Category: ಕಾವ್ಯಯಾನ

ಕಾವ್ಯಯಾನ

ಗಜಲ್

ಗಜಲ್ ಶುಭಲಕ್ಷ್ಮಿ ಆರ್ ನಾಯಕ ಇತರರ ಅಲ್ಲ ಸಲ್ಲದ ನುಡಿಗೆ ನೋಯದಿರು ಗೆಳತಿಪರರು ಆಡುವ ಬಿರುನುಡಿಗಳಿಗೆ ಅಂಜದಿರು ಗೆಳತಿ ನಿನ್ನಾತ್ಮ ಸಾಕ್ಷಿಯದು ನಿಜವನ್ನೇ ನುಡಿಯುವಾಗಕುಹಕಿಗಳ ಕುಹಕಕ್ಕೆ ಮನಕೆಡಿಸಿಕೊಳದಿರು ಗೆಳತಿ ಧರಣಿಯ ಮನುಜರಲ್ಲಿ ಮಾನವೀಯತೆಯ ತುಂಬಲುವ್ಯರ್ಥವಾಗಿ ಎಂದಿಗೂ ನೀನು ಹೆಣಗದಿರು ಗೆಳತಿ ಕೊಡುವ ದಾನ ಧರ್ಮಗಳಲಿ ಪುಣ್ಯವಿದೆ ಎಂದರಿತುಅಪಾತ್ರರಿಗೆ ದಾನ ಧರ್ಮವನು ಮಾಡದಿರು ಗೆಳತಿ ಸಾಂತ್ವನವ ನಯದಿ ಹೇಳುತ ಧೈರ್ಯ ನೀಡುವೆಯೆಂದುಸಂಕುಚಿತಮನದವರಿಗೆ ಉಪದೇಶಿಸದಿರು ಗೆಳತಿ ನಂಬಿಕೆ ವಿಶ್ವಾಸದಲಿ ಧೈರ್ಯ ತುಂಬುವ ಜನರನುನಿನ್ನ ಕಠೋರತೆಯಿಂದ ದೂರ ತಳ್ಳದಿರು ಗೆಳತಿ ಎಲ್ಲರೂ […]

ಅಪ್ಪನ ಕೊನೇ ಪತ್ರ.!

ಕವಿತೆ ಅಪ್ಪನ ಕೊನೇ ಪತ್ರ.! ಅಲ್ಲಾಗಿರಿರಾಜ್ ಕನಕಗಿರಿ ಬರುವ ಹೊಸ್ತಿಲು ಹುಣ್ಣಿಮೆಗೆರಕ್ತ ಹೆಪ್ಪುಗಟ್ಟುವ ಚಳಿ ಗಾಳಿ. ಒಂದು ವೇಳೆ ನಾನು ಕೊರೆಯುವ ಚಳಿಗೆಬೀಸುವ ವಿಷ ಗಾಳಿಗೆ ದಿಲ್ಲಿ ಗಡಿಯಲ್ಲಿಹೆಣವಾದರೆ ಯಾರೂ ಹೆದರಬೇಡಿ. ನನ್ನ ಹೆಣಕ್ಕೆ ಗೋರಿ ಕಟ್ಟುವ ಬದಲುಕೊರೆಯುವ ಚಳಿಯಲ್ಲಿ ನನ್ನ ಹೆಣ ಸುಟ್ಟು ಮೈ ಬಿಸಿ ಮಾಡಿಕೊಳ್ಳಿ.ಮುಂದಿನ ದಿನಗಳ ಹೋರಾಟಕ್ಕೆ ಅಣಿಯಾಗಿ. ನನ್ಹೆಣ ಸುಟ್ಟ ಬೂದಿ ಮನೆಗೆ ಬಂದರೆ ನಿನ್ನವ್ವನ ಹಣೆಗೆ ಹಚ್ಚಿ.ಕಣ್ಣೀರು ಬಂದರೆ ಬೆಳೆಗೆ ಹರಿಸಿಬಿಡಿ.ನಾ ಇಲ್ಲವೆಂದು ಒಕ್ಕಲುತನ ಜೊತೆಗೆ ಹೋರಾಟಎಂದೂ ನಿಲ್ಲದಿರಲಿ ಮಗನೆ. […]

ನೀಳ್ಗೆರೆ

ಕವಿತೆ ನೀಳ್ಗೆರೆ ಅಕ್ಷತಾ ರಾಜ್ ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆನಾನೋ !ನೀನೋ! ಉಸುರುತಿಹುದು ನೀಳ್ಗೆರೆ || ಊರು ಕೇರಿ ಸುತ್ತಿ ಸವೆದ ಪಾದ ತಿರುಗಿ ಸೋಲಲುಅಲ್ಲೇ ಮಂಡಿಯೊಳಗೆ ನಿಂತ ಕಾಲ್ಗಳವು ನಕ್ಕವುಮುಸುಕಿನೊಳಗೆ ಜಟ್ಟಿಗುದ್ದು ಕಂಡವನಾರೋ ಅರಿಯರುಮೊದಲು ಯಾರು ಎಂಬ ಈರ್ಷ್ಯೆ ಸುತ್ತಲಿದ್ದ ಜಗದೊಳು ಹಲವು ಬಣ್ಣ ಇಹುದು ಅಲ್ಲಿ ಕಾಣದಿಹ ಕತ್ತಲುನೂರು ರುಚಿಯು ಸೇರಿ ನಡೆಯುತಿಹುದು ಹಿಮನದಿಬೀಸುಗಾಳಿಯೆಲ್ಲಿ ಒಂಟಿ? ಸುತ್ತಲಿಹರು ಬೇಡರುಆದರೊಂದು ಪ್ರಶ್ನೆಯಿಹುದು ಯಾರು ಮುಂದೆ ನಡೆಯೊಳು ಅರಳಿ ನಿಂತ ಕಿರಣದೆದುರು ‘ನಾನು’ ಮಂಜುಬಿಂದುಕರಗಲೇನೋ! […]

ಗಜಲ್

ಗಜಲ್ ವಿನುತಾ ಹಂಚಿನಮನಿ ಹುಟ್ಟಿನಿಂದ ಚಟ್ಟದ ವರೆಗೆ ಹೆಣ್ಣಿಗೆ ಅಸ್ತಿತ್ವಕ್ಕಾಗಿ ಹೋರಾಟಸಿಕ್ಕ ಬದುಕ ಭವಸಾಗರದಲಿ ಈಜಿ ದಾಟುವದಕ್ಕಾಗಿ ಹೋರಾಟ ತಾಯಿಯ ಗರ್ಭದಲ್ಲಿರುವ ಹೆಣ್ಣುಭ್ರೂಣ ನೇಣು ತಪ್ಪಿಸಲು ಸೆಣಸಾಟಪುರುಷಪ್ರಧಾನ ಲೋಕದಲಿ ಪ್ರಾಣಸಹಿತ ಬರುವದಕ್ಕಾಗಿ ಹೋರಾಟ ಒಡಹುಟ್ಟಿರುವ ಅಣ್ಣ ತಮ್ಮಂದಿರೊಂದಿಗೆ ಹಕ್ಕಿಗಾಗಿ ಪರದಾಟಕನಿಷ್ಠ ವಿದ್ಯೆ ಅನ್ನ ಬಟ್ಟೆಯ ಪಾಲು ಪಡೆಯುವದಕಾಗಿ ಹೋರಾಟ ಯೌವನಾವಸ್ಥೆಯಲ್ಲಿ ಕಾಮುಕರಿಂದ ಅತ್ಯಾಚಾರದ ಕೆಣಕಾಟಕನ್ಯೆಗೆ ಬಹುಮೂಲ್ಯ ಶೀಲ ಕಾಯ್ದುಕೊಳ್ಳುವದಕ್ಕಾಗಿ ಹೋರಾಟ ಪತ್ನಿಯ ಬೇಕು ಬೇಡಗಳ ಹತ್ತಿಕ್ಕುತ ಬಾಳ ಬಂಡಿಯ ಎಳೆದಾಟಅವಲಂಬಿತರ ಅವಶ್ಯಕತೆಗಳ ಪೂರೈಸುವದಕ್ಕಾಗಿ ಹೋರಾಟ ಇಳಿವಯಸ್ಸಿನಲಿ ಪರಾಧೀನತೆ […]

ಪ್ರೇಮವ್ಯೋಮಯಾನ…!

ಕವಿತೆ ಪ್ರೇಮವ್ಯೋಮಯಾನ…! ಡಾ. ಅರಕಲಗೂಡು ನೀಲಕಂಠ ಮೂರ್ತಿ. ಡಾ. ಅರಕಲಗೂಡು ನೀಲ ಚಂದ್ರನ ಗುರುತು ಹಿಡಿಯುವುದೇ ಹಾಗೆಗುರುತ್ವ ಹಗುರುಮೇಲ್ಮೈ ಭೂಮಿಗಿಂತ ನವುರುಮೇಲೆ ಬಿದ್ದುದೆಲ್ಲದರ ಅಲ್ಪ ಜಿಗಿತಹಾಗಿದ್ದೂ ನಮ್ಮ ಜನ ನೂರಾರುನಗರಿ ನಿರ್ಮಿಸಿ ಚಂದಿರನೀಗನಿರ್ಭರ ಭರ್ತಿ ಭಾರ! ಚಂದ್ರನಾಗರಿಕ ಸೂರ್ಯಕುವರತಾನಲ್ಲಿಂದಲೆ ಇಣುಕಿಅವನಿಯತ್ತ ಕಣ್ಣಲ್ಲೆ ಕುಟುಕಿಭುವನಸುಂದರಿ ವಸುಕಾಂತೆಗೆಗಂಟು ಮೂರನುಅಂಘ್ರಿ ಏಳನುಅಂಗೀಕರಿಸಿ ಪೂರ್ಣಚಂದ್ರನ ಕಡೆರಾಕೆಟ್ಟು ಬಿಟ್ಟನು! ದಿಗ್ಭ್ರಾಂತಳಾದಳು ವಸುಕಾಂತೆಕೇಳರಿಯದೆ ಕಂಡ ಆ ಚಂದ್ರಸಂತೆ!ಭುವಿಯಲ್ಲಿ ಬರಿ ಬಸ್ಸು, ಈಗೀಗಸೂಪರ್ ಸ್ಪೀಡ್ ರೈಲು, ವಿಮಾನಮಾನವರಹಿತ ಅಥವಾಅವನನ್ನೂ ಹೊತ್ತ ರಾಕೆಟ್ಟುಆಗೊಮ್ಮೆ ಈಗೊಮ್ಮೆ ವಿರಳವಾಗಿ! ಇಲ್ಲಿ, ವ್ಯೋಮದ […]

ಗಜಲ್‌

ಗಜಲ್ ಪ್ರಭಾವತಿ ಎಸ್ ದೇಸಾಯಿ ಬಳ್ಳಿಯಂತೆ ಬಳಕುತ ಗೆಜ್ಜೆ ಸದ್ದಲಿ ಜಗ ಗೆಲ್ಲುವ ಆಸೆಕಣ್ಣ ನೋಟದಲಿ ಹೂ ಬಾಣ ಹೂಡಿ ಹೃದಯ ಕೊಲ್ಲುವ ಆಸೆ ಎದೆ ಹೊಲದಲಿ ಗೆಜ್ಜೆ ಹೆಜ್ಜೆ ಮೂಡಿಸುತ ಹೊಸ ಹಾದಿ ಮಾಡಿದೆಒಲವಿನ ಅಮಲೇರಿಸುವ ಹನಿ ಹನಿ ಶರಾಬು ಚೆಲ್ಲುವ ಆಸೆ ಪ್ರೀತಿಯ ಬನದಲಿ ಚಿಗುರಿದ ಹೂ ಕಾಯಿ ಹಣ್ಣು ಮನ ಸೆಳೆಯುತಿವೆಅನುರಾಗದ ತೋಟದಲ್ಲಿನ ಮಾಗಿದ ಮಾವು ಮೆಲ್ಲುವ ಆಸೆ ಮನದಂಗಳದಲಿ ಗರಿಬಿಚ್ಚಿದ ನಾಟ್ಯ ಮಯೂರಾಗಿ ಕುಣಿದೆಬೆರಗು ಮೂಡಿಸುವ ಚೆಲುವ ಶಿಲಾ ಬಾಲೆಯಾಗಿ ನಿಲ್ಲುವ […]

ಹೊಸ‌ ದಿಗಂತ

ಕವಿತೆ ಹೊಸ‌ ದಿಗಂತ ಅಕ್ಷತಾ ಜಗದೀಶ ಚುಮ್ಮು ಚುಮ್ಮು‌ ನಸುಕಿನಲಿಮುಂಜಾನೆಯ ನಡಿಗೆ..ತಾ ಬರುವ ಸೂಚನೆ ನೀಡುತದಿನಕರ ಮೂಡುವ ಘಳಿಗೆ..ಹಕ್ಕಿಗಳ ಮಧುರ ಇಂಚರ ನಾದತಲೆ ತೂಗುತ ನಿಂತಿವೆನಡೆವ ದಾರಿಯ ಇಕ್ಕೆಲಗಳಲ್ಲಿಹೂ ಗಿಡ ಬಳ್ಳಿಗಳು….. ಅದೇಕೋ ಏನೋ..ಕಾಣದಾಗಿದೆ ಇಂದುಆ ಸುಂದರ ಕ್ಷಣಗಳು..ಮುಂಜಾನೆ ನಡಿಗೆ ಇದೆ…ಮೈ ಕೊರೆಯುವ ಚಳಿಯು ಇದೆದಿನಕರನ ಆಗಮನವು ಆಗುತಿದೆ..ಆದರೇನು…?ಹಕ್ಕಿಗಳ ನಾದವಿಲ್ಲದಾರಿಯ ಇಕ್ಕೆಲಗಳಲ್ಲಿಸ್ವಾಗತ ಕೋರುತ ನಿಂತಮರಗಿಡಗಳು ಕಾಣದಾಗಿದೆ… ಹಾ! ಈಗ ಅರಿವಾಯಿತೆನಗೆನಾ ನಡೆದ ದಾರಿ ಈಗಮರ ಗಿಡಗಳ‌ ನುಂಗಿ ನಗರವಾಗಿದೆಕೆರೆಗಳಿಲ್ಲ ಮರ ಗಿಡಗಳಿಲ್ಲಚಿಲಿಪಿಲಿ ಹಾಡುವ ಹಕ್ಕಿಗಳಿಲ್ಲ ವಿಪರ್ಯಾಸವೆಂದರೆ …..ಅದರ […]

ಗಜಲ್‌

ಗಜಲ್ ರತ್ನರಾಯಮಲ್ಲ ಮಕ್ಕಳಾಡುವ ಅದಲು-ಬದಲು ದೊಡ್ಡವರು ಆಡುತಿದ್ದಾರೆ ಇಂದುದಡ್ಡತನದಿಂದ ಸಮಾಜದ ನೆಮ್ಮದಿಗೆ ವಿಷ ಹಾಕುತಿದ್ದಾರೆ ಇಂದು ತಲೆ ಹಿಡಿಯುವವರ ದಂಡು ಕೌರವರನ್ನೂ ಮೀರಿಸುತ್ತಿದೆ ಇಂದುಸಾಕ್ಷರರೆ ಮೌಲ್ಯಗಳನು ರಣಹದ್ದುಗಳಂತೆ ತಿನ್ನುತಿದ್ದಾರೆ ಇಂದು ಶೀಲವು ಹಣದ ನಶೆಯಲ್ಲಿ ಶಿಥಿಲವಾಗುತಿರುವುದೆ ಹೆಚ್ಚು ಇಂದುವಾಸನೆಯಲ್ಲಿ ಪರಿಚಿತರೆ ಅಪರಿಚಿತರಾಗಿ ಕೊಲ್ಲುತಿದ್ದಾರೆ ಇಂದು ಮಾಂಸ ಮಾರುವ ಸಂತೆಯಲ್ಲಿ ಮನಸ್ಸು ಅನಾಥವಾಗಿ ನರಳುತಿದೆನಮ್ಮವರೇ ನಮ್ಮ ಮಾನ ಹರಾಜು ಮಾಡಲು ಕಾಯುತಿದ್ದಾರೆ ಇಂದು ಕಲಬೆರಕೆಯ ತಾಂಡವ ಪ್ರೀತಿಯಲ್ಲಿ ಸಹಿಸಲು ಆಗುತಿಲ್ಲ ‘ಮಲ್ಲಿ’ಯಾರನ್ನೂ ದೂರಲಾಗದೆ ಜನರು ದಿನಾಲೂ ಸಾಯುತಿದ್ದಾರೆ ಇಂದು […]

ಮಣ್ಣಿಗೆ ವಿದಾಯ ಹೇಳುತ್ತೇವೆ!

ಕವಿತೆ ಮಣ್ಣಿಗೆ ವಿದಾಯ ಹೇಳುತ್ತೇವೆ! ಅಲ್ಲಾಗಿರಿರಾಜ್ ಕನಕಗಿರಿ ಗುಟ್ಕಾ- ತಂಬಾಕು ಬೀರ್ – ಬ್ರಾಂಡಿಮಾರುವವರು ದೇಶವಾಳುತ್ತಿದ್ದಾರೆ.ಅವರ ವಸ್ತುವಿಗೆ ಅವರೇ ಬೆಲೆ ನಿಗದಿ ಮಾಡಿಕೊಂಡು. ಆದರೆ ನಾವು ಇಡೀ ದೇಶಕ್ಕೆ ಅನ್ನ ಕೊಡುತ್ತೇವೆ.ಬೆಳೆಗೂ ಬದುಕಿಗೂ ಬೆಲೆ ಇಲ್ಲದೆ ಬೀದಿ ಪಾಲಾಗಿದ್ದೇವೆ. ಅನ್ನ ಉಂಡವರು ಒಂದು ಸಲ ಯೋಚಿಸಿ ನೋಡಿ.ಅನ್ನದಾತನ ನೋವು ಸಾವು ಸಂಕಟ ಏನೆಂದು. ಇಲ್ಲವೆಂದರೆ ನಾವೇ ಮಣ್ಣಿಗೆ ವಿದಾಯ ಹೇಳುತ್ತೇವೆ.ಮಕ್ಕಳ ಹೆಗಲ ಮೇಲೆ ಇಡಬೇಕೆಂದ ನೇಗಿಲು,ನಿಮ್ಮ ಮ್ಯೂಸಿಯಂನಲ್ಲಿ ಇಟ್ಟು ಸಲಾಂ ಹೊಡೆಯುತ್ತೇವೆ ***************************

ಎದೆಯಲ್ಲಿ ಅಡಗಿದ ಬೆಳಕು

ಕವಿತೆ ಎದೆಯಲ್ಲಿ ಅಡಗಿದ ಬೆಳಕು ಡಾ ರೇಣುಕಾ ಅರುಣ ಕಠಾರಿ ನನಗೆ ನಾನಾಗುವಾಸೆನಿನ್ನನೂ ಒಳಗೊಂಡು ನೋವಿನ ನಡುವೆಯೂನನ್ನೆದೆಯಲಿ ಹೂವರಳಿಸಿನಕ್ಷತ್ರ ಪುಂಜಗಳ ಕಣ್ತಂಬಿಸಿಆ ಆಕಾಶದಲ್ಲಿ ದಾರಿ ಕಾಣುವಾಸೆ ಹೆಚ್ಚಾಗಿದೆ. ನನ್ನ ಪ್ರೀತಿ-ನೀತಿದುಃಖ-ದುಮ್ಮಾನಗಳ ನಡುವೆಆಸೆ ನಿರಾಸೆಗಳ ಕೇಂದ್ರದ ಸಾಗರದಲ್ಲಿಯುಬದುಕಿನ ಸಾಂದ್ರ ನೀನೇ. ಪುಟಿದೇಳುವುದು ಒಮ್ಮೊಮ್ಮೆ ನಿನ್ನಲೂಆರ್ಭಟ ದುರಂಕಾರಎದೆಯಲ್ಲಿ ಅಡಗಿದಶ್ರೇಷ್ಠತೆಯ ಹಾವ ಭಾವದಲ್ಲಿಅಲ್ಲಗಳಿದಾಗಲೆಲ್ಲ ನಾನುಅನುದಿನವು ಸಾಯುತಲಿರುವೆ. ಆಗಾಗಸಂಜೆಯ ತಂಗಾಳಿಯ ಬೊಗಸೆಯಲಿಕೆನ್ನೆಗಳ ತುಂಬಿಸಿಎದೆಗೇರಿಸಿಕೊAಡಾಗನಿನ್ನೆದೆಯ ಬಡಿತದ ಸದ್ದುಗಳಲೆಕ್ಕ ಹಾಕುವೆನು. ಪ್ರತಿ ಮಿಡಿತವೂಬದುಕಿನಜಮಾ ಖರ್ಚಿನ ಪುಟಗಳೇ.ಪುಟಗಳ ಲೆಕ್ಕವೆ ಮೀರಿ ನಿಂತಿರುವಚಿಲುಮೆಯ ಸಾಕ್ಷತ್ಕಾರ ನೀನು. ಇದಕ್ಕೆಎಲ್ಲವುಗಳ ನಡುವೆನಿನ್ನನೂ […]

Back To Top