ಕಾವ್ಯಯಾನ

ಮೌನ

ರೇಷ್ಮಾ ಕಂದಕೂರ

ಮೌನದ ಆಲಾಪ
ಮಾತಿನ ಆರ್ಭಟ ಸರಿಸಿ
ಶಾಂತ ಚಿತ್ತಕೆ ಆಹ್ವಾನ

ದುಗುಡ ಅದುಮಿಡುತ
ಸುಪ್ತ ಲೋಕದಿ ವಿಹಾರ
ಜಂಜಡಗಳ ವಿರಮಿಸುವಿಕೆ

ಸಮಸ್ಯಯ ಪಿರಾಮಿಡ್ಡಿಗೆ
ಉಪಶಮನದ ಪರಿ
ಸೂಕ್ಷ್ಮ ಅವಲೋಕನ

ಪ್ರತಿಭಟಿಸುವ ಪ್ರತಿರೂಪ
ನಿರ್ಣಯಗಳ ಸೂಚಿ
ಕುಹಕತಗೆ ವಿಹಂಗಮ ನೋಟ

ಗಟ್ಟಿತನದ ಪ್ರದರ್ಶನ
ಹತೋಟಿಯ ಮನದೊಡಲು
ಮುಂದಿನ ಸವಾಲಿಗೆ ಅಣಿ

ಚಿತ್ತದಲಿ ಅಚ್ಚೊತ್ತಿ
ಮುತ್ತುವವರಿಗ ಎಚ್ಚರಿಕೆ ಘಂಟೆ
ನಡುವೆ ಕೈ ಬಿಟ್ಟವರಿಗೆ ಸವಾಲು

ನಿರಾಳತೆಯ ಸ್ವರೂಪ
ವೇದನೆ ಸಹಿಸುವಿಕೆ
ಅಂತರಾಳದ ಸತ್ವ.

*******************

Leave a Reply

Back To Top