ಹಾವೇ.

ವಚನಚಳುವಳಿಗೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಸ್ಥಾನವಿದೆ. ವಚನಗಳಲ್ಲಿ ಆಡಿದ, ಸಾರಿದ, ಸಾಧಿಸಿ ತೋರಿಸಿದ ಮೌಲ್ಯಗಳು ಕೇವಲ ಘೋಷಣೆಗಳಾಗದೆ ನಡೆ ನುಡಿಯಲ್ಲಿ ಒಂದಾಗಿ ಏಕವನ್ನು ಸ್ಥಾಪಿಸಿದ ಕಾರಣದಿಂದ ವಚನಕಾರರು ಈ ನೆಲದಲ್ಲಿ ಮಾನ್ಯ ಮತ್ತು ಮುಖ್ಯರಾಗುತ್ತಾರೆ.

ಪ್ರೇಮಪತ್ರ ಸ್ಪರ್ದೆ

ಪ್ರೇಮಪತ್ರ ಸ್ಪರ್ದೆ ಪಂಜು ಅಂತರ್ಜಾಲ ವಾರಪತ್ರಿಕೆ ವತಿಯಿಂದ 2021 ರ ಪ್ರೇಮ ಪತ್ರ ಸ್ಪರ್ಧೆಗೆ ನಿಮ್ಮ ಪ್ರೇಮ ಪತ್ರಗಳನ್ನು ಆಹ್ವಾನಿಸಲಾಗಿದೆ. ನಿಯಮಗಳು: ಪ್ರೇಮ ಪತ್ರ ನಿಮ್ಮ ಸ್ವಂತ ಬರಹವಾಗಿರಬೇಕುಕನಿಷ್ಟ 500 ಪದಗಳ ಬರಹವಾಗಿರಬೇಕುಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು.ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರೇಮ ಪತ್ರ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು […]

ಅಂಕಣ ಬರಹ ವಸಂತ ಬಂದ! ರಂಗಕ್ಕೆ ರಂಗು ತಂದ!! ವೈಶಾಲಿ ನಗರದ ಬೀದಿ. ವೈಭವದ ಅರಮನೆ. ಅದು ರಾಜನ ಅರಮನೆಯಲ್ಲ. ನಗರದ ಮುಖ್ಯ ನೃತ್ಯಗಾರ್ತಿ,ರಾಜನರ್ತಕಿ ಆಮ್ರಪಾಲಿಯ ಮನೆ. ಆಮ್ರಪಾಲಿ ಚಿಗುರು ಮಾವಿನ ತಳಿರಂತಹವಳು. ಅವಳ ಸೌಂದರ್ಯದ ಕಥನ ಕೇಳಿ ನೆರೆ ಹೊರೆಯ ರಾಜರೂ, ರಾಜಕುಮಾರರೂ ಬಂದಿದ್ದಾರೆ. ಅವಳ ಪ್ರೇಮ ಭಿಕ್ಷೆಗಾಗಿ ಹೊರಬಾಗಿಲಲ್ಲಿ ಸರದಿಯಲ್ಲಿ ಕಾಯುತ್ತಿದ್ದಾರೆ. ಆಕೆ ಒಳಗಡೆ ಇದ್ದಾಳೆ, ಪ್ರಣಯದ ತುರೀಯದ ಅಮಲಲ್ಲಿ. ಆದರೂ ಅದೇನೋ ಬೇಸರ. ಅವಳನ್ನು ಆವರಿಸಿದೆ. ಎಲ್ಲವೂ ಇದ್ದರೂ ಏನೋ ಕೊರತೆ. ತಳಮಳ.  […]

ಕೂಸು

ಕವಿತೆ ಕೂಸು ಎಂ. ಆರ್. ಅನಸೂಯ ತಾಯೊಡಲ ಹಸುಳೆಯೊಂದುಅನಾಮಧೇಯನಾಗಿ ಭುವಿಗಿಳಿಯಿತುಮುಕ್ತ ಮನದಮುಗ್ಧ ಕೂಸಾಗಿ ಮಡಿಲ ತುಂಬಿತು ಹುಟ್ಟುಡುಗೆಯ ಕೂಸಿಗೆಜಾತಿಯ ವಸ್ತ್ರ ತೊಡಿಸಿದೆವುಮುಗ್ಧ ನಗೆಯ ಮುದ್ದು ಮೊಗದಹಣೆಗೆ ಧರ್ಮದ ತಿಲಕವಿಟ್ಟೆವುನಿದ್ರೆಯಲಿ ನಗುವ ಮುದ್ದು ಮಗುವಅಂತಸ್ತಿನ ತೊಟ್ಟಿಲಲ್ಲಿ ತೂಗಿದೆವು ********************************

ಹೇಗಾಯಿತು ಹೊಸ ವರುಷ

ಕವಿತೆ ಹೇಗಾಯಿತು ಹೊಸ ವರುಷ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಚುಕ್ಕಿಗಳು ಕರ್ರಗಾದವೆ?ಹಕ್ಕಿಗಳು ಬೆರಗಾದವೆ?ಕತ್ತಲೆ ಥಳಥಳ ಹೊಳೆಯಿತೆ?ಬೆಳಕು ಉಮ್ಮಳದಿ ಅದುರಿತೆ?ಮೂಡಿತೇಗೆ ಹೊಸ ವರುಷ? ನೆತ್ತರು ಬಿಳಿಯಾಯಿತೆ?ಸತ್ತವರೆದ್ದು ಕುಳಿತರೆ?ಎಲೆ ಉದುರಿ ತಲೆ ಸವರಿತೆ?ಕೋಗಿಲೆ ನೇಗಿಲು ಹೂಡಿತೆ? ಬದುಕುಗಳು ಭವಣೆಗೆ ಮಿಕ್ಕವೆ?ಕೆದಕುಗಳು ಎಣಿಕೆಗೆ ಸಿಕ್ಕವೆ?ಕಳೆದ ಘಳಿಗೆ ಎದೆ ಹೊಕ್ಕಿತ್ತೆ?ಜಗದ ನಗು ಮುಗಿಲ ನೆಕ್ಕಿತೆ?ಮೂಡಿತೇಗೆ ಹೊಸ ವರುಷ? ಬೈಬಲ್ ಕಥೆ ಹೊನ್ನಾಯಿತೆ?ಕುರಾನ ನುಡಿ ಭಿನ್ನವಾಯಿತೆ?ಭಗವದ್ಗೀತೆ ಕಣ್ಣಾಯಿತೆ?ಮೂಡಿತೇಗೆ ಹೊಸ ವರುಷ? ಬಡವರ ಕೊರಗು,ಹೂವಾಯಿತೆ?ಹಸಿದ ಕೂಸು ನಕ್ಕಾಡಿತೆ?ನದಿಯ ಹರಿವು,ಕುದಿತವಾಯಿತೆ?ಗಾಳಿಯ ತುದಿ ಕಣ್ಣಿಗೆ ಕಂಡಿತಾ?ಮೂಡಿತೇಗೆ ಹೊಸ ವರುಷ? […]

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-10 ಆತ್ಮಾನುಸಂಧಾನ ಬನವಾಸಿಯಲ್ಲಿ ನೋವಿನ ನೆನಪುಗಳು ಬಾಲ್ಯದ ನಾಲ್ಕು ವರ್ಷಗಳನ್ನು ಬನವಾಸಿಯಲ್ಲಿ ಕಳೆಯುವ ಅವಕಾಶ ದೊರೆತದ್ದು ನನ್ನ ಬದುಕಿನಲ್ಲಿ ಒದಗಿ ಬಂದ ಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಅತ್ಯಂತ ಆಪ್ತ ಸ್ನೇಹಿತರಾಗಿ ದೊರೆತ ಮುಖೇಶ್ ಕುಚಿನಾಡ, ಸೊಮಶೇಖರ ಒಡಿಯರ್, ಅಶೋಕ ಪಾಳಾ, ಸೆಂಟ್ರಲ್ ಕೆಫೆಯ ಸದಾನಂದ ಶೆಟ್ಟಿ, ಕಿರಾಣಿ ಅಂಗಡಿಯ ಸಚ್ಚಿದಾನಂದ ಮೂಡ್ಲಗಿರಿ ಶೆಟ್ಟಿ ಮುಂತಾದ ಗೆಳೆಯರ ಒಡನಾಟದಲ್ಲಿ ಅತ್ಯಂತ ಮಧುರವಾದ ಅನುಭವಗಳು ನನಗೆ ದಕ್ಕಿವೆ. ಈ ಗೆಳೆಯರೆಲ್ಲ ಆಟ ಪಾಠ […]

ಮುಖವಾಡದ ಬದುಕು

ಕವಿತೆ ಮುಖವಾಡದ ಬದುಕು ರೇಷ್ಮಾ ಕಂದಕೂರು ಎಲ್ಲೆಲ್ಲೂ ಮುಖವಾಡದ ರಾರಾಜಿಸುವಿಕೆಎತ್ತ ನೋಡಿದರತ್ತ ಆಸೆ ಆಮಿಷ ದ ಸುಳಿಹೊರಬರಲು ಹೆಣಗುವ ಜೇಡನಂತೆಕರುಬುವರೂ ತಟಸ್ಥವಾಗಿಹರು ನಾನು ಮೊದಲಿನಂತಿಲ್ಲಗೊಂದಲದ ಗೂಡಿನಡಿ ನನ್ನ ಸೂರುಅನಿವಾರ್ಯತೆ ಬದುಕಿಗೆಸುಖ ಮಾತ್ರ ಬೇಕೆಂಬ ಅಹವಾಲು ಹಿಯಾಳಿಸುವ ಕೊಂಕು ನುಡಿಬೆನ್ನಿಗೆ ಇರಿಯಲು ಸರತಿ ಸಿಲುತೃಪ್ತಿಯಂತೂ ಹೊಸ್ತಿಲು ಆಚೆಕೃತಕತೆಯ ನಗುಮಾತ್ರ ಎದ್ದು ನಿಂತಿದೆ ತುಳಿಯುದಕೂ ದುಂಬಾಲು ಬಿದ್ದಿಹರುನೇಸರು ಉಗುಳುವ ಒಮ್ಮೊಮ್ಮೆ ಬೆಂಕಿಯುಂಡೆತಣ್ಣನೆಯ ಗಾಳಿಗೂ ಸಂಚಕಾರ ಹೂಡಿಕಟು ಮನದ ಇರಿತದಿ ಬಳಲಿ ಬೆಂಡಾಗಿಹೆ ನಾನಷ್ಟೇ ಎಂಬ ಗಿರಿಗಿಟ್ಟಲೆ ತಿರುಗಿಬಂದ ಕೆಲಸ ಮರೆತ […]

ನಾವು ಹೀಗೆಯೆ

ಕವಿತೆ ನಾವು ಹೀಗೆಯೆ ನಿರ್ಮಲಾ ಶೆಟ್ಟರ್ ಇಂದಿಲ್ಲವಾದರೆ ನಾಳೆಈಗ ಆಗ ಆಮೇಲೆ ಎಂದುಅಸಂಖ್ಯ ಹಗಲು ನಾನೇ ಬೇಯುತರಾತ್ರಿಗಳಲಿ ದೀಪದಂತೆ ಉರಿಯುತ ಕಾದಿದ್ದೇನೆನಿನ್ನ ಮಾತುಗಳ ಕೇಳಲುಆ ವಿಷಯದಲಿ ಜುಗ್ಗ ನೀನು ಮತ್ತುನಿನ್ನಂಥಹ ಎಲ್ಲರೂ ಇದೇ ಕಾರಣಅವ್ವ ಅಪ್ಪನೊಡನೆ ಸೆಟಗೊಂಡುನನ್ನ ಪಕ್ಕದಲಿ ಬಂದು ಮಲಗಿದಅದೆಷ್ಟೊ ರಾತ್ರಿಗಳ ಪ್ರಶ್ನಿಸುತ್ತಾ ಬೆಳದವಳು ನಾ ಮೊನ್ನೆ ವನಿತೆಊರ ಹೊರಗಿನ ನಡುರಸ್ತೆಯಲಿಬಿಟ್ಟು ತನ್ನವನನುಒಂಟಿಯಾಗಿನಡೆದು ಮನೆಸೇರಿ ಕ್ರಮಿಸಿದ್ದು ಸಮೀಪದ ಹಾದಿಯನ್ನಲ್ಲ ನಾವು ಹೀಗೆಯೆಇಂಥವರನ್ನು ಇಷ್ಟಪಡುವುದಿಲ್ಲ ಒಂದೇ ಗುಟುಕಿಗೆ ಚರಿಗೆ ನೀರು ಕುಡಿದಂತೆನಿಮ್ಮೆದೆಯ ಭಾವವನೆಲ್ಲ ನಮ್ಮೆದೆಗಿಳಿಸಿಕಣ್ಣರೆಪ್ಪೆಯಲಿ ತೂಗಾಡಿಸಿಕೊಂಡುತೊಟ್ಟಿಲು ಕಟ್ಟಿ […]

Back To Top