ವ್ಯಾಸ ಜೋಶಿ ಅವರ ತನಗಗಳು

ಜಲಾಶಯ ಒಣಗಿ
ಹೊರಬಂದ ಗುಡಿಯು
ಆ ದೇವರೇ ಬಂದನೇ?
ಬರಗಾಲ ನೋಡಲು.
**
ಅರೆ ಬರೆ ಮಳೆಯು
ಇಲ್ಲ ತಳ ಹಸಿಯು
ನಷ್ಟ ಬಿತ್ತಿದ ಬೀಜ
ವ್ಯರ್ಥ ಬೆವರು ಹನಿ.
***
ಹಸಿವು ನೀಗಿಸುವನು-
-ರೈತ ಭುವನದಲಿ,
ಆತ ಬದುಕಿರುವ
ಹಸಿದ ಹೊಟ್ಟೆಯಲಿ.


***
ಅನ್ನದಾತ ಈ ಬಾರಿ
ಚೆಲ್ಲೋದಿಲ್ಲ “ಚರಗ”.
ಮಳೆ ಬೆಳೆ ಇಲ್ಲದೆ!
ಏನಿದೆ? ಹೊಲದಾಗ.
**
“ಬರ”ದಲ್ಲೂ ಭೂತಾಯಿ
ಪೂಜಿಸಿಯೇ ಬಿಡೋಣ!
ಮುಂದಿನ ವರುಷಕೆ
ಕೊಟ್ಟಾಳು!,ಹೊಟ್ಟೆ ತುಂಬಾ.

—————————-

Leave a Reply

Back To Top