ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿ

ಎಂ.ಆರ್. ಅನಸೂಯ

ನೀರೊಳಗಿದ್ದವರ ಬೆವರ ಹನಿಯನ್ನು.
ಕಂಡವನು
ಮಳೆಹನಿಯೊಳಗೆ ಮರೆಯಾದ ಕಣ್ಣೀರನ್ನು
ಗಮನಿಸಿದವನು
ಮೌನ ವ್ರತದಲ್ಲಿರುವ ಮನದ ಮಾತುಗಳ
ಆಲಿಸಿದವನು

Water Dew on Glass Surface

ಮನಸಿನ ಆಭಿವ್ಯಕ್ತಿಯ ಮೊಗದ ಮೂಲಕ
ಅರಿತವನು
ನುಡಿಗೂ ನಿಲುಕದ ಭಾವಕೆ ಅಕ್ಷರ
ರೂಪವಿತ್ತವನು
ನೇಸರನೂ ನೋಡದ ನೋಟವ
ನೋಡಿದವನು
ಕಿರಿದರಲಿ ಕಾಣದ ಹಿರಿಯದನ್ನ
ಅಡಗಿಸಿದವನು
ದಮನಿತರ ನೋವಿನ ನರಳಿಕೆಗೆ
ಧ್ವನಿಯಾದವನು
ಸಹೃದಯರ ಸಂವೇದನೆಯ ಮಿಡಿತಕೆ
ಸ್ಪಂದಿಸಿದವನು
ಇದ್ದರೂ ನಮ್ಮೆಲ್ಲರಂತೆ
ಜಗವ ನೋಡುವ
ಅವನು ತಾನಂದುಕೊಂಡಂತೆ

***********************************

About The Author

Leave a Reply

You cannot copy content of this page

Scroll to Top