ಅಮ್ಮು ರತನ್ ಶೆಟ್ಟಿ ಕವಿತೆ -ಸತ್ಯ

ಸನ್ಮಾರ್ಗದಲ್ಲಿ ನಡೆವವಗೆ
ಸಂಕಟವು ತಪ್ಪದು
ದುರುಳರ ಸುಳ್ಳಿಗೆ
ಉಳಿಗಾಲವಿರದು

ಸುಳ್ಳು ಸಿಹಿಯಾದರೂ
ಭಾದಕವು
ರುಚಿಸದ ಕಹಿಯಾದರೂ
ಸತ್ಯವೇ ನಿಜವು

ಭಾಧೆಗಳಲಿ ಬೆಂದವಗೆ
ಸಿಗಬಹುದು ಗೆಲುವು
ಮಿಥ್ಯದ ಮಾತುಗಳಿಗೆ
ಸಿಗದೆಂದಿಗೂ ವಿಜಯವು

ಮೊಸರಿನಲಿ ಕಲ್ಲು
ಹುಡುಕುವವರ ನಡುವೆ
ಬೇಸರಿಸದೇ ಅರ್ಥೈಸಿಕೊ
ತಪ್ಪುಗಳು ಸಹಜವೇ

ಸತ್ಯಮೇವ ಜಯತೆ
ಭಾರತೀಯರ ಮೂಲಮಂತ್ರ
ಸತ್ಯದ ಹಾದಿಯಲ್ಲೇ
ಪಡೆದೆವು ಸ್ವತಂತ್ರ


Leave a Reply

Back To Top