Category: ಕಾವ್ಯಯಾನ

ಕಾವ್ಯಯಾನ

ಈಗ ಆಕೆ ಇರಬೇಕಾಗಿತ್ತು….

ಸದಾ ತನ್ನ ಗುಂಗಿನಲ್ಲೆ ನನ್ನ ಹಿಡಿದಿಡುವ ಒಲವಿನ ಬಲೆ
ತನ್ನುಸಿರ ಕೊನೆಯಲ್ಲೂ ನನ್ನ ಹೆಸರನೇ ಉಸುರಿದ
ಆಕೆ ಈಗ ಇರಬೇಕಾಗಿತ್ತು

ಗಜಲ್

ಚಂದ್ರಗೆಲ್ಲಿ ಬೆಂದೊಡಲ ಕೆಂಡದ ಚಡಪಡಿಕೆ
ತಂಬೆಲರೂ ಹೊತ್ತಿ ಸುಡುತಿದೆ ಇನ್ನಿಲ್ಲದಂತೆ

ಎರಡು ಕವಿತೆಗಳು

ಬುದ್ಧ
ಸಾಗಿದ ದಾರಿಯಲ್ಲಿ
ನಗು ಬೀಳಿಸಿಕೊಂಡು ಹೋಗಿದ್ದಾನೆ
ಬನ್ನಿ,ಎತ್ತಿಟ್ಟುಕೊಳ್ಳೋಣ

ಗಜಲ್

ಗಜಲ್ ನಯನ. ಜಿ‌. ಎಸ್ ನೋವುಗಳ ಕಾವಿನಲಿ ಬೆಂದು ಬಳಲದಿರು ಕರೆಯುತಿದೆ ಬಾಳಿನ ರಹದಾರಿವ್ಯಥೆಗಳೊಳು ಸಿಲುಕುತ ನಿತ್ಯ ಕುಗ್ಗದಿರು ಆದರಿಸುತಿದೆ ಬಾಳಿನ ರಹದಾರಿ ! ಉಳಿವು ಅಳಿವುಗಳು ಸೃಷ್ಟಿಯ ನಿಯಮ ಅರಿತು ಬದುಕು ಉತ್ಸಾಹದಿನಿರಾಸೆಗಳ ಗುಂಗಿನಲಿ ಮುಳುಗದಿರು ಸೆಳೆಯುತಿದೆ ಬಾಳಿನ ರಹದಾರಿ ! ಎಡೆಬಿಡದೆ ಸುರಿಸಿದ ಶ್ರಮದ ಬೆವರನು ಹಾಳು ಗೆಡವದಿರು ಮನವೇಪ್ರತಿಫಲವು ಇರಲು ನೊಂದು ದೂರ ತಳ್ಳದಿರು ಸಾಗುತಿದೆ ಬಾಳಿನ ರಹದಾರಿ ! ಬುದ್ಧಿ ಜೀವಿಯು ಮನುಜ ಎಂಬುದ ಅರಿತು ತಿಳಿ ಸ್ಥಿತಿ ಗತಿಯ ಸೂಕ್ಷ್ಮದಿಭವಿಷ್ಯವಿದೆ […]

ಗಜಲ್

ಗಜಲ್ ರಾಹುಲ ಮರಳಿ ಮನಸಿನ ಹಿಡಿತ ತಪ್ಪಿ ಭಾವನೆಗಳ ಬರವಾಗಿದೆ‌‌ ಸಾಕಿಹೃದಯದಿ ಭಾವನೆಗಳಿಲ್ಲದೆ ಮನಸಿಗೆ ಘಾಸಿಯಾಗಿದೆ ಸಾಕಿ ಬೇಕು ಬೇಕೆಂಬ ಹಪಹಪಿಯಲಿ ಇದ್ದ ವೈಭವ ಅನುಭವಿಸುತಿಲ್ಲಸಾಕು ಎಂಬ ತೃಪ್ತಿ ಸುಖದ ಸುಪತ್ತಿಗೆಯಾಗಿದೆ ಸಾಕಿ ಅನ್ಯರ ಕಷ್ಟ ನೋಡುತಿರೆ ಕರಳು ಚುರ್ ಎನ್ನುವುದುಎನ್ನ ಹೃದಯ ಕಿವುಚಿದರೂ ಕೇಳವರಿಲ್ಲದಂತಾಗಿದೆ ಸಾಕಿ ಕೊಂಚ ಮದಿರೆ ದೊರೆತರೆ ನಶೆಯಲಿ ಹಾಯಾಗಿರಬಹುದುಮನದ ತುಮುಲಗಳನು ಹೊರಹಾಕಲು ಕಾವ್ಯ ರಚಿಸಬೇಕಾಗಿದೆ ಸಾಕಿ ಪ್ರೀತಿ ಪ್ರೇಮ ಸ್ನೇಹಗಳೆಂಬ ಸಂಬಂಧಗಳನು ಮನ ನಂಬಿದೆಜೀವಕವಿ ನೋವಿಂದ ಬಳಲಿದರೂ ಉಸಿರಾಡುವಂತಾಗಿದೆ ಸಾಕಿ

ಗಝಲ್

ಗಝಲ್ ತೂತು ಬಿದ್ದ ಹಚ್ಚಡದಲ್ಲಿ ಒದ್ದಾಡುತಿದೆದೇವನಿಟ್ಟ ಕನಸುಕಾದ ಹೆಂಚಿನ ರೊಟ್ಟಿಯಂತೆ ಸುಡುತಿದೆದೇವನಿಟ್ಟ ಕನಸು ನಿಗಿನಿಗಿ ಕೆಂಡವಾಗಿ ಮನವು ಕಂಪನೆಕಾಯ್ದು ಹೋಯಿತೇಬನದ ಸುಮದ ಆಸೆಯ ಕಮರಿಸುತಿದೆದೇವನಿಟ್ಟ ಕನಸು ತುತ್ತು ಕೂಳಿಗೂ ನಾನಾ ಬಗೆಯಲಿವೇಷ ತೊಡಿಸಿತೆಢಂಢಂಯೆಂದು ವಾದ್ಯ ಬಾರಿಸುತಿದೆದೇವನಿಟ್ಟ ಕನಸು ಶಾಪಗ್ರಸ್ತ ಅಹಲ್ಯೆಯಂತೆ ಹೃದಯಮುಕ್ತಿ ಬೇಡುತಿದೆಬಡತನದ ಬಾಣಲೆಯಲಿ ಬೇಯುತಿದೆದೇವನಿಟ್ಟ ಕನಸು ಸನ್ಯಾಸಿಯಂತೆ ಸನ್ಮಾರ್ಗ ಅರಸುತಿದೆಅಭಿನವನ ಕಾವ್ಯವಿದೂಷಕನ ತೆರದಿ ಹಾಸ್ಯ ಮಾಡುತಿದೆದೇವನಿಟ್ಟ ಕನಸು ಶಂಕರಾನಂದ ಹೆಬ್ಬಾಳ

Back To Top