ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಬಾಪು ಮತ್ತು ವೈರುಧ್ಯ

ಲಕ್ಷ್ಮೀದೇವಿ ಪತ್ತಾರ

ಬುದ್ಧನಂತೆ ಸಂಸಾರ ತೊರೆದು ಹೋಗದಿದ್ದರೂ
ಸಂಸಾರದಲ್ಲಿದ್ದುಕೊಂಡೆ
ಯೋಗಿಯಂತೆ ಬಾಳಿಬಿಟ್ಟರು ನಮ್ಮ ಬಾಪು

ಎಷ್ಟೇ ಉನ್ನತ ಶಿಕ್ಷಣ ಪಡೆದರೂ
ಉನ್ನತ ಹುದ್ದೆಯನ್ನೇರದೆ
ಚರಕದ ಚಕ್ರದಲ್ಲಿ ಕಳೆದುಹೋದ ಕರ್ಮಯೋಗಿ ನಮ್ಮ ಬಾಪು

ರಾಜಕಾರಣದಲ್ಲಿ ಇದ್ದರೂ
ರಾಜಕಾರಣಿ ಆಗದೆ
ಅಧಿಕಾರ, ಅಂತಸ್ತು ತ್ಯಜಿಸಿ ತ್ಯಾಗಿಯಂತಿದುಬಿಟ್ಟರು ನಮ್ಮ ಬಾಪು

ಶ್ರೀಮಂತನಾಗಿ ಹುಟ್ಟಿ
ಉಪ್ಪು ಹುಳಿ ಖಾರದ ರುಚಿ ಕಂಡೂ
ಸಿರಿಭೋಗ ಅನುಭವಿಸದೆ
ಫಕೀರನಂತೆ ಬಾಳಿಬಿಟ್ಟರು ನಮ್ಮ ಬಾಪು

ಎಷ್ಟೇ ವೈರುಧ್ಯಗಳಿದ್ದರೂ
ಅವನ್ನೆಲ್ಲ ದಾಟಿ ಮಹಾಮಾನವನಾಗಿಬಿಟ್ಟರು
ಕೆಸರನಲ್ಲಿದ್ದರು ಕೆಸರಿನಂತಾಗದೆ
ಕಮಲದಂತೆ ಅರಳಿ ಬಿಟ್ಟರು ನಮ್ಮ ಬಾಪು


About The Author

Leave a Reply

You cannot copy content of this page

Scroll to Top