ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಅನ್ನದಾತ

ಬಿ.ಶ್ರೀನಿವಾಸ

Rajasthan Allots Rs 1,325 Crore For Drought-Affected Farmers

ಬಿಟ್ಟಾಗ ಬಿರುಕು
ಬದುಕಲು ಹಾತೊರೆಯುತ್ತವೆ ಮಣ್ಣಕಣಗಳು
ಒಡೆದ ಹಿಮ್ಮಡಿ ಬಿರುಕಿನಲಿ

ನೆರಳು ಕೊಟ್ಟ ಮರದ ಕೊರಡೂ ಸಂತೈಸುತ್ತಿದೆ
ಗತ ವೈಭವ ಮರೆತು

ಅಕಾಲದಲಿ ಕೆಂಪಾದ ಬೆಳೆ ಕಡಿಮೆಯಾಗಿರುವುದುಂಟು ದೇಹ ರಕುತದ ಅಂಶ

ಕುಡಿದವರ ಹುಡುಕಬೇಕಿದೆ!

ಕುದಿಯುತ್ತಿದೆ ಅನ್ನ
ಅಗುಳಗುಳೂ ಎದ್ದೆದ್ದು ಏನೋ ಹೇಳಲು ತವಕಿಸುತಿದೆ

ಹಸಿರು ಶಾಲು ಹೊದ್ದ
ಗಡ್ಡಧಾರಿ ಟೋಪಿ ಸಂತನೊಬ್ಬ ಬಿಗಿದಪ್ಪಿ ಸಂತೈಸಿದಂತೆ ಕನಸು

ಕುಡ,ಕುಳಗಳ ಕಣ್ಣಿಂದಲೂ ಸುರಿಯುವುದು ಕಣ್ಣೀರು.

ಬೆಳೆಯುವಾಗ ಬೆವರು
ಬೆಳೆದಾದಮೇಲೆ ನೆತ್ತರು
ಹರಿಯುತಿರಲೇಬೇಕು ಸದಾ
ಒಂದಿಲ್ಲೊಂದು ನದಿ!

*************************

About The Author

Leave a Reply

You cannot copy content of this page

Scroll to Top