ಸ್ಥಾನ ಪಲ್ಲಟ

ಸ್ಥಾನ ಪಲ್ಲಟ

ಕವಿತೆ ಸ್ಥಾನ ಪಲ್ಲಟ ಡಾ. ನಿರ್ಮಲಾ ಬಟ್ಟಲ ದಶಕಗಳೆ ಕಳೆದುಹೋದವುಒಲೆ ಊದುವುದು ನಿಂತುಹೋಗೆ ಹಿಡಿಯುವುದು ನಿಂತುಸುಡುವುದು ನಿಂತಿಲ್ಲ…‌! ಇಗೋ….ಎಸರಿಡುವುದೆಮರೆತುಹೋಗಿದೆಪ್ರೆಶರ್ ಕುಕ್ಕರಿನಲ್ಲಿ ಹಾಕಿಕೂಗು ಹೋಡೆಸುವುದಷ್ಟೆಒತ್ತಡದಲಿ ಬೇಯುವುದು ನಿಂತಿಲ್ಲ…! ರೊಟ್ಟಿ ಬೇಯಿಸುವಾಗಮುಂಗೈಗೆ ಬೀಳುವಹೆಂಚಿನ ಬರೆಗಳಿಗ ಕಂಡಿಲ್ಲಾ…ಕಾಣದ ಬರೆಗಳು ಮನಸ ತುಂಬಾಬಿಳುವುದು ನಿಂತಿಲ್ಲ….! ಮನೆಯೊಡತಿ ಎಂದುಹೊರಗೆ ಬಿಗೀದರುಒಳ ಒಳಗೆ ದಾಸ್ಯ ಒಪ್ಪಿ ಕೊಳ್ಳುವುದು ನಿಂತಿಲ್ಲಾ…! ಏನೆಲ್ಲಾ ಬದಲಾಗಿಏನೆನೋ ಹೊಸದಾಗಿಬಂದು ಹಳೆಯದೆಲ್ಲ ಬದಲಾದರೂಬಸಿರುಹೊರುವುದು ನಿಂತಿಲ್ಲ….!! ಆಕಾಶಕ್ಕೆ ಹಾರಿದರೂಪಾತಾಳಕ್ಕೆ ಇಳಿದರೂಕುಕ್ಕುವ ಮುಕ್ಕುವದಾಳಿಗಳಿನ್ನು ನಿಂತಿಲ್ಲ….! ಹೆಣ್ಣೆಂದು ಪ್ರತಿ ಘಳಿಗೆಹಣ್ಣು ಮಾಡುವ,ಎತ್ತರಿಸಿದ ಧ್ವನಿ ಕತ್ತರಿಸಿಭ್ರೂಣಗಳ ಹೂಳುವುದುನ್ನುನಿಂತಿಲ್ಲ….! *******************************

ಗಜಲ್

ಕದಿಯದ ಒಲವ ನಕ್ಷತ್ರ ಬಾಳ ಬಾಂದಳದ
ಹೊಳೆಯಲಿ
ಮಧುರದಾಲಾಪನೆಗೆ ಮಿಡಿದು ಚಿಮ್ಮಿಸಿರುವೆ
ನೀಲಿ ಕೊಡೆ,

ತಣಿಸಬಾರದೇ

ಮೋಹಕ ಆಟಕೆ ಮಧುರ ನಿನಾದಕೆ,
ಮೈಯೊಡ್ಡಿ ನಿಂದಿರುವ ವ್ರಕ್ಷ ಸಾಲು
ಪುಷ್ಪಗಳ ವರ್ಣಚಿತ್ತಾರವ ಬಣ್ಣಿಸಿದಂತಿದೆ,

ಬ್ರಹ್ಮ ನ ಸಮಸ್ಯೆ

ಮಕ್ಕಳ ಕಥೆ ಬ್ರಹ್ಮ ನ ಸಮಸ್ಯೆ ಸಂತೆಬೆನ್ನೂರು ಫೈಜ್ನಟ್ರಾಜ್ ಜೀವನದಲ್ಲಿ ಎಲ್ಲವೂ ಸರಿ ಇರುವುದಿಲ್ಲ ಅಂತ ನಮ್ಮೆಲ್ಲರಿಗೂ ಗೊತ್ತು. ಒಮ್ಮೊಮ್ಮೆ, ಒಂದೊಂದು ಹೇಗೋ ಎಡವಟ್ಟಾಗಿರುತ್ತೆ. ನಾವೇ ಸರಿ ಮಾಡ್ಕೋಬೇಕಪ್ಪ ಅನ್ನೋ ಅಮ್ಮನ ಮಾತು ನಮ್ಮ ಪುಟಾಣಿ ಮಗಳು ನಂಬ್ತಾನೇ ಇಲ್ಲ? ಅವಳು ಆಡುವ ನೂರಾರು ತರದ ಆಟದ ಸಾಮಾನುಗಳೆಲ್ಲಾ ಎಷ್ಟು ನೀಟಾಗಿವೆ ಅನ್ನುವ ಅರ್ಥದಲ್ಲಿ ಅವಳು ಅಮ್ಮನ ಬಳಿ ವಾದ ಮಾಡುತ್ತಿದ್ದಾಳೆ. ಅದೆಂಗ್ ಸರಿ ಇರಲ್ಲ? ದೇವರು ತಪ್ಪು ಮಾಡುತ್ತಾನಾ? ಭೂಮಿ, ಆಕಾಶ, ಮರಗಿಡ ಬಳ್ಳಿ, ಮಳೆ, […]

ಸೋಜಿಗವಲ್ಲ…!

ಕವಿತೆ ಸೋಜಿಗವಲ್ಲ…! ಕಾಂತರಾಜು ಕನಕಪುರ ಒಳಕೋಣೆಯ ಬಾಗಿಲು ಜಡಿದಮೇಷ್ಟ್ರು ಆನ್ಲೈನ್ ತರಗತಿಯಲ್ಲಿಲಿಂಗ ಸಮಾನತೆಯ ಕುರಿತುವಿದ್ಯಾರ್ಥಿಗಳಿಗೆ ಮನಮುಟ್ಟುವಂತೆಬೋಧಿಸುತ್ತಿದ್ದುದನ್ನು ಕೇಳಿದಮೇಷ್ಟ್ರ ಮಡದಿ ಕಣ್ಣೀರು ಹಾಕಿದ್ದು ಸೋಜಿಗವಲ್ಲ…! ಸಮಾಜದಲ್ಲಿ ಅಸಮಾನತೆಯು ತೊಲಗಿಸಂಪನ್ಮೂಲಗಳ ಸಮಾನ ಹಂಚಿಕೆಯಾಗಬೇಕೆಂದುಹೋರಾಟದ ವೇದಿಕೆಗಳಲಿ ಕಿಡಿಕಾರುತಿದ್ದವನಬೀಳು ಹೊಲದಲ್ಲಿ ಒಲೆ ಹೂಡಿದ್ದ ಅಲೆಮಾರಿಕುಟುಂಬ ಜಾಗ ಖಾಲಿಮಾಡಿದ ನಂತರನಾಲಿಗೆ ಬಿದ್ದುಹೋಗಿರುವುದು ಸೋಜಿಗವಲ್ಲ…! ಮನದ ಮುಂದಣ ಆಸೆಯೇ ಮಾಯೆಎಂಬುದನ್ನು ಸರ್ವರೂ ತಲೆದೂಗುವಂತೆವಿವರಿಸುತ್ತಿದ್ದ ಬುದ್ಧಿಯವರುಸಿಗಬಾರದ ರೀತಿ ಸಿಕ್ಕಿಬಿದ್ದ ವಿಷಯಸವಿವರವಾಗಿ ಮಾಧ್ಯಮಗಳಲ್ಲಿಬಿತ್ತರಗೊಂಡದ್ದು ಸೋಜಿಗವಲ್ಲ…! ಊರ ಮಂದಿಯ ಜಗಳ ಜಂಜಡಗಳಿಗೆಒತ್ತರಿಸಿವನ ಹೊಲ ಹಾಳುಮಚ್ಚರಿಸಿದವನ ಮನೆ ಹಾಳು ಎಂದುತಿಳಿ ಹೇಳುತಿದ್ದ […]

ಬದ್ಧತೆ ಮೆರೆಯುವ..

ಕವಿತೆ ಬದ್ಧತೆ ಮೆರೆಯುವ.. ಪ್ರೋ ವಿಜಯಲಕ್ಷ್ಮಿ ಪುಟ್ಟಿ ಗೆಳೆಯನಮ್ಮಪ್ರೀತಿಅದರ ರೀತಿನಿಭಾಯಿಸುವಒಲುಮೆಯಿಂದಜತನದಿಂದಪತನವಾಗದಂತೆ ..ನೆನಪಿಸಿಕೋ ನನ್ನನ್ನನನ್ನ ನೆನಪಿನ ಲೋಕಕ್ಕೆಮೇಲು ಹೆಜ್ಜೆ ಇರಿಸುನನ್ನ ಎಲ್ಲ ಖುಷಿ ನಿನ್ನಿಂದಲೇ ಇರದಿದ್ದರೂ ನಾನು ಖುಷಿಯಿಂದ ನೀನು ಮಾತ್ರ ದುಖಿ ಬೇಡನನ್ನ ಮುಖದ ನಗುನಿನ್ನ ಬಳುವಳಿನನ್ನ ಸುಖದುಃಖದಹರಿಕಾರ ನೀನುನಿನ್ನಿಂದ ಮುನಿಸಿದರೆ ಮುದುರಿಕೊಳ್ಳಬೇಡ ಮನಸು ..ಒಮ್ಮೊಮ್ಮೆ ಪ್ರೀತಿತುಸು ಹಟಮಾರಿಮನಸ್ಸು..ಮನಸ್ಸುಗಳದೂರ ಬೇಡಸಾಗಬೇಕಿದೆ ಬಲುದೂರ ಹಾದಿನಮ್ಮ ನಮ್ಮ ವಚನಪರಿಪಾಲಿಸುವಬದ್ಧತೆಗೆ ಪkkaಗೋಣಸುಂದರ ನಿನ್ನೊಂದಿಗೆ ಜೀವನ ಪಯಣನೆನಪಿಸಿಕೋ ನನ್ನನಸುನಗುವೆ ಇನ್ನ …. ******************

ಹೀಗೊಬ್ಬ ಅಜ್ಜ

ಕಥೆ ಹೀಗೊಬ್ಬ ಅಜ್ಜ ತಮ್ಮಣ್ಣ ಬೀಗಾರ. ಅವನದು ಯಾವಾಗಲೂ ಶಾಂತವಾದ ಮುಖ. ಬೆಳ್ಳಗಿನ ಉರುಟಾದ ಮುಖದಲ್ಲಿ ಬಿಳಿಯ ಮೀಸೆ ಬಿಳಿಯ ಹುಬ್ಬು ನಕ್ಕರೆ ಅಷ್ಟೇ ಬಿಳಿಯದಾಗಿ ಹೊಳೆಯುವ ಹಲ್ಲು ಎಲ್ಲ ಅವನನ್ನು ನೋಡಿದಾಗ ನಮಗೆ ಅವನಲ್ಲಿ ಏನೋ ಆಕರ್ಷಣೆಯಾಗುತ್ತಿತ್ತು. ಮುಖದ ಅಗಲಕ್ಕೆ ಚಿಕ್ಕದೇನೋ ಅನಿಸುವಂತಹ ಕಣ್ಣುಗಳು ಹುಬ್ಬಿನ ಅಡಿಯಲ್ಲಿ ಸ್ವಲ್ಪ ಆಳದಲ್ಲಿ ಎಂಬಂತೆ ಕುಳಿತಿದ್ದವು… ಆದರೆ ಆ ಕಣ್ಣುಗಳ ಹೊಳಪಿನಿಂದಾಗಿ ಅವನ ಮುಖ ನೋಡಿದ ತಕ್ಷಣ ಕಾಣುವ ದಪ್ಪ ಮೀಸೆಯ ಜೊತೆಗೇ ಕಣ್ಣುಗಳೂ ಗಮನ ಸೆಳೆಯುತ್ತದ್ದವು. ಅಯ್ಯೋ, […]

ಹೆರಿಗೆ

ಕವಿತೆ ಹೆರಿಗೆ ಡಾ .ಶಶಿಕಾಂತ ಪಟ್ಟಣ ಕೊನೆಗೂಆಯಿತು ಹೆರಿಗೆಭಾವದ ಗರ್ಭಸ್ನೇಹ ಪ್ರೀತಿಪ್ರೇಮ ಚಿಲುಮೆಭ್ರೂಣ ಒಳಗೆಪಡಲೊಡೆಯಿತುಒಲುಮೆಹೃದಯದಕುಲುಮೆಯಲಿಅರಳಿತು ಕೂಸುಅದೆಷ್ಟು ಸುಖಸಂತಸ ನೆಮ್ಮದಿಹೇರಿಗೆಯಯಿತುಕವನಸ್ವಲ್ಪ ತಡವಾದರೂಕಾಯಬೇಕುಹತ್ತು ತಿಂಗಳುಬಾಣಂತಿಗಳುಗಜ ಗರ್ಭಪ್ರಸವ ವೇದನೆ ***********************

*ಮತ್ತೆ ಒಂದು ದಿನ ನಾವೆಲ್ಲ …ಉಸಿರಾಡುತ್ತೇವೆ ..ನಿರಾಳವಾಗಿ…ನಮ್ಮ ನಮ್ಮ ಅಸ್ತಿತ್ವಗಳ , ಗುರುತುಗಳ ಮರಳಿ ಪಡೆದೇ ಪಡೆಯುತ್ತೇವೆ ….ಈ ಯುದ್ಧ ನಿಲ್ಲದು …ನಾವು ಗೆಲುವವರೆಗೂ*

ತ್ರಿದಳ

ಮಹಿಳೆಯರನ್ನು ಸಾಕ್ಷರರನ್ನಾಗಿಸಲು ಪ್ರೇರೇಪಿಸುವ ಕವಯಿತ್ರಿಯ ತ್ರಿಪದಿಯ ಸಾಲುಗಳು ಮಹಿಳಾ ಶಿಕ್ಷಣದ ಜಾಗೃತೆಯನ್ನು ಸಾರುತ್ತವೆ. ಜೀವನದ ವಾಸ್ತವ ಸತ್ಯಗಳನ್ನು ಸಾರುವ ತ್ರಿಪದಿಗಳು ತುಂಬಾ ಮಾರ್ಮಿಕವಾಗಿವೆ. ೭೦ ವರ್ಷದ ವಸಂತದಲ್ಲಿ ಜೀವನಾನುಭವದ ಅಮೃತ ಬಳ್ಳಿಯಲಿ ಅರಳಿದ ಕಾವ್ಯ ಕುಸುಮಗಳಾಗಿ ಶ್ರೀಮತಿ ವಾಸಂತಿ ಮೇಳೆದ ಅವರ ತ್ರಿದಳ ಸಂಕಲನದಲ್ಲಿ ಮೂಡಿಬಂದಿವೆ

Back To Top