Category: ಕಾವ್ಯಯಾನ

ಕಾವ್ಯಯಾನ

ಗಜಲ್

ಗಜಲ್ ಕೆ.ಸುನಂದಾ ನಿನ್ನ ಕಂಡ ಕ್ಷಣದಿಂದ ಆನಂದದ ಭಾಷ್ಪಗಳು ಸುರಿಯುತಿದೆ ಗೆಳೆಯಆಡಿದ ಮಾತುಗಳೆಲ್ಲ ಮಧುರ ಸಂಗೀತದಂತೆ ಸೆಳೆಯುತಿದೆ ಗೆಳೆಯ ಅದೆಷ್ಟೋ ವರ್ಷಗಳಿಂದ ಕದಲದೆ ಕಾಯುತ್ತಿರುವೆ ನೀನು ಬರುವೆ ಎಂದುವಸಂತನ ಆಗಮನದ ಆನಂದವಿಂದು ನಮ್ಮಲಿ ಉಲಿಯುತಿದೆ ಗೆಳೆಯ ಮೌನವೆ ಎನ್ನ ಬದುಕೆಂದು ದೂಡುತ್ತಲಿದ್ದೆ ಕಹಿಯಾದ ಕ್ಷಣಗಳನ್ನುಬರಡಾದ ಭೂವಿಗೆ ವರ್ಷಧಾರೆ ಬಂದಂತೆ ಹರ್ಷ ಮೆರೆಯುತಿದೆ ಗೆಳೆಯ ಪವಿತ್ರ ಪ್ರೇಮಕೆ ಆತಂಕಗಳು ಹೆಚ್ಚು ಕೊನೆಗೆ ಜಯ ಸಿಕ್ಕೇಸಿಗುವುದುಅಂತರಂಗದ ಖುಷಿಗೆ ಅಂತರಾತ್ಮದ ನಂದಾದೀಪ ಉರಿಯುತಿದೆ ಗೆಳಯ ಸರ್ವಸ್ವವೂ ನೀನೆ ಎಂದು ನಂಬಿದ್ದ “ನಂದೆ”ಗೆ […]

ಬಂಡಾರ ಬಳೆದ ಹಣಿ

ಕವಿತೆ ಬಂಡಾರ ಬಳೆದ ಹಣಿ ಡಾ.ಸುಜಾತಾ ಸಿ. ಬಂಡಾರ ಬಳೆದ ಹಣಿಬಾಯಿತುಂಬ ಎಲೆ ಅಡಿಕೆಜೋತು ಬಿದ್ದ ಗುಳಿ ಕೆನ್ಯೆಜಿಡ್ಡು ಗಟ್ಟಿದ ಜಟಾಧರಿಕೈ ತುಂಬಾ ಹಸಿರ ಬಳಿಎದೆ ತುಂಬಾ ಕವಡೆ ಸರಮೈ ತುಂಬಾ ಹಸಿರುಟ್ಟುಪಡಲಗಿ ಹಿಡಿದುಓಣಿ ಓಣಿ ತಿರುಗುವಳುಜೋಗತಿ ಎಂದು ಹೆಸರಿಟ್ಟುಕೂಗುವರೆಲ್ಲರೂಕತ್ತಲೆಯ ಬದುಕಲ್ಲಿಸದಾ ಬುಡ್ಡಿ ಚಿಮಣದಬೆಳಕಾಗಿಸಿ ಹಂಬಲಿಸಿಸೂರ್ಯನ ಬೆಳಕಿಗೆಜೋಗಕ್ಕೆ ಜೊಗತಿಊಧೋ ಉಧೋ ಎಂದುಹೋರಟಳು ಮಕ್ಕಳ ಸಲುವಲೆಂದುಕಂಡ ಕಣ್ಣು ಉರಿ ಕೆಂಡವಾಗಿಗೈಯ್ಯಾಳಿ ಎಂದುಕೊಟ್ಟುಬಿಟ್ಟರು ಪಟ್ಟವಒಣ ರೊಟ್ಟಿ ಜೊಳಕೆಕೈ ಚಾಚಿ ಜೋಳಿಗೆ ಬಾಯಿತೆರೆದಾಗ ಮೂಗು ಮುರಿಯುತ್ತಲೇಒಳಹೋದ ಹೆಣ್ಣುವಟಗುಟ್ಟಿ ತಂದಾಕಿದಹಳಸಲು ಜೊಳಿಗೆ ಬಟ್ಟೆಅವಳ […]

ಗಜಲ್

ಗಜಲ್ ಅರುಣಾ ನರೇಂದ್ರ ಬಾನು ಬಂಜೆಯಾಗಿದೆ ನಿಲ್ಲು ಮೋಡ ಕಟ್ಟಲಿ ನವಿಲಾಗಿ ಬಿಚ್ಚಿಕೊಳ್ಳುತ್ತೇನೆಭೂಮಿ ಬರಡಾಗಿದೆ ನಿಲ್ಲು ಸೋನೆಸುರಿಯಲಿ ಮಳೆ ಬಿಲ್ಲಾಗಿ ಬಿಚ್ಚಿಕೊಳ್ಳುತ್ತೇನೆ ಹಿಗ್ಗಿರದ ಮೊಗ್ಗಿನೆದೆಯಲಿ ಅದೆಂಥ ಕಠೋರ ಅಡಗಿದೆ ಸಜನಾನಗೆ ಮಿಂಚನ್ನೊಮ್ಮೆ ಮುಡಿಸು ತುಟಿ ಬಿರಿದು ಹೂವಾಗಿ ಬಿಚ್ಚಿಕೊಳ್ಳುತ್ತೇನೆ ಬಿಡಿಸಲಾಗದ ಬಂಧದ ಸಾವಿರಾರು ಎಳೆಗಳು ಸಿಕ್ಕುಗಟ್ಟಿವೆಒಂದೊಂದೇ ಗಂಟು ನಾಜೂಕಾಗಿ ಬಿಡಿಸು ಭಾವವಾಗಿ ಬಿಚ್ಚಿಕೊಳ್ಳುತ್ತೇನೆ ಧಗಧಗಿಸುವ ಬಿಸಿಲ ಝಳಕಿಂತ ಒಡಲ ಬೇಗೆಯೇ ಹೆಚ್ಚು ಸುಡುತ್ತಿದೆನೋವಿರಲಿ ಕಾವಿರಲಿ ಜೊತೆಗೆ ನೀನಿರಲು ಕೊಡೆಯಾಗಿ ಬಿಚ್ಚಿಕೊಳ್ಳುತ್ತೇನೆ ಕಾಲ ಮರೆವೆಂಬ ಮುಲಾಮು ಸವರಿ ಮನದ […]

ನೀಲ ಮೋಹ.

ಕವಿತೆ ನೀಲ ಮೋಹ. ನಂದಿನಿ ವಿಶ್ವನಾಥ ಹೆದ್ದುರ್ಗ ಪ್ರೀತಿ ನೆರೆನುಗ್ಗಿದಾಗೆಲ್ಲಾನಾನವನ ನಿನ್ನ ಹೆಸರಲ್ಲೇಕರೆಯುವೆ,ಬಲ್ಲೆಯಾ?ನನ್ನ ಉತ್ಕಟತೆಗೆ ಒದಗುತ್ತಿ ನೀನುಆಗಾಗ ಚಲುವ.ನವುರಾಗಿ ನಿನ್ನ ಉಸುರುವಾಗೆಲ್ಲಾಅಂಗುಲಂಗುಲದಲ್ಲೂಸಂಗಕ್ಕೆ ಅರಳುವಬಂಗಾರದ ಹೂವು ನಾನು. ಆಗೆಲ್ಲಾ ಬೆಚ್ಚಿ ಬೀಳುತ್ತಾನೆಇವನು.ಮತ್ತ ಮತ್ಸರದಲಿ ಪ್ರೇಮದ ಹೊಸಸಂವತ್ಸರ ಶುರುವಾಗುತ್ತದೆಇಲ್ಲಿ.ಬಿಗಿ ಕಳೆದುಕೊಂಡಿದ್ದ ನನ್ನಹಳೆಯ ಒಲವಿಗೆಸಿಹಿಹಗೆಯಿಂದಲೆ ಸೊಗ ನೀಡುತಾನೆಮತ್ತೆ. ಅಡಿಗಡಿಗೆ ಬಣ್ಣ ಬದಲಿಸುವನಭದ ಮೋಹನನೇನೆಲ ಮುಗಿಲ ಹೊಲೆಯುವಚತುರ ಚಮ್ಮಾರನೇನೇವರಿಕೆಯೂ ಇರದೆ ನೆನಪಿಗೇನಲುಗುವಾಗೆಲ್ಲಾನೀನಾರೆಂದು ತಿಳಿವ ಕುತೂಹಲನನಗೆ. ಅವಳಾರೋ ನಿತ್ಯ ಕನ್ನೆಬಿಚ್ಚಿ ಬಿಸುಟ ಸೀರೆಯೆನಿಸುತ್ತಿನಕಾಶೆ ನಕ್ಷೆ ಹೆಸರು ವಿಳಾಸವಿರದಊರೆನಿಸುತ್ತಿ.ಆಕಾರವಿರದ ಮಳೆಯ ತತ್ತಿಗಳಹೊತ್ತು ನಡೆವ ಬಟಾಬಯಲೆನಿಸುತ್ತಿ.ನೆಲದ ನೀರೆಲ್ಲಾ […]

ಯಾರಿಗೂ ನಾವು ಕಾಯುವುದಿಲ್ಲ

ಕವಿತೆ ಯಾರಿಗೂ ನಾವು ಕಾಯುವುದಿಲ್ಲ ನೂತನ ದೊ ಶೆಟ್ಟಿ ಕುಂಡದಿಂದೆದ್ದು ಚಿಗುರಿದ ಗಿಡದಲ್ಲಿಕಡುಕೆಂಪಾಗಿ ಜೀವ ತುಂಬಿಕೊಂಡಿತ್ತುಆ ಗುಲಾಬಿ ಹೂ ಎಳೆಯ ಹೊನ್ನ ಕಿರಣಗಳುಮಲಗಿದ್ದ ಇಬ್ಬನಿಗೊಂದುಹೂ ಮುತ್ತನಿಕ್ಕಿದಾಗನಾಚುತ್ತಲೇ ಸುಖಿಸಿತ್ತು. ಮುಳ್ಳುಗಳ ಸಂಗವೇಕೆಂದುದೂರ ನಿಂತಕರಗಳಿಗಾಗಿ ಕಾತರಿಸುತ್ತತಂಗಾಳಿಯಲಿ ತೂಗಿ ಸಂದೇಶ ಕಳಿಸಿತ್ತು ಏರಿದ ಬಿಸಿಲಲ್ಲಿ ಕಿರುಗಣ್ಣಾಗಿಈಗ ಬರಬಹುದೇ?ಕೇಳಿದ ಪ್ರಶ್ನೆಗೆಇಬ್ಬನಿಯ ನಿರುತ್ತರ ಹೊನ್ನ ಕಿರಣಗಳ ತೆಕ್ಕೆಯಲ್ಲಿಸೇರಿ ಹೋದ ಇಬ್ಬನಿಯ ಕಂಡುಗುಲಾಬಿಗೂ ತವಕಎಲ್ಲಿ ನನ್ನ ತಬ್ಬುವ ಕೈಗಳು ಬೆಳಕು ಕರಗಿದ ಸಂಜೆಯಲಿರಾತ್ರಿ ರಾಣಿಗಳು ನಕ್ಕು ಕೇಳಿದೆವುಏಕೆ ಕಾಯುವೆ? ಕಿರಣ, ಇಬ್ಬನಿ, ಸಂದೇಶಯಾರಿಗೂ ನಾವು ಕಾಯುವುದಿಲ್ಲಅರಳುತ್ತೇವೆ, […]

ಕೊಡವಿ ( ಕನ್ಯೆ )

ಕವಿತೆ ಕೊಡವಿ ( ಕನ್ಯೆ ) ಭಾಮಿನಿ ಷಟ್ಪದಿ ಅಭಿಜ್ಞಾ ಪಿ ಎಮ್ ಗೌಡ ಕೊಡವಿ ಕಂಗಳ ಕಾಂತಿ ಹೆಚ್ಟುತಬಡವಿ ಹೆಣ್ಣಲಿ ಕಾಶ ತುಂಬಿದೆನಡುವೆ ನೊಸಲದ ನಲಿವ ಹೆರಳದು ನಿತ್ಯ ಜೀಕುತಿದೆಕೊಡುಗೆ ನೀಡುವ ಮನದ ಬಿಂಬದಿಗಡನೆ ಹೊಳೆಯುವ ಹೃದಯ ಸಾಕ್ಷಿಯುಜಡಿಪ ಕೂಜನ ಕಂಪಿನಲೆಯಲಿ ಕುಣಿದು ಜಿಗಿಯುತಿದೆ|| ಮೊಗದ ಭಾಷೆಯು ಕೂಗಿ ಹೇಳಿದೆನಗುವ ಮನಸಿನ ನೂರು ಭಾವವಮಗುವ ಮುಗ್ದತೆ ಮೀರಿ ನಿಂತಿದ ಭವ್ಯ ಕೌಮಾರಿಜಗದ ಚೆಲುವದು ತುಂಬಿ ಕೊಂಡಿದೆಗಗನ ಚುಂಬಿತ ವೃಕ್ಷ ರಾಶಿಯುಸುಗುಣ ಸದ್ಗುಣಿ ನಿತ್ಯ ಶೋಭಿತ ಚೆಲ್ವಿ […]

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಪರಿಶ್ರಮದಿಂದ ನೆಲಕೆ ಉದುರಿದ ಬೆವರ ಮುತ್ತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ಕಾಲಗರ್ಭದಲ್ಲಿ ಕರಗಿಹೋಗುವ ಬದುಕಿನ  ಚಿತ್ರಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ನಗರಗಳ ತುಂಬಾ ಇರುಳಾದರೆ ಸಾಕು ಬಗೆ ಬಗೆಯ ಭಾವಗಳ ವೇಷಗಳ ಕುಣಿತ ಮಣಿತ ಬೆಳಕಿನಲಿ ವಿನಾಕಾರಣ ಸೋರಿಹೋಗುವ ಕ್ಷಣಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಬೀದಿಯ ಬದಿಯಲ್ಲಿ ಖಾಲಿ ಪಾತ್ರೆಯಂಥ ಹೊಟ್ಟೆ  ಖಾಲಿ ತಟ್ಟೆಯಂಥ ಕಣ್ಣುಗಳು ಸಿರಿತನದ ಸೊಕ್ಕಿನಲಿ ಚೆಲ್ಲಿದ ಅನ್ನದ ಅಗುಳುಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಮಸಣದಂತಹ ಖಾಲಿ ಎದೆಯಲಿ ಮಿಡಿತವೊಂದನ್ನು ಬಿಟ್ಟು […]

ಹಾಯ್ಕುಗಳು

ಕವಿತೆ ಹಾಯ್ಕುಗಳು ಭಾರತಿ ರವೀಂದ್ರ 1) ಲಾಸ್ಯ ಬುವಿ ಮೊಗದಿಚಿಗುರೊಡೆದ ಲಾಸ್ಯಮೇಘ ಮಿಂಚಲು. 2) ಸಾಕ್ಷಿ ಕಣ್ಣಂಚು ಹನಿ :ಬಿಕ್ಕಲು, ಬಿಟ್ಟು ಹೋದನೆನಪು ಸಾಕ್ಷಿ. 3) ಸತ್ಯ ಕತ್ತಲು ಭ್ರಮೆಸುಳ್ಳಿನ ಕನ್ನಡಿಗೆಬೆಳಕು ಸತ್ಯ. 4) ಮಲ್ಲಿಗೆ ಮಾತು ಮಲ್ಲಿಗೆಸುಗಂಧದ ಸೊಗಸುನುಡಿ ಸಂಗೀತ 5) ಸೋನೆ ನೆನಪು ಸೋನೆ:ಕಣ್ಣು ಹಸಿ ಯಾಗಿಸಿಹೃದಯ ಒದ್ದೆ. *************************

ಯಾರು ಬಂದರು

ಕವಿತೆ ಯಾರು ಬಂದರು ಡಾಲಿ ವಿಜಯ ಕುಮಾರ್.ಕೆ.ವಿ. ಯಾರು ಬಂದರು ಸಖಿಯೇಎಲ್ಲಿ ಹೋದರು…. ಬೆಳ್ಳಿ ಬೆಳಕು ಬರುವ ಮುನ್ನಮಲ್ಲೆ ಮುಡಿಸ ಬಂದರು.ರಾಶಿ ಹಿಮದ ತಂಪು ಸುರಿದುಮುತ್ತ ಎರಚಿ‌ ಹೋದರು. ಪಚ್ಚೆ ಹಸಿರ ಸೀರೆಯುಡಿಸಿಬೆಟ್ಟಬಯಲೆ ಕುಚ್ಚವೂಶರಧಿಯಗಲ ಸೆರಗ ಹೊದಿಸಿಮೈಯಮುಚ್ಚಿ ಹೋದರು. ಅಡವಿಯೊಳಗೆ ತೊಟ್ಟಿಲಿಟ್ಟುಒಲವ ತೂಗ ಬಂದರು.ನಭದ ನೂಲು ಇಳೆಗೆ ಇಳಿಸಿನಲ್ಲೆ ಮುಟ್ಟಿ ಹೋದರು. ಅಲ್ಲಿ ಯಾರೋ ಕಂಡ ಹಾಗೆಕರಗಿ ನದಿಯ ತಂದರು.ಇಲ್ಲಿ ಯಾರೋ ಕೂಗಿದಾಗೆಜಲಧಿಯೊಳಗೆ ಹೋದರು. ಬಿದಿರಕೊಳಲ ಶ್ಯಾಮನೇನೆರಾಧೆ ನಿದಿರೆ ಕದ್ದವ.ಗರಿಯ ಮುಡಿದ ಗೊಲ್ಲನೇನೆನಿನ್ನ ಕಂಡು ಹೋದವ… ***************************************************

ಅಭಿವ್ಯಕ್ತ

ಕವಿತೆ ಅಭಿವ್ಯಕ್ತ ವೀಣಾ ರಮೇಶ್ ನೀನು ಅನುಭವನಾನು ಅನುಭಾವವಾಗಿನೀನು ವ್ಯಕ್ತ,ನಾನು ಅಭಿವ್ಯಕ್ತವಾಗಿನನ್ನ ಏಕಾಂತದಲ್ಲೂನೀ ಕಾಂತವಾಗಿ ಮಾತು ಬೆತ್ತಲೆಯಾಗಿಮೌನ ಕತ್ತಲೆಯ ಪ್ರತಿಶೂನ್ಯದಲ್ಲೂ ನನ್ನಾವರಿಸಿಮೌನ ಬಗೆದುದಿಗಂತ ದೆತ್ತರಕ್ಕೂಸವಿ ಮಾತಿನ ಮೆಟ್ಟಿಲಾಗಿರುವೆ ಬಿರುಬಿಸಿಲoತೆ ವಿರಹದನಿನ್ನುಸಿರು ಸುಟ್ಟರೂಮಳೆಯಾಗಿ ನಾನು ಇನ್ನಷ್ಟೂ ಸುರಿದುಒಂದಿಷ್ಟು ನನ್ನುಸಿರು ಸೇರಿಸಿ ಕವಿದ ಮೋಡ ದೊಳಗೆ..ನನ್ನ ಮುಚ್ಚಿದರೂಹಾಲುನಗುವಿಗೂ ಬಿಳಿಮುಗಿಲು ಮೆಚ್ಚಿದರೂ,ತಿಂಗಳ ಬೆಳಕುವಿರಮಿಸದಂತೆ ಚಂದ್ರಮನಂತೆ ನಿನ್ನ ಇಡಿಯಾಗಿತುಂಬಿ ಕೊಳ್ಳುವೆ ನಿನ್ನೊಲುಮೆಗೆ ಆಲಾಪವಾಗಿಅಧೀತ ಪ್ರೀತಿಗೆ ಅನುರಾಗವಾಗಿನಾ ರಾಗವಾಗಿಅತೀತವಾಗಿರುವೆ *********************************

Back To Top