ಅನುವಾದ ಸಂಗಾತಿ

ಅನುವಾದ ಸಂಗಾತಿ

ಗೋಲಿಗಳು ಹಿಂದಿಮೂಲ:- ಮರಹೂಮ್ ಇಮ್ತಿಯಾಜ. ಕನ್ನಡಕ್ಕೆ:-ಡಿ.ಎಮ್. ನದಾಫ್ ನನ್ನ ಬಾಲ್ಯದ ಮೊದಲಗಳಿಕೆ ಅದ ನಾನು ಕಡು ಶ್ರಮದಿ ಗಳಿಸಿದೆ,ಹಗಲೆನ್ನಲಿಲ್ಲ,ರಾತ್ರಿಯನಲಿಲ್ಲಹಸಿವೆನಲಿಲ್ಲ,ನೀರಕಾಣಲಿಲ್ಲ,ಬರೀ ಗಳಿಕೆಯೋ ಗಳಿಕೆ. ಹಲ ಹಲವು ಬಣ್ಣ-ಬಣ್ಣದವುಕೆಲ-ಕೆಲವು  ಒಡಕು ತಡುಕುವಿಧ-ವಿಧದ ಹೊಂಬಣ್ಣದವುಕೆಲವು ನನ್ನಂತೆ ಅಮೂಲ್ಯಹಲವಲ್ಲಿ ಗೋವ ಕಂಗಳ ನೈರ್ಮಲ್ಯ ಕಿಸೆಯ ಕೊನೆ ಮೂಲೆ ಹರಿದಿತ್ತುಆದರೂ ಅದು ಗೋಟಿಗಳಿಂದ ತುಂಬಿತ್ತು.ವೇಗವಾಗಿ ಓಡಿದಾಗಲೆಲ್ಲಇವುಗಳ ಕಿಂಕಿಣಿ ಕಿವಿ ತುಂಬುತಿತ್ತು. ನಾನು ನನಗಿಂತ ಅವುಗಳನ್ನೇಹೆಚ್ಚು ಸಂಭಾಳಿಸಿದ್ದೆ’ಹಿಟ್ಟಿನ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದೆ,ಗೊತ್ತಾಗುತ್ತಿಲ್ಲ ಗೆಳೆಯ ನನ್ನ ಗೋಟಿಗಳು ಎಲ್ಲಿ ಕಳೆದು ಹೋದವು?ತುಂಬಿ ಹರಿಯುವ  ನದಿಯಂತೆ ನನ್ನ ಯೌವನದ ಸೆಳೆವಿನಲ್ಲಿ […]

ಲಲಿತ ಪ್ರಬಂಧ

ನೆನಪಿಗೆ ಬರುತ್ತಿಲ್ಲ ಶೀಲಾ ಭಂಡಾರ್ಕರ್ ತಂಗಿ ಫೋನ್ ಮಾಡಿ..” ಅಕ್ಕಾ.. ಈ ಸಲ ದಸರಾ ರಜದಲ್ಲಿ ಊರಿಗೆ ಬಂದಾಗ ಸಾಲೆತ್ತೂರಿಗೆ ಹೋಗಿ ಬರೋಣ್ವಾ? ” ಅಂದಾಗ ನಾನು ಖುಷಿಯಿಂದ “ಹೇಯ್ ನಾನೂ ಅದನ್ನೇ ಯೋಚಿಸ್ತಿದ್ದೆ.. ಖಂಡಿತ ಹೋಗೋಣ” ಅಂದೆ. ಅದಕ್ಕವಳು “ಎಷ್ಟೋ ದಿನದಿಂದ ನನಗೆ ತುಂಬಾ ಆಸೆ ಆಗ್ತಿದೆ ನಾವು ಕಲಿತ ಸ್ಕೂಲು, ಅಪ್ಪನ ಬ್ಯಾಂಕು, ನಾವಿದ್ದ ಮನೆ, ಶೇಷಪ್ಪನ ಅಂಗಡಿ” … ಅನ್ನುವಾಗ ನಾನು ಪಟಕ್ಕನೆ., “ರತ್ನಾಕರ. ನಾನು ರತ್ನಾಕರನನ್ನು ನೋಡಬೇಕು” ಅನ್ನುವುದರೊಳಗೆ ನಮ್ಮವರು ಮನೆಯೊಳಗೆ […]

ಲೀಲಾ ಕಲಕೋಟಿ ಎರಡು ಬರಹಗಳು

ಲೀಲಾ ಕಲಕೋಟಿ ನ್ಯಾನೋ ಕಥೆ ಸಂಜೆಯಾಗಿ ತಾಸೆರಡಾಗಿತ್ತು. ಹಂಗೆ.. ಹೊರಗ ಹೊಂಟೆ.ಅವನು ನನ್ನ ನೋಡಕೋತ ನನ್ನ ಜೋಡಿ ಬೆನ್ನ ಹತ್ತಿದಾ .ಆದರೂ ಸುಮ್ಮನೆ ಹೊಂಟೆ.ಅವನೂ ಮತ್ತ ನನ್ನ……!ಸ್ವಲ್ಪ ನಿಂತೆ ಅವನೂ ನಿಂತು ನನ್ನ ನೋಡಿ ನಗಾಕ್ಹತ್ತಿದಾ.ಮನೀಕಡೆ ಹೊಂಟೆ ನನ್ನ ನೆಳ್ಳನೂ ನನ್ನ ಜೋಡಿ ಬರದಂಗ ಮಾಡಿದಾ . ಮನಿ ಮುಟ್ಟಿದೆ ಖರೆ ಲೈಟ್ ಹೋಗಿತ್ತು. ಅವನು ಕತ್ತಲೆ ಕರಗಿಸಿ ತನ್ನ ಬೆಳದಿಂಗಳ ಬಾಹು ಬಂಧನದಿ ಮೈಮನಕೆ ಮುದ ನೀಡಿದ. ಅವನನ್ನೇ ನೋಡುತ್ತ ಮೌನ ಮುರಿದು ನನಗರಿವಿಲ್ಲದಂತೆ ಕಟ್ಟಿಗೆ […]

ಗಝಲ್

ಗಝಲ್ ದೇವು ಮಾಕೊಂಡ ಎಚ್ಚರಗೊಂಡ ಕನಸಿಗೆ ಕಾತರಿಸಬೇಡ ಸಂಗಾತಿಮುಂಗುರುಳ ಸ್ವಪ್ನ ಕಾಣಬೇಡ ಸಂಗಾತಿ ಅವರ ಬದುಕು ಅವರೇ ಕಂಡುಕೊಂಡಿಲ್ಲಬೇರೆಯವರ ಮನದ ಭಾವನೆಗೆ ಕಾಯಬೇಡ ಸಂಗಾತಿ ಸುಖದ ಕಡಲು ಬಿಟ್ಟು ಬಯಲಾಗಿ ಬಂದು ಶೂನ್ಯವಾದೆಹಗಲ ಕುದುರೆಯನೇರಿ ಇರುಳು ತಿರುಗಬೇಡ ಸಂಗಾತಿ ಅತ್ತು ಗಾಯಗೊಂಡ ಕಣ್ಣಿಗೆ ಮುಲಾಮು ತರಬೇಕಿದೆಬಿರುಗಾಳಿಗೆ ಉಕ್ಕೇರುವ ನದಿಯ ದಾರಿ ಹುಡುಕಬೇಡ ಸಂಗಾತಿ ಜಗದ ಕೂಗಿಗೆ ಕಿವಿ ಏಕೆ ಕೊಡುತ್ತಿರುವೆ ‘ದೇವ’ಹಳೆ ಕಂದಕದ ನಿಟ್ಟುಸಿರ ಬವಣೆ ನೂಕಬೇಡ ಸಂಗಾತಿ **************************************

ಕಾವ್ಯಯಾನ

ಚೀನಿ ಗಾದೆ ನೂತನ ದೋಶೆಟ್ಟಿ ಮನದಲ್ಲಿ ಹಸಿರು ಗಿಡ ನೆಡುಹಾಡು ಹಕ್ಕಿ ಬಂದೇ ಬರುವುದುಒಂದು ದಿನ ಚೀನಿ ಗಾದೆಯ ನಂಬಿಎದೆಯಂಗಳದಲ್ಲಿನಗುವ ಹಸಿರು ಗಿಡ ಹಾಡು ಕೇಳದೆಹೊರಟ ನಿಟ್ಟುಸಿರಿಗೂಶಾಂತತೆಯ ಪಾಠ ಮೈಯೆಲ್ಲ ಕಿವಿಯಾಗಿಕಾಯುತಿದೆ ಹಸಿರು ಗಿಡಮನದ ಪ್ರತಿ ಮೀಟಿನಲೂಹಕ್ಕಿ ಗಾನದ ಕನವರಿಕೆ ಗಳಿಗೆಗಳ ಲೆಕ್ಕಸರಿ ಹೋಗಲೇ ಇಲ್ಲಹಕ್ಕಿ ಬರುವುದೋ ಇಲ್ಲವೋಹಾಡು ಕೇಳುವುದೊ ಇಲ್ಲವೊ ಮನ ಕರಗಿ ಹರಿಯಿತುಗಿಡದಲ್ಲಿ ಹಸುರಿತ್ತುತಾನು ಅತ್ತು ನಗುವ ಹಂಚಿಗಾದೆಯ ಉಳಿಸಿತ್ತು. *************************************

ಕಾವ್ಯಯಾನ

ಎಲ್ಲೆಲ್ಲೆಂದು ಹುಡುಕಲಿ ? ರಜನಿ ತೋಳಾರ್ ನೀ ಹೊರಟು ಹೋಗಿದ್ದುಗೊತ್ತೇ ಆಗಲಿಲ್ಲ…ಕಣ್ತೆರೆದು ನೋಡಲುಏಕಾಏಕಿ ನಾ ಏಕಾಂಗಿ ಹೊಸ ಪ್ರಪಂಚದ ಬೆಡಗಿನಲಿರಂಗಿಸಿಕೊಂಡು ಸುತ್ತುವ ಗುಂಗಿನಲಿಮರೆತೇ ಹೋದೆಯಾಬಿಡಾರಕ್ಕೆ ಬರುವ ದಾರಿ ಝಲ್ಲೆಂದು ಮಳೆ ಹೊಯ್ಯುವಾಗಗುಡುಗು ಮಿಂಚಿನ ಸದ್ದಿಗೆಲ್ಲಾಡವಡವಿಸುವುದು ನನ್ನೆದೆಗೊತ್ತಲ್ಲವೇ… ಒಂದು ಮಾತೂ ಹೇಳದೇಹೊರಟೇ ಬಿಟ್ಟೆ ಅಂತೂ…ನಿಲ್ಲಲಾಗಲಿಲ್ಲವೇನಾಲ್ಕು ದಿನವೂ,ಬಂದು ಬಿಡುತ್ತಿದ್ದೆನಲ್ಲಾನಾನೂ ನಿನ್ನ ಜೊತೆಗೆ ಇದಾಗಲೇ ಎಲ್ಲೆಡೆ ಹುಡುಕಿಸೋತಿಹರು ನಿನ್ನ ಹೆತ್ತವರು..ಎಲ್ಲೆಲ್ಲೆಂದು ಹುಡುಕಲಿ ಇನ್ನು ? ಅಮ್ಮ ತುತ್ತು ಕೊಡುವಾಗಲೆಲ್ಲಾನಿನ್ನದೇ ನೆನಪು…ನನಗೆ ಮೊದಲು ..ನನಗೆ ಮೊದಲೆನ್ನುವ ಪೈಪೋಟಿ ಇನ್ನೆಲ್ಲಿ!ಹಾರುವುದ ಕಲಿಯುವ ಸಾಹಸಕಿಟಕಿಯ ಗ್ರೀಲಿನಲ್ಲೇಎಡವಿ […]

ದಿಕ್ಸೂಚಿ

ಸೋಲಿನ ಸುಳಿಯಲ್ಲೇ ಗೆಲುವಿನ ತುದಿಯಿದೆ! ಎಷ್ಟೆಲ್ಲ ಅನುಭವಗಳ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಿದರೂ ಗೆಲುವು ಮಿಂಚಿನಂತೆ ಅರೆಗಳಿಗೆ ಮಿಂಚಿ ಮಾಯವಾಗುತ್ತದೆ.ಇಲ್ಲಿ ಎಲ್ಲದರಲ್ಲೂ ಒತ್ತಡ. ಯಾವುದೂ ಸರಳ ರೇಖೆಯಲ್ಲಿ ಸಿಗುವುದಿಲ್ಲ. ಎಲ್ಲವನ್ನೂ ವಕ್ರ ರೇಖೆಯ ಕಾಣದ ತಿರುವುಗಳಲ್ಲಿ  ಶ್ರಮ ಹಾಕಿಯೇ ಪಡೆಯಬೇಕು.ಕೆಲವೊಮ್ಮೆ ಶ್ರಮ ಹಾಕಿದರೂ ಮುಖ ಎತ್ತಿಯೂ ನೋಡದೇ, ಬೆನ್ನು ತೋರಿಸಿ ನಗುತ್ತದೆ. ಕೈಗೆ ಸಿಗದೇ ಓಡಿ ಬಿಡುತ್ತದೆ ಗೆಲುವು! ಒಮ್ಮೊಮ್ಮೆ ನನಗೇ ತಿಳಿಯದಂತೆ ಮೇಲಕ್ಕೆತ್ತರಿಸಿ ಕೂರಿಸುತ್ತದೆ. ಮತ್ತೊಮ್ಮೆ ನಿರೀಕ್ಷಿಸಿದರೂ ಕೈಗೆ ಸಿಗದೇ ಕೆಳಕ್ಕೆ ಎಸೆದು ಬಿಡುತ್ತದೆ. ಹೆದರಿಸಿ  […]

ಮುಖಾಮುಖಿ

“ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ” “ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ” ನಾಗರೇಖಾ ಗಾಂವಕರ್ ನಾಗರೇಖಾ ಗಾಂವ್ಕರ್ ಅಂಕೋಲಾ ತಾಲೂಕಿನ ಆಡ್ಲೂರು ಗ್ರಾಮದವರು. ನಾಗರೇಖಾ ಅವರು ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಾಭಾಷಾ ಉಪನ್ಯಾಸಕಿ. ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧,೨ ನ್ನು ಸಹ ಪ್ರಕಟಿಸಿದ್ದಾರೆ. ಕತೆಗಳನ್ನು ಸಹ ಬರೆಯುವ ಇವರು, ಕೆಲ ಕತಗಳಿಗೆ ಬಹುಮಾನ ಸಹ ಪಡೆದಿದ್ದಾರೆ. ಕನ್ನಡ ಕವಿಗಳ ಕವಿತೆಗಳನ್ನು ಆಂಗ್ಲಭಾಷೆಗೆ […]

ಕಾವ್ಯಯಾನ

ಅವನಿದ್ದಾನೆ ಮಾಲತಿ ಶಶಿಧರ್ ನನಗಾಗಿ ನೀನುದುಃಖಿಸುವುದೇನು ಬೇಡನಾನೀಗ ನಿರಾಳಅವನು ಕೂಗಿದ, ದನಿ ಹಾದುಬಂದತ್ತ ಹೆಜ್ಜೆ ಹಾಕುತ್ತಾ ಹೋಗಿದ್ದಾಗಿದೆಅಲ್ಲಿ ಅವನು ನನ್ನ ಕೈ ಹಿಡಿದಿದ್ದಾನೆಬೀಳುವ ಮಾತಿಲ್ಲಬೆನ್ನು ತಿರುಗಿಸಿ ನಡಿಗೆ ಶುರುವಿಟ್ಟಿದ್ದೇನೆಎಲ್ಲಾ ತಾಪತ್ರಯಗಳ ನಿನ್ನ ಅಡಿಗಳಲ್ಲೇಬಿಟ್ಟು ಹೊರಟದ್ದಾಗಿದೆಅವನು ದಾರಿಯುದ್ದಕ್ಕೂ ಜೊತೆಇದ್ದು ನಗಿಸುತ್ತಾನೆ, ಪ್ರೀತಿಸುತ್ತಾನೆಮುದ್ದಿಸುತ್ತಾನೆಒಮ್ಮೊಮ್ಮೆ ಬೇಸರದಿ ಕುಸಿದು ಕೂತಾಗಎಳೆದುಕೊಂಡು ಹೋಗಿಮರ ಸುತ್ತುವ ಆಟಆಡಿಸುತ್ತಾನೆನಾನು ಅರೆಬರೆ ಬರೆದು ಬಿಟ್ಟಕವಿತೆಗಳ ಕೈಗಿಟ್ಟು ಬರೆಸುವನುಕವಿತೆ ಪೂರ್ಣವಾಗುವವರೆಗೂಕೆನ್ನೆಯ ಕೆನ್ನೆಗೊತ್ತಿ ತೋಳಲಿ ಬಳಸಿನಿಲ್ಲುವನುಅವನು ಶಾಂತಿಯ ಪ್ರತೀಕಕೆಟ್ಟದಿನಗಳಿಗೆ ಅಗುಳಿ ಇಟ್ಟುಶಾಂತಿ ಮಂತ್ರ ಪಠಿಸುವನನಗೆ ಅವನೇ ಮಂತ್ರದಂಡನನ್ನ ತಲೆಯ ಮೇಲೀಗ ಹೊರೆ […]

ಕಾವ್ಯಯಾನ

ನಿಮ್ಮ ಹಾಗೆ ಬರೆಯಲಾಗುವುದಿಲ್ಲ ವಿ.ಎಸ್.ಶಾನಬಾಗ್ ನನಗೆ ನಿಮ್ಮ ಹಾಗೆ ಬರೆಯಲಾಗುದಿಲ್ಲನಿಮ್ಮ ಬಗ್ಗೆ ನೀವು ಬರೆದ ಹಾಗೆನನ್ನ ಬಗ್ಗೆ ನನಗೆ ಬರೆಯಲಾಗುವುದಿಲ್ಲನೀವು ಹೇಳಿದಹಾಗೆನಿಮ್ಮ ಸ್ನೇಹಕ್ಕೆ ಬರೆದಿದ್ದನೆಲ್ಲಒರೆಸಿ ಹಾಕಿದೆ ಎಲ್ಲ ಅವನು ಅವಳ ಹಳೆಯ ಪ್ರೀತಿಒಂದಾಗಿ ಮತ್ತೆ ಮತ್ತೆ ಬೇರೆಯಾದ ರೀತಿಎಲ್ಲ ಎಲ್ಲ ಎಲ್ಲ ಅನುರಾಗಕ್ಕೆಅವಳನ್ನು ಕೂಡಲಾಗುವುದಿಲ್ಲಅವನನ್ನು ಕಳೆಯಲಾಗುವುದಿಲ್ಲಇವರ ಬಗ್ಗೆನೀವು ಬರೆದಹಾಗೆನನಗೆ ಬರೆಯಲಾಗುವುದಿಲ್ಲಪ್ರೀತಿಗೆ ಎಲ್ಲ ಅವ ಅವಳ ನೆನೆದ ಹಾಗೆಅವಳು ಅವನು ನಡೆದಹಾಗೆಒದ್ದೆ ನಿಂತ ಅವರನ್ನು ಕವಿತೆಯಲ್ಲಿಕರೆಯಲಾಗುವುದಿಲ್ಲಆದ್ದರಿಂದ ನಿಮ್ಮ ಹಾಗೆಬರೆಯಲಾಗುವುದಿಲ್ಲಪ್ರೀತಿಗೆ ಎಲ್ಲ ಆದ್ದರಿಂದ ನಾನು ನಿಮ್ಮಗುಂಪಿನಲ್ಲಿ ಸಲ್ಲನೀವು ಬರೆದದ್ದೇ ಕವಿತೆತೆರೆದದ್ದೇ […]

Back To Top