ನದಿಯಂತೆ.

ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ

ಲೇಖನ ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ ವಿಶ್ವನಾಥ ಎನ್ ನೇರಳಕಟ್ಟೆ ಹಳಗನ್ನಡ ಸಾಹಿತ್ಯವನ್ನು ಅಭ್ಯಸಿಸುವ ನಿಟ್ಟಿನಲ್ಲಿ ಇಂದಿನ ಬಹುತೇಕ ವಿದ್ಯಾರ್ಥಿಗಳ ಮನೋಭಾವದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಒಂದು ಕಾಲಘಟ್ಟದಲ್ಲಿ ಅಧ್ಯಯನದ ಪ್ರಮುಖ ಭಾಗವಾಗಿದ್ದ ಹಳಗನ್ನಡ ಸಾಹಿತ್ಯ ಇಂದು ಬಹುತೇಕ ಸಂದರ್ಭಗಳಲ್ಲಿ ಪರೀಕ್ಷೆಯ ಉದ್ದೇಶಕ್ಕಾಗಿ ಮಾತ್ರವೇ ಅಧ್ಯಯನಕ್ಕೆ ಒಳಪಡುತ್ತಿದೆ. ಅದರ ಕುರಿತಾದ ಆಸಕ್ತಿಯನ್ನು ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಅದನ್ನು ಸಂಪೂರ್ಣವಾಗಿ ಮರೆತುಬಿಡುತ್ತಿದ್ದಾರೆ. ಇದು ಕೇವಲ ವಿದ್ಯಾರ್ಥಿ ವಲಯದ ಮನೋಭಾವವಲ್ಲ. ಕನ್ನಡ ಭಾಷೆ- ಸಾಹಿತ್ಯವನ್ನೇ ಜೀವನ ನಿರ್ವಹಣೆಯ […]

ನೇಪಥ್ಯ ಸೇರಿದ ಗುಡಿಹಳ್ಳಿ ಹೆಜ್ಜೆ ಗುರುತು

ಗುಡಿಹಳ್ಳಿಗೆ ರಂಗಭೂಮಿ ಬಗ್ಗೆ ವಿಶೇಷ ಒಲವು ಆಸಕ್ತಿ. ವೃತ್ತಿ ಹಾಗೂ ಹವ್ಯಾಸಿ ನಡುವೆ ಕೊಂಡಿಯಾಗಿ ಬರಹ ಬರೆದ. ಹೆಚ್ವು ವೃತ್ತಿ ಕಲಾವಿದರ ಕಡೆಯೇ ವಾಲಿದ್ದ. ಹತ್ತಾರು ಆ ವೃತ್ತಿ ಕಲಾವಿದರ ಜೀವನಚರಿತ್ರೆ, ಪರಿಚಯ, ವಿಶ್ಲೇಷಣೆಯ ಕೃತಿ ಹೊರ ತಂದ.

ಮಲ್ಲಿಗೆ ಮೊಗ್ಗುಗಳು

ರಸಿಕನ ಕೈ ಸೇರಿದ ಮಲ್ಲಿಗೆ
ಮುಂಗೈ ಸುತ್ತಿಕೊಂಡಿವೆ
ಗೆಜ್ಜೆಯ ಗಲ್ ಗಲ್ ನಿಂದ
ದಣಿದು ಮೂಲೆ ಗುಂಪಾಗಿವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—40 ಆತ್ಮಾನುಸಂಧಾನ ಆಗೇರ ಸಮಾಜದ ತರುಣನಿಗೆ ಪ್ರಾಧ್ಯಾಪಕ ಹುದ್ದೆ”— ಎಂದು ಸುದ್ದಿಯಾದೆ : ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಎರಡು ವರ್ಷಗಳು ಕಳೆದು ಹೋದದ್ದೇ ತಿಳಿಯಲಿಲ್ಲ. ಬಹುಪಾಲು ತಂಪಾಗಿಯೇ ಇರುವ ಪ್ರಾಕೃತಿಕ ಪರಿಸರ, ಬಯಲು ಸೀಮೆಯ ಆಪ್ತವೆನ್ನಿಸುವ ಕನ್ನಡ ಭಾಷೆಯ ಸೊಗಸು, ಮತ್ತೆ ಮತ್ತೆ ಕರ್ನಾಟಕ ವಿದ್ಯಾವರ್ಧಕ ಸಂಘದ, ಕನ್ನಡ ವಿಭಾಗದ ಕಾರ್ಯಕ್ರಮಗಳು, ಅಲ್ಲಿಗೆ ಬಂದು ಹೋಗುವ ಹಿರಿ-ಕಿರಿಯ ಲೇಖಕರು, ಕವಿಗಳು, ವಿದ್ವಾಂಸರು ಇವರನ್ನೆಲ್ಲ ನೋಡುವುದೇ ಕೇಳುವುದೇ […]

ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ

‘ಭಕ್ತಾದಿಗಳೇ, ನೀವೆಲ್ಲರೂ ಭಯಭಕ್ತಿಯಿಂದ ಹಮ್ಮಿಕೊಂಡಂಥ ಈ ವಿಶೇಷ ಪೂಜೆಯು ಸಂಪನ್ನವಾಗಿರುವುದನ್ನು ನೋಡಿದಿರಿ. ಹಾಗಾಗಿ ಈ ಮಹಾ ಧಾರ್ಮಿಕವಿಧಿಯನ್ನು ನೀವೆಲ್ಲ ಯಾಕೆ ಆಚರಿಸಬೇಕು? ಇದನ್ನು ನಡೆಸುವುದರಿಂದ ನಿಮ್ಮೆಲ್ಲರ ಯಾವ ಯಾವ ರೂಪದ ಮನೋಭೀಷ್ಟಗಳು ನೆರವೇರುತ್ತವೆ ಎಂಬುದನ್ನು ನಿಮಗೆಲ್ಲ ಅರ್ಥವಾಗುವಂತೆ ವಿವರಿಸುವುದು ನಮ್ಮ ಕರ್ತವ್ಯ!’ ಎಂದ ಗುರೂಜಿಯವರು ಒಮ್ಮೆ ನೆಟ್ಟಗೆ ದೃಢವಾಗಿ ಕುಳಿತು ತಮ್ಮ ಮಾತನ್ನು ಮುಂದುವರೆಸಿದರು.

ನೋವುಗಳೆ ಲಾಲಿ

ಕಾವ್ಯಯಾನ ನೋವುಗಳೆ ಲಾಲಿ ಶಾಲಿನಿ ಆರ್. ನನ್ನ ನೋವುಗಳೇನನ್ನೊಳಗೆ ಲಾಲಿ ಹಾಡುತ್ತಿವೆಸ್ತಬ್ಧವಾಗಿ ಮಿಡುಕದೆಮೌನದಾಲಾಪನೆಗೆಕಾರುಣ್ಯವಿರಿಸಿಅರಿವಿಲ್ಲದಾ ತಾರುಮಾರಿನಸಂತೆಯೊಳಗೆ ಭಿಕರಿಯಾಗದಂತೆಮೋಸ ಮಾಡದಂತೆಅವುಡುಗಚ್ಚಿ ಕುಳಿತಿವೆಚಳಿಮಳೆಗೆ ರಮಿಸಿಬಯಲ ಸಿಡಿಲಿಗೆಬಸವಳಿದ ನಂಟಿಗೆನನ್ನೊಳಗೆ ಲಾಲಿ ಹಾಡುತಿವೆ, ನನಸಾಗದ ಕನಸಕ್ಯಾನ್ವಸ್ಸಿಗೆ ಹಸಿರಬಣ್ಣ ಹುಡುಕುತಚಿಗುರಿನ ಆಸರೆಯಲಿಮುಳ್ಳು ಕೊನೆ ನಗುತನಾಳಿನ ಜಾವಕೆಕರಿಮೋಡ ಕಾನನದತುಂಬ ಹುಸಿ ಮಳೆತುಂಬಿದಂತೆ ನೋವುತುಟಿಯಂಚಿನ ಕೊನೆಗೆಹುಸಿ ನಗೆಯನಿರಿಸಿನನ್ನೊಳಗೆ ಲಾಲಿ ಹಾಡುತಿವೆ, ನೋವಿನ ಭಾರಹೊತ್ತ ಮನಕೆಬತ್ತಲಾಗುವಿಕೆಯಭಯವಿಲ್ಲ ಶಬ್ಧವಿಲ್ಲತಪ್ತ ಮನದಲಿಮೌನವೇ ಬೆಲ್ಲಶಬ್ಧವೊಡೆದರೆನಿಶಬ್ಧಕೆ ಬೆಲೆಯಿಲ್ಲಮೌನದ ಮೆರವಣಿಗೆಯಲಿಸಿಂಗಾರಗೊಂಡ ಮಾತುಗಳಮದುವೆ ದಿಬ್ಬಣಮಮತೆಯಲಿ ಕನಲಿನೋವು ಮೈದಡವಿನನ್ನೊಳಗೆ ಲಾಲಿ ಹಾಡುತಿವೆ… ****************

Back To Top