ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

 ವಿಭಿನ್ನ ರೇಶ್ಮಾ ಗುಳೇದಗುಡ್ಡಾಕರ್ ಕೋಟೆ ಕಟ್ಟುವೆ ಭಾವನೆಗಳ ನಡುವೆಎಂದವ ಹೆಣವಾಗಿ ಬಿದ್ದನುಒಡೆದ ಕನಸುಗಳ ಅವಶೇಗಳಮಧ್ಯೆ …. ಮಾನವತೆಯ ಹರಿಕಾರನೋಂದಮನಗಳ ಗುರಿಕಾರ ಎಂದುನಕಲಿ ಫೋಸು ಕೊಟ್ಟವನುಎಡಬಿಡದೆ ಭಾಷಣಗಳಸುರಿಮಳೆಗೈದವನು ಬಹಳ ದಿನಬಾಳಿಕೆ ಬರಲಿಲ್ಲ ಸತ್ಯಗಳ ಮುಂದೆ …. ಮಾತಿನಲ್ಲೆ ಬಂದೂಕು ಇಟ್ಟವನುಮುಗ್ದ ಮಂದಿಯ ಚಿತ್ತ ಕದಲಿದನುಅನಾಯಾಸವಾಗಿ ಗೆಲುವು ಪಡೆಯಲುನಿರಂತರವಾಗಿ ಹೆಣಗುತಿರುವನುಗುಂಪುಗಳ ನಡುವೆ …. ಹಿಡಿ ಮಣ್ಣಿಗೆ ಸಾರವ ಪರೀಕ್ಷಿಸುವವರುಬದುಕಿನ ಸಾರವ ಹೊತಿಟ್ಟುಮುಖವಾಡಗಳಿಗೆ ಬಣ್ಣ ಹಚ್ಚುವರು ಸರಳತೆಯೇ ಉಸಿರು ಎಂದುಆದರ್ಶಗಳೇ ಬದುಕು ಎಂದುಅಹಿಂಸೆಯೇ ದೇವರೆಂದವರುಇಂದು ಎಂದೆಂದು “ಮಹಾತ್ಮ “ನೇ ಅಗಿರುವರು …… *******

ಕಾವ್ಯಯಾನ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ಲಂಕೇಶರನ್ನು ಏಕೆ ಓದಬೇಕು? ನವೀನ್ ಮಂಡಗದ್ದೆ ಲಂಕೇಶ್ ಅವರನ್ನು ನಾನೇಕೆ ಓದುತ್ತೇನೆ.. ಲಂಕೇಶ್ ನನ್ನ ಹಾಗೆ ದಮನಿತ, ಅನಕ್ಷರಸ್ಥ, ಗ್ರಾಮೀಣ ಪ್ರದೇಶದಿಂದ ಬಂದವರು, …ಇಷ್ಟೆಲ್ಲ ಮಿತಿಗಳಿದ್ದಾಗಲೂ ಅವರು ಸಾಹಿತ್ಯ, ಸಿನಿಮಾ, ಪತ್ರಿಕೆ ಎಂದೆಲ್ಲ ಕೆಲಸ ಮಾಡಿದರು.. ಈ ಹಿನ್ನೆಲೆಯಲ್ಲಿ ನಮಗೀಗ ಕೆಲಸ‌ ಮಾಡಲು ಸಾಕಷ್ಟು ‘ ಸ್ಪೇಸ್’ ಇದೆ ಹಾಗಾಗಿ ಲಂಕೇಶ್ ನನಗೆ ಸ್ಪೂರ್ತಿ.. ಗ್ರಾಮೀಣ ಪ್ರದೇಶಗಳಿಂದ ನಗರ ಕಡೆಗೆ ಮುಖ ಮಾಡುವ ಯುವಕರು ಅಲ್ಲಿನ ಹುಸಿವೈಭವಕ್ಕೆ ಮಾರು ಹೋಗಿ ನಗರಗಳಲ್ಲಿ ಉಳಿದು ಬಿಡುತ್ತಾರೆ.. ಲಂಕೇಶ್ ನಗರದ ಕಡೆ ಮುಖ ಮಾಡಿದರೂ ತನ್ನ ಹಳ್ಳಿಯನ್ನು ಮರೆಯಲಿಲ್ಲ, ಅವರೊಬ್ಬ ಅಕ್ಷರಸ್ತ ವ್ಯಕ್ತಿಯಾಗಿ ಅನಕ್ಷರಸ್ಥ ಸಮುದಾಯದ ಜೊತೆ ನಿಂತರು  ಅವರ ಊರಾದ ಕೊನಗವಳ್ಳಿಯಲ್ಲಿ ಕೌದಿಗಳನ್ನು ಹೊಲಿಸಿ ಬೆಂಗಳೂರಿನಲ್ಲಿ ತೆಗೆದುಕೊಂಡು ಹೋಗಿ ಮಾರಿ ಅದರ ಹಣವನ್ನು ಕೌದಿ ನೇಯ್ದವರಿಗೆ ತಂದುಕೊಡುತ್ತಿದ್ದರಂತೆ ಸಾಹಿತ್ಯ ಕಲಿಸುವ ಬದ್ದತೆ ಏನು ಅದರ ಪ್ರತಿಫಲ ಏನಾಗಿರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆ ಲಂಕೇಶ್. ಜಾತಿ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುವವರು ಓದಲೇಬೇಕಾದ ಕತೆ ಮುಟ್ಟಿಸಿಕೊಂಡವನು, ನನ್ನ ಎಚ್ಚರದ ಧ್ವನಿಯಾಗಿ ಆ ಕತೆಯನ್ನು ಓದುತ್ತೇನೆ. ಬಿರುಕು ಕಾದಂಬರಿಯ ಬಸವರಾಜನ ಪಾತ್ರ ನನ್ನನ್ನು ಕಾಡುತ್ತಿರುತ್ತದೆ. ಅದರಲ್ಲಿ ಅವನು ಆಗಾಗ ತನ್ನ ಅಂಗಿಯನ್ನು ಬದಲಿಸುತ್ತಾನೆ, ಅದು ವ್ಯಕ್ತಿತ್ವ ಬದಲಾವಣೆಯ ಸಂಕೇತ, ಆಧುನಿಕೋತ್ತರ ಕಾಲದಲ್ಲು ಇದು ಸಹಜವಾಗಿ ರೂಪುಗೊಂಡಂತೆ ಇದೆಯಲ್ಲ ಅನಿಸುವ ಕಾರಣಕ್ಕಾಗಿ ಆ ಕಾದಂಬರಿಯನ್ನು ಮತ್ತೆ ಮತ್ತೆ ಓದುತ್ತೇನೆ, ಒಟ್ಟಾರೆ ಲಂಕೇಶ್ ಅನುಭವಿಸಿದಷ್ಟು ಕಷ್ಟಗಳನ್ನು ಅನುಭವಿಸದ ನಾವು ಅವರನ್ನು ಸ್ಪೂರ್ತಿಯಾಗಿ ಭಾವಿಸಲು ಸಾಧ್ಯವಿದೆ.

ಲಂಕೇಶರನ್ನು ಏಕೆ ಓದಬೇಕು? Read Post »

ಕಾವ್ಯಯಾನ

ಕಾವ್ಯಯಾನ

ನದಿಯಾಚೆ ಊರಿನಲ್ಲಿ ಕಾಯುತ್ತಿದ್ದೇನೆ ಮೂಗಪ್ಪ ಗಾಳೇರ ಅನಾಥ ಶವವಾಗಿ ಮಲಗಿರುವ ನನ್ನ ಒಂದೊಂದು ಕನಸುಗಳು ಇನ್ನೂ ಉಸಿರಾಡುತ್ತಿವೆ ಎಂದರೆ ನೀ ಬಿಟ್ಟು ಹೋದ ನೆನಪುಗಳು ಚುಕ್ಕಿ ಚಂದ್ರಮರಂತೆ ಅಜರಾಮರ ಎಂದರ್ಥ| ಉಸಿರಾಟಕ್ಕೂ ಉಸಿರಿಗು ಕನಸುಗಳಿಗು ನೆನಪುಗಳಿಗು ವ್ಯತ್ಯಾಸ ತಿಳಿಯದೆ ಶವವಾದ ಈ ಹೃದಯಕ್ಕೆ ಈ ಕವಿತೆಗಳೇ ಔಷಧಿ ಎಂದರೆ ತಪ್ಪಿಲ್ಲ ಒಮ್ಮೆ ನೀ ಹಿಂದಿರುಗಿನೋಡಿದರೆ ಗೊತ್ತಾಗುತ್ತಿತ್ತು ನಾನೆಟ್ಟ ಹೂವಿನ ಗಿಡಗಳು ನೂರಾರು ಜಾತಿಯದ್ದಾಗಿದ್ದರೂ ಅವುಗಳಿಂದ ಸೂಸುವ ಕಂಪು ಒಂದೆಂದು ಒಂದೊಮ್ಮೆ ನೀ ಮುಂದಿಟ್ಟ ಹೆಜ್ಜೆ ತಿರುಗಿಸಿ ಹಿಂದಿಟ್ಟರೆ ನನ್ನ ಹೃದಯದ ಆಕೃತಿ ಅಷ್ಟೇ ಅಲ್ಲ ನನ್ನ ಭವಿಷ್ಯದ ಚಿತ್ರಣವು ಬದಲಾಗಬಹುದು ಕೆರೆಯ ದಂಡೆಯ ಮೇಲೆ ಕೂತು ಕಂಡ ಕನಸುಗಳಿಗೆಲ್ಲಾ…… ಒಂಟಿಯಾಗಿದ್ದಾಗ ಬರೆದ ಕಾವ್ಯಗಳಿಗೆಲ್ಲಾ…… ಮತ್ತೆ ನಿನ್ನ ಬಾಚಿ ತಬ್ಬಿಕೊಳ್ಳುವ ಬಯಕೆ ಬಂದುಬಿಡು ನದಿಯಾಚೆ ಊರಿನಲ್ಲಿ ಕಾಯುತ್ತಿದ್ದೇನೆ……! ****************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸೀರೆ ಮತ್ತು ಬಟ್ಟೆ ಡಾ.ಗೋವಿಂದ ಹೆಗಡೆ ಸೀರೆ ಮತ್ತು ಬಟ್ಟೆ ಆದರೂ ಈ ಸೀರೆ ಎಂಥ ಯಕ್ಷಿಣಿ! ಮೈತುಂಬ ಹೊದ್ದ ಸೆರಗಾಗಿ ಗಜಗೌರಿ ಎನಿಸಲೂ ಸೈ ಮಾಟದ ಬೆನ್ನು ಸೊಂಟ ಆಕರ್ಷಕ ಹೊಕ್ಕುಳ ಸುಳಿ ತೋರಿಸಿ ಹಸಿವು ಕೆರಳಿಸಲೂ ಸೈ ‘ನಾವೇನು ಸೀರೆ ಉಟ್ಟಿಲ್ಲ’ ಎಂದೆಲ್ಲ ಪೌರುಷ ತೋರಿಸುವಂತಿಲ್ಲ ಈಗ ನೀರೆಗೂ ಸೀರೆ ಕಡ್ಡಾಯವಲ್ಲ! ಆಯ್ಕೆಗಳಿವೆ ಅವಳಿಗೆ ಆದರೂ ‘ಸೆರಗು ಸೊಂಟಕ್ಕೆ ಸುತ್ತಿ’ ‘ವೀರಗಚ್ಚೆ ಹಾಕಿ’ ಎಂದೆಲ್ಲ ನಾರೀಶಕ್ತಿಯನ್ನು ಬಣ್ಣಿಸುವುದುಂಟು ಗಂಡ ಅರ್ಧ ಸೀರೆಯನ್ನು ಹರಿದು ಸುತ್ತಿಕೊಂಡು ನಾಪತ್ತೆಯಾದಾಗ ದುರುಳ ಉಟ್ಟ ಸೀರೆಯನ್ನು ಸೆಳೆಯುವಾಗ ಎದ್ದು ನಿಂತಿದ್ದಾಳೆ ಅವಳು ತನ್ನ ಅಂತಃಶಕ್ತಿಯನ್ನೇ ನೆಚ್ಚಿ ಸೀರೆಯ ನೆರಿಗೆಯನ್ನು ಎಷ್ಟೊಂದು ಸಲ ಬೆರಳುಗಳು ನೇವರಿಸಿವೆ ಸುಕ್ಕಾಗಿದ್ದು ಸೀರೆ ಮಾತ್ರವೇ? ಸೆರಗಿನ ಕೊನೆ ಕಣ್ಣ ಪಸೆಯನ್ನು ಎಷ್ಟೆಲ್ಲ ಬಾರಿ ಹೀರಿ ಸಂತೈಸಿದೆ ಯಾವೆಲ್ಲ ನಿಟ್ಟುಸಿರು ಕರಗಿದೆ ಸೀರೆಯ ಮೃದು ಒಡಲ ಹಿಂದೆ ಗಂಡಸಿನ ಅಹಂಕಾರಕ್ಕೋ ಅವಳು ಹಾಸಿಗೆ ಅಥವಾ ಪೊರೆಯುವ ಮಡಿಲು ಅವಳ ಹುಟ್ಟೇ ಬೇರೆ! ಎದೆಯೂಡೆಂದ ತ್ರಿಮೂರ್ತಿಗಳ ಕೂಸಾಗಿಸಿ ಸಲಹಿದ್ದಾಳೆ ಅವಳು ಅಜಾತನಿಗೂ ಎದೆಹಾಲು ಉಣಿಸಿದ್ದಾಳೆ ಜಾತನಿಗೆ ತಾಯಿಯಾಗುವುದು- ಅದೇನು ಮಹಾ! ಕಾಡುವ ಕಣ್ಣು ಕೈ ತಾಳಿ ಕಟ್ಟಿದ ಕಾರಣಕ್ಕೆ ತನ್ನ ಹಕ್ಕೆನ್ನುವ ಪುರುಷಾಮೃಗ ದ ತುರಿಕೆ ತೀಟೆಗೆ ಬುದ್ಧಿ ಬಂದಿರಬಹುದೇ ಸೀರೆಯಲ್ಲ, ನೂಲಿನ ಹಂಗನೂ ಕಳಚಿ ನಡೆದಾಗ ಅಕ್ಕ ಸಂತೆ-ಸೀಮೆಯ ದಾಟಿ ಬಯಲನ್ನು ಬಿತ್ತಿಕೊಂಡಾಗ ಬಟ್ಟೆಯ ಗೊಡವೆಯೆಲ್ಲಿ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಿವನ ನೆನೆಯಲೆಂದು ರೇಖಾ ವಿ. ಕಂಪ್ಲಿ ಸಾವಿರದ ಮೆಟ್ಟಿಲ ಮೇಲೊಂದು ಕನಸು ಕಾಣುವವನ ಭಾವನೆಯ ಮೇಲೊಂದು ನನಸು ಇಟ್ಟನು ದೇವಾ ಹೆಣ್ಣ ಮೇಲೊಂದು ಸೊಗಸು ಮಠ ಒಂದು ಕಟ್ಟಲಿಲ್ಲ ಗಂಡು ಮೇಲೊಂದು ಮನಸು ಆಸೆಗಳ ಅರಿಬಿಟ್ಟ ಅಂಚಿಕೆಯ ಮಾಡದೇ ಅನುದಿನವು ಅವನ(ದೇವರ) ನೆನೆಯಲೆಂದು ಪಾದುಕೆಗಳಿಗೊಂದು ಹೊದುಕೆ ಕೊಟ್ಟವನು ಮನಸೆಂಬ ಹೊದುಕೆಗೆ ಆಳು ನೆನಪುಗಳ ನಿಟ್ಟು ತನ್ನ ಮುಟ್ಟುವ ಗಟ್ಟಿ ಗುಟ್ಟಾಗು ಎಂದು ಮೆಟ್ಟು ಭಾವನೆಯ ನಿನ್ನ ಪಟ್ಟು ಮೀರೆಂದು ತಟ್ಟು ಶಿವನೆದೆಯ ಕರುಣಾಂತರಂಗವನು ಅವನೊಲುಮೆಯ ಸಾಗರದ ಶರಧಿಯನು *****

ಕಾವ್ಯಯಾನ Read Post »

You cannot copy content of this page

Scroll to Top