ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲೇಖನಿ

ಅನಿತಾ

ಸಿಕ್ಕಿತೊಂದು ಜಾದೂ ಲೇಖನಿ
ಹಣೆಬರಹ ಅಳಿಸಿ, ಮತ್ತೊಮ್ಮೆ ಬರೆಯಬಹುದಿತ್ತು, ಆ ವಿಧಾತನ ದನಿ

ಅಳುಬರಹ ಒರೆಸಿ
ನೋವು, ನಲಿವಾಗಿಸಿ ಬದುಕು
ಬದಲಾಯಿಸಬೇಕೆಂದಿತು
ಆಕಾಂಕ್ಷೆಯ ತಾಸು!

ಸಿರಿವಂತಿಕೆ, ಬಡತನ
ದ್ವೇಷ, ಪ್ರೀತಿ, ಮೇಲು ಕೀಳು
ಕಣ್ಮುಂದೆ ಹಾದುಹೋಗುತ್ತಿತ್ತು
ಅಂತರಾಳದ ಕನಸು!

ರವಿವರ್ಮನ ಕುಂಚದ ಬಣ್ಣ
ತುಂಬಿ, ನವಿರಾದ ಎಳೆಗಳಿಗೆ
ರಂಗುರಂಗಿನ ಹೊಸತನ
ಮೂಡಿಸುವ ಹುಮ್ಮಸ್ಸು!

ಅವೇನು ಕಠಿಣ ಕಾರ್ಯವಾಗಲಿಲ್ಲ
ಜೀವ, ಜೀವಂತಿಕೆಯ ಒಳಗೆ
ಮಾರ್ಪಾಟಾಗಿತ್ತು ಹಲವು ಮಜಲು!

…. ಆಯಸ್ಸು ಮೆಟ್ಟಿಲೊಳಗೆ ಇಳಿಯಲಾಗದೆ
ಸಾವಿನ ಕ್ಷಣ ಮುಂದೂಡಲಾಗದೆ…


About The Author

Leave a Reply

You cannot copy content of this page

Scroll to Top