ಅನುವಾದ ಸಂಗಾತಿ

ಅನುವಾದ ಸಂಗಾತಿ

ಗುರ್ ಮೆಹರ್ ಅಂತರಂಗ ಕನ್ನಡ ಮೂಲ: ಶೋಭಾ ಹೀರೆಕೈ ಇಂಗ್ಲೀಷಿಗೆ: ಸಮತಾ ಆರ್ ಗುರ್ ಮೆಹರ್ ಅಂತರಂಗ ಅವರಿವರ ಬಂದೂಕ ತುದಿಯಲ್ಲಿಹೂವಿನ ಮೊನಚಿತ್ತೇ?ಇಲ್ಲವಲ್ಲಮತ್ತೇಯುದ್ಧವನ್ನು ಯುದ್ಧವಲ್ಲದೆಇನ್ನೇನನ್ನಲಿ? ಯಾವ ಕಣಿವೆ ಬದುಕಿಸುವುದುನಾ ಕಳಕೊಂಡವಾತ್ಸಲ್ಯವನ್ನು ?ಯಾವ ಕುರ್ಚಿಯ ಬಳಿಕೇಳಲಿ ನ್ಯಾಯ? ಬೇಕೇ?ನಮ್ಮ ಬಿಸಿ ರಕ್ತಕೂಕೊಳಚೆಯ ಗಬ್ಬುಕಪ್ಪು -ಕೇಸರಿಗಳ ಜಿದ್ದಾ ಜಿದ್ದು ಬಣ್ಣದ ಮೇಲೂ ರಾಡಿಯಎರಚುತಿರುವವರಾರೋ?ಈಚೆಗಿರುವುದೇ ಅಚೆಆಚೆಗಿರುವುದೇ ಈಚೆಈಚೆ ಅಚೆಗಳಾಚೆಅದೇ ಮಣ್ಣು ,ಅದೇ ನೀರುಅದೇ ಗಂಧ, ಅದೇ ಗಾಳಿರಕ್ತ ಬೇರೆಯೇ ‌ಮತ್ತೆ? ಬೇಕೆ ಯುದ್ಧ?ನನ್ನಂಥ ತಬ್ಬಲಿಗಳ ಕೇಳಿ ಹೇಳು ಅಶೋಕ‘ಕಳಿಂಗ’ ನಿನ್ನ ಕಾಡಿದಂತೆ‘ಕಾರ್ಗಿಲ್ […]

ಕಾವ್ಯಯಾನ

ತೆರವುಗೊಳಿಸಿದ್ದು ಡಾ.ಗೋವಿಂದಹೆಗಡೆ ಆ ವಿಶಾಲ ಮೂಲೆ ನಿವೇಶನವನ್ನುತೆರವುಗೊಳಿಸಲಾಯಿತುತ್ರಿಭುಜದಂತಿರುವ ಸೈಟು. ಎರಡು ಕಡೆರಸ್ತೆ. ವಿಶಾಲ ಹಳೆಯ ಮನೆಒತ್ತಾಗಿ ಬೆಳೆದ ಹಲವು ಗಿಡ ಬಳ್ಳಿಹೂವು ಚಿಗುರು ಮೊದಲುಮಲ್ಲಿಗೆ ಹಂಬು ನಂದಿಬಟ್ಟಲುಗುಲಾಬಿ ದಾಸವಾಳ ಕ್ರೋಟನ್‌ಗಳಿಗೆಮುಕ್ತಿ ಸಿಕ್ಕಿದ್ದು. ಮರುದಿನ ಮನೆ ಬಿದ್ದುಗುಪ್ಪೆ ಮಣ್ಣು, ಸೊಟ್ಟ ತಂತಿಗಳಅಸ್ಥಿಪಂಜರ. ನಾಲ್ಕು ದಿನ ಕಳೆದಾಗ ಹಸಿರೇ ಮೈಯಾಗಿದ್ದಮಾವು ಮಾಯ. ಹಬ್ಬದ ಈ ದಿನಗಳಲ್ಲಿಪುಕ್ಕಟೆ ಸೊಪ್ಪು ಸಿಕ್ಕ ಸಂಭ್ರಮದ ನೆರೆ.ಅವರಿವರ ತೋರಣ, ಮಂಟಪಗಳಲ್ಲಿ ಖುಷಿಸಿರಬಹುದೇಮಾವಿನ ಚಿಗುರು,ಬಾಡುವ ಮುನ್ನ ಇಂದುಅಂಚುಗಳಲ್ಲಿ ಕಾವಲಿಗೆ ಎಂಬಂತೆನಿಂತಿದ್ದ ಹತ್ತಾರುತೆಂಗಿನ ಮರಗಳು ನೆಲ ಕಂಡವುಅಳತೆ ಮಾಡಿ […]

ಗಝಲ್

ಗಝಲ್ ರೇಮಾಸಂ ಎದೆಯ ಗೂಡಲಿ ಅವಿತಿರು ಕಾಣದಂತೆ ಯಾರಿಗೂಸಣ್ಣದನಿಲಿ ಹಾಡುತಿರು ಕೇಳಿಸದಂತೆ ಯಾರಿಗೂ ಒಪ್ಪಿದ ಮನಗಳ ಆಳವನು ಇವರಾರು ಅರಿಯರುಕಣ್ಣ ಸನ್ನೆಯಲಿ ಕರೆಯದಿರು ಎಂದಿನಂತೆ ಯಾರಿಗೂ ಲೋಕವು ಹುಚ್ಚನೆಂದು ಕೂಗಿದರೂ ಕೊರಗದಿರುಬೆಸುಗೆಯಲಿ ಹೆದರದಿರು ಬೆಪ್ಪನಂತೆ ಯಾರಿಗೂ ಇಂದು ಇರುವಿಕೆಯನು ತೋರಬೇಕಾಗಿದೆ ಜಗಕೆಬಂಧನದಲಿ ನೀ ಬೆಳಗುತಿರು ಸುಡದಂತೆ ಯಾರಿಗೂ ಬಳಲದಿರು ಪ್ರೇಮವಿರದ ಬಿರುಸಿನ ಗಡಸು ನುಡಿಗಳಿಗೆತಾಯಿ ಮಡಿಲಲಿ ಒರಗಿರು ಬೇಸರಿಸದಂತೆ ಯಾರಿಗೂ *****************

ಅನುವಾದ ಸಂಗಾತಿ

ಶಾಪಗ್ರಸ್ಥ ಶಿಲೆ ಕನ್ನಡದ ಮೂಲ : ಸ್ವಾಮಿ ಪೊನ್ನಾಚಿ ಇಂಗ್ಲೀಷ್ಗೆ ಅನುವಾದ : ಮಾಲತಿ ಶಶಿಧರ್ ಶಾಪಗ್ರಸ್ಥ ಶಿಲೆ ಈ ಹೂವು ಪರಿಮಳ ಸ್ಪರ್ಶ ಕನಸು ಬೆಳದಿಂಗಳುಯಾವುದೂ ಬೇಡನನ್ನ ಪಾಡಿಗೆ ನನ್ನ ಬಿಟ್ಟುಬಿಡುಈ ಚಿಗುರು ವಸಂತ ತಲೆದೂಗುವವರೆಗೂತಲೆ ಮರೆಸಿಕೊಳ್ಳುತ್ತೇನೆ ನೀನೇನೋ ಮರೆತಂತೆ ನಾಟಕವಾಡಿದೆನಟನೆ ಬರದ ನಾನೇನು ಮಾಡಲಿನಿನ್ನ ಹೆಜ್ಜೆ ಗುರುತನ್ನು ಎಣಿಸಿಕೊಂಡುಬಂದ ತಪ್ಪಿಗೆನನಗೀಗ ದಿಕ್ಕು ತಪ್ಪಿದೆಹಿಂತಿರುಗುವ ದಾರಿಯನ್ನಾದರೂ ಒಮ್ಮೆ ತೋರು ಒಮ್ಮೆಗೆ ನೀನು ಮರಣದಂಡನೆಯತೀರ್ಪು ನೀಡಬೇಕಿತ್ತುಆಜೀವ ಶಿಕ್ಷೆ ಅನುಭವಿಸುವ ತ್ರಾಣಈಗ ನನ್ನಲ್ಲಿಲ್ಲ ಈ ವಸಂತದಲ್ಲಿ ಪ್ರೇಮಿಗಳು ಪರಸ್ಪರಪ್ರೇಮ […]

ಅನುವಾದ ಸಂಗಾತಿ

ನದಿಯೊಳಗಿನ ಹರಿವು ಕನ್ನಡ ಮೂಲ: ಗೀತಾ ಡಿ.ಸಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಇರುತ್ತದೆನದಿತನ್ನಷ್ಟಕ್ಕೆತಾನೆಂಬಂತೆಸದಾ..ತನ್ನೊಳಗಿನಪಸೆಯಾರದಂತೆಬೆಚ್ಚಗಿನಒರತೆಬತ್ತದಂತೆತನ್ನಪಾತ್ರದರಿವುಹರಿವಿನಜೀವಂತಸೆಲೆಯನುಸಂಯಮದಿಕಾಯ್ದುಕೊಳ್ಳುತ್ತದೆದಿವ್ಯಮೌನದಧ್ಯಾನದಲಿಸದಾ..ಅಂದುಕೊಳ್ಳುತ್ತಾರೆಜನಇಲ್ಲಸಲ್ಲದ್ದನ್ನು..ಬತ್ತಿದಂತಿರುವನದಿಯಕಂಡುಮರುಕಪಡುತ್ತಾರೆ.ಕರುಣೆಯುಕ್ಕಿಸಿಲೊಚಗುಡುತ್ತಾರೆ.ಉಕ್ಕಿಹರಿವಂತೆಸುಖಾಸುಮ್ಮನೆಪ್ರಾರ್ಥಿಸುತ್ತಾರೆ!ಮೊರೆಯದುನದಿಮೊಳೆಯದುಬೀಜಅದರಷ್ಟಕ್ಕೆಅದು..ಇಲ್ಲ. ಇಲ್ಲ..ನದಿತಾನಾಗಿಯೇಎಂದೂಬತ್ತುವುದಿಲ್ಲ.ಕಾಯುತ್ತದೆಜೀವಚೈತನ್ಯದರಸವುಕ್ಕುವಗಳಿಗೆಗಳಿಗಾಗಿ..ಇದ್ದಕ್ಕಿದ್ದಂತೆಮೋಡಗಟ್ಟಿಹನಿಯುದುರಿದ್ದೇತಡಭೋರ್ಗರೆಯುತ್ತದೆ.ಸಂಭ್ರಮಿಸುತ್ತದೆಸೋಂಕುವಗಾಳಿಗೆರವಿಕಿರಣದತೆಕ್ಕೆಯೊಳಗಿನಬೆಚ್ಚಗಿನಭಾವಕ್ಕೆಮೊಳೆವಬೀಜದರಿವಿಗೆಉದುರಿದಹನಿಮಣ್ಣಿಗೆಬಿದ್ದಬೀಜಕಾಯ್ದಿಟ್ಟನೀರತೇವಮುಪ್ಪುರಿಗೊಂಡುಮೊಳೆವಜೀವತನ್ನೊಳಗೇಸಕಲವನುಕಾಯ್ದುಪೊರೆವಜೀವಜಲಧುಮ್ಮಿಕ್ಕಿಹರಿಯುತ್ತದೆ..ತಡೆಯಿಲ್ಲದೆಹರಿವರಭಸಕ್ಕೆಉರುಳುರುಳಿಕೊಚ್ಚಿಹೋಗುತ್ತವೆಪ್ರಾರ್ಥನೆಗೂಉಳಿಯದಗುಡಿಗೋಪುರಗಳು..ಉಕ್ಕುಕ್ಕಿಹರಿವನದಿ.. ಭಯ, ವಿಸ್ಮಯದನಡುವೆಯೂಆಡಿಕೊಳ್ಳುತ್ತಾರೆಅರಿವಿರದಜನ..ಸುಮ್ಮನಿರುತ್ತದೆನದಿತನ್ನಷ್ಟಕ್ಕೆತಾನೆಂಬಂತೆಜೀವಂತಹರಿಯುತ್ತಾತನ್ನೊಳಗನ್ನುಬೆಚ್ಚಗೆಕಾಯ್ದುಕೊಳ್ಳುತ್ತಾಸದಾ…————- The flow of the river River is beingAs it isBy itselfAlways.Never allows todry up its inner wetnessAnd warm wellspringWith patiencedefendsthyselfthe flow and lifespringIn the meditation of devine silenceAlwaysBut they thinkAbsurd…the people!By looking at itsDrynessFeel pityMurmer atwith mercyful sightPrays for itsQuick outflowNever the […]

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು 80ರ ದಶಕದ ಆಚೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಫಿಲಾಸಫಿಗಳ ಗುಂಗು ಶುರುವಾಯಿತು. ಇದ್ದಕ್ಕಿದ್ದ ಹಾಗೆ ರಜನೀಶ್, ಬುದ್ಧ, ಜಿಡ್ಡು ಕೃಷ್ಣಮೂರ್ತಿ, ಯೂಜಿ ಮುಂತಾದವರು ಪ್ರಚಾರಕ್ಕೆ ಬಂದರು. ಇವರೆಲ್ಲ ಹೇಳಿದ್ದನ್ನು ಕತೆಗಳಲ್ಲೂ ಕವನಗಳಲ್ಲೂ ಲೇಖನಗಳಲ್ಲೂ ತಂದು ಕೊನೆಗೆ ಆ ಹೆಸರುಗಳನ್ನು ಕೇಳಿದರೆ ಕಿರಿಕಿರಿಯಾಗುವಂತೆ ಮಾಡುವಲ್ಲಿ ನಮ್ಮ ಲೇಖಕರೂ ಸಾಹಿತಿಗಳೂ ಯಶಸ್ವಿಯಾದರು.ಈಗಲೂ ಕೆಲವರು ಲೋಹಿಯಾವಾದವನ್ನು ಮತ್ತೆ ಕೆಲವರು ಅಂಬೇಡ್ಕರರನ್ನೂ ಕೆಲವರು ಗಾಂಧಿಯನ್ನೂ ಹೀಗೇ ಬಳಸುತ್ತ, ಬೆದಕುತ್ತ ತಮ್ಮ ಬರವಣಿಗೆಗೆ ಬಳಸುತ್ತ ಆ ಅಂಥವರ ಹೆಸರನ್ನೇ […]

ಕಾವ್ಯಯಾನ

ಭೂಕ೦ಪವಾದ ಮೇಲೆ ಮೇಗರವಳ್ಳಿ ರಮೇಶ್ ಭೂಕ೦ಪವೊ೦ದು ಸ೦ಭವಿಸಿಊರಿಗೆ ಊರೇ ಅವಶೇಷ ವಾದಾಗಹಾಗೇ ಬಿಡಲಾಗುತ್ತದೆಯೆ?ಅಣಿಗೊಳಿಸಲೇ ಬೇಕು ಮತ್ತೆ. ಯದ್ವಾ ತದ್ವಾ ಬಿದ್ದಿರುವಇಟ್ಟಿಗೆ. ಕಬ್ಬಿಣದ ರಾಡುಗಳು, ಗರ್ಡರ್ ಗಳುಛಾವಣಿಯ ಸ್ಲ್ಯಾಬ್,ಮುರಿದ ಫ಼ರ್ನಿಚರ್ಗಳುಒಡೆದ ಕನ್ನಡಿಯ ಚೂರು, ಟೀವಿಪಾತ್ರೆ ಪಡಗ, ನುಜ್ಜುಗುಜ್ಜಾದ ಟ್ರ೦ಕು,ಹರಿದ ಮಣ್ಣಾದ ಬಟ್ಟೆ ಬರೆ,ಚೆಲ್ಲಿದ ಅನ್ನ, ರೊಟ್ಟಿ, ಬ್ರೆಡ್ಡುದೇವರ ಪಟಇವುಗಳ ಮಧ್ಯ ದಾರಿ ಮಾಡಿಕೊಳ್ಳುತ್ತಾಅವಶೇಷಗಳಡಿಯಲ್ಲಿ ಆಕ್ರ೦ದಿಸುತ್ತಿರುವವರನ್ನುನಿಧಾನಎತ್ತಿ ಹತ್ತಿರದ ಆಸ್ಪತ್ರೆಗೆ ಸೇರಿಸ ಬೇಕುಹೆಣಗಳನ್ನೆತ್ತಿ ಸ೦ಸ್ಕಾರ ಮಾಡ ಬೇಕು ಬೃಹತ್ ಯ೦ತ್ರಗಳನ್ನು ತ೦ದುಅವಶೇಷಗಳನ್ನೆಲ್ಲ ಎತ್ತಿಅಣಿಗೊಳಿಸ ಬೇಕು ಮತ್ತೆಹೊಸದಾಗಿ ಊರು ಕಟ್ಟಲು. ವಿನಾಶದ ಒಡಲಿ೦ದ […]

ಕಾವ್ಯಯಾನ

ನುಡಿ ನಾಗರ ಅರುಣಾ ರಾವ್ ಮನುಜನ ಮುಖದಲ್ಲಿನಗೆಯ ಮುಖವಾಡಮರೆಮಾಚುವುದುದುಗುಡ, ದುಮ್ಮಾನಅಷ್ಟೇಕೆ ?ಅಸೂಯೆ ಅನುಮಾನ! ಮುಖವಾಡದ ಹಿಂದಿನ ಮನಅರಿಯದೇ ನಿಜವನ್ನ?ಕಣ್ಣು ಹೇಳದಿದ್ದೀತೇಎದೆಯ ಮಾತನ್ನ?ನಂಬಬಹುದೇ ನಿನ್ನನ್ನಓ ನಾಲಿಗೆಯೇ?ನುಡಿವೆ ನೀ ಏನನ್ನ?ನೀ ಸುಮ್ಮನಿದ್ದರೇನೆ ಚೆನ್ನ! ನಿನ್ನಿಂದ ನೋವುಂಡ ಮನನಯನದಲ್ಲಿ ತೋರೀತುತನ್ನ ನೋವನ್ನ|ಎಲುಬಿಲ್ಲದ ಜಿಹ್ವೆ ನೀನುಡಿದ ನುಡಿಯದುಗಾಯಪಡಿಸೀತು ಎನ್ನ! ಬಿಗಿತುಟಿಯ ದುಡಿವಂದುನೋವಪಡುವಂದು, ಎಂದೆಂದಮಾತಿನಲಿ ಹುಡುಗಿಹುದು ಸತ್ಯಬಿಗಿದ ತುಟಿ ತರಬಲ್ಲದು ಹಾಸಕಟು ಮಾತಿಗಾತಿಗದೆರಾಮಬಾಣ! *********************************

ಕಾವ್ಯಯಾನ

ಮೂಕವೇದನೆ ಶಿವಲೀಲಾ ಹುಣಸಗಿ ಮೌನಕ್ಕೆ ನೂರು ಭಾವಲೇಪನದ ನಂಟುಹಕ್ಕಿ ರೆಕ್ಕೆ ಬಿಚ್ಚಿ ಹಾರಲಾಗದೆ ತತ್ತರಿಸಿದೆಕಣ್ಣಂಚಲಿ ಕಂಬನಿಯ ಹನಿಗಳುತೊಟ್ಟಿಕ್ಕಿದಂತೆ ಸಂತೈಸದಾ ಮನವುಮೂಲೆಗುಂಪಾಗಿ ರೋಧಿಸುತ್ತಿದೆ.ಹೊದ್ದ ಕಂಬಳಿಯ ತುಂಬಾ ತೂತುಬಿತ್ತರಿಸಲಾದಿತೇ ಅಂತರಾಳದ ಹೊರತುಬರದ ಮೇಲೆ ಬರೆಯಳೆದಂತೆ ನೆನಪುಕರಗಬಹುದೇ ಬುಗಿಲೆದ್ದ ಆಕ್ರೋಶದ ಕಂಪುಕಾದಕಬ್ಬಿಣವು ಕುಲುಮೆಯಲಿ ಪಳಗಿದಂತೆನಿನ್ನಾರ್ಭಟಕೆ ಒಂದು ಕ್ಷಣ ಮೈ ಮರೆತಂತೆಹಾಯ್ದ ಹೊದ್ದ ಮನವರಿಕೆಗಳ ತೀಡಿದಾಂಗೆಹರಯವೊಂದೆ ಇಳೆಗೆ ಆಗಾಗಾ ಮೈತಳೆದಾಂಗೆಬರಿದಾದ ಒಡಲು ಬೆಸದು ಮಿಸುಕಿದಂತೆಕಣ್ಣು,ಮೂಗು ಕೈಕಾಲು ಮೂಡಿದ್ದಂತೆಯಾವ ಮೂರ್ತವೋ ಕೊನೆಗಾಲಕೆಕಡಲ ಸೇರದಾ ಮರ್ಮವನು ಬಲ್ಲವರಾರುತುಟಿ ಕಚ್ಚಿ ಕರಗಿಸಿದ ಪಿಂಡದಂತೆ ಎಲ್ಲವುಮೌನವೊಂದು ಉತ್ತರವಾದಿತೆ ಕಂಗಳಿಗೆನಿನ್ನ […]

ಕಾವ್ಯಯಾನ

ಮೌನ ರೇಷ್ಮಾ ಕಂದಕೂರ ಮೌನದ ಆಲಾಪಮಾತಿನ ಆರ್ಭಟ ಸರಿಸಿಶಾಂತ ಚಿತ್ತಕೆ ಆಹ್ವಾನ ದುಗುಡ ಅದುಮಿಡುತಸುಪ್ತ ಲೋಕದಿ ವಿಹಾರಜಂಜಡಗಳ ವಿರಮಿಸುವಿಕೆ ಸಮಸ್ಯಯ ಪಿರಾಮಿಡ್ಡಿಗೆಉಪಶಮನದ ಪರಿಸೂಕ್ಷ್ಮ ಅವಲೋಕನ ಪ್ರತಿಭಟಿಸುವ ಪ್ರತಿರೂಪನಿರ್ಣಯಗಳ ಸೂಚಿಕುಹಕತಗೆ ವಿಹಂಗಮ ನೋಟ ಗಟ್ಟಿತನದ ಪ್ರದರ್ಶನಹತೋಟಿಯ ಮನದೊಡಲುಮುಂದಿನ ಸವಾಲಿಗೆ ಅಣಿ ಚಿತ್ತದಲಿ ಅಚ್ಚೊತ್ತಿಮುತ್ತುವವರಿಗ ಎಚ್ಚರಿಕೆ ಘಂಟೆನಡುವೆ ಕೈ ಬಿಟ್ಟವರಿಗೆ ಸವಾಲು ನಿರಾಳತೆಯ ಸ್ವರೂಪವೇದನೆ ಸಹಿಸುವಿಕೆಅಂತರಾಳದ ಸತ್ವ. *******************

Back To Top