ಇತರೆ

ಇತರೆ

ರೈತರ ಆಪತ್ಭಾಂದವ ಜೋಕಪ್ಪನೂ..! ಮಳೆ ತರುವ ದೇವರು ಜೋಕುಮಾರಸ್ವಾಮಿ. ಗಣೇಶ ಶಿಷ್ಟ ಪರಂಪರೆಯ ದೇವರು. ಅಲ್ಲದೇ ಜಾನಪದರ ದೇವರು ಜೋಕುಮಾರಸ್ವಾಮಿ.ಗಣೇಶ ಹೊಟ್ಟೆ ತುಂಬ ಉಂಡು ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆತಾಯಿಗಳಾದ ಶಿವ-ಪಾರ್ವತಿಯರಿಗೆ ವರದಿ ಒಪ್ಪಿಸಿದರೆ, ಜಾನಪದರ ದೇವರು ಜೋಕುಮಾರಸ್ವಾಮಿ ಇಲ್ಲಿ ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ಜನತೆಯ ಕಷ್ಟ ಕಾರ್ಪಣ್ಯಗಳ ವರದಿ ನೀಡಿ ಮಳೆ ಸುರಿಸಲು ವಿನಂತಿಸಿಕೊಳ್ಳುತ್ತಾನೆ. ಹೀಗಾಗಿಯೇ ಜೋಕುಮಾರಸ್ವಾಮಿ ಒಕ್ಕಲಿಗರಿಗೆ ಮಳೆ ತರುವ ನಂಬಿಗಸ್ತ ದೇವರು. ‘ಜೋಕುಮಾರಸ್ವಾಮಿ ಮಳಿ ಕೊಡಾವ ನೋಡ್ರೀ’ ಎಂದು […]

ಪ್ರಸ್ತುತ

ಹರಪ್ಪ – ಡಿಎನ್ಎ ನುಡಿದ ಸತ್ಯ ನೂತನ ದೋಶೆಟ್ಟಿ ಈ ಶೀರ್ಷಿಕೆಯ ಕೃತಿಯನ್ನು ಲಕ್ಷ್ಮೀಪತಿ ಕೋಲಾರ ಹಾಗೂ ಸುರೇಶ್ ಭಟ್ ಬಾಕ್ರಬೈಲು  ಅವರು ಜೊತೆಯಾಗಿ ಹೊರತಂದಿದ್ದಾರೆ. ಸಾಗರ ತಾಲೂಕು ಕುಗ್ವೆಯ ಓದು ಪ್ರಕಾಶನ  2018ರಲ್ಲಿ  ಇದರ ದ್ವಿತೀಯ ಆವೃತ್ತಿ ಮಾಡಿದೆ.ಮೊದಲ ಮುದ್ರಣದ ಎಲ್ಲ ಪ್ರತಿಗಳು ಎರಡೇ ದಿನಗಳಲ್ಲಿ  ಖಾಲಿಯಾಗಿದ್ದು ಈ ಕೃತಿಯ ಮಹತ್ವವನ್ನು ಹೇಳುತ್ತದೆ. 76 ಪುಟಗಳ ಈ ಕೃತಿಯಲ್ಲಿ  ಇರುವ ಎರಡು ಲೇಖನಗಳಲ್ಲಿ  ಅತ್ಯಂತ ಕುತೂಹಲಕಾರಿ ಸಂಶೋಧನೆಗಳ ಮಾಹಿತಿ ಇದೆ. ವಂಶವಾಹಿಗಳ ಕುರಿತ ಜ್ಞಾನವನ್ನು ಮನುಕುಲದ […]

ಚೇತನಾ ಕುಂಬ್ಳೆ ಕಾವ್ಯಗುಚ್ಚ

ಚೇತನಾ ಕುಂಬ್ಳೆ ಕಾವ್ಯಗುಚ್ಚ ನಿರೀಕ್ಷೆ ನಿನ್ನ ಕೈಹಿಡಿದು ನಡೆದ ದಾರಿಯಲ್ಲಿಹೆಜ್ಜೆಗುರುತುಗಳು ಇನ್ನೂ ಮಾಸಿಲ್ಲನಿನ್ನ ಹೆಸರ ನೆಪದಲ್ಲಿ ಅಂಗೈಯಲ್ಲಿ ಹಚ್ಚಿದಮದರಂಗಿಯ ಬಣ್ಣ ಇನ್ನೂ ಅಳಿಸಿಲ್ಲ ಸಮಯವನ್ನು ದೂಷಿಸುತ್ತಾದಿನ ರಾತ್ರಿಯೆನ್ನದೆಕಾದಿದ್ದೆ ಕಾತರಿಸಿದ್ದೆಬಯಸಿದ್ದೆ ನಿನ್ನ ಸೇರಲು ಕಣ್ಗಳಿಂದುದುರಿದ ಹನಿಗಳುಮಣ್ಣಿನಲ್ಲಿ ನರಳುತ್ತಿದೆತನು ಮನ ತಣ್ಣಗಾಗಿದೆನಿನ್ನ ಬಿಸಿಯುಸಿರ ಬಿಸುಪಿಲ್ಲದೆ ಅದೆಷ್ಟು ಚುಚ್ಚು ಮಾತುಗಳನ್ನಾಲಿಸಿದ್ದೆಎಷ್ಟೊಂದು ಕೆಂಗಣ್ಣುಗಳಿಗೆ ಗುರಿಯಾಗಿದ್ದೆಎದೆ ಸೀಳುವಂತ ನೋವಿದ್ದರೂಬಲವಂತದಿ ತುಟಿಗಳಲ್ಲಿನಗುವ ತರಿಸಿದ್ದು ನಿನಗಾಗಿಯೇ ಜೊತೆಗಿದ್ದ ಒಂದಷ್ಟು ಕ್ಷಣಗಳುನೋವನ್ನು ಮರೆಸುತ್ತವೆನಿನ್ನ ನೆನೆಯುವಾಗಲೆಲ್ಲನೀನಿತ್ತ ನೆನಪುಗಳು ಸಂತೈಸುತ್ತವೆ ಈಗಲೂ ಕಣ್ಣ ನೋಟಗಳುಬಾಗಿಲಿನತ್ತ ಸರಿಯುವುದು ನಿಲ್ಲಲಿಲ್ಲನಿನ್ನಲ್ಲಿಟ್ಟ ನಂಬಿಕೆಗಳುಇನ್ನೂ ಸುಳ್ಳಾಗಲಿಲ್ಲ ಕಾರಣ […]

ನೀನೆಂದರೆ ಆಕಾಶದಾಚೆಯ ಖುಷಿ

ನೀನೆಂದರೆ ಆಕಾಶದಾಚೆಯ ಖುಷಿ ಪ್ರೇಮಾ ಟ.ಎಂ.ಆರ್. ನೀ ಮಡಿಲಲ್ಲಿ ಮಲಗಿದ್ದೆನಿನ್ನ ಮೆತ್ತಗೆ ಸವರಿದೆ ನಾನುಆಕಾಶ ಮುಟ್ಟಿದ ಖುಶಿಯೇಉಹುಂ ಅದು ಕಡಿಮೆಯೇ ಹೋಲಿಕೆಗೆಮುಗಿಲ ಚುಕ್ಕಿನೀನು ಬೊಗಸೆಯೊಳಗಿದ್ದೆನಿನ್ನ ಕಣ್ಣೊಳಗೆ ಬರೀ ನಾನಿದ್ದೆನಿನ್ನ ಕೆಂಪು ಬೆರಳುಗಳ ಪುಟ್ಟ ಬಿಗಿಮುಷ್ಠಿಯೊಳಗೆ ನಾನು ಹುದುಗಿ ಕೂರಬೇಕೆಂದುಕೊಂಡೆ ನಿನಗೆ ಎದೆಯೂಡುತ್ತಿದ್ದೆ ನಾನುಜಗದಾವ ನೋವುಗಳೂ ನಿನ್ನಮುಟ್ಟಕೂಡದೆಂಬ ಕಕ್ಕುಲಾತಿಯಲ್ಲಿನಿನಗೆ ಹಾಲನ್ನದ ತುತ್ತು ಇಕ್ಕುತ್ತಿದ್ದೆಚಂದ್ರ ಚಂದ ನಗೆ ನಗುತ್ತಿದ್ದನಿನಗೆ ಜುಟ್ಟು ಕಟ್ಟುತ್ತಿದ್ದೆ ನಾನುಇನ್ನೊಂದು ಹಡೆವ ಬಯಕೆನನ್ನ ಕಾಡದಿರಲೆಂದುನಿನಗೆಂದೇ ಇರುವ ವಾತ್ಸಲ್ಯಹಂಚಿ ಹೋಗದಿರಲೆಂದು ಅಂದು ನೀ ಕಿತ್ತಾಡಿದ ಪಾತ್ರೆ ಸ್ಟೆಂಡ್ ಚಪ್ಪಲಿಗೂಡು […]

ಹಂಗೇಕೆ..?

ಕವಿತೆ ಹಂಗೇಕೆ..? ವೀಣಾ ಪಿ. ಹಂಗೇಕೆ..?ಇಹದ ಅಂಗೈಯಹುಣ್ಣಿಗೆಕನ್ನಡಿಯ ಹಂಗೇಕೆ..? ಮೆರುಗು ಮೌನದಮಂದಿರಕೆಮಾತಿನ ಹಂಗೇಕೆ..? ಶುದ್ಧ ಶ್ವೇತದಒನಪಿಗೆರಂಗಿನ ಹಂಗೇಕೆ..? ಗತಿಯ ಗಮ್ಯದನಡುಗೆಗೆಗತದ ಹಂಗೇಕೆ..? ಅಗ್ನಿಗೆದೆಯೊಡ್ಡಿ ಗೆದ್ದಪಾವನೆಗೆಪತಿತತೆಯ ಹಂಗೇಕೆ..? ರಾಗ-ದ್ವೇಷಗಳಳಿದವಿರಕ್ತೆಗೆಅನುರಕ್ತಿಯ ಹಂಗೇಕೆ..? ಬಂಧನವ ಕಳಚಿಟ್ಟ ದಿಟ್ಟಪರಿವ್ರಾಜೆಗೆಸಂಘದ ಹಂಗೇಕೆ..? ಬದ್ಧ ಬದುಕ ಧನ್ಯಾತ್ಮಭಾವಕ್ಕೆಸಾವಿನಾಚಿನ ಮುಕ್ತಿಯ ಹಂಗೇಕೆ..? ***********************************

ಕಬ್ಬಿಗರ ಅಬ್ಬಿ -9

ಕಬ್ಬಿಗರ ಅಬ್ಬಿ -8 ಬಂಧ ಮತ್ತು ಸ್ವಾತಂತ್ರ್ಯದ ನಡುವೆ ಹದ ಹುಡುಕುತ್ತಾ. ಶ್ರೀ ಹರಿ ಕೋಟಾದ ರಾಕೆಟ್ ಉಡ್ಡಯನ ಕೇಂದ್ರವದು. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಗಣಕಯಂತ್ರದ ಪರದೆಯೇ ಕಣ್ಣಾಗಿ ಕುಳಿತಿದ್ದಾರೆ. ಮಹಿಳಾ ವಿಜ್ಞಾನಿಯ ಇಂಪಾದ ಮತ್ತು ಅಷ್ಟೇ ಸಾಂದ್ರವಾದ ದನಿಯಿಂದ ನಿಧಾನವಾಗಿ ಮತ್ತು ಖಚಿತವಾಗಿ…ಹತ್ತು..ಒಂಭತ್ತು…ಎಂಟು.. ಹೌದು. ಅದು ಕೌಂಟ್ ಡೌನ್! ಉಪಗ್ರಹದ ಭಾರ ಹೊತ್ತ ರಾಕೆಟ್ ಸಾಕಮ್ಮನ ಮಡಿಲಿಂದ ಎದೆಯುಬ್ಬಿಸಿ ಹಾರಬೇಕು.ಒಂದು….ಸೊನ್ನೆ!!.ಅದೋ ಅದೋ..ಅಧೋಮುಖದಿಂದ ಬೆಂಕಿ ಹೊಗೆ ಚಿಮ್ಮಿತು, ರಾಕೆಟ್ಟು ಜಿಗಿಯಿತು ಅನಂತಕ್ಕೆ. ವ್ಯೋಮಗಮನಕ್ಕೆ ಮೊದಲ ಜಿಗಿತ.ಸಾಕೇ?. […]

ರೇಖಾಭಟ್ ಕಾವ್ಯಗುಚ್ಛ

ರೇಖಾಭಟ್ ಕಾವ್ಯಗುಚ್ಛ ಮರುಹುಟ್ಟು ಇಳಿಯಬೇಕು ನೆನಪಿನಾಳಕೆಮುದಗೊಳ್ಳಬೇಕುಎದುರಿಗೆ ಹಾಸಿ ಹರವಿಕೊಂಡುಚೆನ್ನ ನೆನಪುಗಳಆಯಸ್ಸು ಹೆಚ್ಚಿಸಬೇಕುಮೆತ್ತಗಾದ ಹಪ್ಪಳ ಸಂಡಿಗೆಗಳುಬಿಸಿಲಿಗೆ ಮೈಯೊಡ್ಡಿಗರಿಗರಿಯಾಗಿ ಡಬ್ಬಿ ಸೇರುವಂತೆನೆನಪುಗಳು ಸದಾ ಬೆಚ್ಚಗಿರಬೇಕು ಒತ್ತಿ ತಡೆ ಹಿಡಿದ ನೋವಿಗೂಆಗಾಗ ಬಿಕ್ಕಲುರಂಗ ಸಜ್ಜಿಕೆ ಬೇಕುತುಂಬಿಕೊಂಡ ಮಂಜು ನಂಜುಪೂರ್ತಿ ಹೊರಹೋಗಬೇಕು ಬಾಚಿ ಕರೆಯಬೇಕುನೆನಪೆಂಬ ನೆಂಟನನ್ನುನಿನ್ನೆಯ ನಂಟಿನ ಗಂಟುಗಳಬಿಡಿಸುತ್ತ ಹರಟಬೇಕುಅಂಟಿಯೂ ಅಂಟದಿರುವನೆನಪಿಗೆ ಮೀಸಲಾದಸಾಕ್ಷ್ಯಗಳಹೊರಗೆಳೆದು ಹೊದೆಯಬೇಕು ಇರಬೇಕು ನಿನ್ನೆಗಳಿಗೂನೆನಪುಗಳೆಂಬ ಮರುಹುಟ್ಟುಆಗಾಗ ಹಾಯುತಿರಲಿಇಲ್ಲಸಲ್ಲದ ನೆಪವಿಟ್ಟು.. ಅರ್ಥವಾಗದಿದ್ದರೆ ಹೇಳಿ ಅವನು ನನ್ನ ಕಂಗಳಲ್ಲಿಹೊಳೆಯುತ್ತಾನೆಹೊಳೆಯೂ ಆಗುತ್ತಾನೆಇಷ್ಟು ಸಾಕಲ್ಲವೇ ನಿಮಗೆಅವನು ನನಗೇನೆಂದು ತಿಳಿಯಲು ಅವನ ನಗುವ ಕಂಡು ನಾನುಪೂರ್ತಿ ಖಾಲಿಯಾಗುತ್ತೇನೆಆ […]

ಅನುವಾದ ಸಂಗಾತಿ

ಅವ್ವ ಕನ್ನಡ ಮೂಲ: ಎ.ಜಿ.ರತ್ನಾ ಕಾಳೇಗೌಡ ಇಂಗ್ಲೀಷಿಗೆ: ರತ್ನಾ ನಾಗರಾಜ್ ಏನೆಲ್ಲ ಅಡಗಿದೆಅವ್ವ ನಿನ್ನೆದೆಯೊಳಗೆನಿನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿ ರಾಗಿತಲೆಯೊಳಗೆ ಬೆರಳುಗಳಿಂದತಡಕಿ ತಡಕ ಹೇನು ಹೆಕ್ಕಿಸಾಹಿಸುತ್ತಿದ್ದೆಆಗ ಅದೇನೋ ಅಕ್ಷರ ವಲ್ಲದಸ್ವರ ನಿನ್ನ ಬಾಯಿಂದಎಷ್ಟೋ ಸಾರಿ ಅರ್ಥಕ್ಕಾಗಿಹುಡುಕಿ ಸೋತಿದ್ದೇನೆಸಿಗಲಿಲ್ಲ ನೀನು ಹೇಳುತ್ತಿದ್ದಸಂಗತಿಗಳೆಲ್ಲನೆನಪಿನಲ್ಲಿದ್ದಿದ್ದರೆಒಂದೊಂದು ಮಹಾಗ್ರಂಥವಾಗುತ್ತಿದ್ದವು ಇಂದು ವಾರಗಿತ್ತಿಯರ ಕಾಟಗಂಡನ ಕಾಟ ಸಾಲದು ಎಂದು ಅತ್ತೆ ಮಾವನ ಕಾಟಎಲ್ಲವನ್ನು ಹೇಗೆ ಸಹಿಸಿಕೊಂಡೆ ಅವ್ವನಿನ್ನ ಒಂದೊಂದು ಕಣ್ಣೀರಕಥೆಯನ್ನು ಹೇಳುವಾಗನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ ಸಾರಿಗೆ ಉಪ್ಪು ಜಾಸ್ತಿ ಆಗಿದೆಯಾಕೆಂದುಕೊಳ್ಳಿಯಿಂದಲೇಮುಂಗೈಗೆ ಬೇರೆ ಹಾಕಿದ್ದಳುಅತ್ತೆಸುಟ್ಟ […]

ಕೆಲವರು ಹಾಗೆ

ಕವಿತೆ ರೇಷ್ಮಾ ಕಂದಕೂರ. ಕೆಲವರು ಹಾಗೆಕೆಲಸ ಸಾಧಿಸುವ ತನಕ ಒಡನಾಡಿಗಳುನಂತರ ಸರಿದುಹೋಗುವ ನರನಾಡಿಗಳು ಕೆಲವರು ಹಾಗೆಗೆಲ್ಲುವ ಕುದುರೆಯಿಂದ ಓಡುತಸಲಾಮು ಮಾಡಿ ಬೇಳೆ ಬೇಯಿಸಿಕೊಳ್ಳುವರು ಕೆಲವರು ಹಾಗೆಮೋಹದ ಬಲೆಯ ಬೀಸಿಕಬಳಿಕೆಯ ನಂತರ ತಿರುಗಿನೋಡದವರು ಕೆಲವರು ಹಾಗೆಮುಂದೊಂದು ನಡೆಯಲಿಹಿಂದೆ ಧೂರ್ತರಾಗಿ ಗುದ್ದುಕೊಡುವರು ಕೆಲವರು ಹಾಗೆನಿಷ್ಟಾವಂತರಂತೆ ನಟಿಸಿಒಳಗೊಳಗೆ ಕೊರೆಯುವ ಕೀಟದಂತವರು ಕೆಲವರು ಹಾಗೆಸತ್ಯ ಗೊತ್ತಿದ್ದರು‌ಸುಳ್ಳಿನ ಬಿಡಾರ ಹೂಡುವರು ಕೆಲವರು ಹಾಗೆನೇಮ ನಿತ್ಯ ಮಾಡುತಕಳ್ಳನೋಟ ಬೀರುವರು ಕೆಲವರು ಹಾಗೆಜೊತೆಗಾರರಂತೆ ಮುಖವಾಡದಿಗುಪ್ತಚರರಂತೆ ಸಂಚನು ಹೂಡುವರು ಕೆಲವರು ಹಾಗೆಗೊತ್ತಿದ್ದರು ಅವರು ನಮ್ಮವರುಎಂಬ ಭ್ರಮೆಯಲಿ ಸಹಿಸಿಕೊಳ್ಳುವರು. *****

ನಮ್ಮ ಮಕ್ಕಳು ಮಕ್ಕಳಲ್ಲ

ಸರಿತಾ ಮಧು ಮಕ್ಕಳಿಗಾಗಿ ಹಂಬಲ ಎಲ್ಲರದು. ಅಂದಿನಿಂದ ಇಂದಿನವರೆಗೂ ಮಕ್ಕಳು ಮನೆಯ ನಂದಾದೀಪ. ಮಕ್ಕಳಿರಲವ್ವ ಮನೆತುಂಬ ಎನ್ನುವ ಕಾಲ ಸರಿದು ಆರತಿಗೊಬ್ಬಳು ಕೀರ್ತಿ ಗೊಬ್ಬ , ತದನಂತರ ನಾವಿಬ್ಬರು ನಮಗೊಂದು ಮಗು ಅನ್ನುವ ಕಾಲಘಟ್ಟದಲ್ಲಿದ್ದೇವೆ. ಇದೆಲ್ಲವೂ ಸರಿಯಷ್ಟೇ ಆಧುನಿಕತೆಯ ಬೆನ್ನನೇರಿದ ಈಗಿನವರು ಮಗುವಿನ್ನೂ ಗರ್ಭದಲ್ಲಿರುವಾಗಲೇ ವಿದ್ಯಾಭ್ಯಾಸದ ವಿಚಾರಕ್ಕೆ ತಲೆಬಿಸಿ ಮಾಡಿಕೊಳ್ಳುತ್ತಾರೆ.ಮೊದಲೆಲ್ಲಾ ಹೀಗಿರುತ್ತಿತ್ತೇ? ಅವಿಭಕ್ತ ಕುಟುಂಬಗಳಲ್ಲಿ ಅನೌಪಚಾರಿಕವಾಗಿ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತಿತ್ತು.ಐದುವರ್ಷಗಳು ಪೂರ್ಣ ತುಂಬುವವರೆಗೂ ಬಾಲ್ಯಾವಸ್ಥೆಯ ಎಲ್ಲಾ ಸುಖಗಳನ್ನು ಸಂಪೂರ್ಣ ಬಾಚಿಕೊಳ್ಳುತ್ತಿದ್ದೆವು. ಮನೆಯ ಅಜ್ಜ ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ, […]

Back To Top