ಭಾವ ಪುಷ್ಪಗಳು

ಭಾವ ಪುಷ್ಪಗಳು

ಭಾವದ ಅನುಭಾವದ ಎತ್ತರ ಬಿತ್ತರಗಳನ್ನು ವರ್ಣಿಸಲು ಅಸಾಧ್ಯ. ಆಲದ ಮರದಂತೆ ನೂರಾರು ಸಾವಿರಾರು ವರುಷಗಳಿಂದ ಬಾಳಿ ಬಂದ ಭಾವ ಸಂಸ್ಕøತಿಯನ್ನು ಹೆಮ್ಮೆಯಿಂದ ಬೆಳೆಸೋಣ ಬೆಳೆಯೋಣ ಭಾವ ಪುಷ್ಪಗಳು ನಮ್ಮ ಎದೆಯ ಅಂಗಳದಲ್ಲಿ ನಿತ್ಯ ಅರಳಲಿ ಬದುಕು ಇನ್ನಷ್ಟು ಮತ್ತಷ್ಟು ಸುಂದರವಾಗಲಿ.

ಪ್ಯಾರಿ ಪದ್ಯ

ಪುಸ್ತಕ ಸಂಗಾತಿ ಪ್ಯಾರಿ ಪದ್ಯ ನಾನಿವತ್ತು ಓದಿದ ಪುಸ್ತಕ       ” ಪ್ಯಾರಿ ಪದ್ಯ “ ******** ಎ.ಎಸ್.ಮಕಾನದಾರರು ಉತ್ತರ ಕರ್ನಾಕಟದಲ್ಲಿ ಅಪಾರ ಪ್ರೀತಿ ಗೌರವಕ್ಕೆ ಕಾರಣರಾದ ಸಾಹಿತಿಗಳ ಒಡನಾಡಿಗಳು.ಸೃಜನಶೀಲ ಸಾಹಿತಿಗಳಾಗಿ,ವಿಮರ್ಶಕರಾಗಿ,ಚಿಂತಕರಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಸರಳ ಸಜ್ಜನಿಕೆಯ ವ್ಯಕ್ತಿಗಳು.ವೃತ್ತಿಯಿಂದ ಕೌಟುಂಬಿಕ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕರಾಗಿ(ಗದಗ) ಸೇವೆ ಸಲ್ಲಿಸುತ್ತಾ,ಪ್ರವೃತ್ತಿಯಲ್ಲಿ ಉತ್ತಮ ಬರಹದ ಹತ್ತಾರು ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಎ.ಎಸ್.ಮಕಾನದಾರರು,ಕೇವಲ ಸಾಹಿತಿಗಳಷ್ಟೇ ಅಲ್ಲ.ಸ್ವತಹಃ ನಿರಂತರ ಪ್ರಕಾಶನದ ಸ್ಥಾಪಕರು.ಈ ನಿರಂತರ ಪ್ರಕಾಶನಕ್ಕೂ ಕವಿ ಸಾಹಿತಿಗಳಿಗೂ ಅಳಿಸಲಾಗದ ಸಂಬಂಧವಿದೆ.ಅನೇಕ […]

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಂಗಳಕೆ ಇಟ್ಟ ಕಾಲು ಅಂಗಳಕೆ ಇಡಲು ಹಿಂಜರಿಯುತಿದೆಒಲವ ಕೊಟ್ಟ ಹೆಗಲಿಗೆ ಇಂದು ಹೆಗಲು ಕೊಡಲು ಹಿಂಜರಿಯುತಿದೆ ಅನುರಾಗದಲಿ ಹೆತ್ತು ಹೊತ್ತ ಉಸಿರುಗಳು ಅನಾಥವಾಗಿವೆಒಡಲಲಿ ಹೊರಳಾಡಿದ ಜೀವ ಮಣ್ಣು ಹಾಕಲು ಹಿಂಜರಿಯುತಿದೆ ಮುದ್ದಾಡಿ ಚಂದಿರ ತೋರಿಸಿದ ಲಾಲಿ ಹಾಡು ಮೂಕವಾಗಿದೆಕೈತುತ್ತು ಉಣಿಸಿದ ಕೈಗೆ ಮುತ್ತು ನೀಡಲು ಹಿಂಜರಿಯುತಿದೆ ಕುಸುಮಗಳು ನಲಿಯುತಿದ್ದವು ಸೋದರ ಜೊತೆ ಈಗ ಮಂಕಾಗಿವೆದುಂಬಿಯು ಬಿರಿದ ಸುಮದ ಮಕರಂದ ಹೀರಲು ಹಿಂಜರಿಯುತಿದೆ ವಿಶ್ವವೇ ಮೌನವಾಗಿದೆ ಇದೆಂತಹ ದುರಿತಕಾಲ “ಪ್ರಭೆ”ಬೌದ್ಧ ಪೌರ್ಣಮಿ ಕಿರಣಕೆ […]

ಮುಸ್ಸಂಜೆ

ಇಬ್ಬರ ನೋಟದಲ್ಲಿ ಅಂದಿನ ಆಕರ್ಷಣೆ ಇರಲಿಲ್ಲ.ಬದಲಿಗೆ ಅಂದಿನಿಂದ ಇಂದಿನವರೆಗೆ ಅಚ್ಚಳಿಯದೆ ಉಳಿದ ಗೆಳೆತನವಿತ್ತು. ಮಾಧವ ಚಾಚಿದ ಕೈಯಲ್ಲಿ ನನ್ನ ಕೈಗಳನ್ನಿಟ್ಟು ಮುಗುಳ್ನಕ್ಕೆ.

ಈ ವಾರದಿಂದ ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್

ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೆಜ್ಜೆ ಗುರುತು ಮಣ್ಣಿನ ಹುಡಿಯಲಿ ಅಳುಕಿದೆ ಸಾಕಿಎದೆಯ ದಾರಿಯಲಿ ನಡೆದು ಬದುಕು ತುಂಬಿ ತುಳುಕಿದೆ ಸಾಕಿ ಒಲವಿನ ಪರಿಮಳ ಒಡೆದ ಕನ್ನಡಿ ಚೂರಿಗೆ ಮುತ್ತಿಕ್ಕಿದೆ ನೋಡುಉಸಿರ ಬಸಿದು ಕನಸು ಕಟ್ಟಿ ಕಾಲು ಹಾದಿ ಸಾಗಲು ನರಳುತಿದೆ ಸಾಕಿ ಭಾವ ಬಯಲಿಗೆ ಬೆಸುಗೆ ಹಾಕಿ ಮೌನ ಮನೆ ಮಾಡಿದೆಬಾಹು ಬಂಧನದಿ ಬಂಧಿಯಾಗುವ ಹೊಸ ಕನಸು ಚಿಗುರುತಿದೆ ಸಾಕಿ ಕಮರಿದ ಆಸೆ ಹಸಿರಾಗಿ ಉಸಿರ ಸೂಸಲು ಬಂದಿದೆಒಳಗಿನ ಗಾಯ ಮಾಯುವ ಮುನ್ನ ಪ್ರತಿ ಬಿಂಬ […]

ಜ್ಞಾನ ಬಿತ್ತಿದವ….ಬುದ್ದ

ಕವಿತೆ ಜ್ಞಾನ ಬಿತ್ತಿದವ….ಬುದ್ದ ಶಿವಲೀಲಾ ಶುದ್ಧೋದನ ಮಗನಂತೆ ಇವನುಮಗ್ಗುಲು ಹೊರಳಿಸಿದಂತೆಲ್ಲನಿದ್ರೆಯ ಕಂಬಳಿ ಕಿತ್ತೊಗೆದುಮೆಲ್ಲಗೆ ಸದ್ದಿಲ್ಲದಂತೆ ಎದ್ದೊದನಂತೆ ಹಣೆಗೊಂದು ಭಾವ ಲೇಪಿಸಿಕೊಂಡುವೈಭೋಗವ ವಸ್ತ್ರ ಕಳಚಿ ಬೆತ್ತಲಾಗಿಸಿಇರುಳಿಗೆಲ್ಲವ ಅರ್ಪಿಸಿ ಹೊಂಟವನುಬೀದಿ ಓಣಿಯಲಿ ದಿಟ್ಟಹೆಜ್ಜೆಯಿಟ್ಟವನು ನಿಶ್ಯಬ್ದ ದಾರಿಗುಂಟ ನಿಶಾಚರಿಗಳ ಘೀಳುರಕ್ತ ಸಿಕ್ತ ಪಾದದಲಿ ಮುಕ್ತಿಯ ಹಂಬಲವುಹಪಹಪಿಸಿದರು ಜ್ಞಾನ ದಾಹ ತೀರಲೊಲ್ಲದುದೇಹ ದಂಡಿಸಿದಷ್ಟು ಬಳಲಿತು ಭಾವದೊಡಲು ದಕ್ಕಿದುಡುಗೊರೆಯು ಮೋಕ್ಷವಾಗಲಿಲ್ಲಮೋಕ್ಷದ ಬೆನ್ನ ಹತ್ತಿದವಗೆ ದಿಕ್ಷೆಯಾಗಲಿಲ್ಲಆಸೆಯೇ ದುಃಖಕ್ಕೆ ಮೂಲವೆನ್ನುವಾಗೆಲ್ಲಕಾಯಕಕೆ ಮರಣಮೃದಂಗದಾ ಅಮಲೆಲ್ಲ ಮಿಂಚಿತೊಂದು ಬೆಳ್ಳಿರೇಖೆ ಕಣ್ಣಂಚಲ್ಲಿಪೂರ್ಣ ಚಂದಿರನ ಬೆಳದಿಂಗಳಲ್ಲಿದಿವ್ಯ ಮಂಗಳ ವಾದ್ಯ ಮೊಳಗಿದಂತೆಲ್ಲಹುಣ್ಣಿಮೆ ಶಶಿಯಲ್ಲಿ ಲೀನವಾದಂತೆಲ್ಲ […]

ಗೀತಕಾರಂಜಿ

ಕವಿತೆ ಗೀತಕಾರಂಜಿ ವಿದ್ಯಾಶ್ರೀ ಅಡೂರ್ ಗೀತೆ ಮೂಡಿ ಮನದೇರಾಗ ತಾಳ ಹಾಕಿ ಕುಣಿಯುತಿಹುದುನವಿಲಿನಂತೆ….ಕಾರ್ಮುಗಿಲು ಬಿಡದೆ ಮಳೆಯಸುರಿಸಿದಂತೆ…. ಹೊಕ್ಕಿ ಮನದಿ ವಿವಿಧ ಭಾವಸಿಕ್ಕಿದೆಲ್ಲ ನಲಿವು ನೋವಅಕ್ಕಪಕ್ಕ ಸುಳಿವ ಸಾವಕಂಡು ಹೃದಯ ನಲುಗಿಬೆದರಿದಂತೆ….ಮೊಂಡು ಹಠವ ಮಾಡಿ ನಮ್ಮಒಲಿಸಿದಂತೆ….. ಜರುಗಿ ಮನದ ಒಳಗೆ ಜಾತ್ರೆತುಂಬುತಿಹುದು ಹಿಡಿದ ಪಾತ್ರೆಕವಿತೆಯೊಂದು ನಿತ್ಯ ಯಾತ್ರೆಬರಡು ನೆಲದಿ ಹಸಿರಹರಡಿದಂತೆ…ಕೆಸರಲ್ಲೂನೂ ಕಮಲ ತಾನೇಅರಳಿದಂತೆ… ಬಿಸಿಲ ಬೇಗೆಯಲ್ಲಿ ಬೆವರಮಾಗಿ ಚಳಿಯಲ್ಲೂನು ಪದರಸೋನೆ ಮಳೆಯು ಕೂಡ ಮಧುರನೀಗುತಿಹುದು ಮನದ ಬರಡಕಾರಂಜಿಯಂತೆ…ಒಂಟಿ ಮನದ ಜತೆಗೆ ಜಗವೇನಡೆಯುವಂತೆ…. ******************************

ಬುದ್ಧನಾಗಲೂ ಕಷ್ಟವೀಗ

ಕವಿತೆ ಬುದ್ಧನಾಗಲೂ ಕಷ್ಟವೀಗ  ಹೇಮಚಂದ್ರ ದಾಳಗೌಡನಹಳ್ಳಿ ಈಗಲೀಗ ಎದ್ದು ಹೊರಡಬೇಕೆನಿಸುತಿದೆನಿನ್ನಂತೆ ತೊರೆದು ಎಲ್ಲವಕಂಡೊಂದು ಸಾವಿಗೇ; ಶರಣಾದೆ ಮುಕ್ತಿಗೆಭಾಜನ ನೀನೀಗಲೂ ಜನಭಕ್ತಿಗೆತಮಗೇ ಸಾವು ಬಂದಡರಿ ನಿಂತರೂನಿಂತ ಕಟ್ಟಡ ಕಾಮಗಾರಿಗೆ ಬಳಲಿಅಳಲುಗೊಂಡಳುತ ನರಳುವರ ಕಂಡು(ಈಗಲೀಗ) ತರಿದು‌ ಹಸುರ; ತೋಡಿ ನೆಲಬಸುರಮೀರಿದಂಕೆಗೆ ಮುತ್ತಿ ಮಾರಿ ಶಂಕೆಸುಳಿವ ಉಳಿದ ಗಾಳಿಯನೂ ಮುಕ್ತ ಮೂಸದಂತೆಮೂಗು ಬಾಯಿ ಬಂಧಿಸಿ; ಮನೆಯೊಳಗೇ ಸಂಧಿಸಿಕೊರೆದ ಕೊಳವೆ ಬಾವಿ ಕೆಲಸವರ್ಧಕೆ ನಿಂತುದಕೆಅವಲತ್ತುಕೊಂಡಳಲುತಿರುವ ತಿರುಕರ ಕಂಡು(ಈಗಲೀಗ) ಬಿರುಕು ಗೋಡೆ; ತೂತು ಮಾಡುಳ್ಳಮನೆಯೊಳಗೆ ಬರಲು ಮಳೆನೀರುಮಳೆಗೆ ಶಾಪ ಹಾಕುವ ಅಂಧರುಹುತ್ತಗಳ ಕೆಡವಿ ಮನೆಯ […]

Back To Top