ನೆನಪ ಕಟ್ಟೋಣ

ನೆನಪ ಕಟ್ಟೋಣ

ಕವಿತೆ ನೆನಪ ಕಟ್ಟೋಣ ಸುಧಾರಾಣಿ ನಾಯಕ್ ಹೇಗೂ ದೂರಾಗುವವರಿದ್ದೆವೆಬಾ..ಕಡಲದಂಡೆಯ ಗುಂಟಒಂದಿಷ್ಟು ಹೆಜ್ಜೆ ಹಾಕೋಣನಾಳೆಯ ಮಾತೇಕೆ,ಕವಲು,ಕವಲು,ನಿನ್ನೆಯದೇ ಬೇಕುನೆನೆದುಕೊಳ್ಳೊಣ ಸಾವಿರ ಸಾವಿರ ಆಣೆಗಳುಸವಕಲಾಗಿದೆ,ಚಲಾವಣೆಯಿಲ್ಲದಸಂದೂಕಿನ ನಾಣ್ಯಗಳಂತೆಯಾವ ವ್ಯಥೆಯಕಹಾನಿಯು ಬೇಡಒಂದಿಷ್ಟು ನೆನಪ ಕಟ್ಟೋಣ ಕಾಡಿ,ಬೇಡಿ,ಮೋಹಿಸಿಮುದ್ದಿಸಿದ್ದೆಲ್ಲ ನಕಾಶೆಯಗೆರೆಗಳಂತಿದೆ ಎದೆಯಲಿಮಾತು,ನಗು ಯಾವುದುಮುಗಿದಿಲ್ಲ,ಮುಗಿಯದಮಾತುಗಳ ಸೊಲ್ಲೇ ಬೇಡಒಂದಿಷ್ಟು ಜೊತೆ ಸಾಗೋಣ ಅರ್ಧರ್ಧ ಹೀರುವ ಚಹಾ,ತಾಸಿನ ಪರಿವೇ ಇಲ್ಲದೇವಿಷಯವೂ ಇರದೇಮಾತಾಡಿ,ಕಿತ್ತಾಡಿ ಕಳೆದದಿನಗಳೆಲ್ಲ‌ ನಾಳೆಗೆಪಳೆಯುಳಿಕೆಯಾಗಬಹುದುಬಾ ,ಒಂದಿಷ್ಟುಒಪ್ಪವಾಗಿಸೋಣ ಅಲೆಅಲೆಯುಕೊಡುವ ಕಚಗುಳಿ,ಅಪ್ಪಿ ಗುಯ್ ಗುಡುವಆರ್ದ್ರ ಗಾಳಿ,ನದಿ ನೀರು ಸಹ ಉಪ್ಪಾಗುವಹುಚ್ಚು ಮೋಹದ ಪರಿ,ಎಲ್ಲವನೂ ನಾಳೆಗೆನಮ್ಮೊಲವಿಗೆ ಸಾಕ್ಷಿಯಾಗಿಸಬೇಕಿದೆನೀ ತೊರೆದಾಗಲೂ,ನೀನಿರುವ ಭ್ರಮೆಯಲಿನಾ ಬದುಕಬೇಕಿದೆ,ಬಾ..ಸುಳ್ಳಾದರೂ ಒಂದಿಷ್ಟುಕನಸ ಕಟ್ಟೋಣ ********************************************

ಅಂಕಣ ಬರಹ ಕನಸಿನೂರಿನ ಕಿಟ್ಟಣ್ಣ ಕನಸಿನೂರಿನ ಕಿಟ್ಟಣ್ಣ ( ಮಕ್ಕಳ ಕಾದಂಬರಿ)ಮಲೆಯಾಳ ಮೂಲ : ಇ.ಪಿ.ಪವಿತ್ರನ್ ಕನ್ನಡಕ್ಕೆ : ಕೆ.ಪ್ರಭಾಕರನ್: ದೇಸಿ ಪುಸ್ತಕಪ್ರಕಟಣೆಯ ವರ್ಷ :೨೦೧೫ಬೆಲೆ :ರೂ.೮೦ಪುಟಗಳು :೧೩೮ ಕನ್ನಡದಲ್ಲಿ ಅತಿ ವಿರಳವೆಂದು ಹೇಳಬಹುದಾದ ಮಕ್ಕಳ ಕಾದಂಬರಿ ಪ್ರಕಾರಕ್ಕೆ ಕೊಡುಗೆಯಾಗಿ ಈ ಕಾದಂಬರಿ ಅನುವಾದವಾಗಿ ಬಂದಿದೆ ಎನ್ನಬಹುದು.  ಶೀರ್ಷಿಕೆಯೇ ಸೂಚಿಸುವಂತೆ ಕಿಟ್ಟಣ್ಣ ಈ ಕಥೆಯ ನಾಯಕ. ಕನಸಿನೂರು ಎಂಬ ಪುಟ್ಟ ಹಳ್ಳಿಯ ಮಧ್ಯಮ ವರ್ಗದ ಜಮೀನ್ದಾರಿ ಕುಟುಂಬವೊಂದರಲ್ಲಿ ಪುರಾಣದ ಕೃಷ್ಣನಂತೆ ಜಡಿಮಳೆಯ ಆರ್ಭಟದ ನಡುವೆ ಹುಟ್ಟುವ ಕಿಟ್ಟಣ್ಣ […]

ಧೃಡ ಚಿತ್ತ

ಕಥೆ ಧೃಡ ಚಿತ್ತ ವಾಣಿ ಸುರೇಶ್ ರಾತ್ರಿ ಎಲ್ಲಾ ಕೆಲಸ ಮುಗಿಸಿ ರೂಮಿಗೆ ಹೋದ ಹರಿಣಿ ಬಾಲ್ಕನಿಯಲ್ಲಿ ಆಕಾಶ ನೋಡುತ್ತಾ ಸುಮ್ಮನೆ ನಿಂತಳು.ಧಾತ್ರಿ ಹೇಳಿದ ಮಾತು ಇನ್ನೂ ಅವಳ ಕಿವಿಯಲ್ಲಿ ಗುಣಗುಣಿಸುತ್ತಿತ್ತು.ನನಗ್ಯಾಕೆ ಅವಳಂತೆ ಮನೆಯಲ್ಲಿ ಹೇಳಕ್ಕಾಗಲ್ಲ ಎಂದು ಯೋಚಿಸುತ್ತಿರುವಾಗ ಗಂಡ ವಿಜಯ್ ಬಂದು ಪಕ್ಕದಲ್ಲಿ ನಿಂತನು.” ಇನ್ನು ಕೂಡ ಆ ನೆಟ್ ಫ್ಲಿಕ್ಸ್ ಬಗ್ಗೆ ಯೋಚನೆ ಮಾಡುತ್ತಿದ್ಯಾ? ಈಗಿನ ಮಕ್ಕಳು ಗೊತ್ತಲ್ವಾ ಹರಿಣಿ? ನಾವು ನೆಟ್ ಫ್ಲಿಕ್ಸ್ ಸಬ್ಸ್ಕ್ರೈಬ್ ಮಾಡದಿದ್ರೆ ಅವ್ಳು ಯಾರದ್ದೋ ಅಕೌಂಟ್ ಶೇರ್ ಮಾಡಿ […]

ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..!

ಲೇಖನ ವಿಮರ್ಶಾ ಲೋಕದ ದಿಗ್ಗಜ ಜಿ.ಎಸ್. ಆಮೂರ..! ಜಿ.ಎಸ್. ಅಮೂರರು ನಮನಗಲಿದ್ದಾರೆ ಈಗ. ಆದರೆ ಅವರ ಸಾಹಿತ್ಯ ಕೃತಿಗಳು ಮತ್ತು ಮಾಡಿದ ಪಿ.ಎಚ್.ಡಿಯ ಸಾಹಿತ್ಯ ಸೌರಭ ನಮ್ಮ ಜೊತೆಯಲ್ಲಿ ಇದೆ. ಆಗಲಿ, ಜಿ.ಎಸ್.ಅಮೂರರಿಗೆ ಅನಂತಾನಂತ ನಮನಗಳು… ೦೮.೦೫.೧೯೨೫ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ೪-೫ ದಶಕಗಳಿಂದಲೂ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೧೯೨೫ […]

ಅಂಕಣ ಬರಹ ಸಂತೆಯ ಗೌಜು ತರೀಕೆರೆಯಲ್ಲಿ ಸಂತೆ ಸೇರುವ ಜಾಗಕ್ಕೆ ಸಮೀಪದಲ್ಲಿ ನಮ್ಮ ಮನೆಯಿತ್ತು. ಪ್ರತಿ ಶುಕ್ರವಾರ ಎಬ್ಬಿಸುತ್ತಿದ್ದುದು ಮಸೀದಿಯ ಬಾಂಗಲ್ಲ, ಗುಡಿಯ ಸುಪ್ರಭಾತವಲ್ಲ, ಸಂತೆಗೌಜು. ಇಂಪಾದ ಆ ಗುಜುಗುಜು ನಾದ ಭಾವಕೋಶದಲ್ಲಿ ಈಗಲೂ ಉಳಿದಿದೆ. ಎಂತಲೇ ನನಗೆ ‘ಸಂತೆಯೊಳಗೊಂದು ಮನೆಯ ಮಾಡಿ’ ವಚನ ಓದುವಾಗ ಕೆಣಕಿದಂತಾಗುತ್ತದೆ. ಅಕ್ಕ ‘ಶಬ್ದಕ್ಕೆ ನಾಚಿದೊಡೆ ಎಂತಯ್ಯಾ?’ ಎಂದು ಪ್ರಶ್ನಿಸುತ್ತಾಳೆ. ಉತ್ತರ ಪ್ರಶ್ನೆಯೊಳಗೇ ಇದೆ-ನಾವು ಬದುಕುವ ಲೋಕಪರಿಸರ ಸಂತೆಯಂತಿದೆ; ಅಲ್ಲಿ ಸದ್ದಿರುವುದು ಸಹಜವೆಂದು. ಹಾಗಾದರೆ ಈ ಕಿರಿಕಿರಿಗೆ ಪರಿಹಾರ, ಸದ್ದಿರದ ಕಡೆ […]

ಉಳಿವಿಗಾಗಿ ಹೋರಾಟ

ಕವಿತೆ ಉಳಿವಿಗಾಗಿ ಹೋರಾಟ ಲಕ್ಷ್ಮೀದೇವಿ ಕಮ್ಮಾರ ಇತಿಮಿತಿಗಳ ಪರದೆ ಹರಿದುಬಯಲಲಿ ಒಂದಾಗಲುನಿಂತಲ್ಲೇ ನಿಂತು ಕೋಳೆಯುವ ಮೋದಲುಸಾಗಬೇಕು ನಾವು ಮುಂದು ಮುಂದುಹೋಸ ದಾರಿ ಕಂಡುಕೊಂಡು ಅವರ ಜೀವನ ಅವರಿಗೆನಮ್ಮ ಜೀವನದ ದಾರಿ ನಮಗೆನಾವೆ ಸವಿಸಬೇಕುಹೊಟ್ಟೆ, ಬಟ್ಟೆಗೆ ಗಟ್ಟಿ ನೆಲೆ ಕಂಡುಕೊಳ್ಳಲುನಾವು ಹೆಣಗಾಡಬೇಕು ಹುಚ್ಚು ಮನದ ಹಂಬಲಕೊಯಾರ ಮೇಲಿನ ರೊಚ್ಚಿಗೊಭಂಡಾಯದ ಕಿಚ್ಚಿಗೊಹಾಕಿಕೊಂಡ ಕಗ್ಗಂಟುಗಳ ಬಿಚ್ಚುಕೊಂಡು ನಮ್ಮಳುವಿಗಾಗಿ ಗೊಡ್ಡುಸಂಪ್ರದಾಯ,ಮರ್ಯಾದೆಗಳ ಮಡುವಿನಿಂದ ಮೇಲೆ ಬಂದುಗಟ್ಟಿನೆಲೆ ಕಾಣಬೇಕುನಮ್ಮೋಳಗಿನ ಶಕ್ತಿ ಅನಾವರಣಗೊಳ್ಳಬೇಕು ಕತ್ತಲೆಯಲಿ ಭೂಗತ ವಾಗುವ ಬದಲುಬೆಳಕಿಗೆ ಬಿದ್ದು,ಬಾಳು ಬೆಳಗಬೇಕುಕತ್ತಲಲಿದ್ದವರಿಗೆ ದೀಪದುಡಗರೆನಾವು ನೀಡಬೇಕು *******************************

ನಿನ್ನ ಪ್ರೀತಿಗೆ ಅದರ ರೀತಿಗೆ

ಕವಿತೆ ನಿನ್ನ ಪ್ರೀತಿಗೆ ಅದರ ರೀತಿಗೆ ಜಯಶ್ರೀ ಭ.ಭಂಡಾರಿ. ಎಲ್ಲಿಯೋ ಇದ್ದ ನೀನುನನ್ನಲ್ಲಿ ಪ್ರೀತಿ ಮೂಡಿಸಿದೆನಿನ್ನ ತಿರಸ್ಕರಿಸುತಲಿದ್ದ ನಾಒಲವಿನ ಸಿರಿಯಾದೆ ನಿನ್ನಲಿ ಸೆರೆಯಾದೆ ನೀ ಕವಿಯಾದೆ ನಾ ಕವಿತೆಯಾದೆನೀ ಗೀತೆಯಾದೆ ನಾ ಭಾವವಾದೆನಿನ್ನ ರಾಗವಾದರೆ ನಾ ಪಲ್ಲವಿಯಾದೆನೀ ಹೆಜ್ಜೆಯಾದರೆ ನಾ ಗೆಜ್ಜೆಯಾದೆ ಬಿಟ್ಟಿರಲಾರದ ನೆರಳಾದೆವುಜೀವಕೆ ಜೀವ ನಂಟಾದೆವುಬಿಡಿಸಲಾರದ ಬಂಧಿಗಳಾದೆವುಎಂದೆಂದಿಗೂ ಒಲವ ಜೇನಾದೆವು ಮೌನಿ ಅವನಿಗೆ ಮಾತಾದೆನಗುವಿಗೆ ಅಮೃತಧಾರೆಯಾದೆಕಂಗಳಕಾಂತಿಗೆ ಜ್ಯೋತಿಯಾದೆಉಸಿರಿಗೆ ಚೈತನ್ಯದ ಚಿಲುಮೆಯಾದೆ ದೂರದಲಿ ಇರುವವ ಬಂಗಾರದಂತವಬಾಳದಾರಿಗೆ ಗುರಿ ತೋರಿದವಮನದನ್ನೆಗೆ ಕನಸತೋರಣವಾಗಿಸಿದವಬೆವರಗುಳಿಕೆನ್ನೆಯವ ನನ್ನವನವ ಕಣ್ಣಮಿಂಚಿಗೆ ಸೋತುಬಂದವಮುತ್ತುಗಳ ಮಾಲೆ ತೊಡಿಸಿದವಕೊರಳ […]

ಅತೀತ

ಕವಿತೆ ಅತೀತ ಪವಿತ್ರಾ ಕಾಯುತಿಹರಲವರಲ್ಲಿನಿನ್ನಾಗಮಕೆ…ಇಹದ ಜಂಜಡದ ಜಾತ್ರೆಯಜಯಿಸದಲವರುಕೆಲವರದು ಪಲಾಯನಪರದ ಸುಖವನರಸಿ. ಸೋಲಿನಲು ಗೆಲುವುಗೆಲುವಿನಲಿ ನಗೆ ಬುಗ್ಗೆಎನಮೀರಿಪರೆ ಶಾಂತಿ ನೆಮ್ಮದಿಯಲಿಕೇಕೆ ಕಿಲಕಿಲ ಕೇಳರಿತ ನಗುವ ಮೊಗಸೊಗದ ಸೋಗೆಯಲೆ ಹಲವರಹೊಟ್ಟೆಗೆ ಕಿಚ್ಚಿಡುವ ಕಾಯಕವುಸಾಗುತಲಿ ಬೀಗುತಲಿ ಬಿಡದೆ ಎಲ್ಲರನೂ ತನ್ನಾಲಿಂಗನದತೆಕ್ಕೆಯೊಳು ಆಹುತಿಗೈವ ವಿಧಿಕೂಟಮಾಟ ತಪ್ಪಿಪರೆ ಅವರುಇವರಿಂದು ನಾಳೆ ಅವರುಎಲ್ಲರದೊಂದೊಂದು ನಿಗಧಿ ದಿನದಿನಪನಿಗೆ ಭೇದವಿರದೆ ಬಿಡುವಿರದೆನಡೆದುದೇ ಹಾದಿ. ಮಕ್ಕಳದು ಬೇಡ ಇರಲಿನ್ನಷ್ಟು ದಿನಈಗ ತಾನೆ ಮದುವೆನಡೆ ನಾಳೆ ಬರುವೆಹಂಬಲಿಪ ಯುವಕನೋರ್ವನ ಮನವಿಗೆಮಣಿವನೇ ಅವನುಧೈತ ಧೂತ ಹೆಸರೆಂದರೆ ಭಯ ಅದಕೇನೋ ಅದರನುಭವಸಾಧುವಾಗದು ನಿಲುಕದೂ ಬಣ್ಣನೆಗೆಗಳಿಗೆ […]

ಕಬ್ಬಿಗರ ಅಬ್ಬಿ.-13 ಗಗನ ಚುಂಬಿ ಮತ್ತು ಲಿಫ್ಟು ಸರ್ಗೇಯಿ ಬೂಬ್ಕಾ ,ಎಂಬ ಸೋವಿಯತ್ ಯುನಿಯನ್ ನ ಹುಡುಗ ಉದ್ದ ಕೋಲು ಹಿಡಿದು ಪೋಲ್ ವಾಲ್ಟ್ ಹಾರಲು ಸಿದ್ಧನಾಗಿದ್ದ.  ಇದೊಂದು ಥರದ ಹೈ ಜಂಪ್ ಸ್ಪರ್ಧೆ. ಈ ಆಟದಲ್ಲಿ ಒಂದು ಕೋಲಿನ ಸಹಾಯದಿಂದ ಜಿಗಿಯಲಾಗುತ್ತೆ, ಆ ಕೋಲನ್ನು ಹಾರುಗೋಲು ಎಂದು ಕರೆಯೋಣ. ಹೈಜಂಪ್ ಮಾಡೋವಾಗ ಮೊದಲೇ ನಿರ್ಧರಿಸಿದ ಎತ್ತರದಲ್ಲಿ ನೆಲಕ್ಕೆ ಸಮಾನಾಂತರವಾಗಿ ಒಂದು ಕೋಲು ( ಅಳೆಗೋಲು) ಇಟ್ಟಿರುತ್ತಾರೆ. ಉದ್ದದ ಹಾರುಗೋಲು ಹಿಡಿದು, ಓಡುತ್ತಾ ಬಂದು, ಕೋಲನ್ನು ಹೈ […]

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ

ಅನುಭವ ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ             ಪ್ರತಿ ಡಿಸೆಂಬರ್ ೨೨ಕ್ಕೆ ನಮ್ಮ ಶಾಲೆಯ ವಾರ್ಷಿಕೋತ್ಸವ, ಯಾವಾಗಲು ವಾರ್ಷಿಕೋತ್ಸವ ಮುಗಿದ ಬಳಿಕ ನಮಗೆ ಕ್ರಿಸ್ಮಸ್ರಜೆ. ರಜೆ ಕಳೆಯಲೆಂದೇ ಅಜ್ಜನ ಮನೆಗೆ ಹೋದೆವು. ನಮ್ಮ ಹಾಗೆ ಕ್ರಿಸ್ಮಸ್ ರಜೆ ಕಳೆಯಲು ನಮ್ಮಜ್ಜನ ದಾಯಾದಿಗಳ ಮನೆಮಕ್ಕಳೂ ಬಂದಿದ್ದರು. ಒಂದು ರೀತಿ ಮಕ್ಕಳ ಸೈನ್ಯವೇ ಸರಿ. ನಿಮ್ಮ ಶಾಲೆ ಹೇಗೆ? ನಿಮ್ಮ ಶಾಲೆಯಲ್ಲಿ ಏನೇನು ಕಲಿಸುತ್ತಾರೆ? ನಿಮಗೆ ಯಾವ ಟೀಚರ್ ಇಷ್ಟ? ಯಾರು ಹೇಗೆ ಬಯ್ಯುತ್ತಾರೆ? ಇತ್ಯಾದಿಗಳ ಚರ್ಚೆ ಮಾಡುತ್ತಿದ್ದೆವು. ರಜೆಗೆಂದು […]

Back To Top