Category: ಕಾವ್ಯಯಾನ

ಕಾವ್ಯಯಾನ

ನಾವು ನಿಮ್ಮ ಭಕ್ತರು

ಕವಿತೆ ನಾವು ನಿಮ್ಮ ಭಕ್ತರು ಶಿವರಾಜ್.ಡಿ ನಾವು ನಿಮ್ಮ ಭಕ್ತರುನೀವು ಕಟ್ಟುವ ಪುತ್ಥಳಿಗಳಿಗೆ,ಕ್ರೀಡಾಂಗಣಗಳಿಗೆ,ಮಹಲುಗಳಿಗೆದೇಶಭಕ್ತರ ಹೆಸರಿಡಲುಹೋರಾಟ ಮಾಡುತ್ತೇವೆ. ನಾವು ನಿಮ್ಮ ಭಕ್ತರುನಿಮ್ಮ ದೇಶಭಕ್ತಿಯ ಮಾತುಗಳಿಗೆಅಚ್ಚೆ ದಿನದ ಆಡಂಬರದ ಸುದ್ದಿಗಳಿಗೆಬಂಗಾರದ ಕಿವಿಯಾಗುತ್ತೇವೆ. ನಾವು ನಿಮ್ಮ ಭಕ್ತರುಪೆಟ್ರೋಲ್, ಡೀಸೆಲ್, ದಿನಸಿಧಾನ್ಯಗಳ ಬೆಲೆ ಏರಿದರೂದುಬಾರಿ ಜಿಎಸ್ಟಿ ತೆರಿಗೆ ಕಟ್ಟುತ್ತೇವೆ. ನಾವು ನಿಮ್ಮ ಭಕ್ತರುಚಪ್ಪಾಳೆ ತಟ್ಟುತ್ತೇವೆ,ಗಂಟೆ ಬಡಿಯುತ್ತೇವೆಕ್ಯಾಂಡಲ್ ಹಚ್ಚಿ ಕರೋನಾ ಓಡಿಸುತ್ತೇವೆ. ನಾವು ನಿಮ್ಮ ಭಕ್ತರುಆಕ್ಸಿಜನ್ ಕೊರತೆಯಾದರೂಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಹೋದರುನಗು ನಗುತ್ತಾ ಸಾಯುತ್ತೇವೆ. ನಾವು ನಿಮ್ಮ ಭಕ್ತರುನಿಮ್ಮ ಮನದ ಮಾತು ಕೇಳುತ್ತಾನಿಮ್ಮನ್ನು ಆರಾಧಿಸುತ್ತೇವೆನೀವು […]

ನನ್ನದೇ ಎಲ್ಲ ನನ್ನವರೆ ಎಲ್ಲ

ಕವಿತೆ ನನ್ನದೇ ಎಲ್ಲ ನನ್ನವರೆ ಎಲ್ಲ ಚೈತ್ರಾ ತಿಪ್ಪೇಸ್ವಾಮಿ ನಾನು ನನ್ನದೆಲ್ಲ ನನ್ನದುನನ್ನ ಬಳಿಯಿರುವವರೆಲ್ಲನನ್ನವರೆಂಬ ಭಾವ ನಿನ್ನದು ಹೆಣ್ಣೇ ಒ ಹೆಣ್ಣೇಜೀವ ತುಂಬಿ ಭುವಿಗೆ ತಂದತಂದೆ ತಾಯಿ ನನ್ನವರುತಾಯಿ ಮಡಿಲ ಹಂಚಿಕೊಂಡಅಗ್ರಜ ಅನುಜರೆಲ್ಲ ನನ್ನವರುಕುಲ ಬಂಧು ಬಳಗವೆಲ್ಲ ನನ್ನವರುಮನೋಮಂದಿರ ಅಂಗಳದಒಡನಾಡಿಗಳೆಲ್ಲ ನನ್ನವರುಜೀವನಕ್ಕೆ ಹೊಸ ಭಾಷ್ಯೆಬರೆದ ಸಂಗಾತಿ ನನ್ನವರುಹೊಸ ಜೀವನಕ್ಕೆ ಅಡಿಯಿಟ್ಟಮನೆಯೆಲ್ಲ ನನ್ನದುಮದುವೆ ಬಂಧ ಬೆಸೆದ ಮನೆಯಬಂಧು ಬಳಗವೆಲ್ಲ ನನ್ನವರುಬಸಿರ ತುಂಬಿ ಬಂದ ಜೀವ ನನ್ನದೆಮಮತೆಯ ಮಕ್ಕಳು ನನ್ನವರುನನ್ನವರು ನನ್ನವರು ಎಂದುನನ್ನವರಿಗಾಗಿ ಬದುಕಿದ ಜನನಿ…..ಮನೆಯ ಮಗುವಾಗಿ ಬಾಲಕಿಯಾಗಿ ಕುಲವಧುವಾಗಿ […]

ಮರಗಳ ಸ್ವಗತ ಸಾಂತ್ವಾನ

ಕವಿತೆ ಮರಗಳ ಸ್ವಗತ ಸಾಂತ್ವಾನ ಅಭಿಜ್ಞಾ ಪಿಎಮ್ ಗೌಡ ಹೇ ಮನುಜ.! ನಿನ್ನ ಸ್ವಾರ್ಥಕಾಗಿಪ್ರಕೃತಿಯನ್ನೆ ವಿಕೃತಿಗೈದುಇಳೆಯೊಡಲ ಬರಿದುಗೊಳಿಸಿಮಾರಣ ಹೋಮ ಮಾಡುತಧರೆಯ ಬಂಜರಾಗಿಸಿದ್ದು ನ್ಯಾಯವೆ.?ನಿನಗರಿವಿಲ್ಲದೆ ಅವಳೊಡಲನುಅಳಿವಿನಂಚಿನಲಿ ನಿಲ್ಲಿಸಿತರುಲತೆಗಳ ಕತ್ತನು ಹಿಚುಕಿಮಾರಾಟಕಿಳಿಸಿರುವೆಯಲ್ಲನೀನೆಂತಹ ಗೋಮುಖ ವ್ಯಾಘ್ರಿ.!! ಮೊಳಕೆಯಿಂದಿಡಿದು ಮರದವರೆಗೂಗಾಳಿ ನೆರಳು ನೀಡಿ ಮಳೆಯಲ್ಲಿಆಸರೆಯಾದರೆ ನನ್ನೆ ಕೊಂದುಅಹಂನ ಗದ್ದುಗೆಯಲಿ ತೇಲುತಿರುವೆಒಮ್ಮೆ ಯೋಚಿಸು ಓ.! ಮನುಜ…ಮಳೆಯಿಲ್ಲದೆ ಇಳೆ ಇರುವುದೆ.?ಇಳೆಯಿಲ್ಲದೆ ನೀನಿರುವೆಯಾ.?ನಿನ್ನ ಲಲಾಟಕೆ ನನ್ನೆ ಗುರಿಮಾಡಿರುವೆನಿನ್ನಾಟಿಕೆಯ ಅಲಂಕಾರಕೇಕೆನನ್ನ ಕಡಿದು ಮಾರಾಟಕಿಟ್ಟಿರುವೆ.? ಹವಾಮಾನ ವೈಪರಿತ್ಯಗಳುಂಟಾಗುವುದೆನಮ್ಮಿಂದ ಹೇ.!ಮನುಜ ನೀ ತಿಳಿಮಳೆ ಗಾಳಿ ನೀರಿನ ಉತ್ಪಾನ್ನದ ಮೂಲನಾವಲ್ಲವೇ.? ,ನಮ್ಮಿರುವಿಕೆಯಪ್ರಭಾವ ಮಳೆ […]

ತೆವಳುವುದನ್ನುಮರೆತ ನಾನು

ಕವಿತೆ ತೆವಳುವುದನ್ನುಮರೆತ ನಾನು ವಿಶ್ವನಾಥಎನ್. ನೇರಳಕಟ್ಟೆ ನಾನು ತೆವಳುತ್ತಾ ಸಾಗುತ್ತಿದ್ದೆ‘ಎದ್ದು ನಿಂತರೆ ಚೆನ್ನಾಗಿತ್ತು’ಎಂದರವರು ಎದ್ದು ನಿಂತೆಅವರ ಬಾಯಿಗಳು ಸದ್ದು ಮಾಡಿದವು‘ನಿಂತರೆಸಾಲದು, ನಡೆಯಬೇಕು’ ನಡೆಯುತ್ತಾ ಹೊರಟೆ ಮತ್ತುಎಡವಿದೆ‘ಎಡವದೆಯೇನಡೆ’ ಎಂಬ ಸಲಹೆ ಎಡವದೆಯೇ ನಡೆಯುವುದನ್ನು ರೂಢಿಸಿಕೊಂಡೆ‘ಈಜುವುದು ಗೊತ್ತಿಲ್ಲವಲ್ಲ ನಿನಗೆ?’ ಎಲುಬಿಲ್ಲದ ನಾಲಗೆಗಳು ನನ್ನ ಕಿವಿಗೆ ಮುತ್ತಿಕ್ಕಿದವು ಮೀನಿನ ಅಪ್ಪನಂತೆ ಈಜಿದೆಮತ್ತು ಅವರ ಮುಖ ನೋಡಿದೆಅವರೊಳಗಣ ಅತೃಪ್ತ ಆತ್ಮ ಪಿಸುಗುಟ್ಟಿತು‘ಹಾರಲಾರೆ ನೀನು’ ಸವಾಲೇ ರೆಕ್ಕೆಗಳಾದವು ನನಗೆಹಾರತೊಡಗಿದೆ ಮತ್ತುಹಾರುತ್ತಲೇ ಇದ್ದೆ ಕೆಳಗನ್ನು ನೋಡಿದರೆಮತ್ತೆ ತುಟಿಗಳ ಪಿಟಿಪಿಟಿ-‘ಈಗ ತೆವಳುನೀನು, ಸಾಧ್ಯವಾದರೆ’ ತೆವಳ ಹೊರಟ ನಾನೀಗ […]

ಜೀವದಾತೆ ಪ್ರಕೃತಿ ಮಾತೆ

ಕವಿತೆ ಜೀವದಾತೆ ಪ್ರಕೃತಿ ಮಾತೆ ಸುವಿಧಾ ಹಡಿನಬಾಳ ಹೇ ಪ್ರಭು , ಋತುರಾಜ ವಸಂತನೀ ಬಂದೆ ನಸುನಗುತ‌ಪ್ರಕೃತಿಗೆ ಹೊಸ ಕಳೆಯ ನೀಡುತ್ತಆದರೆ ಕಳೆದಿಲ್ಲ ಮನುಕುಲದದುಗುಡ ದುಮ್ಮಾನ ನಿನ್ನ ಆಗಮನದಿಂದ ! ಗಿಡಮರಗಳು ಹಸಿರೆಲೆ ಚಿಗುರು ಬಿಟ್ಟುಹೂ ಹಣ್ಣು ಕಾಯಿ ತೊಟ್ಟುಕೋಗಿಲೆ ಗಿಳಿ ಗೊರವಂಕಗಳುಲಿವಾಗಮನುಜನಿಗೇಕೆ ಈ ವಿಯೋಗ ? ಜೀವಸಂಕುಲವೆ ತಿಂದುಂಡು ನಲಿದುಹಾಯಾಗಿ ಇರುವಾಗ ನಿನ್ನದೆಒಂದು ಭಾಗ ಹುಲು ಮಾನವನಿಗೇಕೆಜೀವಭಯ ತಳಮಳ ತುಮುಲ? ಹೇ ಕಾಮಧೇನು ಕರುಣಾಮಯೀಪ್ರಕೃತಿ ಮಾತೆ ಜೀವದಾತೆನಿನ್ನ ಮೇಲೆ ಅಟ್ಡಹಾಸಗೈವಸ್ವಾರ್ಥ ನರನ ಮೇಲೆ ಕೋಪವೆಅಥವಾ ನಿನ್ನ […]

“ಅನ್ನದಾತನ ಸ್ವಗತ “

“ಅನ್ನದಾತನ ಸ್ವಗತ “ ಗೀತಾ ಅನಘ ಮುನಿನಸ್ಯಾಕೆ ತಾಯಿ ನನ್ನ ಮ್ಯಾಲ,ಕಾರ್ಖಾನೆ ಕಟ್ಟಿ ನಿನ್ನುಸಿರ ಮಲಿನ ಗೊಳಿಸಲಿಲ್ಲ,ರಾಜಕಾರಣಿಗಳಂತೆ ಸುಳ್ಳು ಭರವಸೆನೀಡಲಿಲ್ಲ,ಬ್ಯಾಂಕಿಗೆ ಸಾಲ ಕೇಳಿದೆ ಅಷ್ಟೇ,!!!!!!ಬೆಳೆ ಬಿತ್ತಲು,,,,,,,,,,,,,ಪಚ್ಚೆ ಪೈರು ಗಳಿಂದ ನಿನ್ನೊಡಲ ತುಂಬಲು,ಅದೇಕೋ ಕಾಣೆ ನಿನಗೂ ನನ್ನ ಮೇಲೆ ಮುನಿಸು,ಕೆಲವೊಮ್ಮೆ ಇಳೆಗೆ ಮಳೆಯ ಸುರಿಸದೆ,ನನಗೆಂದು ಮೀಸಲಿಟ್ಟ ನಿನ್ನ ದೇಹದ ಒಂದಿನಿತು ಭಾಗ ಬರಡಾಯಿತು,ಇನ್ನೊಮ್ಮೆ ಬಹಳಷ್ಟು ಮಳೆ ಬಂದು ಇಳೆ ನೆಂದು ನಿನ್ನೊಡಲ ಹಸಿರಾಗಿಸಿ ಫಸಲು ನೋಡಿ,ಸಂಭ್ರಮಿಸುವ ಸಮಯದಿಯಾಕೆ ನಿನ್ನಯ ರುದ್ರನರ್ತನ?! ಬಯಸಿದ್ದಕ್ಕಿಂತ ಹೆಚ್ಚು ಮಳೆರಾಯನ ಆರ್ಭಟ ಹೆಸರೆಂಬುದು ಪ್ರವಾಹ, […]

ಸ್ವಾರ್ಥ

ಕವಿತೆ ಸ್ವಾರ್ಥ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಗದ್ದುಗೆಯೇರಲುಹಣವನು ಎಸೆಯಿತುಗಳಿಕೆಯ ತೃಷೆಯಲಿನಶೆಯ ನೀಡಿತುಸ್ವಾರ್ಥದ ಮತವನು ಮುತ್ತಿ ಸಲಿಗೆಯ ಸುಲಿಗೆ ಮಾಡುತಒಸರುವ ಬೆವರಿನಬುತ್ತಿಯ ಕಟ್ಟಿತುನೆತ್ತರು ಹಿಚುಕಿ,ನೆಕ್ಕಿ ಕಾಡಿತುಕತ್ತಲು ಮುಕ್ಕಿ ಅನುದಿನ ಮತ್ತಿನಲಿಅಮೃತ ತುತ್ತಿನಲಿಕಡಲಾದರೂ ಕುಡಿದು,ಗತ್ತಿನಲಿ-ವಿಗತಿಯೆಡೆಗೆಒಂದನ್ಹತ್ತು ಸೇರಿಸಿತು ಸುಖದ ತಿರುಳ ಸವಿಯುತಸೇವಕನೆಂಬುದ ಮರೆಯಿತುಅಡಿಗೊಮ್ಮೆ ಜೊಳ್ಳ ನುಡಿದು,ಪರರ ಬಾದೆಯನರಿಯದೆನ್ಯಾಯ ನೀತಿ ಮಾತಾಡಿತು ಕೃತಕ ಕೀರ್ತಿಯ ಪಡೆಯಿತುವಿಕೃತ ಸೊಗದಲಿ ಹಾಡಿತುಸುಕೃತ ಭಾವವಿರದೆಅಂಬರವೇರಿಕೈ ಬೀಸಿ ಕರಗಿತು ಯಾರೋ ಬಿತ್ತಿದ ಬೀಜಹೂ-ಕಾಯಿಗಳ ಬಿಡದೆ ತಿಂದು,ಒಳಗು ಹೊರಗೂಗಿಡದ ಬುಡದನೆರಳೂ ಬಿಡದೆ,ದೈತ್ಯ ಹುಳುವಾಗಿ ಮೆರೆಯಿತು.……************************

Back To Top