Category: ಕಾವ್ಯಯಾನ

ಕಾವ್ಯಯಾನ

ಹಚ್ಚಿಕೊಂಡರೆ

ಕವಿತೆ ಹಚ್ಚಿಕೊಂಡರೆ ನಿರ್ಮಲಾ ಶೆಟ್ಟರ ಸಾಕಿನ್ನು ಹೊರಡುಎನ್ನುವುದೆ ತಡ ಹೊರಡಲಾಗದು ಸರಿ ಇದ್ದುಬಿಡುಎಂದೊಡನೆ ಉಳಿಯಲಾಗದು ನಡೆಯುವ ಮುನ್ನ ನಿನ್ನೊಳಗಿನನನ್ನ ತೊರೆದು ನಡೆ ಎಂದೆನಲುಅದೆಷ್ಟು ಬಾರಿ ಅಂದುಕೊಂಡಿಲ್ಲತೊರೆಯಲಾಗದು ನನ್ನಒಳಗಿನ ನಿನ್ನ ಹೀಗೆ ಒಂದೊಮ್ಮೆ ಹಚ್ಚಿಕೊಂಡರೆರೆಕ್ಕೆ ಮೂಡಿ ನಿಂತ ಹಕ್ಕಿಮುನ್ನುಡಿ ತೀಡಿದ ಮೊದಲ ಪುಟತಾಯೊಡಲು ಸೀಳಿ ಬಂದ ಮೊಳಕೆ ಸಸಿಕಂಡಿಕೆ ಪೋಣಿಸಿಕೊಂಡ ಮಗ್ಗಎಲ್ಲದರಾಚೆ ಪ್ರೀತಿ ಕಾಪಿಟ್ಟುಕೊಂಡ ಹೃದಯ ನಡೆಯುವದು ಸರಳಾತೀ ಸರಳಅಲ್ಲಲ್ಲೆ ಚಾಚಿದ ಬೇರ ಕತ್ತರಿಸಿದಲ್ಲಿಚಿಗುರು ಆವರಿಸಿಕೊಂಡಂತೆ ಮಳೆಗೆಅಳಿದುಳಿದವು ತಮ್ಮಿರುವಿನ ಗುರುತಿನಲಿ ಭೂಮಿ ಬಸಿರ ಧಿಕ್ಕರಿಸಿದರೆಅತ್ತಂತೆ ಭಾನು ಮೋಡ ಸುರಿಸಿಮತ್ತೆ […]

ಬೆವರು ಹಾಗೂ ಹೆಣ್ಣು

ಕವಿತೆ ಬೆವರು ಹಾಗೂ ಹೆಣ್ಣು ನೂತನ ದೋಶೆಟ್ಟಿ ಹೆಂಟೆಯೊಡೆದು ಮಡಿ ಮಾಡಿಬೆವರ ಧಾರೆ ಎರೆದೆರೆದುನೀರುಣಿಸಿದ ಪೈರೀಗಕಾಳುಕಟ್ಟಿ ನಿಂತಿದೆಎದೆಯೆತ್ತರದ ಮಗನಂತೆ ಕೈಯ ಕೆಸರುಮನದ ಕೊಸರುಹಚ್ಚಿಟ್ಟ ಕಣ್ಣ ಹಣತೆಹನಿಸಿದ್ದ ಎದೆಯಾಮೃತ ಹಿಂಡಿ ತೆಗೆದ ಕಾಳ ಹಾಲುಸೇರಿ ಸವಿದ ಪಾಯಸಾನ್ನಸಂಭ್ರಮದ ನಗೆಯ ಮೋಡಿ ಆಳೆತ್ತರ ಬೆಳೆದ ಪೈರುಎದೆಯೆತ್ತರ ಬೆಳೆದ ಮಗಹೆಣೆದ ಕನಸುಗಳ ಕೊಂಡಿಬೆವರಿಗೂ ಹೆಣ್ಣಿಗೂ ತಾಳೆಯ ಮಾಡಿ. ********************************

ಹಣೆಗೆ ಹಣೆ ಹಚ್ಚಿ

ಕವಿತೆ ಹಣೆಗೆ ಹಣೆ ಹಚ್ಚಿ ನಾಗರಾಜ ಹರಪನಹಳ್ಳಿ ಹಣೆಗೆ ಹಣೆ ಹಚ್ಚಿಪಿಸುಮಾತಾನಾಡೋಣಜಗಕೆ ಪ್ರೀತಿಯ ಹಾಡ ಹಾಡೋಣ ಇರುವಷ್ಟು ದಿನಹಗಲುಜೀವ ಕಾರುಣ್ಯದ ಹಾಡ ಹಾಡಿನೆಲದ ಜನಕೆ ಬದುಕ ಹಾಡೋಣ ಸುಖವೋ ದುಃಖವೋ ಸಮನಾಗಿ ಸ್ವೀಕರಿಸಿಹಣೆ ತುಂಬ , ಮನ ತುಂಬ ಸಿಹಿಯ ಹಂಚೋಣ ಬದುಕೆಂಬುದು ಸುಖದ ಹಾಸಿಗೆಯಲ್ಲಕಡು ಕಷ್ಟವನೆ ಹೊದ್ದ ದಾರಿಯೂ ಅಲ್ಲಎಂಬುದು ಸಾರಿ ಹೇಳೋಣ ಹಗಲು ಸೂರ್ಯನ ಪಯಣಇರುಳು ಚಂದ್ರನ ಗಗನಸುಳಿವ ಗಾಳಿಗೆ ದಣಿವಿಲ್ಲದಿರುವಾಗದುಡಿಮೆ ಒಲುವೆ ಜೊತೆ ಜೊತೆಗೆ ಎಂಬ ತತ್ವ ಸಾರೋಣ ಮಗನ ಹಣೆಗೆ ಹಣೆಯಿಟ್ಟುಬದುಕ […]

ಗಾಂಧಿ

ಕವಿತೆ ಗಾಂಧಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಹದಿಹರೆಯದಲ್ಲಿ ಶ್ರವಣನನ್ನೂ ಹರಿಶ್ಚOದ್ರನನ್ನೂಅಡ್ಡೆಯಲ್ಲಿ ಕೂರಿಸಿ ಹೆಗಲಲ್ಲಿ ಹೊತ್ತು ನಡೆಯಲಾರಂಭಿಸಿದ ಈತಒಂದೂವರೆ ಶತಮಾನದಿಂದ ನಡೆಯುತ್ತಲೇ ಇದ್ದಾನೆಹೇ ರಾಮ್… ಹೇ ರಾಮ್… ಎನ್ನುತ್ತ…ಎಷ್ಟೋ ಬಾರಿಅಡ್ಡೆಯಲ್ಲಿ ಕುಳಿತ ಶ್ರವಣನಿಗೆ ವ್ರಣವಾಗಿದ್ದುಂಟುಹರಿಶ್ಚಂದ್ರನಿಗೆ ಭಗಂದರವಾಗಿ ನರಳಿದ್ದುಂಟುಆಗೆಲ್ಲ ತನ್ನ ಹೃದಯದಲ್ಲೇ ಹುಣ್ಣು ಆದವನಂತೆಪಶ್ಚಾತ್ತಾಪದ ಕಂಬನಿಯಲ್ಲಿ ನೆನೆಸಿದ ಮದ್ದು ಪಟ್ಟಿಯನ್ನು ಕಟ್ಟಿಹಗಲು ರಾತ್ರಿ ಶುಶ್ರೂಷೆ ಮಾಡಿಬರಿಗಾಲಲ್ಲಿ ಬಿಸಿಲು ಮಳೆ ಚಳಿ ಗಾಳಿಯೆನ್ನದೆ ನಡೆದಿದ್ದಾನೆಬಸುರಿ ಸೀತೆ ಹೊಟ್ಟೆಯೊಳಗೆ ಅವಳಿಭ್ರೂಣಗಳ ಹೊತ್ತು ತಿರುಗಿದಂತೆ ಹಾದಿಯುದ್ದಕ್ಕೂ ಕಸಾಯಿ ಮಾಂಸದಂಗಡಿಗಳಲ್ಲಿತಲೆ ಕೆಳಗಾಗಿ ನೇತಾಡುತ್ತ ಸಿಪ್ಪೆ ಸುಲಿಸಿಕೊಂಡು ಚೀರಾಡುವ […]

ಗಝಲ್

ಗಝಲ್ ರತ್ನರಾಯ ಮಲ್ಲ ಸಿದ್ಧಾಂತಗಳು ಕಚ್ಚಾಡಿದರೆ ಮತ್ತೆಂದಿಗೂ ಹತ್ತಿರವಾಗಲಾರವುವಾಸನೆಗಳು ಬಡಿದಾಡಿದರೂ ಯಾವತ್ತೂ ದೂರವಾಗಲಾರವು ಜಗಳವು ಸಾಗುತ್ತಿದೆ ಅಲ್ಲಿ ಜೋರಾಗಿ ನಿನ್ನ ಮನ ಕಲುಕುವಂತೆನ್ಯಾಯ ಹುಡುಕುವ ಮನಗಳು ನೆಮ್ಮದಿಯಿಂದ ಬಾಳಲಾರವು ಮೂರನ್ನು ತೊರೆಯುವುದೆ ಇಂದು ಸೌಹಾರ್ದದ ರೂಪ ತಾಳಿದೆಕೈ-ಕಾಲುಗಳು ಹಿಡಿಯದ ಪ್ರತಿಭೆಗಳಿಗೆ ಪ್ರಚಾರ ಮುತ್ತಿಕ್ಕಲಾರವು ಕಸ ಗುಡಿಸುವ ಹುಚ್ಚು ಭ್ರಮೆಯಲ್ಲಿ ಕಸಬರಿಗೆ ಆಗದಿರು ನೀನುಸುಂದರ-ಉತ್ತಮ ಪೊರಕೆಗಳೂ ಸಹ ಪೂಜೆಗೆ ಒಳಗಾಗಲಾರವು ವೈಯಕ್ತಿಕ ಗಟ್ಟಿ ಹೆಜ್ಜೆಯೂರಬೇಕು ನಿಸ್ವಾರ್ಥದ ನೆಲೆಯಲ್ಲಿ ಇಲ್ಲಿಚೂರಿ ಹಾಕಿದ ಹೃದಯಗಳು ‘ಮಲ್ಲಿ’ ಎದೆಯಲ್ಲಿ ಉಳಿಯಲಾರವು ************************************

ಸಾಧ್ಯವಾದರೆ ಕಲಿ

ಕವಿತೆ ಸಾಧ್ಯವಾದರೆ ಕಲಿ ಪ್ರತಿಮಾ ಕೋಮಾರ ಈರಾಪುರ ಹೌದು ನಾನು ಬರೀ ಇರುವೆನನ್ನಾಕಾರ,ಗಾತ್ರ,ಬಣ್ಣನೋಡಿನನ್ನೆಳೆಯದಿರು ಮನವೆನನ್ನ ಹೊಸಕದಿರುಸಾಧ್ಯವಾದರೆ ಕಲಿನನ್ನ ಸಂಘ ಜೀವನತುಸುವಾದರೂಹಂಚಿ ತಿನ್ನುವ ಉದಾರತೆ ನೀ ಕೊಡುವ ಪ್ರತೀತುತ್ತಿಗೂ ನಾನು ಋಣಿನಿನ್ನ ಮನೆ ಮೂಲೆಯೇಎನ್ನ ಸಾಮ್ರಾಜ್ಯನೀ ತೋರುವ ಹನಿ ಪ್ರೀತಿಗೆದುಪ್ಪುಟ್ಟು ಸೇರಿಸಿಕೊಡುವೆ ಪ್ರೀತಿಸಾಧ್ಯವಾದರೆ ಕಲಿಉಂಡ ಮನೆಗೆ ದ್ರೋಹ ಬಗೆಯದನನ್ನ ಪ್ರಾಮಾಣಿಕತೆ ನೀ ಬತ್ತಿಯಿಟ್ಟು ತೈಲವೆರೆದುಉರಿಸುವ ಹಣತೆ ನಾನುನಾ ಕತ್ತಲೆಯಲ್ಲುಳಿದರೂನೀಡುವೆ ನಿನಗೆ ಬರೀಬೆಳಕುಸಾಧ್ಯವಾದರೆ ಕಲಿಬೆಳಕ ನೀಡಿದವರಬದುಕ ಬೆಳಕಾಗಿಸಲುಇಲ್ಲ ಆರಿಸುವವಿಶ್ವಾಸ ದ್ರೋಹವಾದರೂಮಾಡದಿರು ಹಣ್ಣು ಹೇಗಿದ್ದರೂಬರೀ ಸವಿಯನ್ನಷ್ಟೇಕುಕ್ಕಿ ಹೀರಿಖುಷಿಪಡುವುದು ಹಕ್ಕಿಸಾಧ್ಯವಾದರೆ ಕಲಿಒಂದು ಕೆಟ್ಟದ್ದನ್ನೇಕೆದಕಿಕೂಗಿ […]

ಹೂ ಬೆಳಗು

ಕವಿತೆ ಹೂ ಬೆಳಗು ಫಾಲ್ಗುಣ ಗೌಡ ಅಚವೆ ಸರಿಯುವ ಕತ್ತಲನ್ನು ಮರದಎಲೆಗಳ ನಡುವೆ ಕುಳಿತ ಹಕ್ಕಿಗಳುತದೇಕ ಚಿತ್ತದಿಂದ ನೋಡುತ್ತಿವೆ ಆಗಷ್ಟೇ ಕಣ್ಣು ಬಿಟ್ಟ ನಸುಕುದೊಸೆ ಹೊಯ್ಯಲುಬೆಂಕಿ ಒಟ್ಟುತ್ತಿದೆ ಹೊಂಗನಸ ನೆನೆದುಒಂದೇ ಸವನೆ ಮುಸುಕುವ ಮಂಜುಮರದ ಎಲೆಗಳ ತೋಯಿಸಿಕಚಗುಳಿಯಿಡುತ್ತಿದೆ ಆಗತಾನೇ ಹೊಳೆ ಸಾಲಿನಲ್ಲಿಮುಖ ತೊಳೆದುಕೊಂಡ ಮೋಡಗಳ ಕೆನ್ನೆಅರಳುವ ಎಳೆಬಿಸಿಲಿಗೆಕೆಂಪಾಗುಗುತ್ತಿದೆ ದಾಸಾಳದ ಹೂಗಳುಹೂ ಕೊಯ್ಯುವ ಪುಟ್ಟಿಯಪುಟಾಣಿ ಕೈಯ ಮುದ್ದು ಮಾಡುತ್ತಿವೆ ತಡವಾಗಿ ಎದ್ದ ಮುತ್ತುಮಲ್ಲಿಗೆಹೂಗಳು ಮುಖಕ್ಕೆ ಇಬ್ಬನಿಯೆರಚಿನಿದ್ದೆಗಣ್ಣುಗಳನ್ನು ತೊಳೆಯುತ್ತಿವೆ ಕಣ್ಣು ತೆರೆದೇ ಸಣ್ಣ ನಿದ್ದೆಗೆ ಜಾರಿದಅಬ್ಬಲಿ ಹೂಗಳನ್ನುಬೀಸಿ ಬಂದ ತಂಗಾಳಿ […]

ಗಝಲ್

ಗಝಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿಯ ಆಳ ಹರವು ತಿಳಿದಿಲ್ಲ ಸಾವೇ ದೂರವಿರುಕಡಲು ಈಜಿ ದೇಹವು ದಣಿದಿಲ್ಲ ಸಾವೇ ದೂರವಿರು ಮಧುಶಾಲೆಯಲಿ ನೆಮ್ಮದಿ ಹುಡುಕುತಿರುವೆ ತಡೆಯ ಬೇಡಸುಖ ಪಡೆಯುವ ಸರದಿಯು ಬಂದಿಲ್ಲ ಸಾವೇ  ದೂರವಿರು ಕೊರೆವ ಚಳಿ ನಡುಗುತಿದೆ ತನು ನೆನಪ ಬಾಹು ಬಂಧನದಲಿಹೊದ್ದ ಒಲವ ಕಂಬಳಿ ಹರಿದಿಲ್ಲ ಸಾವೇ ದೂರವಿರು ಮೋಹನ ಮುರಳಿ ಗಾನಕೆ ಮನ ಸೋತು ಬಂದೆ ನದಿ ತಟಕೆಹೃದಯ ತಣಿಸುವ ಮಾತು ಮುಗಿದಿಲ್ಲ ಸಾವೇ ದೂರವಿರು ತಾಮಸದ ಕರಿ ನೆರಳು ಕರಗಿ ಅರಿವಿನ”ಪ್ರಭೆ” […]

ಅನ್ನದಗಳುಗಳ ಲೆಕ್ಕ..

ಕವಿತೆ ಅನ್ನದಗಳುಗಳ ಲೆಕ್ಕ.. ವಸುಂದರಾ ಕದಲೂರು ಕೈ ಚಾಚಿತು ಒಡಲ ಹಸಿವು, ಅನ್ನದತಟ್ಟೆ ಹಿಡಿದು ಮುಷ್ಠಿ ತುತ್ತಿಗೆ…ಕೈ ಬಿಚ್ಚಿ ಹಾಕಿದರು ಅದರೊಳಗೆ ‘ಕ್ರಾಂತಿ’ ಬೇಕೆಂದು ಸಿಡಿದು ಬೀಳುವ ಹೊಳಪುಅಚ್ಚಿನ ನಾಣ್ಯಗಳನು. ಹಸಿದ ಉದರಕೆ ಓದಲು ಬಾರದು.ತಟ್ಟೆಗೆ ಬಿದ್ದ ಕಹಳೆ ಮೊರೆತದನಾಣ್ಯಗಳು ಕ್ರಾಂತಿಯ ಶ್ವೇತಪತ್ರಓದಿಸಲು ಪೈಪೋಟಿಗೆ ಬಿದ್ದವು.. ಅನ್ನ ಸಿಗುವ ಭರವಸೆಯಿದ್ದ, ತಟ್ಟೆಗೆಬೀಳುವ ಅಗುಳಿನ ಸದ್ದಿಗೆ ಕಾದವರು;ಕೆಂಪು ಉರಿ ಬೆಳಗಿನಲಿ ಉರಿದು, ಸಂಜೆ ಕಪ್ಪಿನಲಿ ನಿಧಾನ ಕರಗಿ, ನಾಳೆಯಾದರೂಹೊಟ್ಟೆ ತುಂಬುವ ಅನ್ನದಗುಳುಗಳ ಕನಸುಕಾಣುತ್ತಾ… ಎವೆಗಳನು ಮುಚ್ಚುತ್ತಿದ್ದರು. ಕಿವುಡು ಕಿವಿಗಳಿಗೆ […]

ಹನಿಗಳು

ಕವಿತೆ ಹನಿಗಳು ನಾಗರಾಜ. ಹರಪನಹಳ್ಳಿ -1-ಮೌನವಾಗಿ ಬಿದ್ದ ದಂಡೆಯಲ್ಲಿಒಂಟಿಯಾಗಿಧ್ಯಾನಿಸುತ್ತಿದೆ ದೋಣಿಬದುಕಿನ ಯಾತ್ರೆ ಮುಗಿಸಿ -2-ಕಡಲ ಅಲೆಗಳ ಸದ್ದುಕೇಳಿಯೂ ಕೇಳದಂತೆಬಿದ್ದಿರುವ ದಂಡೆಯ ಕಂಡುಆಗಸದಲ್ಲಿ ಚಂದ್ರನಗುತ್ತಿದ್ದ -3-ಸಂಜೆ ಗತ್ತಲುದಂಡೆಯಲ್ಲಿ ನಡೆದಾಡುತ್ತಿರುವಜೋಡಿ ನೆರಳುಗಳುನಕ್ಷತ್ರಗಳು ಹಾಡುತ್ತಿರೆಮಗುಮರಳಲ್ಲಿ ಗುಬ್ಬಚ್ಚಿಗಾಗಿಮನೆ ಮಾಡುತ್ತಿತ್ತು -4-ಗಾಳಿ ಸಿಳ್ಳೆಹಾಕುತ್ತಿತ್ತುಕಡಲಲ್ಲಿ ಯಾರೋದೀಪಸಾಲು ಹಚ್ಚಿಟ್ಟಂತೆದೋಣಿಗಳುಬದುಕಿಗಾಗಿಹುಡುಕಾಡುತ್ತಿದ್ದವು ********************************

Back To Top