ಬಾಪು ಮತ್ತು ವೈರುಧ್ಯ

ಕಾವ್ಯಯಾನ

ಬಾಪು ಮತ್ತು ವೈರುಧ್ಯ

ಲಕ್ಷ್ಮೀದೇವಿ ಪತ್ತಾರ

ಬುದ್ಧನಂತೆ ಸಂಸಾರ ತೊರೆದು ಹೋಗದಿದ್ದರೂ
ಸಂಸಾರದಲ್ಲಿದ್ದುಕೊಂಡೆ
ಯೋಗಿಯಂತೆ ಬಾಳಿಬಿಟ್ಟರು ನಮ್ಮ ಬಾಪು

ಎಷ್ಟೇ ಉನ್ನತ ಶಿಕ್ಷಣ ಪಡೆದರೂ
ಉನ್ನತ ಹುದ್ದೆಯನ್ನೇರದೆ
ಚರಕದ ಚಕ್ರದಲ್ಲಿ ಕಳೆದುಹೋದ ಕರ್ಮಯೋಗಿ ನಮ್ಮ ಬಾಪು

ರಾಜಕಾರಣದಲ್ಲಿ ಇದ್ದರೂ
ರಾಜಕಾರಣಿ ಆಗದೆ
ಅಧಿಕಾರ, ಅಂತಸ್ತು ತ್ಯಜಿಸಿ ತ್ಯಾಗಿಯಂತಿದುಬಿಟ್ಟರು ನಮ್ಮ ಬಾಪು

ಶ್ರೀಮಂತನಾಗಿ ಹುಟ್ಟಿ
ಉಪ್ಪು ಹುಳಿ ಖಾರದ ರುಚಿ ಕಂಡೂ
ಸಿರಿಭೋಗ ಅನುಭವಿಸದೆ
ಫಕೀರನಂತೆ ಬಾಳಿಬಿಟ್ಟರು ನಮ್ಮ ಬಾಪು

ಎಷ್ಟೇ ವೈರುಧ್ಯಗಳಿದ್ದರೂ
ಅವನ್ನೆಲ್ಲ ದಾಟಿ ಮಹಾಮಾನವನಾಗಿಬಿಟ್ಟರು
ಕೆಸರನಲ್ಲಿದ್ದರು ಕೆಸರಿನಂತಾಗದೆ
ಕಮಲದಂತೆ ಅರಳಿ ಬಿಟ್ಟರು ನಮ್ಮ ಬಾಪು


Leave a Reply

Back To Top