ಪ್ರಸ್ತುತ

ಪ್ರಸ್ತುತ

ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ .. ಗಣೇಶ್ ಭಟ್ ಶಿರಸಿ ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ .. ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮ, ಕನ್ನಡಕ್ಕೇ ಮೊದಲ ಸ್ಥಾನ ಎನ್ನುವುದನ್ನು ಜನರು ಒಪ್ಪಿದರೂ, ಸರ್ಕಾರಗಳು ಅನುಷ್ಠಾನಕ್ಕೆ ತರಲು ಹಿಂದೇಟು ಹಾಕುತ್ತಿವೆ. ವೋಟಿಗಾಗಿ ನಾಟಕ ಮಾಡುವ ರಾಜಕೀಯ ಪಕ್ಷಗಳೆಲ್ಲವೂ ಕುಂಟು ನೆಪ ಮುಂದೆ ಮಾಡಿ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಯನ್ನು ಮುಂದೂಡುತ್ತಲೇ ಇವೆ. ಕಳೆದ 35 ವರ್ಷಗಳಿಂದ ಅಧಿಕಾರದಲ್ಲಿದ್ದ ವಿವಿಧ ಪಕ್ಷಗಳು ( ಜನತಾ, ಕಾಂಗ್ರೆಸ್, ಬಿಜೆಪಿ) ಕನ್ನಡ […]

ವ್ಯಾಲಂಟೈನ್ಸ್ ಡೇ ಸ್ಪೆಶಲ್

ನನ್ನ ಕನಸಿನ ಹುಡುಗಿಗೆ ಒಂದು ಕವಿತೆ ಮೂಗಪ್ಪ ಗಾಳೇರ ನನ್ನ ಕನಸಿನ ಹುಡುಗಿಗೆ ಒಂದು ಕವಿತೆ ನನ್ನೆಲ್ಲಾ ಒಂದೊಂದು ಕನಸುಗಳಿಗೆ ಬಣ್ಣ ಹಚ್ಚಿದವಳು ನೀನು ರೆಕ್ಕೆಪುಕ್ಕ ಕಟ್ಟಿದವಳು ನೀನು ಆ ಕನಸುಗಳಿಗೆ ಜೀವ ತುಂಬಿದ ರಮಣೀಯ ಕಾಮ ದೇವಿಯ ಪುತ್ರಿ ನೀನು ನಿನ್ನ ಕಂಡೊಡನೆ ನನ್ನ ಹೃದಯದ ಇಂಚರದ ಮೇಳ ತಾನು ತಾನಾಗಿ ನುಡಿಯದೆ ಹೊಸದೊಂದು ಸಂಗೀತ ಸ್ವರ ಲೋಕ ಸೃಷ್ಟಿಸುತ್ತದೆ ನಿನ್ನ ಮಾತುಗಳೆಲ್ಲವು ಒಂದೊಂದು ಬಾರಿ ಅದೆಂತಾ ಮೌನ ಲೋಕ ಸೃಷ್ಟಿಸುತ್ತವೆ ಆ ಲೋಕದಲ್ಲಿ ಹೃದಯದ […]

ವ್ಯಾಲಂಟೈನ್ಸ್ ಡೇ ಸ್ಪೆಶಲ್

ನವಿಲನು ಮುಟ್ಟಿದ ಚಿತ್ರ ಬಿದಲೋಟಿ ರಂಗನಾಥ್ ನವಿಲನು ಮುಟ್ಟಿದ ಚಿತ್ರ ಅವಳ ನಿಟ್ಟುಸಿರ ಸದ್ದಿನಲಿ ಬೆವತ ಹೃದಯದ ಬಾಗಿಲು ಗೆದ್ದಲಿಡಿದು ನೋವಿನಲಿ ಮುಕ್ಕಾಗುತ್ತಿದೆ ಹಿಡಿದಿದ್ದ ಗುಲಾಬಿಯ ಬಣ್ಣದ ಗುರುತಿನ ಭಾವ ಗಾಳಿ ಮಳೆ ಬಿಸಿಲಿಗೆ ನಲುಗಿದರೂ ಅಳಿಸುತ್ತಿಲ್ಲ ಕಾಮನ ಬಿಲ್ಲಿನ ಮೇಲೆ ಇಬ್ಬರೂ ಕೂತು ನವಿಲನು ಮುಟ್ಟಿದ ಚಿತ್ರ ಮುಗಿಲ ಮೇಲೆ ಹಾಗೇ ಇದೆ ತಣ್ಣನೆಯ ಸ್ಪರ್ಶದ ಆ ನಿನ್ನ ನಗು ಮುಂಗುರುಳ ಮೇಲೆ ಆಡಿಸಿದ ಬೆರಳ ಆಟ ಕತ್ತಲೆಯಲಿ ಕರಗಿದ ನಮ್ಮಿಬ್ಬರ ಚಿತ್ತ ದಾರಿಯ ಪಯಣ […]

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಗಝಲ್ ಡಾ.ಗೋವಿಂದ ಹೆಗಡೆ ಗಜಲ್ ನನ್ನದೆಲ್ಲವನ್ನೂ ಅಪಹರಿಸಿದ್ದಾನೆ ಈ ಸಖ ಜೀವದ ಜೀವವೇ ಆಗಿಬಿಟ್ಟಿದ್ದಾನೆ ಈ ಸಖ ಕುಡಿನೋಟ ಬೀರಿ ಹೇಗೆ ಕರೆಯುತ್ತಾನೆ! ನೋಟದಲ್ಲೇ ನನ್ನ ಕುಡಿಯುತ್ತಾನೆ ಈ ಸಖ ಕುಡಿಮೀಸೆಯ ಅವನ ಮುಖವೆಷ್ಟು ಚಂದ! ಮುಖಕ್ಕೆ ಮುಖವಿಟ್ಟು ‌ಮೈಮರೆಸಿದ್ದಾನೆ ಈ ಸಖ ಅವನ ಪಿಸುನುಡಿಗೇ ಮೈತುಂಬ ಮಿಂಚು ಬೇಸಗೆಯಲ್ಲೂ ನವಿಲ ಕುಣಿಸಿದ್ದಾನೆ ಈ ಸಖ ಬರ ಬಿದ್ದ ಎದೆಯಲ್ಲಿ ಸುಗ್ಗಿ ಬಂದಿದೆ ಹೇಗೆ ಸಗ್ಗವಿದ್ದರೆ ಅದನು ಇಳಿಸಿದ್ದಾನೆ ಈ ಸಖ **************************

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಒಲವು-ಗೆಲುವು ದೀಪಾಜಿ ಒಂದು ಕಾಲು ಕೆಜಿಯಷ್ಟು ತೂಗುವ ಗ್ರೀಟಂಗೂ ಕವರಿನಿಂದಾಚೆ ತೆಗೆದೊಡನೆ ಎರಡು ಪುಟದ ಮೇಲೊಂದಂದು ಬಿಳಿ ಪಾರಿವಾಳಗಳು ಪುಟಿದು ಕುಳತದ್ದು ನೋಡುತ್ತಿದ್ದಂತೆ ಮದ್ಯದಲ್ಲಿನ ಅಂಗೈ ಅಗಲದ ಕಡುಗೆಂಪು ಹೃದಯ ಅದರಾಳದೊಳಗಿಂತ ವಾದ್ಯಸಂಗೀತ ಕಿವಿ ದಾಟಿ ಎದೆ ತಾಕುತ್ತದೆ. ಪುಟ ತಿರುಗಿಸಿದರೆ ಜೋಡಿ ಗುಲಾಬಿ ಹೂ ಗಳು ಅದರ ಕೆಳಗೆ ಮೂರು ಸಾಲಿನ ಹನಿಗವನ.    ಮೂರು ಬಾರಿ ಉಸಿರೆ…. ಉಸಿರೆ.. ಉಸಿರೆ… ಉಸಿರಾಗಿ ಬಾ ಹೆಸರಾಗಿ ಬಾ ಈ ಬರಡು ಬದುಕಿಗೆ ಹಸಿರಾಗಿ ಬಾ..   […]

ವ್ಯಾಲಂಟೈನ್ ಸ್ಪೆಶಲ್

ಗಝಲ್ ಮಾಲತಿ ಹೆಗಡೆ ಗಜಲ್ ಅವನ ಕಣ್ಣಲ್ಲಿ ‌ನನ್ನ ಬಿಂಬ ಕಂಡಾಗ ಮೂಡಿತ್ತು ಪ್ರೀತಿ ಮನಸೆಳೆವ ಮಾತಿಗೆ ಮರುಳಾದಾಗ ಮೂಡಿತ್ತು ಪ್ರೀತಿ ಪ್ರತಿದಿನವೂ ಕನಸಲ್ಲೂ ನನಸಲ್ಲೂ ಕಾಡಿದ್ದೇನೂ ಸುಳ್ಳಲ್ಲ ಕಾಯಾ ವಾಚಾ ಮನಸಾ ನಿನ್ನವನೆಂದಾಗ ಮೂಡಿತ್ತು ಪ್ರೀತಿ ನಮ್ಮಿಚ್ಛೆಯಂತೆ ಮದುವೆಯಾಗುವುದು ಏನು ಹುಡುಗಾಟವೇ? ನಾನೆಲ್ಲ ನೋಡಿಕೊಳುವೆ ಭಯಬೇಡವೆಂದಾಗ ಮೂಡಿತ್ತು ಪ್ರೀತಿ ದೇವರು ಗುರುಹಿರಿಯರು ಅಗ್ನಿ ಸಾಕ್ಷಿಯಾಗಿ ಕಟ್ಟಿದ ಮಾಂಗಲ್ಯ ಉರುಳಾಗದಂತೆ ಬಲು ಕಾಳಜಿ ಮಾಡಿದಾಗ ಮೂಡಿತ್ತು ಪ್ರೀತಿ ಈ ‘ಮಾಲಿ”ಗೆ ಒಲಿದವನೊಂದಿಗೆ ಬದುಕುವ ಸುಯೋಗ ಸುಖ ದುಃಖದಲಿ […]

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಪ್ರೀತಿಯೆಂದರೆ ಹೀಗೇ ಏನೋ!!?? ಸೌಜನ್ಯ ದತ್ತರಾಜ ಪ್ರೀತಿಯೆಂದರೆ ಹೀಗೇ ಏನೋ!!?? ಮೊದಮೊದಲು ನಿದ್ದೆ ಕೆಡಿಸಿ, ನೆಮ್ಮದಿ ಕಳೆದು ಸಾವಿರ ಪ್ರಶ್ನೆಗಳ ಸುಳಿಯೊಳಗೆ ಸಿಲುಕಿಸಿ ಅವಗಣನೆಯೋ, ಅವಮಾನವೋ ಎಂದೆಲ್ಲಾ ಅನುಮಾನಗಳ ಹುಟ್ಟಿಸಿ ಸ್ವಾಭಿಮಾನ, ಸ್ವಾರ್ಥಗಳೆಲ್ಲವ ಮಧ್ಯೆ ತೂರಿಸಿ ನಂಬದ ದೇವರನ್ನೂ ಮತ್ತೆ ಮತ್ತೆ ನೆನೆಸಿ ನಿರ್ಧಾರಗಳೆಲ್ಲವ ಏರುಪೇರಾಗಿಸಿ ಭೂಮಿ ಬಾನುಗಳ ತಲೆಕೆಳಗಾಗಿಸಿ ಅಬ್ಬಬ್ಬಬ್ಬಾ……. ಅವೆಷ್ಟೆಲ್ಲಾ ಚಿತ್ರ ವಿಚಿತ್ರ ಭಾವನೆಗಳು ಒಮ್ಮೆ ಪ್ರೀತಿ ನಮ್ಮೆಡೆ ತಿರುಗಿ ನಕ್ಕರೆ ಆಯ್ತು ಒಪ್ಪಿಕೊಂಡರಂತೂ ಸರ್ವಸ್ವವೂ ಸುಂದರ ಅರಳುವ ಮನ, ನೆಮ್ಮದಿಯ ನಿದ್ದೆ ಪ್ರಶ್ನೆಗಳಿಗೆಲ್ಲಾ […]

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಗಜಲ್ ಕದ್ದು ಕದ್ದು ನೋಡುತ್ತ ಎಗ್ಗಿಲ್ಲದೇ ಕಿರುನಗೆ ತೂರಿದ್ದು ಅವನೇನಾ ಕದಪು ಕೆಂಪಾಗಿಸಿ, ಊರ ತೇರಲ್ಲಿ ಹಿಂದ್ಹಿಂದೆ ಬಂದಿದ್ದು ಅವನೇನಾ ಚುಮು ಚುಮು ಚಳಿಯ ಮುಂಜಾನೆಗೂ ಬೆಚ್ಚನೆಯ ಕನಸು ಮೈಯೆಲ್ಲ ಚುಂಗೇರುವಂತೆ ಕಣ್ ಮಿಟುಕಿಸಿ ನಕ್ಕಿದ್ದು ಅವನೇನಾ ಒರತೆ ಕಾಣದ ಒಡಲಾಳವೆಲ್ಲ ನೀರು ನೀರಾದ ಅನುಭಾವವೆನಗೆ ಒಸರುವ ಜೀವ-ಭಾವಗಳಿಗೆ ಸುಖದಮಲು ತುಂಬಿದ್ದು ಅವನೇನಾ ಹಿಡಿತ ತಪ್ಪಿ, ತೇಲಾಡಿ ಎಲ್ಲೆಂದರಲ್ಲಿ ಮನ ಬೀಡುಬಿಟ್ಟ ಕ್ಷಣಗಳೆಷ್ಟೋ ಎನ್ನೆಲ್ಲ ತುಮುಲಗಳಿಗೆ ದಿಕ್ಕು ದಿಕ್ಕಾಗಿ ಒಡ್ಡು ಕಟ್ಟಿದ್ದು ಅವನೇನಾ ಬೆಳಗೇರಿದಂತೆ ಇಬ್ಬನಿಯ ಮೈಯೊಳಗೆ ಹನಿ-ಹನಿಯಾಗುವ ಭಯ ಬೆಡಗು […]

ಮಾಸದ ನೆನಪು

ನಾನು ಕಂಡ ಹಿರಿಯರು ಅರ್ಥವಿದ:ಎಚ್ಚೆಸ್ಕೆ ಡಾ.ಗೋವಿಂದ ಹೆಗಡೆ ಅರ್ಥವಿದ:ಎಚ್ಚೆಸ್ಕೆ (೧೯೨೦-೨೦೦೮) ಮೈಸೂರಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದೆ.೧೯೮೭ರಲ್ಲಿ ಇರಬಹುದು,’ಗ್ರಾಮಾಂತರ ಬುದ್ಧಿಜೀವಿಗಳ ಯುವ ಬಳಗ,ಭೇರ್ಯ’ ಎಂಬ ಸಂಘಟನೆ ಕವಿಗೋಷ್ಠಿಯನ್ನು ಏರ್ಪಡಿಸಿತ್ತು.’ಕವನ ತನ್ನಿ,ಓದಿ!”ಎಂಬ ಕೋರಿಕೆಯೂ ಇತ್ತು.ಸರಿ,ನಾನೂ ಭಾಗವಹಿಸಿದೆ. ಹಿರಿಯ ಬರಹಗಾರರಾದ ಸಿ.ಭೈರವಮೂರ್ತಿ ಸಭೆಯಲ್ಲಿ ಇದ್ದ ನೆನಪು. ಮರು ತಿಂಗಳ ಕಾರ್ಯಕ್ರಮಕ್ಕೆ ಪತ್ರ ಮೂಲಕ ಆಹ್ವಾನ ಬಂತು. ಹಿರಿಯ ಲೇಖಕ ಎಚ್ಚೆಸ್ಕೆ ಇರುತ್ತಾರೆ ಎಂಬ ಮಾತಿತ್ತು. ಸರಿ, ನಾನು ಹೋದೆ. ಹಳೆಯ ಕಾಲದ ಮನೆ. ಈಗ ಶಿಶುವಿಹಾರವೋ ಏನೋ ಆಗಿತ್ತು. […]

ಅನುವಾದ ಸಂಗಾತಿ

ಪ್ರೀತಿ..ಪ್ರೇಮ..ಶೇಕ್ಸ್‌ಪಿಯರ್‌.. ಇಂಗ್ಲಿಷ್ ಮೂಲ : ವಿಲಿಯಂ ಶೇಕ್ಸ್‌ಪಿಯರ್‌ ಅನುವಾದ : ಚಂದ್ರಪ್ರಭಾ ಪ್ರೀತಿ..ಪ್ರೇಮ..ಶೇಕ್ಸ್‌ಪಿಯರ್‌…   ಕೆಲವು ಸಂಗತಿಗಳೇ ಹಾಗೆ. ಭಾವಕ್ಕೆ ನಿಲುಕಿದಂತೆ ಭಾಷೆಗೆ ನಿಲುಕುವುದೇ ಇಲ್ಲ. ಅದನೆಲ್ಲ ನೀವು ಆಸ್ವಾದಿಸಬಲ್ಲಿರಿ ಆದರೆ ಬಣ್ಣಿಸಲಾರಿರಿ. ಅಂಥ ಒಂದು ಸಂಗತಿ ಪ್ರೀತಿ. ಈ ಸೃಷ್ಟಿಯ ಸಕಲವನ್ನೂ ಒಂದೆಳೆಯಲ್ಲಿ ಬಂಧಿಸಿಟ್ಟಿರುವುದು ಪ್ರೀತಿಯೊಂದೇ.‌ ಬಳ್ಳಿಗೆ ಆಸರೆಯಾದ ಮರ.. ದುಂಬಿಗೆ ಮಕರಂದವನೀವ ಹೂವು.. ಎದೆಯಮೃತ ಉಣಿಸಿ ಜೀವನವನ್ನೇ ಧಾರೆಯೆರೆವ ತಾಯಿ.. ಬೆರಳು ಹಿಡಿದು ನಡೆಯಿಸಿ ನಡಿಗೆ ಕಲಿಸುವ ಅಪ್ಪ.. ದಣಿವಿಗೆ ಆಸರೆಯಾಗುವ ಇರುಳು.. ದುಡಿಮೆಗೆ […]

Back To Top