ಹೊಸವರುಷದ ಸಂಜೆ

ಹೊಸವರುಷದ ಸಂಜೆ

ಕವಿತೆ ಹೊಸವರುಷದ ಸಂಜೆ ವೈ.ಎಂ.ಯಾಕೊಳ್ಳಿ ಆಡಿ ಬೆಳೆದ ಹೊಲತಿಂದ ಮುಟಿಗೆ ಉಂಡಿಕಾದ ದನ,ಹಿಂಡಿ ಕಾಸದೆ ಕುಡಿದ ಹಾಲುಕಳೆದ ಏಸೋ ಕಂಟಿ ಮರೆಯ ನೆನಪುಗಳುಆಗಾಗ ಕಾಡಿಅಣಕಿಸುತ್ತವೆ ಈ ಕೃತ್ರಿಮದ ಬದುಕನ್ನು ಜೋಳದ ಸಿಹಿತೆನಿ ತಿಂದ ಗಿಡಗಡಲೆಸುಟ್ಟ ಸೆಂಗಾ…ಒಂದೇ ಎರಡೇನೆನಪುಗಳ ಬೋರ್ಗರೆತಕಾಟಮಳ್ಳೇ ಕಪಾಟಮಳ್ಳೆಗುರ್ಜಿ ಆಟಗಳ ಗುಂಗುಕಿವಿಯಲ್ಲಿ ಗುಣುಗುಣಿಸಿ ಈಗಯಾವ ಚಾನಲ್ಕಿನ ಬಟನ್ನು ಒತ್ತಿದರೂಅದೇ ಅರೆಬರೆ ನಗ್ನತೆಯ ದರ್ಶನ ಬೇಸರವಾಗಿಆಗುತ್ತದೆ ಇಡಿ ಬದುಕಿನ ಬಟನ್ನೇ ಆಫ್ ಆದಂತೆ ಓಡುತ್ತಿದ್ದ ಬಂಡಿಯ ಬೆನ್ನು ಹತ್ತಿಹಿಡಿಯಲೆಳಸಿದ ಆದ ಮಂಡಿಗಾಯಕ್ಕೆಯಾವುದೊ ರಸದ ಎಲೆಯ ಹಿಂಡಿದ್ದುಪಕ್ಕದ ಬದುವಿನ […]

ಕಾವ್ಯವೆಂಬ ಕಾವು ಆರದ ಮಗ್ಗಲು

ಪುಸ್ತಕ ಸಂಗಾತಿ ಕಾವ್ಯವೆಂಬ ಕಾವು ಆರದ ಮಗ್ಗಲು ಕಾವ್ಯವೆಂಬುದು ಕಾಣುವ ಜಗತ್ತಿನೊಳಗಿನ ಕಾಣದ ಅನುಭೂತಿಯನ್ನು ಹುಡುಕುವ ಪಯಣ. ಈ ವ್ಯಕ್ತದೊಳಗಿನ ಅವ್ಯಕ್ತವನ್ನು ಹುಡುಕುವ ತಳಮಳವು ಅಲ್ಲಮನಾದಿಯಾಗಿ ನಮ್ಮ ಪರಂಪರೆಯಲ್ಲೇ ಹರಿದುಬಂದಿದೆ. ಇದಕ್ಕೆ ಆಕಾರಕೊಡುವ ಹೊಸ ಬಗೆ, ಹೊಸ ಬನಿಯಿಂದಾಗಿ ತೇಜಾವತಿಯವರ ಕವಿತೆಗಳು ನಮ್ಮೊಳಗೆ ನಿಚ್ಚಳ ಬಿಂಬವೊಂದನ್ನು ಮೂಡಿಸುತ್ತವೆ. ಕವಿತೆಯೆಂದರೆ ಮಣ್ಣಿನೊಳಗೆ ಬೀಜ ಬೆರೆತು ಮೊಳೆತು ಎಸಳೊಡೆದು ದಳಗಳಾಗಿ ಅರಳಿ ಮಿಡಿಯಾಗಿ ಕಾಯಾಗಿ ಮಾಗಿದ ಹಣ್ಣಿನಂತೆ…. (ಕವಿತೆ) ಕವಿತೆ ಅವ್ಯಕ್ತದ ದಾಹವಾಗಿದ್ದರೂ ಅದು ಅನುಭವಗಳ ಮೈಯೊಳಗೇ ಅರಳುವ ವಿದ್ಯಮಾನ. […]

ಕವಿತೆ ಎಂದರೆ

ಕಾವ್ಯ ದಿನಕ್ಕೊಂದು ಕವಿತೆ ರೇಷ್ಮಾ ಕಂದಕೂರ ಕವಿತೆ ಎಂದರೆ ಕವಿತೆ ಬರಿ ಕವಿತೆಯಲ್ಲಆಗು ಹೋಗುಗಳ ಭವಿತವ್ಯಒಳ ಹೊರಾಂಗಣದ ಆಟದ ಚೌಕಟ್ಟುತಳಮಳ ಬೇಗುದಿಯ ವಿಸ್ತಾರಹಿಂದಿನ ಮುಂದಿನ ಸ್ಥಿತಿ ಅವಲೋಕನವಾಸ್ತವ ಅನುಭವದ ಅನನ್ಯಭಾವನಾ ಲೋಕದ ವಿಹಾರಿಣಿಸೋಲು ಹತಾಶೆಯ ಕೆದುವಿಕೆಮರು ಪೂರಣಕೆ ಕರಂಡಿಕೆಅಕ್ಷರ ರೂಪದ ಹೊದಿಕೆಉಪಮೆ ಅಲಂಕಾರದ ಕುಶಲತೆಒಲುಮೆಯ ಸಾಂಗತ್ಯಬಯಲಲು ಚಿಗುರಿಗೆ ಸಾಧನಕಟು ಸತ್ಯದ ಆಕಾರತಿರುಳುಗಳಲಿ ಅಡಗಿದ ಸವಿ ರಸತಾಳ ಮೇಳದಿ ಝೇಂಕಾರಅಂತಃಕರಣ,ಆಕ್ರೋಶದ ಒಡನಾಟಮನದ ತುಮುಲದ ಹೊಮ್ಮುವಿಕೆಆನಂದ ಅಶೃತರ್ಪಣದ ಜೋಡಿಕಾವ್ಯವೆಂಬ ಕುಸುರಿಆತ್ಮಾನಂದದ ಸಾರಿಣಿಸೂಕ್ಷ್ಮತೆಗಳ ವ್ಯಾಖ್ಯಾನ ರೂಪತಮಂಧಕೆ ಬೆಳಕು ರೇಖೆಅಸಹನೆಗಳ ತೋರ್ಪಡುವಿಕೆತಿದ್ದಲು ಮರುಕುಟುಗನಿಟ್ಟುಸಿರ […]

ವಾಸುದೇವ ನಾಡಿಗ್ ವಿಶೇಷ ಕವಿತೆ

ಕೃಷ್ಣನ ಮನೆಗೆ ಸುಧಾಮ ಹೋದರೆ ಕತೆ
ಸುಧಾಮನ ಮನೆಗೆ ಕೃಷ್ಣ ಬಂದರೆ ಕವಿತೆ

ಗಜಲ್

ಮರವ ತಬ್ಬಿ ಹುಲುಸಾಗಿ ಬೆಳೆದು ಬಳುಕಾಡ ಬಯಸಿದೆ
ಗೆದ್ದಲು ಹಿಡಿದ ವೃಕ್ಷಕ್ಕೆ ಅಂಟಿದ್ದು ನನ್ನದೇ ತಪ್ರು

ಹಳೆಯ ಅಂಕಣ ಹೊಸ ಓದುಗರಿಗೆ

ಆರ್.ದಿಲೀಪ್ ಕುಮಾರ್ ಬರೆಯುತ್ತಾರೆ-
ಅಕ್ಕನ ವಚನಗಳ ಅಂಕಿತ ಚೆನ್ನಮಲ್ಲಿಕಾರ್ಜುನ. ಕೆಲವು ಕಡೆ ಶ್ರೀ ಎಂದು, ಸಿರಿ ಎಂದು, ಶ್ರೀಶೈಲ ಎಂದು ಮಲ್ಲಿಕಾರ್ಜುನನೊಡನೆ ಸೇರಿಕೊಳ್ಳುತ್ತದೆ‌. ಬಸವ ಯುಗದ ವಚನ ಮಹಾಸಂಪುಟದಲ್ಲಿ ಇದಕ್ಕೆ‌ ಸಾಕ್ಷಿಗಳೂ ದೊರೆಯುತ್ತವೆ. ಅಕ್ಕನ ವಚನಗಳ ವಿಶೇಷತೆಯೇ ಮಾರ್ದವತೆ. ಆ ವಚನ ಹೀಗಿದೆ

ಕವಿತೆಯ ದಿನಕ್ಕೊಂದು ಕವಿತೆ

ಕವಿತೆಯ ‘ದಿನ’ ಅಬ್ಳಿ ಹೆಗಡೆ. ಹುಟ್ಟಿದ್ದಕ್ಕೊಂದು-ಸತ್ತಿದ್ದಕ್ಕೊಂದು-ಪ್ರೀತಿಗೊಂದು-ನೀತಿಗೊಂದು-ಅಂತೇ….ಕವಿತೆಗೂ…ಒಂದು ‘ದಿನ’.ಬರೆಯುವ ವ್ಯಸನ-ಕ್ಕೆ ಬಿದ್ದು ಕತ್ತಲಲಿಹೊಳೆಯದೇ,ಶುಷ್ಕಪದಗಳ-ಮೂಟೆ ಹೊತ್ತು,ಬಯಲ ಬೆಳಕಿಗೆಬಂದರೆ…….ಅಲ್ಲೂ ಮಬ್ಬು,ಸಾವಿನ ನೆರಳು,ನರಳು..ಗಧ್ಗದಿತಕೊರಳು ಎಲ್ಲೆಲ್ಲೂ.ರಾಶಿ,ರಾಶಿ-ಕವಿತೆಯ ಹೆಣ,ಕಣ್ಣೆದುರು,ಈ…ದಿನ ನಿಜಕ್ಕೂ..ಕವಿತೆಯ ‘ದಿನ’ಎಲ್ಲೆಲ್ಲೂಬರೀ ‘ಕೊರೋನ’. **********************

ದಾರಾವಾಹಿ ಅದ್ಯಾಯ-08 ಆವತ್ತು ಬೆಳಿಗ್ಗೆ ರಾಧಾಳಿಂದ ಮುನ್ನೂರು ರೂಪಾಯಿ ಪಡೆದುಕೊಂಡು ಮನೆಯಿಂದ ಹೊರಟ ಗೋಪಾಲ ಪುತ್ತೂರಿನ ಶಂಕರನಾರಾಯಣ ದೇವಸ್ಥಾನದ ಎದುರುಗಡೆ, ರಸ್ತೆಬದಿಯ ಮೈಲುಗಲ್ಲೊಂದರ ಮೇಲೆ ಕಾಲೂರಿ ಸೈಕಲ್ ನಿಲ್ಲಿಸಿ ಬೀಡಿಯೊಂದನ್ನು ಹೊತ್ತಿಸಿ ನಿಧಾನವಾಗಿ ಸೇದಿದ. ನಂತರ ದೇವಸ್ಥಾನದ ಎದುರು ಹೋಗಿ ನಿಂತುಕೊಂಡು ಭಕ್ತಿಯಿಂದ ದೇವರಿಗೆ ಕೈಮುಗಿದು ಸೈಕಲು ಹತ್ತಿದವನು ನೆರ್ಗಿಹಿತ್ತಲು ಗ್ರಾಮದ ಶಂಕರನ ಸೈಟಿಗೆ ಬಂದು ತಲುಪಿದ. ಆ ಹೊತ್ತಿಗೆ ಶಂಕರ ತನ್ನ ಕೆಲಸಗಾರರಿಗೆ ಅಂದಿನ ಕೆಲಸಕಾರ್ಯದ ಮಾಹಿತಿ ನೀಡುತ್ತಿದ್ದ. ಅದನ್ನು ಗಮನಿಸಿದ ಗೋಪಾಲ ಸ್ವಲ್ಪ ದೂರದಲ್ಲಿ […]

Back To Top