ಕಾಂಕ್ರೀಟ್ ಬೋಧಿ

ಕಾಂಕ್ರೀಟ್ ಬೋಧಿ

ಕವಿತೆ ಕಾಂಕ್ರೀಟ್ ಬೋಧಿ ಪೂಜಾ ನಾರಾಯಣ ನಾಯಕ ಯಾವ ಹಕ್ಕಿ ಎಸೆಯಿತೋ, ನನ್ನ ಬೀಜವನಿಲ್ಲಿಅದರ ಪರಿಣಾಮವೇ ಬೆಳೆದೆನಾಯಿಲ್ಲಿಸಿಮೆಂಟ್ ಗಾರೆಯ ಬಿರುಕಿನಾ ಕಿಂಡಿಅದುವೇ ನನ್ನ ಬದುಕಿನಾ ಮೊದಲನೆಯ ಬಂಡಿಗೆದ್ದುಬರುತ್ತಿದ್ದೆ ಆ ಬಿರುಕ ಇನ್ನೂ ಸರಿಸಿಆದರೆ ನೀ ಬರದೇ ಇರಲಾರೆ, ಕೀಳಲು ನನ್ನರಸಿ ಕರವೊಡ್ಡಿ ಬೇಡುವೇ, ಕೀಳಬೇಡವೋ ಮನುಜಕೀಳದಿದ್ದರೆ ನಾ ನೀಡುವೆ, ಔಷಧೀಯ ಕಣಜನಿನಗಷ್ಟೇ ಎಂದು ತಿಳಿಬೇಡವೋ ಅಣ್ಣಾಖಗಗಳಿಗೂ ನೀಡುವೆನೋ ತಿನ್ನಲು ಹಣ್ಣಾನಿಮ್ಮಿಬ್ಬರಿಗೆ ಎಂದು ತಿಳಿಯದಿರು ಮತ್ತಣ್ಣಮೃಗಗಳಿಗೂ ನೀಡುವೆನೋ ನನ್ನ ಮೇವಣ್ಣ ನೀನಾಗಿಹೆ ಇಂದು ಕ್ರೋಧದಾ ಬಂಧನಕೇಳಿಸುತ್ತಿಲ್ಲವೇನೋ ನಿನಗೆ, ನನ್ನ […]

ವಾರದ ಕವಿತೆ

ವಾರದ ಕವಿತೆ ಮೋಹ ಮಾಲತಿ ಶಶಿಧರ್ ಅಕಸ್ಮಾತಾಗಿ ಸಿಕ್ಕಿಬಿದ್ದೆಮೋಹದ ತೆಕ್ಕೆಯೊಳಗೆಮೋಹನರಾಗವ ಆಲಿಸುತಅದರ ಜಾಡು ಹಿಡಿದು ಹೊರಟಿರುವೆಮೂಲ ಹುಡುಕುತ್ತ ನಮ್ಮೂರಿನಾಚಿನ ಗುಡ್ಡದ ಬಂಡೆಯಮೇಲೆ ಯಾವತ್ತೋ ಗೀಚಿದ್ದನೆಚ್ಚಿನ ನಟನ ಹೆಸರು, ಅಲ್ಲೇಮುರಿದು ಬಿದ್ದ ಪಾಳು ಮಂಟಪನೂರು ಕನಸು ಅದರೊಳಗೆಸುತ್ತಲೂ ಘಮ್ಮೆನ್ನುವ ಹೂಗಳು ಇವೆಲ್ಲವಕ್ಕೂ ಸರಿದೂಗುವನೀನು ಕಣ್ಮುಂದೆ ನಿಂತಾಗಬಾಯಿ ಪೂರ್ಣವಾಗಿ ಒಣಗಿಮೈ ಬೆವರಿನಿಂದ ತೊಯ್ಯುತ್ತದೆತೊಟ್ಟಿಕ್ಕುವ ಬೆವರ ಹನಿಗೆನನ್ನೊಳಗಿನ ಬಿಂಕಕ್ಕೊಂದುಹೊಸ ನಾಮಕರಣ ಮಾಡುವಹಂಬಲ.. ಮೆಲ್ಲಗೆ ಕಾಲು ಜಾರುವೆ ಹೊಸಮೋಹದ ತೆಕ್ಕೆಗೆ ನನ್ನೊಳಗಿನಸೊಕ್ಕನ್ನೆಲ್ಲ ಒಂದೆಡೆ ಅಡಗಿಸಿನಿನ್ನ ನಸೆಯ ನೋಟ ಅಂಕುಡೊಂಕು ಹಾದಿ ತುಂಬಾಓಡಾಡುವಾಗ ಕಣ್ಮುಚ್ಚಿಕಳೆದುಹೋಗುವೆ. […]

ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ.

ಅನುವಾದ ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ. ಇಂಗ್ಲೀಷ್ ಮೂಲ: ವಿಲಿಯಂ ಶೇಕ್ಸ್ ಪಿಯರ್ ಕನ್ನಡಕ್ಕೆ: ವಿ.ಗಣೇಶ್ ಹುಟ್ಟಿನ ಮದದಲಿ ಬೀಗುವರು ಕೆಲರು ಬುದ್ಧಿಮದದಲಿ ಕೆಲರು ಸಿರಿತನದ ಮದದಲಿ ಕೆಲರು, ರೂಪದ ಮದದಲಿ ಮತ್ತೆ ಕೆಲರು ದೇಹದಾಡ್ಯದಲಿ ಕೆಲರು, ಕೆಲರು ಉಡುಗೆತೊಡುಗೆಯಲಿ ಮೆರೆವರು ಗಿಡುಗ ಸಾಕುವ ಹುಚ್ಚು ಕೆಲರಿಗೆ, ಕುದುರೆ ಸಾಕುವ ಹುಚ್ಚು ಕೆಲರಿಗೆ ಅವರವರ ಮನಸಿನಣತಿಗೆ ಅವರವರ ಹುಚ್ಚು ಮೆರೆವುದು ಅಂತೆಯೇ ಈ ಕ್ಷಣಿಕ ಆಸೆ ಆಕಾಂಕ್ಷೆಗಳ ಹುಚ್ಚೊಂದೂ ನನ್ನ ಮನದೊಳಗಿನಿತಿಲ್ಲ ಅದಕಿಂತ ಮಿಗಿಲಾದ ಹುಚ್ಚೊಂದು ಕಾಡುತಿದೆ ಈ […]

ಅಳುವನ್ನು ಅನುಸರಿಸಿ ಹೋಗುವವನೇ ಕವಿ

ಪ್ರಬಂಧ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಸರಿತಾಮಧು ಹಕ್ಕಿಯಂಥ ಸಣ್ಣ ಜೀವಿಯೊಂದರ ಅಳುವಿಗೂ ಕಿವಿಯಾಗಬಲ್ಲವನೇ ಕವಿ ಎಂಬ ಮಾತು ಅಕ್ಷರಶಃ ಸತ್ಯ. “ರುದಿತಾನುಸಾರಿ ಕವಿಃ ” ಎಂಬುದಾಗಿ ಮಹರ್ಷಿ ವಾಲ್ಮೀಕಿಯನ್ನು ಕಾಳಿದಾಸ ಕವಿ ಹೆಸರಿಸಿ, ಹಕ್ಕಿಯ ಶೋಕ ಹಾಗೂ ಸೀತೆಯ ಪ್ರಲಾಪ ಎರಡನ್ನೂ ಹೃದ್ಯವಾಗಿಸಿಕೊಂಡ ಮಹಾನ್ ಕವಿ , ಅಂದರೆ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಎಂದರ್ಥ. ನವರಸಗಳಲ್ಲಿ ಕರುಣ ರಸವೊಂದೇ ಇರುವುದು ಎಂಬ ಮೀಮಾಂಸೆಗೂ ಪಾತ್ರನಾದ ಕವಿ ವಾಲ್ಮೀಕಿ.      ಸ್ವತಃ ಬೇಡ ನಾಗಿದ್ದು ರತ್ನಾಕರ […]

ಹೇಗೆ ಉಸಿರಾಗಲಿ

ಕವಿತೆ ಹೇಗೆ ಉಸಿರಾಗಲಿ ಲಕ್ಷ್ಮೀ ಪಾಟೀಲ್ ಹಾಡಿಗೆ ನಿಲುಕದ ಕವಿತೆಗಳಿವುಭಾವ ರಾಗದ ಕೊಂಡಿ ಎಲ್ಲಿ ಜೋಡಿಸಲಿಸತ್ತಂತೆ ಸುಪ್ತಬಿದ್ದಭಾವಗಳಿವುತಾಳ ಮೇಳ ಲಯಗಳಹೇಗೆ ಮೀಟಲಿ ಗಂಡಿನ ಅಟ್ಟಹಾಸ ಹಿಸುಕುವಕವಿತೆಗಳಿವುಹೆಣ್ಣಿನ ಕೋಮಲ ಎಲ್ಲಿ ಚಿತ್ರಿಸಲಿಕಾವ್ಯದ ಮಾಧುರ್ಯ ನಲುಗಿಸುವಕವಿತೆಗಳಿವುಮುದದ ನಂದನವನ ಎಲ್ಲಿ ತೋರಿಸಲಿ ಅಂತೆ ಕಂತೆಗಳಲಿ ನಿತ್ಯ ರೋದಿಸುವಳೀಕವಿತೆಭಾವ ಬದಲಿಸಿಭಾವವೀಣೆಎಲ್ಲಿ ನುಡಿಸಲಿಆಕ್ಸಿಜನ್ನಳಿಕೆ ಕಟ್ಟಿಕೊಂಡು ತೀವ್ರನಿಗಾಘಟಕದಲ್ಲಿ ನನ್ನ ಕವಿತೆಗಳುನಾನೇ ಹಾಡಾದಹಾಡಿಗೆ ಹೇಗೆ ಉಸಿರಾಗಲಿ ***************************************

ವರ್ತಮಾನ

ಕವಿತೆ ವರ್ತಮಾನ ರೇಶ್ಮಾಗುಳೇದಗುಡ್ಡಾಕರ್ ಮನದ ಉದ್ವೇಗ ಕ್ಕೆ ಬೇಕುಒಲವು ,ಛಲವುಇವುಗಳಸೆಳವಿಗೆ ಖುಷಿ ಇರುವದುಅಶ್ರುತರ್ಪಣಧರೆಗುರುಳುವದು ಯಾವ ಸಾಗರಕೂ ಹೊಲಿಕೆಯಾಗದಬದುಕಿನ ಅಲೆಗಳ ಓಟ …..ಮೆಲ್ಲನೆ ದಡಕ್ಕೆ ಮುತ್ತಿಡುವವುಕೆಲವೊಮ್ಮೆ ಕೊಚ್ವಿಕೊಂಡ್ಯೊಯುವವುದಡವನ್ನೇ …. ಏನು ಆಟವಿದು ?ಕಾಣದ ಕೈ ಸೂತ್ರವದುತಲ್ಲಣ ತಂಪಾಗಿ ,ಸುಧೆ ವಿಷವಾಗಿ ಕೆರಳಿಮುರಿದು ಬೀಳುವುದುಕನಸಿನ ಮನೆ ವರವೊ,ಬರವೂ ತಿಳಿಯದಕಾಲವಿದುಮತ್ತೆ ಸಿಲುಕುವದುಉದ್ವೇಗದಚಕ್ರ ವೇಗ ಪಡೆದು ಓಡುವುದುಸ್ವಾರ್ಥ ಸೆಳವಿಗೆ ಸೆರೆಯಾಗಿ ದಿನಗಳು ಉರುಳಿದಂತೆಮಣ್ಣಲ್ಲಿ ಮಣ್ಣಾಗಿನಿರ್ಮಿಸಿದ ಮೂಕಅವಶೇಷಗಳು ಹುಡುಕುವವುಸ್ನೇಹ ,ಪ್ರೀತಿಗಾಗಿ ಹಂಬಲಿಸುತ ***************************************

ಕಬ್ಬಿಗರ ಅಬ್ಬಿ ೧೧.  ಹಸಿವಿನಿಂದ ಹಸಿರಿನತ್ತ  ಹಸಿವಿನಿಂದ ಹಸಿರಿನತ್ತ “Generations to come will scarce believe that such a one as this ever in flesh and blood walked upon this earth” .(Albert Einstein, About Mahatma Gandhi) ” ಮುಂದಿನ ಪೀಳಿಗೆಯ ಮಕ್ಕಳು ಆಶ್ಚರ್ಯ ಪಡುವ ದಿನ ಬರಲಿದೆ, ಇಂತಹಾ  ಮನುಷ್ಯ ದೇಹ, ಈ ಭೂಮಿಯ ಮೇಲೆ ನಡೆದಾಡಿರಬಹುದೇ?” ( ಆಲ್ಬರ್ಟ್ ಐನ್ ಸ್ಟೈನ್ ,ಮಹಾತ್ಮಾ ಗಾಂಧಿ ಅವರ […]

ಅನುವಾದ ಸಂಗಾತಿ

ಕಿಟಕಿ — ಗೋಡೆ ಕನ್ನಡ ಮೂಲ:ವಸುಂಧರಾಕದಲೂರು ಇಂಗ್ಲೀಷಿಗೆ: ಸಮತಾ ಆರ್ ಕಿಟಕಿ — ಗೋಡೆ ನಾನೊಂದು ಕಿಟಕಿ; ಮುಚ್ಚಿಯೇಇದ್ದೇನೆ ಶತಮಾನಗಳಿಂದಗತಕಾಲದ ಗಾಳಿ ಒಳಗೆಸುಳಿದಾಡುತ್ತಾ ಕತ್ತಲ ಘಮಲಿನಅಮಲಲಿ ಉರುಳಾಡುತ್ತಾಎದ್ದೆದ್ದು ಕುಣಿಯುವಆತ್ಮಗಳೂ ಅಸ್ಥಿಪಂಜರಗಳೂನನ್ನೊಳಗಿವೆ. ವಿಶಾಲ ಬಿಳಲುಗಳ ಆಲದಮರವೊಂದು ಟಿಸಿಲೊಡೆದುತೊಗಟೆ ಕಳಚಿಕೊಳ್ಳದೆ ಬೇರೂರಿಮುಚ್ಚಿದ ಕಿಟಕಿಯಾಚೆಸ್ವಚ್ಛ ಗಾಳಿಗೆ ಚಿಗುರು ಚಿಗಿಸಿಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.ಒಂದೊಂದು ಟೊಂಗೆಗೂಗೂಡು. ಗೂಡೊಳಗೆ ಕಾವುಕೂತ ಹಸಿ ಬಾಣಂತಿ ಹಕ್ಕಿಕಿಟಕಿ ಕುಟುಕಿದ ಸದ್ದು;ಚಾಚಿದ ಟೊಂಗೆಯೋಚೈತನ್ಯದ ಹಕ್ಕಿಯೋ ತಿಳಿಯದು.ಪ್ರತೀ ಶಬ್ದ ಮಾಡುವ ಹಕ್ಕಿಗೂಅದೇನು ರಾಗವೋಸುಮ್ಮಗೆ ಬೀಸುವ ಗಾಳಿಗೆತಲೆದೂಗುವ ಟೊಂಗೆಗಳಿಗೂಅದೇನು ಹೊಸ ರಂಗೋ […]

ಗಝಲ್

ಗಝಲ್ ಸಹದೇವ ಯರಗೊಪ್ಪ ಪ್ರೇಮದ ಹೂ ಬಾಣ ಹೃದಯದಲಿ ರುಜು ಹಾಕುವಾಗ ನಾನೇ ಇಲ್ಲದಾದೆಹದವರಿತ ಎದೆಹೊಲದಿ ಬಿತ್ತಿದ ಪ್ರೀತಿ ಫಲ ನೀಡುವಾಗ ನಾನೇ ಇಲ್ಲದಾದೆ ಅಂಗಗಳ ಸಂಗ ಬಯಸಿದ ಮನಸು ನಿದಿರೆ ಬತ್ತಿಸಿ ಕಂಗಳ ವಿಶ್ರಾಂತಿ ಕದ್ದಿದೆತುಂಬಿದ ರೂಪದ ಬಟ್ಟಲು ಕಂಡು ಗುಲಾಬಿ ರಂಗೇರಿದಾಗ ನಾನೇ ಇಲ್ಲದಾದೆ ಫಕೀರನಂತೆ ತಂಬೂರಿ ಮೀಟುತ ಅವಳ ಹಿಮ್ಮಡಿಯ ಹುಡಿಬೆಳಕಲಿ ಅಲೆದೆಬದುಕಿನ ತಿರುವಿನಲ್ಲಿ ಕಣ್ಣ ಪ್ರಣತಿ ಹೊತ್ತಿಸಿ ಕಾಯುವಾಗ ನಾನೇ ಇಲ್ಲದಾದೆ ಮೋಹ ತೃಷೆಯಲಿ ತೇಲಾಡುವ ಅಮಲಿಗೆ ಬಿಸಿಯುಸಿರ ಗುಟುಕಿಸಿದೆಒಲವ ಮಳೆಗೆ […]

ಗುರುವಿನ ಗರಿಮೆ

ಲೇಖನ ಗುರುವಿನ ಗರಿಮೆ ನೂತನ ದೋಶೆಟ್ಟಿ ಬಾಲ್ಯದಲ್ಲಿ ಶಿಕ್ಷಣವೆಂದರೆ ಶಿಕ್ಷೆ  ಯೌವನದಲ್ಲಿ ಶಿಕ್ಷಣವೆಂದರೆ ಪರೀಕ್ಷೆಗಳು ಹಾಗೂ ಮೋಜು, ಆನಂತರದಲ್ಲಿ ಅದೇ ಶಿಕ್ಷಣ ವೃತ್ತಿಗೆ ರಹದಾರಿ.ಈ ರೀತಿಯಾಗಿ ಶಿಕ್ಷಣವನ್ನು ಸರಳೀಕರಿಸಬಹುದಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಸರಳ ಸೂತ್ರಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.  ಶಿಕ್ಷಣ= ಶಿಕ್ಷಣ ಸಂಸ್ಥೆ+ ವಿದ್ಯಾರ್ಥಿ ಉದ್ಯೋಗ= ಮಾರ್ಕ್ಸ+ ವಶೀಲಿ ಈ ಎರಡು ಸೂತ್ರಗಳನ್ನು ಇಟ್ಟುಕೊಂಡು ಇಂದಿನ ಶಿಕ್ಷಣದ ಬಗ್ಗೆ ನೋಡೋಣ. ಮೊದಲ ಸೂತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಬಹು ಮುಖ್ಯವಾಗುತ್ತವೆ. ಉನ್ನತ ಶಿಕ್ಷಣದಲ್ಲಿ ಈ […]

Back To Top