ಕವಿತೆ ನಕ್ಕಿತು

ಕವಿತೆ ನಕ್ಕಿತು

ಕನ್ನಡಿ ಹಿಡಿದೆ
ಕವಿತೆ ಪಕಪಕ ನಕ್ಕಿತು
ನನಗೆ ಕನ್ನಡಿಯ
ಹಂಗೇ ಎಂದು
ಮುಖ ತಿರುಗಿಸಿತು

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—18 ಆತ್ಮಾನುಸಂಧಾನ ಆಡುಂಬೊಲದಿಂದ ಅನ್ನದೇಗುಲಕ್ಕೆ! ನಾಡು ಮಾಸ್ಕೇರಿಯಲ್ಲಿ ಕಳೆದ ಪ್ರಾಥಮಿಕ ಶಿಕ್ಷಣದ ಕಾಲಾವಧಿ ಹಲವು ಬಗೆಯ ಜೀವನಾನುಭವಗಳಿಗೆ ಕಾರಣವಾಯಿತು. ಕೇರಿಯ ಯಾವ ಮನೆಯಲ್ಲಿ ಯಾರೂ ಹೊಟ್ಟೆ ತುಂಬ ಉಂಡೆವೆಂಬ ಸಂತೃಪ್ತಿಯನ್ನು ಕಾಣದಿದ್ದರೂ ಅಪರಿಮಿತವಾದ ಜೀವನೋತ್ಸಾಹಕ್ಕೆ ಕೊರತೆಯೆಂಬುದೇ ಇರಲಿಲ್ಲ. ಅಸ್ಪ್ರಶ್ಯತೆಯ ಬಗ್ಗಡವೊಂದು ಜಾತಿಗೇ ಅಂಟಿಕೊಂಡಿದ್ದರೂ ಅದನ್ನು ಅಷ್ಟೊಂದು ಗಂಭೀರವಾಗಿ ನಾವೆಂದೂ ಪರಿಗಣಿಸಲಿಲ್ಲ. ಊರಿನ ದೇವಾಲಯಗಳಿಗೆ ಹೋದರೆ ಕಂಪೌಂಡಿನ ಆಚೆಯೇ ನಮ್ಮ ನೆಲೆಯೆಂಬ ಅರಿವು ಮಕ್ಕಳಾದ ನಮಗೂ ಇತ್ತು. ಚಹಾದಂಗಡಿಗಳಲ್ಲಿ ಬೇಲಿಯ […]

ಪದಗಳು

ಲೇಖನ ಲಾವಣಿಪದ /ಗೀಗೀಪದ ಶಾಲಿನಿ ಆರ್. ಜನಪದ ಕಾವ್ಯದ ಕಥಾತ್ಮಕ ಭಾಗವನ್ನು ಕುರಿತದ್ದಾಗಿದೆ ಲಾವಣಿ/ ಗೀಗೀಪದಗಳು. ಲಾವಣಿ/ ಗೀಗೀಪದಗಳು ಮುಖ್ಯವಾಗಿ ಒಂದು ಹಾಡ್ಗತೆ. “ಕಥೆ ಹೇಳುವ ಗೀತೆ ಅಥವಾ ಗೀತೆಯಲ್ಲಿ ಹೇಳಿದ ಕಥೆ”. ಇವು ಕ್ರಿಯೆಯ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಕ್ರಿಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸುತ್ತದೆ. ಕ್ರಿಯೆ ಸಾಮಾನ್ಯವಾಗಿ ವಸ್ತುವಿನ ಸ್ವರೂಪದ್ದಾಗಿರುತ್ತದೆ. ಹಾಗೆಯೇ, ಇವುಗಳಲ್ಲಿ ಸರಳತೆ ಸಹ ಒಂದು ಅಂಶವಾಗಿದೆ. ಈ ಪದಗಳಲ್ಲಿ/ ಹಾಡುಗಾರಿಕೆಯಲ್ಲಿ ಏಕ ಘಟನೆಯ ಮೇಲೆ ನಿಂತಿದೆ ಎಂಬುದು ಇನ್ನೊಂದು ಲಕ್ಷಣ. […]

ಸಾವಿನಂಚಿನ ಕನಸು

ಕ಼ಣದ ಕಣ್ಣು ಕಂಡಿದ್ದು
‘ಥೇಟ್’ಅಜ್ಜಿ ಹೇಳಿದ
‘ಚೌಡಿ’ಯೋ…’ಹಬ್ಸಿ’ಯೋ..
ಅಲ್ಲಲ್ಲ…ಯಕ಼ಗಾನದ
ರಾಕ಼ಸಿ..

ಹೊಸಬರ ಎರಡುಕವಿತೆಗಳು

ಕವಿತೆ ವೈಷ್ಣವಿ ವಿನಯ್ ತಾಯಿ ಪ್ರತಿ ಹೆಣ್ಣಿನಲ್ಲೂ ಮಾತೃತ್ವಪ್ರೀತಿ ಇರುವುದುಕಷ್ಟಗಳನ್ನು ಮರೆತುಮಕ್ಕಳ ಸುಖ ಕಾಣುವಳು!!! ಕರುಳಿನ ಬಳ್ಳಿಯ ಸೃಷ್ಟಿಕರ್ತೆ ಅಮ್ಮಕಲ್ಪವೃಕ್ಷವಾಗಿ ನಿಂದಿಹಳು ಅಮ್ಮಹೊತ್ತು ಹೆತ್ತ ತಾಯಿಯನ್ನುಎಂದೆಂದು ಸ್ಮರಿಸಬೇಕು!!! ಅಳುವ ಕಂದನ ಕೊರಳಿನ ಧ್ವನಿಯಲ್ಲಿಮಧುರ ನುಡಿಯ ಸಿಂಚನದಲ್ಲಿಜೋಗುಳ ಹಾಡಿದತ್ಯಾಗ ಮೂರ್ತಿ “ಅಮ್ಮ”!!! ******************************* ನಗು ನಗುತಿರು ನೀನುನಗಿಸುತಿರುವೆ ನಾನುಆರೋಗ್ಯದ ಗುಟ್ಟು ನಗುಅಲಂಕಾರ ಎಷ್ಟಿದ್ದರೇನುನಗುತ ನಗಿಸುತ ಬಾಳೋಣ!!! ಚೆಲುವೆಯ ಮುಗ್ದ ನಗುವಿಗೆನಗಲು ಬೇಕಿಲ್ಲ ಕಾರಣನಗು ತುಂಬಿರಲಿ ಹೂವಿನ ಸುಗಂಧದಂತೆಅರಳಿದ ಗುಲಾಬಿ ಹೂವಿನಂತೆನಗುವೇ ನಿಮ್ಮ ಮೊಗದ ಆಭರಣವಾಗಲಿಸದಾ ನಗುವನ್ನು ಸ್ವಾಗತಿಸಲುಜಗವು ಕಾಯುತ್ತಿದೆ […]

ನೆನಪೊಂದು ರಮಿಸುತ್ತದೆ.

ರಾಜೇಶ್ವರಿ ಎಂ.ಸಿ.ಅವರ ಕವಿತೆ-

ಈ ಊರಿನ ಸಂದಣಿಯಲಿ
ಭರಪೂರ ಕೊಚ್ಚಿಹೋದ ನನ್ನ,
ನೆನಪೊಂದು ರಮಿಸುತ್ತದೆ.

ಮುಟ್ಟು .. ಮುಟ್ಟು.. ಮುಟ್ಟು..

ವಿಶೇಷ ಲೇಖನ ಮುಟ್ಟು .. ಮುಟ್ಟು.. ಮುಟ್ಟು.. ಚಂದ್ರಪ್ರಭ ನಮ್ಮ ಬಾಲ್ಯ ಕಾಲಕ್ಕಿಂತ ಈಗ ಸ್ವಲ್ಪ ಮಟ್ಟಿಗೆ ಧೋರಣೆಗಳು ಬದಲಾಯಿಸಿದಂತೆ ತೋರುವುದಿದೆ. ಆಗ ಅದನ್ನು ಕುರಿತು ಹೆಣ್ಮಕ್ಕಳು ತಮ್ಮ ತಮ್ಮಲ್ಲಿಯೂ ಮುಕ್ತವಾಗಿ ಮಾತನಾಡಲು ಹಿಂಜರಿಕೆಯಿತ್ತು. ಆಗ ಆ ಸಂಗತಿ ಮಕ್ಕಳು, ಇತರರ ತಿಳಿವಳಿಕೆಗೆ ಬರುವ ಸಂಭವನೀಯತೆ ಇದ್ದುದು ತೀರ ಕಡಿಮೆ. ತರಗತಿಯಲ್ಲಿ ಅಂಡಾಣು, ವೀರ್ಯಾಣು, ಗರ್ಭಧಾರಣೆ, ಋತುಚಕ್ರಗಳ ಕುರಿತು ಇದ್ದ ಅಧ್ಯಾಯವನ್ನು ಮಕ್ಕಳೆದುರು ಪಾಠ ಮಾಡಲು ಶಿಕ್ಷಕಿಯರೇ ಹಿಂದೇಟು ಹಾಕುತ್ತಿದ್ದುದನ್ನು ನಾನು ಹತ್ತಿರದಿಂದ ನೋಡಿರುವೆ. ಅದೊಂದು ನಿಸರ್ಗ […]

Back To Top