Category: ಕವಿತೆ ಕಾರ್ನರ್

ಕವಿತೆ ಕಾರ್ನರ್

ಕವಿತೆ ಕಾರ್ನರ್

ಆಡಿದ ಮಾತುಗಳೆಲ್ಲ ವಚನಗಳೇನಲ್ಲ.. ಸ್ವರ್ಗದ ಕುರುಹಿಲ್ಲವಿಲ್ಲಿ! ಆಡಿದ ಮಾತುಗಳೆಲ್ಲ ವಚನಗಳೇನಲ್ಲ ತಿರುಕನಿಗೊ ಆಯ್ಕೆಯ ಅವಕಾಶವಿರುವುದಿಲ್ಲ ರಕ್ತ ಒಸರುವ ಗತದ ಗಾಯ ಮುಲಾಮುಗಳಿಗೆಲ್ಲ ಮಾಯುವುದಿಲ್ಲ ಬಾಂಡಲಿಯ ಕುದಿಯುವ ಎಣ್ಣೆಯೊಳಗೆ ಬೇಯಿಸುವ ನರಕದ ಭಯ ಯಾರಿಗಿದೆ ಇಲ್ಲೀಗ? ಸ್ವರ್ಗದ ಕುರುಹು ತೋರಿದರೆ ಮಾತ್ರ ನಂಬುವವರುಂಟಿಲ್ಲಿ ನರಕವ ದೇಹವೇ ದೇಗುಲವೆಂಬುದು ನೆನಪಾದೊಡನೆ ದೂರವಾಗಿ ಮೈಥುನದಾಸೆ ಮುಷ್ಠಿಮೈಥುನದ ಹೊರದಾರಿ ಕಂಡುಕೊಂಡ ತರುಣರ ಗುಂಪುಗಳಿಂದ ದೂರನಿಂತ ತರುಣಿಯರ ತೊಡೆಗಳಿಂದೊಸರುವ ರಕ್ತದಲಿ ಅದೆಷ್ಟು ಜೀವಮೂಲಗಳು ವ್ಯರ್ಥವಾದವೆಂಬುದನ್ನು ಲೆಕ್ಕವಿಡುವ ವಿಜ್ಞಾನದ ಪುಸ್ತಕಗಳ ಮಸ್ತಕಕ್ಕಿಳಿಸದೆ ಸುಮ್ಮನೆ ನಡೆದು ಬಿಡು […]

ಕವಿತೆ ಕಾರ್ನರ್

ಸರಳುಗಳು ಸರಳುಗಳು ನನ್ನತ್ತ ತೂರಿಬಂದ ಕಲ್ಲುಗಳನ್ನುಹೂ ಮಾಡಿಕೊಳ್ಳುವ ಕಲೆ ಸಿದ್ದಿಸಿರಲಿಲ್ಲ ನನಗೆ ಹಲವು ಹಣೆಗೆ ಬಡಿದವು ಕೆಲವು ಎದೆಗೆ ಬಡಿದವುಒಟ್ಟಿನಲ್ಲಿ ರಕ್ತಸಿಕ್ತವಾಯಿತು ಮೈ ತಂದು ಕೂಡಿ ಹಾಕಿದ ದವಾಖಾನೆಯೇಕಾರಾಗೃಹವಾಗಿಬಿಸಿಲಿಗೆ ಸರಳುಗಳು ಹೆದರಿಸುವ ಕಪ್ಪು ನೆರಳುಗಳಾಗಿನನ್ನ ಹಗಲುಗಳು ನರಕಸದೃಶವಾದವು ಇರುಳುಗಳು ಬಂದವೊ ಹೋದವೊ ಅರಿವಾಗದೆಸುಮ್ಮನೇ ಕೂರುತ್ತೇನೆ ದ್ಯಾನಸ್ಥನಾಗಿ ಪದ್ಮಾಸನ ಹಾಕಿ ಯಾವತ್ತಾದರೂ ಒಂದು ದಿನ ಸರಳುಗಳು ಇಲ್ಲವಾಗಬಹುದುಸೆರೆಮನೆಯಂತಹ ದವಾಖಾನೆ ಬಯಲೂ ಅಗಬಹುದು ಅಂತಹದೊಂದು ದಿನನಾನು ಮತ್ತೆ ಬರುತ್ತೆನೆ ನಿನ್ನ ಕಾಣಲುಹಳೆಯ ಕನಸುಗಳನು ನನಸಾಗಿಸಲುಕಾಯುವೆಯಾದರೆ ಅಲ್ಲಿಯವರೆಗೂಸಹಿಸಬಲ್ಲೆ ಸರಳುಗಳ ಹಿಂದಿನ ಯಾತನೆಗಳ […]

ಕವಿತೆ ಕಾರ್ನರ್

ಬದುಕುವೆ…… ಆ ಮುಂಜಾನೆ ನನಗಿನ್ನೂ ನೆನಪಿದೆಎಳೆ ಗರಿಕೆಯ ಮೇಲೆ ಕೂತ ಇಬ್ಬನಿಯಂತೆ ನೀನಿದ್ದೆ ನನ್ನೆದುರು! ಆ ಮದ್ಯಾಹ್ನ ನನಗಿನ್ನೂ ನೆನಪಿದೆಊರಾಚೆಯ ಚಿತಾಗಾರದಲ್ಲಿ ಬೇಯುತ್ತಿದ್ದ ಹೆಣದಂತೆ ನೆನಪಾಗಿದ್ದೆ ನನ್ನೊಳಗೆ! ಆ ಸಂಜೆ ನನಗಿನ್ನೂ ನೆನಪಿದೆದೂಳು ಬಿದ್ದ ಕಣ್ಣೊಳಗೆ ಬಾಣಂತಿ ಎದೆಹಾಲ ಹನಿಸಿದಂತಿದ್ದೆ ನನ್ನುಸಿರೊಳಗೆ! ಈಗೆಲ್ಲ ಮರೆತು ಹೋಗಿದೆನೀನಿದ್ದದ್ದುನೀ ಹೋದದ್ದು! ನಿಜ ಬಿಡು ಸುಳ್ಳು ಹೇಳಲೂ ಮಿತಿಯಿರಬೇಕುಎನ್ನುವ ಮಾತೇ ಮರೆತು ಹೋಗಿದೆ——! ನೀನಿರುವೆ ನೀನಿಲ್ಲಗಳ ನಡುವೆಬದುಕಿದೆ ಬದುಕಿರುವೆ ಮುಂದೆಯೂ ಬದುಕವೆ! ***** ಕು.ಸ.ಮಧುಸೂದನ್

ಕವಿತೆ ಕಾರ್ನರ್

ಇರುಳ ಹೊಕ್ಕುಳ ಸೀಳಿ ಸುಡುಕೆಂಡದ ಪಾದಗಳ ಮೆಲ್ಲನೂರಿ ಅಂಬೆಗಾಲಿಟ್ಟವನ ಸ್ವಾಗತಕೆ ಊರಕೇರಿಯ ಕೋಳಿಗಳು ಕೂಗು ನಿಲ್ಲಿಸಿ ಹಸಿದ ನಾಯಿಗಳು ಊಳಿಟ್ಟು ಮಲಗಿದ್ದ ಕಂದಮ್ಮಗಳು ಕಿಟಾರನೆ ಕಿರುಚಿದಂತೆ ಅಳತೊಡಗಿ ಊರೂರೇ ತೆರೆದ ಮಶಾಣದಂತೆ ಬಾಸವಾಗಲು ಮಾರ್ಚುರಿಯೊಳಗೆ ಕೊಯಿಸಿಕೊಂಡ ಹೆಣಗಳು ವಾರಸುದಾರರಿರದೆ ಪೋಲಿಸರ ಕಾವಲಲಿ ಬೇಯುತ್ತ ಹೆರಿಗೆ ವಾರ್ಡಿನ ನರ್ಸಮ್ಮಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ತರಾತುರಿಯಲ್ಲಿ ಎಂತ ಮಗು ಕಣ್ಣರಳಿಸುವ ಗಂಡಸಿನ ಕಣ್ಣೊಳಗೆ ಬೆಳಕೊಂದು ಮೂಡಿದಂತಾಗಿ ಗುಳೆಹೊರಟ ಪರದೇಸಿ ಗುಂಪಿನಲ್ಲಿನ ಹರಯದ ಹೆಣ್ಣುಗಳ ಬೇಟೆಯಾಡಲು ಹವಣಿಸುವ ತಲೆಹಿಡುಕರ ಹಿಂದೆ ಸಾಲುಗಟ್ಟಿನಿಂತ […]

ಕವಿತೆ ಕಾರ್ನರ್

ಬಾ ಮಗುವೆ! ಬಾ ಮಗುವೆ ಬಾ ನನ್ನ ಹತ್ತಿರಕೆ! ನಾನೇನೂ ಅಲ್ಲ ಮೊನ್ನೆ ಮೂರುವರ್ಷದ ಮಗುವೊಂದು ನೀನ್ಯಾರೆಂದು ಕೇಳಿದಾಗ ಹೇಳಲಾಗದೆ ಏನನ್ನೂ ತಡವರಿಸಿದಾಗ ಮೊದಲಬಾರಿ ಯೋಚಿಸಿದೆ ನಾನ್ಯಾರು ಮತ್ತು ನಾನೇನು? ಯಾವ ದಾರಿಯೂ ನನ್ನದಾಗಲಿಲ್ಲ ಅಥವಾ ನನ್ನದಾಗಿ ಮಾಡಿಕೊಳ್ಳಲಾಗಲಿಲ್ಲ. ಸೋತಿದ್ದೇನೊ ಗೊತ್ತಾಯಿತಾದರು ಆಟ ಆಡಿದ್ದೆನಾ ಇಲ್ಲ ಆಡಿದಂತೆ ನಟಿಸಿದ್ದೆನಾ ಗೊತ್ತಿಲ್ಲ. ಎಲ್ಲರೂ ಇತಿಹಾಸದ ಭಾಗವಾಗಲು ಸಾದ್ಯವಿಲ್ಲವಾದರು ಅದರದೊಂದು ಅದ್ಯಾಯದ ಅಂಚಿನಲ್ಲಿಯಾದರು ಏನಾದರು ಆಗಿರುತ್ತಾರೆ. ಕನಸುಗಳು ನನಗೂ ಇದ್ದವು ಸಾಕಾರಗೊಳಿಸಿಕೊಳ್ಳುವ ಅನೇಕ ಅಡ್ಡ ದಾರಿಗಳೂ ನನಗೆ ಗೊತ್ತಿದ್ದವು ಆದರಾ […]

ಕವಿತೆ ಕಾರ್ನರ್

ಚಹರೆ ನನ್ನ ಅವಳ ಸಂಬಂದಮುರಿದುಬಿದ್ದುಮುವತ್ತು ವರುಷಗಳಾದರೂ ನಮ್ಮ ವಿದಾಯದ ಕ್ಷಣಗಳ ಕ್ಷಣಗಳ ಸಾಕ್ಷಿಗಳಿನ್ನೂಹಾಗೇ ಉಳಿದಿವೆ ರಪ್ಪನೆ ಬಾಗಿಲು ತೆಗೆದು ಸದ್ದು ಮಾಡುತ್ತಾ ಹೋದವಳುಎಸೆದು ಹೋದ ಮುಖ ಕನ್ನಡಿಯ ಚೂರುಗಳಲ್ಲಿನ್ನುಅವಳ ಚಹರೆಗಳು ಕಾಣುತ್ತಿವೆ! ಮತ್ತೆಂದೂ ನೋಡಲಾರೆ ನಿನ್ನ ಮುಖವ ಎಂದು ಕೂಗಿ ಹೇಳಿ ಹೋದವಳಮಾತುಗಳಿನ್ನೂ ಹಳೆಯ ಮಣ್ಣಿನ ಗೋಡೆಗಪ್ಪಳಿಸಿಮತ್ತೆ ಮತ್ತೆ ಕೇಳುತ್ತಲೇ ಇವೆ! ನನ್ನ ಅವಳ ಸಂಬಂದಮುರಿದುಬಿದ್ದುಮುವತ್ತು ವರುಷಗಳಾದರೂ ಕೇಳಿಸುತ್ತಲೇ ಇವೆ ಶಬ್ದಗಳುಕಾಣಿಸುತ್ತಲೇ ಇವೆ ಚಿತ್ರಗಳು ಒದ್ದೆಯಾಗುತ್ತಲೇ ಇವೆ ಕಣ್ಣುಗಳು!ಕಾರಣವಿರದೇ? ********* ಕು.ಸ.ಮದುಸೂದನ

ಕವಿತೆ ಕಾರ್ನರ್

ರಣಹಸಿವಿನಿಂದ ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರು ಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರು ಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರು ಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರು ಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರು ಇದೀಗ ಧರ್ಮ ಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗ ಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ ತರಿದ ತಲೆಗಳ ಭೋಗಿಸಿದ ಯೋನಿಗಳ ಕಚ್ಚಿದ ಮೊಲೆಗಳ ಕಲಸಿಹಾಕಿದ […]

ಕವಿತೆ ಕಾರ್ನರ್

ನಾವೇನು ವ್ಯಬಿಚಾರಿಗಳಾಗಿರಲಿಲ್ಲ! ಅವಳನ್ನು ಪ್ರೀತಿಸಿದ್ದು ನಿಜಹೆಸರಲ್ಲೇನಿದೆ ಹೇಳಿಸುಶೀಲಾ, ಶಕೀಲಾ, ಶೈನಿ!ಏನಾದರು ಒಂದಂತು ಆಗಿರಲೇ ಬೇಕೆಂಬ ಹಟ ನನಗಂತು ಇರಲಿಲ್ಲ! ಹಾಗೇನೆ ನನ್ನ ಹೆಸರುಮಹೇಶ, ಮುಬಾರಕ್, ಮ್ಯಾಕ್ಹೀಗೇನೆ ಯಾವುದಾದರೊಂದು ಆಗಿರಲೇ ಬೇಕೆಂಬ ಹಟಅವಳಿಗೂ ಇದ್ದಂತೆ ಕಾಣಲಿಲ್ಲ… ನಮ್ಮ ಮಿಲನದ ಉನ್ಮತ್ತ ಕ್ಷಣದೊಳಗೂಅವಳಾಗಲಿ ನಾನಾಗಲಿ ಅಪ್ಪಿ ತಪ್ಪಿಯೂನಮ್ಮಹೆಸರುಗಳ ಪಿಸುಗುಡಲಿಲ್ಲ!ಅಷ್ಟು ಅನಾಮಧೇಯರಾಗಿ ಪ್ರೇಮಿಸಿದೆವು. ಹೊರಗಿನವರಿಗೆ ನಾವು ಗೊತ್ತಿದ್ದುದು ನಮ್ಮ ಹೆಸರುಗಳಿಂದ ಮಾತ್ರಆದರೆ ಆ ಹೆಸರುಗಳಾಚೆಯಲ್ಲಿಯೂಇರುವ ನಮ್ಮ ಐಡೆಂಟಿಟಿಯನ್ನುಹುಡುಕಿಕೊಳ್ಳುವುದು ನಮಗೆ ಅನಿವಾರ್ಯವಾಗಿತ್ತು. ಹಾಗಂತ ನಾನು ವಿಟನಾಗಿರಲಿಲ್ಲಅವಳೇನು ಜಾರಿಣಿಯಾಗಿರಲಿಲ್ಲ!************* ಕು.ಸ.ಮದುಸೂದನ

ಚಳಿ ಮತ್ತು ಅಗ್ಗಿಷ್ಠಿಕೆ

ಚಳಿ ಮತ್ತು ಅಗ್ಗಿಷ್ಠಿಕೆ ಮಳೆಗಾಲದ ಒಂದು ಸಂಜೆ ಕಪ್ಪುಗಟ್ಟಿದ್ದ ಹಡಗಿನಂತ ಮೋಡಗಳುಸ್ಪೋಟಗೊಂಡು ಸುರಿದ ಜಡಿ ಮಳೆಗೆಸಿಕಿ ತೊಯ್ದು ತೊಪ್ಪೆಯಾದವಳ ಬಟ್ಟೆ ಒಣಗಿಸಲುನನ್ನ ಪುಟ್ಟ ಹಿತ್ತಲಿತ್ತು ಗಡಗಡ ನಡುಗಿಸುವ ಚಳಿಗೆಅಗ್ಗಿಷ್ಠಿಕೆಯಾಗಿ ನಾನಿದ್ದೆ. ಮಳೆ ಸುರಿದು ಸರಿದು ಹೋಯಿತುಹಿಂಬಾಲಿಸಿಕೊಂಡು ಬಂದ ಬಿಸಿಲುಬಂದ ಮಳೆಯ ಮರೆಸಿತು ಮತ್ತೆಂದೂ ಇಲ್ಲಿ ಅಂತ ಘನಮೋಡ ಕಟ್ಟಲಿಲ್ಲಮಳೆಯಾಗಲಿಲ್ಲಬಿಸಿಲ ಝಳಕ್ಕೆ ಬರಬಿದ್ದ ಊರಿಗವಳೆಂದೂ ಬರಲೇ ಇಲ್ಲ ಮತ್ತೀಗ ಅಲ್ಲಿ ಮಳೆಯಾಗುತ್ತಿರ ಬಹುದುಅವಳಲ್ಲಿ ನೆನೆಯುತ್ತಲೂ ಇರಬಹುದು ಆ ಊರಲ್ಲೂ ಹಿತ್ತಲುಗಳಿವೆಜೊತೆಗೆ ಅಗ್ಗಿಷ್ಠಿಕೆಗಳೂ!******** ಕು.ಸ.ಮಧುಸೂದನ ಕು.ಸ.ಮಧುಸೂದನ

ಕವಿತೆ ಕಾರ್ನರ್

ಯುದ್ದವೆಂದರೆ ಕು.ಸ.ಮಧುಸೂದನ ಯುದ್ದವೆಂದರೆ ಕೋವಿ ಫಿರಂಗಿಗಳು ಮದ್ದು ಗುಂಡುಗಳು ಸೋಲು ಗೆಲುವುಗಳು ಮಾತ್ರವಲ್ಲ ಯುದ್ದವೆಂದರೆ ಅಂಗೈನ ಮದರಂಗಿ ಆರುವ ಮೊದಲೇ ಹಣೆಕುಂಕುಮ ಅಳಿಸಿಕೊಳ್ಳುವ ಹೆಣ್ಣಗಳು ಅಪ್ಪನ ತಬ್ಬುವ ಮೊದಲೇ ತಬ್ಬಲಿಯಾಗುವ ಹಸುಗೂಸುಗಳು ಮಗನ ಮನಿಯಾರ್ಡರಿಗಾಗಿ ಕಾತು ಕೂತ ಮುದಿಜೀವಗಳು. ಮತ್ತೂ ಯುದ್ದವೆಂದರೆ ಇರುವುದೆಲ್ಲವ ನಾಶ ಮಾಡಹೊರಟು ತಾವೂ ನಾಶವಾಗುವ ಹಳೆಯ ಆಟ ಮನುಕುಲದ ಖಳರ ಚಟ! *********

Back To Top