Category: ಕಾವ್ಯಯಾನ

ಕಾವ್ಯಯಾನ

ಬಚ್ಚಿಟ್ಟಿರುವೆ

ಕಾವ್ಯ ಸಂಗಾತಿ ಬಚ್ಚಿಟ್ಟಿರುವೆ ಲಕ್ಷ್ಮಿ ಕೆ ಬಿ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಮಳೆ ಚಳಿಗೆನಡುಗದಂತೆಉರಿಬಿಸಿಲಿಗೆ ಒಣಗದಂತೆ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಸದಾ ನಗುವಕಾಮನಬಿಲ್ಲಿನ ಬಣ್ಣಮಾಸದಂತೆ ಹೊಳೆವ ನಿನ್ನಕಂಗಳ ಚೆಲುವುಮರೆಯಾಗದಂತೆ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಜಗದ ಬಂಧಮುಗಿಸೋ ಗಳಿಗೆಯಲ್ಲೂಜೊತೆ ನಡೆವಂತೆ ಅಣಿಮಾಡಲು ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ….ಒಲವಿಂದ….

ಉತ್ತರ ಹೇಳು ಸಖ

ಕಾವ್ಯ ಸಂಗಾತಿ ಉತ್ತರ ಹೇಳು ಸಖ ಶಂಕರಾನಂದ ಹೆಬ್ಬಾಳ ನಿಬಿಡಾರಣ್ಯದಲಿಒಬ್ಬಂಟಿ ನಾನುಬೋಳು ಮರದಂತೆ,ನಿಶ್ಚಲ ಭಾವವಿಷಣ್ಣತೆಯಲಿಗೊಣಗುತಿರುವೆ… ಜಾರಿದ ಸಮಯಕ್ಕೂಗೊತ್ತಾಗಲಿಲ್ಲವೆ..?ಉಳಿದ ನೆನಪುಗಳುತೊಗಲು ಬೊಂಬೆಯಂತೆಥೈತಕ ಕುಣಿಯುತ್ತಿವೆ…. ಬೇಗೆಯಲಿ ದಿಗ್ಗನೆದ್ದುಬಂದಂತೆ ಭಾಸವಷ್ಟೆನಿಂತ ಜಾಗ ಕುಸಿದಂತೆಕೊಂಚ ಅಳುಕುಎದ್ದು ಕುಳಿತೆಬುದ್ದನಂತೆಶಾಂತಿಯಿಲ್ಲದೆ… ಈಗ ಹೊರಟಿದ್ದೇನೆಧ್ರುವಕೆ ವಿಮುಖನಾಗಿ“ದಾರಿಯಾವುದಯ್ಯಾವೈಕುಂಠಕೆ ಎಂದು”ದಾಸ ಮಾರ್ಗವನುಹಿಡಿದು,ಸತ್ಯವನರಸಿಮೋಕ್ಷಾಪೇಕ್ಷಿಯಾಗಿಅಲೆವ ಯೋಗಿನಂತೆನಡೆದಿದ್ದೇನೆ ದಿನದಿನಗಳ ಸವೆಸಿಸವೆದ ಚಪ್ಪಲಿಯಾಗಿದ್ದೇನೆ…. ದುಗುಡವಾವರಿಸಿದುಃಖದೊಳು ತೇಲಿಪರಿಹಾರವಿಲ್ಲದಫಲಾನುಭವಿ ನಾನುಉತ್ತರವೆಲ್ಲಿದ ಸಖನನ್ನ ಮನದ ಪ್ರಶ್ನೆಗೆ….?

ಲೇಖನಿ

ಕಾವ್ಯ ಸಂಗಾತಿ ಲೇಖನಿ ಅನಿತಾ ಸಿಕ್ಕಿತೊಂದು ಜಾದೂ ಲೇಖನಿಹಣೆಬರಹ ಅಳಿಸಿ, ಮತ್ತೊಮ್ಮೆ ಬರೆಯಬಹುದಿತ್ತು, ಆ ವಿಧಾತನ ದನಿ ಅಳುಬರಹ ಒರೆಸಿನೋವು, ನಲಿವಾಗಿಸಿ ಬದುಕುಬದಲಾಯಿಸಬೇಕೆಂದಿತುಆಕಾಂಕ್ಷೆಯ ತಾಸು! ಸಿರಿವಂತಿಕೆ, ಬಡತನದ್ವೇಷ, ಪ್ರೀತಿ, ಮೇಲು ಕೀಳುಕಣ್ಮುಂದೆ ಹಾದುಹೋಗುತ್ತಿತ್ತುಅಂತರಾಳದ ಕನಸು! ರವಿವರ್ಮನ ಕುಂಚದ ಬಣ್ಣತುಂಬಿ, ನವಿರಾದ ಎಳೆಗಳಿಗೆರಂಗುರಂಗಿನ ಹೊಸತನಮೂಡಿಸುವ ಹುಮ್ಮಸ್ಸು! ಅವೇನು ಕಠಿಣ ಕಾರ್ಯವಾಗಲಿಲ್ಲಜೀವ, ಜೀವಂತಿಕೆಯ ಒಳಗೆಮಾರ್ಪಾಟಾಗಿತ್ತು ಹಲವು ಮಜಲು! …. ಆಯಸ್ಸು ಮೆಟ್ಟಿಲೊಳಗೆ ಇಳಿಯಲಾಗದೆಸಾವಿನ ಕ್ಷಣ ಮುಂದೂಡಲಾಗದೆ…

ಮಿಥ್ಯ ಸತ್ಯ…

ನಾನು ನೀನಿನ ಎರಡು ತಂತಿಗಳು ಪಸರಿಸಿ
ಹರಿದು ಮೀಟಿ ಪದೇಪದೇ ಜೋಡಿಸಿ
ಸಾವಿರಾರು ತಂತಿಗಳ ನಾದ ಭಾವ ಕಲರವ
ನಾನು ನೀನು ಮಿಥ್ಯ ನಾವು ನಮ್ಮ ಭಾವ

ಗಜಲ್

ಗಜಲ್ ನಯನ. ಜಿ. ಎಸ್ ನಗುತಿಹ ಕಂಗಳ ಹಿಂದಿಹುದು ಕಡು ನೋವುಗಳು ಬಲ್ಲವರು ಯಾರುಅರಳು ತುಟಿಗಳೊಡಲಿನ ನೊಂದ ಮಾತುಗಳ ಆಲಿಸುವವರು ಯಾರು ! ನಕ್ಕಾಗ ನಗುತ , ನೊಂದಾಗ ಮೌನದಿ ಅತ್ತು ದಣಿಯುತ್ತಿದೆ ಮನಸ್ಸುಮನವ ಹಿಂಡುತಿದೆ ವ್ಯಂಗ್ಯಗಳ ಹಿಂಸೆ ಇದ ಅಳೆಯುವವರು ಯಾರು ! ನಿಶೆಯ ನಶೆಗೂ ಮರೀಚಿಕೆ ಆದಂತಿದೆ ಸುಖ ಸ್ವಪ್ನಗಳ ಸಿಹಿಯಾದ ನಶೆನೀರವ ಕ್ಷಣಗಳನೂ ಭೀತಿಗೊಳಿಸುತಿದೆ ಅಳಲು ಅರಿಯುವವರು ಯಾರು ! ಆಶೆಗಳ ಕನಸು ಹುಸಿಯಾಗುತಿದೆ ಕಪಟಿಗರ ಕ್ರೌರ್ಯದಿ ನಲುಗಿ ಕೊರಗಿಮನದ ತುಮುಲಗಳು ತಾರಕಕ್ಕೇರಿದೆ […]

ಅನುವಾದಿತ ಅಬಾಬಿಗಳು

ವಾಸ್ತವವಾಗಿ ಅನ್ಯಾಯವು ಓಡುತ್ತಿದೆ
ಹಕೀಮಾ
ನ್ಯಾಯವು ಕೋರ್ಟಿನಲ್ಲಿ ಕುಸಿದುಬಿದ್ದಿದೆ

Back To Top