗತೇಲಿದ ಅನುಭವ ಆಗುವುದುಮೋಡದ ಮಳೆಯಲಿ ನೆನೆಯುವಾಗಕಿರುನಗೆ ಮನದಲಿ ಮೂಡುವುದು. ಸಂಜೆಯ ಸೂರ್ಯನು ಮುಳುಗುವಾಗಚುಕ್ಕಿಗಳೆಲ್ಲ ಹೊರಡುವುದುಲಂಗರು ಹಾಕಿದ ಹಡಗುಗಳೆಲ್ಲಪಳಪಳ ಹೊಳೆಯುತ  ತೇಲುವುದು.  ಮನ್ಸೂರ್ ಮುಲ್ಕಿ

ಅಮ್ಮು ರತನ್ ಶೆಟ್ಟಿ ಕವಿತೆ -ಸತ್ಯ

ಸನ್ಮಾರ್ಗದಲ್ಲಿ ನಡೆವವಗೆ
ಸಂಕಟವು ತಪ್ಪದು
ದುರುಳರ ಸುಳ್ಳಿಗೆ
ಉಳಿಗಾಲವಿರದು

ಸುಳ್ಳು ಸಿಹಿಯಾದರೂ
ಭಾದಕವು
ರುಚಿಸದ ಕಹಿಯಾದರೂ
ಸತ್ಯವೇ ನಿಜವು

ಭಾಧೆಗಳಲಿ ಬೆಂದವಗೆ
ಸಿಗಬಹುದು ಗೆಲುವು
ಮಿಥ್ಯದ ಮಾತುಗಳಿಗೆ
ಸಿಗದೆಂದಿಗೂ ವಿಜಯವು

ಮೊಸರಿನಲಿ ಕಲ್ಲು
ಹುಡುಕುವವರ ನಡುವೆ
ಬೇಸರಿಸದೇ ಅರ್ಥೈಸಿಕೊ
ತಪ್ಪುಗಳು ಸಹಜವೇ

ಸತ್ಯಮೇವ ಜಯತೆ
ಭಾರತೀಯರ ಮೂಲಮಂತ್ರ
ಸತ್ಯದ ಹಾದಿಯಲ್ಲೇ
ಪಡೆದೆವು ಸ್ವತಂತ್ರ

✍️ ಅಮ್ಮು ರತನ್ ಶೆಟ್ಟಿ

Back To Top