ಮಾಯಾಕನ್ನಡಿ

ಮಾಯಾಕನ್ನಡಿ

‘ಮಾಯಾಕನ್ನಡಿ’ ಕೇರಳ ಕಾಂತಾ ಸಮ್ಮಿತದ ಮುಂದುವರಿದ ಭಾಗವೆನ್ನೆಡ್ಡಿಯಿಲ್ಲ. ಸ್ವಾತಂತ್ರೋತ್ತರ ಭಾರತ, ಸುಶಿಕ್ಷಿತ ಸ್ತ್ರೀಯರ ಬವಣೆಗಳು, ಸಮಾಜದ ದ್ವಂದ್ವ ನೀತಿಗಳನ್ನು ಪ್ರಶ್ನಿಸುವ ಗುಣ‌ ಇವೆಲ್ಲವನ್ನೂ ಇಲ್ಲಿಯ ೧೬ ಕಥೆಗಳಲ್ಲಿ ಕಾಣಬಹುದು. ೧೯ ನೆಯ ಶತಮಾನದಲ್ಲೇ ಭ್ರಮನಿರಸನ(ಗಾಂದೀಜಿಯೋತ್ತರ ದಿನಗಳು)ವಾದ ಚಿತ್ರ ಇಲ್ಲಿ ನೋಡಲು ಸಿಗುವುದು

ಅಷ್ಟೇ ಸಾಕು.

ಕವಿತೆ ಅಷ್ಟೇ ಸಾಕು. ಅಬ್ಳಿ,ಹೆಗಡೆ ಈ…ನೀರವದೊಳಗೂಸಂತೆಯ ಗಿಜಿ,ಗಿಜಿ.ಈ ರೌರವದೊಳಗೂಏನಾದರೊಂದು ಖುಷಿ,ಸಂಭ್ರಮ ನನ್ನೊಟ್ಟಿಗೆ.ಒಂಟಿತನದ ನಂಟುಬಾದಿಸುವದಿಲ್ಲ ನನ್ನ ನನ್ನೊಟ್ಟಿಗಿನ ಸಂಜೆಬಂಜೆಯಾದರೂ..ಹಗಲ ನಗು ಮಾಸಿದರೂ,ಹಿಂಬಾಲಿಸಲೊಂದುನೆರಳು,ನೋಡಿಕೊಳ್ಳಲೊಂದುಕನ್ನಡಿ,ಇಷ್ಟಿದ್ದರೂ ಸಾಕು,ನನಗೆನಾ ಒಂಟಿಯೆನಿಸುವದಿಲ್ಲ ಸಾಲದ್ದಕ್ಕೆ……ಸಾವಿನಮನೆಯ ನಿಶ್ಶಬ್ಧಕತ್ತಲಲ್ಲಿ ಹಚ್ಚಿಟ್ಟ-ಮಿಣುಕು ದೀಪವೊಂದಿದೆಯಲ್ಲ ಮಸ್ತಕದಲ್ಲಿನೆನಪಿನ ಪುಸ್ತಕತೆರೆದೋದಲು.ಅಷ್ಟೇ ಸಾಕು,ನಾಒಂಟಿಯೆನಿಸುವದಿಲ್ಲ. ಹೊತ್ತಿನ ಹೊತ್ತಿಗೆಯಲ್ಲಿರಾಶಿ,ರಾಶಿ,ಸಂಭ್ರಮಗಳನೆನಪಿನ ಚಿತ್ತಾರಗಳಿವೆ,ಚಿತ್ತವನು ಸಂತೈಲು.ಬಾಲ್ಯದಲ್ಲಿ…..ಮರಿ-ಹಾಕಲಿಟ್ಟ ನವಿಲುಗರಿ,ಮರದ ಟೊಂಗೆಯಲ್ಲಿಸಿಕ್ಕಿಬಿದ್ದ ದಾರ ಹರಿದಬಣ್ಣದ ಗಾಳಿಪಟ,ಬದುಕಿನೆಲ್ಲ ಮೊದಲುಗಳಸವಿ,ಸವಿ ನೆನಪು,ಇದ್ದೇ ಇವೆಯಲ್ಲ..ನನ್ನೊಟ್ಟಿಗೆ..!ಅಸಹ್ಯದ ಕ಼ಣಗಳನ್ನೂಸಹ್ಯವಾಗಿಸಲು.ಒಂಟಿತನ ನೀಗಿಸಲು. ಯಾವುದಿಲ್ಲವಾದರೂಕೊನೇಪಕ಼ ನನ್ನೊಳಗಿನ‘ನಾನಂತೂ’….ಇದ್ದೇ ಇದೆಯಲ್ಲ,ನನ್ನೊಟ್ಟಿಗೆ.ಅಷ್ಟೇ ಸಾಕು ಬದುಕಿಗೆ. **********

ಇನ್ನು ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯನಿಂದು ಕೂಗಬೇಕು’. ಹಾಗೇ ಅಕ್ಷರಗಳಿಂದಲೇ ಕೂಗಿ ಕರೆಯಬೇಕು ಎಲ್ಲಾ ಎಚ್ಚರಗಳಿಗೆ. ಅಪಾಯಗಳ ಬಾಯಿಗೆ ಆಹಾರವಾಗುವ ಮುನ್ನ .

ಗಜಲ್

ಪರಪಂಚದ ಕಂಬನಿಗೆ ನನ ಹೃದಯವೆ ತಂಗುದಾಣವಾಗಿದೆ
ನೀನೊಮ್ಮೆ ಆಲಂಗಿಸಿ ಬಿಸಿಯುಸಿರಿನಲಿ ಸಂತೈಸಬಾರದೆ..

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-4 ಬೆಳಗಿನ ಜಾವ ಐದೂವರೆಗೆ ಇಲ್ಲಿಯ ಏಳುವರೆಯಷ್ಟು ಬೆಳಕು ಮತ್ತು ಎಳೆ ಬಿಸಿಲು. ಒಳ್ಳೆಯ ನಿದ್ರೆಯಾಗಿ ತಾಜಾತನ ತುಂಬಿಕೊಂಡಂತೆ ಮೈ ಮನಸ್ಸು ಉಲ್ಲಸಿತವಾಗಿತ್ತು. ಮನೆಯಲ್ಲಿದ್ದರೆ ಹಲವಾರು ಕೆಲಸಗಳು ಸಾಲಾಗಿ ಧಬಧಬನೆ ಮೈ ಮೇಲೆ ಬಿದ್ದ ಹಾಗೆ ಧಾವಿಸಿ ಬರುತಿದ್ದವು. ಇಲ್ಲಿ ಯಾವ ಕೆಲಸದ ಗೊಡವೆಯೂ ಇಲ್ಲದೆ ಹಾಯಾಗಿ ಆ ಬೆಳಗಿನ ಜಾವವನ್ನು  ಆನಂದಿಸಿದೆ. ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ಉಪಹಾರವೂ ಆಯಿತು. […]

ಗಜ಼ಲ್

ಮನಸ್ಸಿದ್ದರೆ ಹರಿದು ಹೋದ ಬಾಳನ್ನು ಮತ್ತೆ ಹೊಲೆದುಕೊಳ್ಳಬಹುದು
ಕೆಟ್ಟು ನಿಂತ ಯಂತ್ರವೂ ದಡ ಸೇರಿಸಬಹುದೆಂದು ನಂಬಿಕೆ ಇಟ್ಟಿದ್ದೇವೆ

ಅಂಕಣ ಬರಹ ಮೌನದ ಮಾತು… ಇದನ್ನ ಈ ಮುಂಚೆ ಯಾರಾದರೂ ಹೇಳಿರಬಹುದು ..ನನಗೆ ಗೊತ್ತಿಲ್ಲ… ಈ ಕ್ಷಣ ಹೊಳೆದ ಮಾತುಗಳಿವು.     ಬಹಳಷ್ಟು ಸಂದರ್ಭಗಳಲ್ಲಿ ಬಹಳಷ್ಟು ಜನರ ಮೌನವನ್ನು ದೌರ್ಬಲ್ಯ ಎಂದೇ ಪರಿಗಣಿಸಿ ಇನ್ನಷ್ಟು ತುಳಿಯಲು ಸಮಾಜದಲ್ಲಿ , ವ್ಯವಸ್ಥೆಯಲ್ಲಿ ಪ್ರಯತ್ನಗಳು ನಡೆದಿವೆ , ನಡೆಯುತ್ತಲೇ ಇವೆ ..     ಮೌನ ಕಾಯುತ್ತಿರುತ್ತದೆ ..ಒಳಗೊಳಗೇ ಮಾಗುತ್ತಿರುತ್ತದೆ ..ಒಡಕು ಪಾತ್ರಗಳೆಲ್ಲ ಸದ್ದು ಮಾಡಿ ಮಾಡಿ ಸೋತು ಸುಮ್ಮನಾದ ನಂತರ ಮೌನ ಮಾತಾಗುತ್ತದೆ..           ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು […]

ನೆನಪಿನ ನವಿಲು ಗರಿಗಳ ನೇವರಿಕೆ

ಸ್ಮಿತಾ ಅಮೃತರಾಜ್ ಅವರ ಒಂದು ವಿಳಾಸದ ಹಿಂದೆ ಪುಸ್ತಕದ ಬಗ್ಗೆ ಬರೆದಿದ್ದಾರೆ ಮಮತಾ ಶಂಕರ್

ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ

ನೀ ಹೋದ ಮರುದಿನ ಮತ್ತ ನಂ ಬದುಕು ಮದಲಿನಂಗ ಆಗ್ಯಾದೋ ಬಾಬಾಸಾಹೇಬ!
ನಿನ್ನಂಗ ನುಡಿವಾಂವಾ,ಕಳ ಕಳಿಯ
ಪಡುವಂವ ಬರಲಿಲ್ಲೋ ಒಬ್ಬ!!
ಚನ್ನಣ್ಣ ವಾಲೀಕಾರ

Back To Top