ಸಾಕು ಪ್ರಾಣಿಗಳು

ಸಾಕು ಪ್ರಾಣಿಗಳು

ಮಕ್ಕಳ ಕಥೆ ಸಾಕು ಪ್ರಾಣಿಗಳು ಡಾ. ಗುರುಸಿದ್ಧಯ್ಯಾ ಸ್ವಾಮಿ “ಅಪ್ಪ, ನಾನು ನಾಳೆಯಿಂದ ಶಾಲೆಗೆ ಹೋಗುವುದಿಲ್ಲ….” ಎಂದು ಅನಿಕೇತ ಒಂದು ಮೂಲೆಯಲ್ಲಿ ಹೋಗಿ ಕುಳಿತು ಬಿಟ್ಟ.“ಯಾಕೆ ಮರಿ, ಏನಾಯಿತು?” ಎಂದು ಪ್ರಕಾಶ ಅವರು ಅನಿಕೇತನನ್ನು ತಮ್ಮ ಬಳಿ ಕರೆದುಕೊಂಡು ಒಂದು ಮುತ್ತು ಕೊಟ್ಟು ತಲೆ ನೇವರಿಸುತ್ತ ಕೇಳಿದರು.“ಅಪ್ಪ, ಇಂದು ನಮ್ಮ ಶಿಕ್ಷಕರು ನಾನು ಸರಿಯಾಗಿ ಬರೆದ ಉತ್ತರಕ್ಕೆ ಸೊನ್ನೆ ಗುಣ ಕೊಟ್ಟಿದ್ದಾರೆ.”“ಹೌದಾ…? ಯಾವ ಪ್ರಶ್ನೆ ಅದು?”“ಸಾಕು ಪ್ರಾಣಿಗಳ ಹೆಸರು ಬರೆಯಿರಿ ಎಂಬ ಪ್ರಶ್ನೆ ಇತ್ತು.”“ಸರಿ, ಅದಕ್ಕೆ ನೀ […]

ಯಮನ ಸೋಲು

ಪುಸ್ತಕ ಸಂಗಾತಿ ಯಮನ ಸೋಲು    ಕುವೆಂಪು ಅವರ ಪ್ರಸಿದ್ದ ನಾಟಕಗಳಲ್ಲಿ ಒಂದು ಪುರಾಣದ ಕಥೆಯನ್ನು ಪಡೆದು ಅದನ್ನು ರಮ್ಯವಾಗಿ ನಿರೂಪಿಸುವ ಅವರ ಶೈಲಿಗೆ ಇನ್ನೊಂದು ನಿದರ್ಶನ.ಮಹಾಕವಿಯೊಬ್ಬ ತನ್ನ ಕೃತಿಗಾಗಿ ಮಹಾಕಾವ್ಯಗಳನ್ನು ಅವಲಂಬಿಸಿ ಅಲ್ಲಿಯ ಕಥೆಯನ್ನು ಸ್ವೀಕರಿಸಿದರೂ ಅದನ್ನು ತನ್ನದೆನ್ನುವಂತೆ ಮರ಼ಳಿ ನಿರೂಪಿಸುವ ಮಹಾಕವಿ ಪ್ರತಿಭೆಗೆ ಈ ನಾಟಕವೂ ಒಂದು ಉದಾಹರಣೆ.ಜಗದಲ್ಲಿ ಪಾತಿವ್ರತ್ಯದಂತಹ ಧರ್ಮ ಇನ್ನೊಂದಿಲ್ಲ . ಯಮ ಕೂಡ ಆ ಧರ್ಮಕ್ಕೆ ಸೋಲುತ್ತಾನೆ ಎಂಬ ಸತ್ಯವನ್ನು ಸಾರಲು ಈ ಕಥೆ ನಿರೂಪಿತವಾಗಿದೆ. ಸಾವನ್ನೇ ಸೋಲಿಸಿ ಗಂಡನನ್ನುಳಿಸಿಕೊಂಡ […]

ಅಂಕಣ ಬರಹ ಮೂರು ಗಳಿಗೆಯ ಬಾಳಿನಲ್ಲಿ…           ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ..        ಶುದ್ಧ ವೈರಾಗ್ಯ ಮೂಡಿಸುವ ಈ ದಾಸರ ಪದವನ್ನು  ಬಹುಶಃ ಹಳೆಯ ತಲೆಮಾರಿನವರು ಅದೆಷ್ಟು ಸಲ ಗುಣುಗುಣಿಸಿರಬಹದೋ ಏನೋ..        ನಿಜವೆ ?  ಈ ಪ್ರಪಂಚದಲ್ಲಿ ಯಾರಿಗೂ ಇಲ್ಲವೆ? ಲೌಕಿಕ ವ್ಯಾಪಾರಿಗಳಾದ ನಾವುಗಳು ಕಟ್ಟಿಕೊಂಡ ಸಂಸಾರ , ಕೈಕೊಂಡ ವೃತ್ತಿ , ಗೆಳೆಯರು ,ಬಂಧುಗಳು ಇವರೆಲ್ಲ ಏನೂ ಅಲ್ಲವೆ? ನೀರಿನೊಳಗಿದ್ದರೂ ನೀರನ್ನು ಸೋಕಿಸಿಕೊಳ್ಳದ ಕಮಲಪತ್ರದಂತಹ ಬದುಕು […]

ಅಮ್ಮನೇಕೆ ದೇವರು?

ಕಥೆ ಅಮ್ಮನೇಕೆ ದೇವರು? ರಾಘವೇಂದ್ರ ಈ ಹೊರಬೈಲು ತನ್ನ ಜೋಪಾನ ಮತ್ತು ಅತೀವ ಪ್ರೀತಿಯ ಹೊರತಾಗಿಯೂ ತನಗೇ ಗೊತ್ತಿಲ್ಲದೆ ಕಾಲು ಜಾರಿ, ಕೈತಪ್ಪಿ ಹೊರಟ ಮಗಳನ್ನು ತಿದ್ದಲು ಹೋಗಿ, ಅವಳಿಂದ “ಬೇರೆಯವರಿಗೆ ಸೆರಗು ಹಾಸಿ, ಭಂಡ ಬಾಳು ಬಾಳಿ, ನನ್ನನ್ನು ಸಾಕಿದವಳು” ಎನಿಸಿಕೊಂಡರೂ, ಬೇರೆ ಯಾರೇ ಆಗಿದ್ದರೂ ರಣಚಂಡಿಯಾಗುತ್ತಿದ್ದ ಆ ತಾಯಿ, ತೀರಾ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನನ್ನು ಕಳೆದುಕೊಂಡ ಹೆತ್ತ ಮಗಳ ಮೇಲಿನ ಕರುಳಿನ ಮಮಕಾರಕ್ಕೆ ಬರಸಿಡಿಲಿನಂತಹ ಅವಮಾನವನ್ನೂ ಸಹಿಸಿಕೊಂಡು, ಮಗಳನ್ನು ಕ್ಷಮಿಸಿದ್ದಳು. ಅಪ್ಪನಿಲ್ಲದ ಮಗಳಿಗೆ ತಾನೇ […]

ಬನ್ನಿ ಮನೆಗೆ ಹೋಗೋಣ. . .

ವಿಶೇಷ ಲೇಖನ ಬನ್ನಿ ಮನೆಗೆ ಹೋಗೋಣ. . . ಅಂಜಲಿ ರಾಮಣ್ಣ ಬಡತನ ಮತ್ತು ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಎನ್ನುವ ಕಾರಣಗಳನ್ನು ನೀಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಯ್ತಂದೆಯರು ತಮ್ಮ ಮಕ್ಕಳನ್ನು ಬೆಂಗಳೂರಿನ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ, NGOಗಳಲ್ಲಿ ದಾಖಲಿಸಿರುತ್ತಾರೆ. ಈ ಕಾರಣಗಳು ಒಂದು ಹಂತದವರೆಗೂ ನಿಜವೇ ಆದರೂ ಹೀಗೆ ಮಕ್ಕಳನ್ನು ದೂರ ಮಾಡಿರುವ ತಂದೆ ತಾಯಿಯರಲ್ಲಿ ತಮ್ಮ ಜವಾಬ್ದಾರಿಯನ್ನು ವರ್ಗಾವಣೆ ಮಾಡುವ ಮನೋಭಾವವೇ ಎದ್ದು ಕಾಣುತ್ತದೆ. ಅವರುಗಳ ಉಡಾಫೆತನವನ್ನು ವ್ಯಾಪಾರೀಕರಣಗೊಳಿಸಿ,  ಸಮಾಜ ಸೇವೆ ಎನ್ನುವ […]

ಅಮ್ಮನಿಗೊಂದು ಗಜಲ್

ಅಮ್ಮನಿಗೊಂದು ಗಜಲ್ ಸುಜಾತಾ ರವೀಶ್ ಅಣುರೂಪದಲಿಂದ ಅಸುವ ತುಂಬಿ ಪೊರೆದ ಚೈತನ್ಯಧಾಯಿ ಅಮ್ಮ ಭ್ರೂಣವಾದಾಗಿನಿಂದ ಕಸುವ ನೀಡಿ ಸಾಕಿದ ಜೀವನಧಾಯಿ ಅಮ್ಮ ನವಮಾಸಗಳು ಒಡಲಲ್ಲಿ ಕಂದನ ಭಾರ ಹೊತ್ತು ಸಲಹಿದೆಯಲ್ಲಮ್ಮ ತನ್ನ ಜೀವವನೆ ಒತ್ತೆಯಿಟ್ಟು ಭುವಿಗೆ ತಂದ ಮಮತಾಮಯಿ ಅಮ್ಮ ಅಮೃತಸದೃಶ ಎದೆ ಹಾಲೂಡಿಸಿ ಶಕ್ತಿ ತುಂಬಿಸಿದೆಯಲ್ಲಮ್ಮ ಅನೃತವಾಡದೆ ಬದುಕು ನಡೆಸ ಕಲಿಸಿದ ವಾತ್ಸಲ್ಯಮಯಿ ಅಮ್ಮ  ಕೆಟ್ಟ ಮಕ್ಕಳಿರಬಹುದು ಎಂದೂ  ಕುಮಾತೆಯರು ಲೋಕದಲ್ಲುಂಟೇನಮ್ಮ? ಸಿಟ್ಟು ಮಾಡಿಕೊಳ್ಳದೇ ಯಶಸ್ಸಿನ ದಾರಿ ತೋರಿದ ಸಹನಾಮಯಿ ಅಮ್ಮ   ವಿಜಯ ಪಥದಿ ಸಾಧನೆಯ ಕಾಣಲು ದಾರಿದೀಪ ನೀನೇನಮ್ಮ ಸುಜಿಯ ರಥದ […]

ಸತ್ವ ಪರೀಕ್ಷೆ

ಕವಿತೆ ಸತ್ವ ಪರೀಕ್ಷೆ ಲಕ್ಷ್ಮೀದೇವಿ ಪತ್ತಾರ ಸತ್ತವರ ಬಾಯಿಗೆ ಮಣ್ಣುಬದುಕುಳಿದರೆ ಹೋಳಿಗೆ , ಹುಗ್ಗಿ ಇದ್ದೆ ಇದೆ ಮುಂದೆ ಉಣ್ಣಲು ಸ್ವಲ್ಪ ತಾಳ್ಮೆ ಸಹನೆ ಇರಲಿ ಬಾಳಿಗೆಹೊರಗೆ ಬರದೆ ಇದ್ದದರಲ್ಲೆ ಹೊಂದಿಕೊಂಡು ಹೋಗಿ ಸುಮ್ಮನೆ ರಾಜಮಹಾರಾಜರೇ ಹದಿನಾಲ್ಕು ವರ್ಷಗಳ ಕಾಲ ವನವಾಸ ಗೈದರುಹದಿನಾಲ್ಕು ದಿನಗಳವರೆಗೆ ಮಾತ್ರಮನೆಯೊಳಗೆ ಇದ್ದರೆ ಏನು ತ್ರಾಸು ಇಂದು ಮನೆಯೆ ಆನಂದವಾಗಿರಲು ಬಲು ಸುರಕ್ಷಿತನಮ್ಮವರೊಂದಿಗೆ ಕಳೆಯಲು ಇದೂಂದು ಅವಕಾಶ ಇಂದಿನ ಕಷ್ಟದ ದಿನಗಳು ಕಳೆದರೆ ಸಾಕುಮುಂದೆ ಇದೆ ಭಾಗ್ಯದ ಬಾಗಿಲುಯಮ ಒಡ್ಡಿರುವನು ನಮ್ಮ ತಾಳ್ಮೆಗೊಂದು […]

ಮೂರು ದಿನಗಳ ಆಚೆ…

ಕವಿತೆ ಮೂರು ದಿನಗಳ ಆಚೆ… ಕವಿತಾ ಹೆಗಡೆ ಅಭಯಂ ಅಣುವೊಡೆದು ಚೂರಾಗಿ,ಪಿಂಡವೊಂದು ಬ್ರಹ್ಮಾಂಡಸೇರಲೊಲ್ಲದ ತಪ್ಪಿಗೆ,ನೀರಲ್ಲಿ ನೀರಾಗಿ,ಮಲಿನದ ಹೆಸರಲ್ಲಿ ಹರಿದುಹೋದರೆ;ರಜ ಸೋರಿದ್ದು ದೇಹಕ್ಕೆ,ತಮ ಕವಿದದ್ದು ಮನಕ್ಕೆ. ೧. ಆಚೆ ಕೂತರೆ:ಇಡೀ ಮನೆಯಲ್ಲಿ ಇವಳೊಬ್ಬಳೇ ಅಸ್ಪೃಶ್ಯೆ,ಮೂರು ದಿನ ಯಾಚನೆಯೇ ಜೀವನ.ಕೊಟ್ಟರುಂಟು …ತಿನ್ನು..ಉಡು.ಯಾತನೆಯೇ ಜೀವನ.ಕೂತು, ಮಲಗಿ ಬೇಸರಪಡು,ಇಲ್ಲ, ಹೊರೆ ಹೊರಗೆಸಲ ಮಾಡು.ಕತ್ತೆಯಾಗುವುದು ಲೇಸು! ೨. ಆಚೆಯಾಗಿ ಈಚೆಯಿದ್ದರೆ:ರಿಯಾಯತಿಯಿಲ್ಲದ ನಿತ್ಯ ಕರ್ಮಗಳು,ನೆಂಟರು, ಒಮ್ಮೊಮ್ಮೆ ದುಪ್ಪಟ್ಟಾಗುವಬಿಡುವಿಲ್ಲದೆ ಬೆಂಬತ್ತುವ ಜವಾಬ್ದಾರಿಗಳು.ಮಗುವಾದರೆ ಒಳ್ಳೆಯದಿತ್ತು! ೩. ಶಾಲೆಯ ಹುಡುಗಿ:ನೂರು ಆಚರಣೆ – ಸ್ಪರ್ಧೆಗಳಹೆಸರಲ್ಲಿ, ಎಳೆಜೀವವ ಕುಣಿಸಿ,ಹೆಣಗಿಸಿ, ಯಾರು ಯಾರದೋಕಾಣದ […]

ಅವ್ವ ವರ್ಣಿಸದಳ

ಅವ್ವ ವರ್ಣಿಸದಳ ಅಭಿಜ್ಞಾ ಪಿ ಎಮ್ ಗೌಡ ಅವ್ವ ವರ್ಣಿಸದಳಹಗಲಿರುಳು ನೋವಂಡುದುಡಿದು ದಣಿದ ಅಕ್ಷಯನಿಧಿ.!ಯುಗದ ಅವತಾರನವ್ಯತೆಯ ಮಮಕಾರಮೌನದ ಪ್ರತಿರೂಪ ಈ ಅವ್ವತನ್ನೊಡಲ ನೋವುಗಳ ಬಚ್ಚಿಟ್ಟುಮೆರೆಯುವಳು ನಲಿಯುವಳು…. ಹೊಲದಲಿ ಸೀರೆಯೆತ್ತಿನಡು ಸಿಕ್ಕಿಸಳೆಂದರೆಆ ಬಾನು ಹಕ್ಕಿ ಪತಂಗಳ ಹಿಂಡೆನಾಚಿ ನೀರಾಗಿ ಸುರಿದಿಹವು…ಪಚ್ಚೆಯರಸಿನೊಳಗಿನ ಕೆಸರಾಟಮೈಮಾಟ ಕಂಡ ಪೈರೆಲ್ಲಾಲಕಲಕ .! ಥಕಥಕ.! ಅಬ್ಬಬ್ಬಾ.!ಸಾನುರಾಗದ ವೈಭೋಗಅವಳೊಳಗೆ ಮೈದಳೆದು ಹೊಮ್ಮಿರಲು… ಅಂತಃಕರಣದ ಒಲವರಸಿ.!ಅಗಣಿತ ವಿಷಯವರಿತ ಜ್ಞಾನನಿಧಿಪತಿಗೆ ಹೆಗಲಾಗಿ ಸಾರಥಿಯಸಾರೋಟಲಿ ಸಾಗುವ ಬಾಳಿನ ಒಡತಿ.!ಮರುಭೂಮಿ ಅಂಗಳದಿಚಿಮ್ಮುತಿಹ ಹನಿಯಲಿ ಚಿಗುರುವಓಯಸಿಸ್ ಅಂತೆ ಭರವಸೆಯ ಚೈತನ್ಯಬೆಳಕನ್ನೀಡೊ ಧ್ರುವತಾರೆಮಕ್ಕಳಿಗೆ ಜೀವದುಸಿರಧಾರೆ… ಮುದ್ದು […]

Back To Top