Category: ಕಾವ್ಯಯಾನ

ಕಾವ್ಯಯಾನ

ವಿರಹಿ ದಂಡೆ

ಪುಸ್ತಕ ಪರಿಚಯ ವಿರಹಿ ದಂಡೆ ವಿಪ್ರಯೋಗದಲ್ಲಿ ಅರಳಿದ ಶೃಂಗಾರ ಕವಿತೆಗಳು ವಿರಹಿ ದಂಡೆಕವನ ಸಂಕಲನಲೇಖಕ : ನಾಗರಾಜ ಹರಪನಹಳ್ಳಿಪ್ರಕಾಶನ: ನೌಟಂಕಿ. ರಾಜಾಜಿ ನಗರ, ಬೆಂಗಳೂರು.ಬೆಲೆ : ೮೦/- ನಾಗರಾಜ್ ಹರಪನಹಳ್ಳಿ ಎಂಬ ಮಹೋದಕ ಪ್ರತಿಭೆ ಪ್ರೀತಿ, ಪ್ರೇಮ, ಪ್ರಣಯದ ಪರಾಕಾಷ್ಠೆಯನ್ನು ತಲುಪಿ ಸದಾ ಯಯಾತಿಯ ಧಿರಸನ್ನು ತೊಟ್ಟು ಎದೆ ತೆರೆದು ನಿಂತ ಅಪ್ಪೆ ಹುಳಿ, ಒಗರನ್ನು ಮೈಗೂಡಿಸಿಕೊಂಡಿರುವ ಬಯಲು ಸೀಮೆಯಿಂದ ದಂಡೆಗೆ ಬಂದ ಪ್ರೀತಿಯ ಕಡುಮೋಹಿ. ಈ ಕವಿ ಹುಟ್ಟಿದ್ದೇ ಗಾಢ ಆಲಿಂಗನದ ಆರ್ದ್ರ ಉಸಿರಿನ, ಅದುರುವ […]

ಬದುಕುವೆ ರಾಜಹಕ್ಕಿಯಾಗಿ

ಕವಿತೆ ಬದುಕುವೆ ರಾಜಹಕ್ಕಿಯಾಗಿ ರಾಘವೇಂದ್ರ ದೇಶಪಾಂಡೆ ಈಡೇರುವವು ಆಸೆಗಳು ಸಾವಿರಾರುಈ ಭವದಲಿ…ಗಟ್ಟಿತನದ ಅಪೇಕ್ಷೆಯ ಆಶಯದಲಿನನ್ನೀ ಭಾವಪರವಶದಲಿ… ಹೊರಹೊಮ್ಮಿದವು ನಿರೀಕ್ಷೆಗಳುಕಮ್ಮಿಯೆನಿಸಿತಾದರೂ…ಪ್ರೀತಿಯ ಹುಟ್ಟು ಮತ್ತು ಸಾವಿನಲಿಕಾಣಸಿಗದಿಲ್ಲಿ ವ್ಯತ್ಯಾಸ… ಜೀವಿಸುತಿರುವೆ ಅಸದೃಶವಾಗಿಕತ್ತಲ ಗರ್ಭದಲಿ…ಕಟ್ಟಿಕೊಂಡ ಹಾಳೆಯ ಕೋಟೆ ಮಧ್ಯೆತೂರಿಬರುವ ಪ್ರೇಮಗಾಳಿಯಲಿ… ಇದೆ ಎನಗೆ ತಾಳ್ಮೆ ಕಾಯುವಲಿಅದೇ ತೃಪ್ತಭಾವದಲಿ…ಬದುಕುವೆ ಖಂಡಿತ ಆಸೆಗೂಡಿನಲಿಸ್ವಚ್ಛಂದದ ರಾಜಹಕ್ಕಿಯಾಗಿ… **************************************

ಸೋಜಿಗವಲ್ಲ ಈ ಜಗವು

ಕವಿತೆ ಸೋಜಿಗವಲ್ಲ ಈ ಜಗವು ರೇಷ್ಮಾ ಕಂದಕೂರ. ಸೋಜಿಗವಲ್ಲ ಈ ಜಗವುಪೇಚಿಗೆ ಸಿಲುಕದಿರಿ ನಿರ್ಲಕ್ಷ್ಯ ತನದಿಉನ್ನತ ವಿಚಾರ ಧಾರೆ ಅನುಕರಿಸಿ ಭಾಜನಾರಾಗುವೆವು ಸುಕೃತಿಗಳ ಔತಣಕೆಶೂದ್ರತನವು ಏಕೆ ತೃಣಮಾತ್ರಕೆಭದ್ರವಾಗಿರಿಸಿ ಕಾಮನೆಗಳ ಕೀಲಿಕೈ ತದ್ರೂಪ ಮೋಹಕೆ ಬಲಿಯಾಗದೇಬದ್ಧತೆಯಲಿರಲಿ ಜೀವಯಾನದ ನೌಕೆಅರಳಲು ಬಿಡಿ ಸುಕೋಮಲ ಮನ ಪುಷ್ಪವ ವ್ಯವಹಾರದಲಿ ವ್ಯವಧಾನದ ನಂಟಿರಲಿಬಿದ್ದವನು ಮರುಘಳಿಗೆ ಏಳಲೇಬೇಕುಕದ್ದ ಮನೋಭಾವ ನರಳುವುದು ಶುದ್ಧ ಸರಳತನಕೆ ಬೆಲೆ ಕೊಡಿಅರಿಯಿರಿ ವಿರಳವಾದುದು ಮಾನವ ಜನ್ಮಕಲಹ ಕೋಲಾಹಲದಲಿ ಬೇಡ ಕಾಲಹರಣದ ಕುರೂಪತೆ ನಡೆಬಡಿವಾರದ ಕೂಗು ಬೇಕೆಹಗೆತನದ ಮತ್ತಿನ ಸುತ್ತ ಚರ್ಮದ […]

ಗಝಲ್

ಮಕ್ಕಳಿಗಾಗಿ ಗಝಲ್ ಲಕ್ಷ್ಮೀದೇವಿ ಪತ್ತಾರ ಜೇಡ ತುಂಬಿದ ನಿಮ್ಮ ಮನದ ಮನೆಯ ಜಾಡಿಸಿ ಶುಭ್ರವಾಗಿಸುವ ಜಾಡು ನಾನಾಗುವೆ ಮಕ್ಕಳೆಪದೇಪದೇ ದೂಳು ತುಂಬಿದ ಜೀವನ ನಿಮ್ಮದಾಗಿಸಿ ಕೊಳ್ಳಬೇಡಿ ಮಕ್ಕಳೆ ನಿಮ್ಮ ಮಬ್ಬಾದ ಬಾಳ ಬಾನಿನಲ್ಲಿ ಬಣ್ಣ ಬಣ್ಣದ ತಾರೆಗಳನ್ನು ಇರಿಸಿ ಬೆಳಗಿಸುವೆ ಮತ್ತೆ ಮತ್ತೆ ಕಾರ್ಮೋಡಗಳ ಮುಂದಿರಿಸಿ ಕತ್ತಲಲ್ಲಿ ಮೂಳಗಬೇಡಿ ಮಕ್ಕಳೇ ನಿಂತ ನೀರಾಗಿ ಕೊಳೆಯುತ್ತಿರುವ ನಿಮ್ಮ ಬಾಳ ಹೊಳೆಗೆ ಮಳೆ ನಾನಾಗಿ ಚೈತನ್ಯ ಚಿಲುಮೆಯಾಗಿ ಹರಿವಂತೆ ಮಾಡುವೆಮತ್ತೆ ಜಡತೆಯ ಬಂಡೆ ಅಡ್ಡವಿರಿಸಿ ನಿಸ್ತೇಜರಾಗಿ ಕೂಡಬೇಡ ಮಕ್ಕಳೆ ಹಸಿರಾಡದ […]

ಕನ್ನಡದ ದಿವ್ಯೋತ್ಸವ

ಕವಿತೆ ಕನ್ನಡದ ದಿವ್ಯೋತ್ಸವ ವೀಣಾ. ಎನ್. ರಾವ್ ಕನ್ನಡದಾ ಮನಗಳೆ ಎದ್ದು ನಿಲ್ಲಿಹರಿಸೋಣ ಅಮೃತದ ಸುಧೆಯನ್ನಿಲ್ಲಿಸಿರಿಗನ್ನಡದ ಶರಧಿಯೊಳಗಿನ ಮಾಧುರ್ಯಸವಿದು ನೋಡಲು ಬೇಕು ಔದಾರ್ಯ ! ಬೆನ್ನೀರ್ ಮುನ್ನೀರ್ ಪನ್ನೀರ ಸಿಂಚನಕೆಧ್ಯಾನಸ್ಥ ತುಷಾರ ಗಿರಿಯ ಸಿಂಚನಕೆಕನ್ನಡದಾ ಮಣ್ಣಲಿ ಚಿಗುರೊಡೆದಾ ಹಸಿರೇಶತಮಾನದ ಸಂಸ್ಕೃತಿಗೆ ನೀನಿದ್ದರೆ ಊಸಿರೇ ! ಮೈಲಿ ಮೈಲಿಗೂ ಕನ್ನಡದಾ ಶೈಲಿಯುಮೂಡಿದೆ, ಕೂಡಿದೆ ಪೃಥ್ವಿಯ ಕೈಯಲ್ಲಿಯುಮುಕುಟ ಮಣಿಯು ಎಂದೂ ನರ್ತಿಸುತ್ತಿರುವುದಲ್ಲಿಹೊನ್ನುಡಿಯ ಪಾಂಚಜನ್ಯ ಮೊಳಗುತಿಹುದಲ್ಲಿ ! ಮರೆಮಾಡದಿರು ಪರಕೀಯರೆದುರು ನಿನ್ನ ಕನ್ನಡಸರಳ ವಿರಳವಾಗಲು ಬಿಡದಿರು ನಿನ್ನ ಕನ್ನಡಕಾವ್ಯದ ಕಲೆಗಳಿಗೆ ರಸಸೃಷ್ಟಿ […]

ಗಝಲ್

ಗಝಲ್ ವತ್ಸಲಾ ಶ್ರೀಶ ಹೃದಯ ಶ್ರೀಮಂತನಲ್ಲ ಪ್ರೀತಿಯ ಮರಳಿಸದ ಸಾಲಗಾರನಾಗಿದ್ದೆ ನೀನುಕಾರಣಗಳ ಓರಣದಿ ಜೋಡಿಸುತ್ತಲೇ ದಾರಿ ಬದಲಿಸಿದ್ದೆ ನೀನು ತಾರೆಗಳನೇ ತಂದಿರಿಸಿದೆಯೆಂಬ ಭ್ರಮೆಯ ಬಾನಲಿ ವಿಹರಿಸುತಲಿದ್ದೆಕಲ್ಲು ಮುಳ್ಳಿನ ಬಯಲಲಿ ನಿಂತ ಸತ್ಯವನು ಕೊನೆಗೂ ತೋರಿಸಿದ್ದೆ ನೀನು ಕಲ್ಪನೆಯ ಕಣ್ಣಲ್ಲಿನ ಸುಂದರ ಚಿತ್ರಗಳು ಬದುಕ ರಂಗೋಲಿಯಾಗಲಿಲ್ಲರಂಗು ರಂಗಿನ ಕನಸುಗಳಿಗೆ ಕಪ್ಪುರಂಗನು ಎರಚಿ ಕೆಡಿಸಿದ್ದೆ ನೀನು ಪ್ರೇಮದ ಪರಿಚಯವಿರದ ಹೃದಯ ಮಧುರ ಭಾವಕ್ಕೆ ಸಿಲುಕಿ ಮಗುವಂತಾಗಿತ್ತಂದುಮುಗ್ಧ ಮನಕೆ ಪ್ರೀತಿಯನು ಬಣ್ಣದಾಟಿಕೆ ಮಾಡಿ ಮರುಳುಗೊಳಿಸಿದ್ದೆ ನೀನು ಮೋಸವ ಅಸಹಾಯಕತೆಯೆಂಬ ನೆಪದಿ ಶೃಂಗರಿಸಿ […]

ತಕ್ಕಡಿ ಸರಿದೂಗಿಸಿ

ಕವಿತೆ ತಕ್ಕಡಿ ಸರಿದೂಗಿಸಿ ನೂತನ ದೋಶೆಟ್ಟಿ ಬೀದಿಯಲ್ಲಿ ಅವಳ ಹೆಣ್ತನಕಳೆದು ಹೋದಾಗಹುಡುಕಲು ಹಗಲು ರಾತ್ರಿಯೆನ್ನದೆಬೀದಿಗಿಳಿದರು ಎಲ್ಲ ತಕ್ಕಡಿ ಹಿಡಿದು ನಾನೂ ಹೊರಟೆನನ್ನ ಕಾಲ ಧೂಳು ನೀನುಎಂದ ಅವನ ಮಾತನ್ನು ತೂಗಿಕೊಂಡು ಬೈಗುಳ, ಹೊಡೆತ, ಗಾಯ-ಬರೆಗಳನ್ನುತಂದು ಪೇರಿಸಿದರು ದಾರಿಗುಂಟತಕ್ಕಡಿ ಜಗ್ಗುತ್ತ ನೆಲಕ್ಕೆ ಹೊಸೆಯುತಿತ್ತುಅಲ್ಲಿ ತಕ್ಕಡಿ, ನಾನು ಇಬ್ಬರೆ ನಿನ್ನ ಕೂಗಿಗೆಯಾರೂ ಬೀದಿಗಿಳಿಯಲಿಲ್ಲವಲ್ಲ !ಮನೆಯ ಗೋಡೆ – ಕಿಟಕಿಗಳಿಗೆಮೈದುಂಬಿತು ಆವೇಶ ಮುಚ್ಚಿದ ಕದಗಳುಏರ್ ಕಂಡೀಷನ್ ರೂಮುಗಳುಸೌಂಡ್ ಪ್ರೂಫ್ ಕಛೇರಿಗಳುಶಬ್ದವನ್ನು ದಾಟಗೊಡಲಿಲ್ಲಅರಿಯದ ಮೌಢ್ಯತೆ ಏನೆಲ್ಲ ಅವಕ್ಕೆ ಕೈಯ ತಕ್ಕಡಿ ನೆಲ ಹೊಸೆಯುತ್ತಲೇ […]

ಪೂರ್ವಿಕರ ಸಾಧನೆ

ಕವಿತೆ ಪೂರ್ವಿಕರ ಸಾಧನೆ ಮಾಲಾ ಕಮಲಾಪುರ್ ಮಾನ ಮುಚ್ಚಲೆಂದು ಗೇಣು ಬಟ್ಟೆಜ್ಞಾನಕ್ಕೇನೂ ಕಮ್ಮಿ ಇಲ್ಲ ಎನ್ನುವ ಸಾಧನೆಮುಷ್ಠಿ ಅನ್ನದಲ್ಲಿಯೂ ನಾಲ್ಕು ಜನರಿಗೆಕೈ ತುತ್ತು ಹಾಕುವ ಪೂರ್ವಿಕರಿಗೊಂದು ನನ್ನ ಸಲಾಂ ಕೇಳುವ ಹತ್ತಾರು ಕಿವಿಗಳಿಗೆ ಪುರಾಣ ಪುಣ್ಣ್ಯ ಕಥೆಗಳನು ನಾಲ್ಕು ಚಪ್ಪರದಲಿ ಕಂದೀಲು ಬೆಳಕಿನಲಿ ಜ್ಞಾನಾಮೃತ ಉಣಿಬಡಿಸಿದ ಪೂರ್ವಿಕರಿಗೊಂದು ನನ್ನ ಸಲಾಂ ಚೌಕಾಬಾರ ಗೋಟ ಗೋಣಿ ಗೋಲಿ ಆಟದಲಿ ಮಕ್ಕಳಿಗೆ ಅಂಕೆ ಸಂಖ್ಯೆ ಗಳ ಪರಿಚಯಸಿ ಮೋಜು ಮಾಡುತ ಮನ ತುಂಬಿ ಹಾರೈಸುವ ಪೂರ್ವಿಕರಿಗೊಂದು ನನ್ನ ಸಲಾಂ ಭಯ […]

ನಮ್ಮ ಮನೆ

ಕವಿತೆ ನಮ್ಮ ಮನೆ ಡಾ. ಅರಕಲಗೂಡು ನೀಲಕಂಠ ಮೂರ್ತಿ ಅರಮನೆಯಂತಿಲ್ಲ ಈ ನನ್ನ ಮನೆಮಧ್ಯಮವರ್ಗದಅತೀ ಸಾಮಾನ್ಯ ಅನುಕೂಲದಸಣ್ಣದೊಂದು ಸೂರು ಅಷ್ಟೆ!ಹಜಾರವಿದೆಅದೂ ಮಧ್ಯಮಒಂದೆರಡು ರೂಮುತಲೆಯಿಂದ ಕಾಲ ಉದ್ದುದ್ದಧಾರಾಳ ನೀಡುವಷ್ಟು!ಊಟಕ್ಕೆ ನೆಲಮತ್ತು ಅಡುಗೆಗೊಂದು ದೊಡ್ಡ ಬಿಲ! ಬನ್ನೀ ಸ್ವಾಮಿಯಾರು ಬೇಕಾದರೂ ಬನ್ನಿಎಷ್ಟು ಜನರಾದರೂ ಬನ್ನಿಒಳಗೆ ಹಿಡಿಸುವಷ್ಟು…ಅಥಿತಿಗಳಾಗಿಅಥವಾ ಹಿತೈಷಿಗಳಾಗಿಸ್ನೇಹದಿಂದ…ಬಂದು ಇದ್ದು ಹೋಗಿನಿಮಗಿಷ್ಟವಾದಷ್ಟು ದಿನನೆಮ್ಮದಿಯಿಂದ… ದಿನದಿನವೂ ಸುತ್ತಿ ಬನ್ನಿನಮ್ಮೂರ ಸುತ್ತಮುತ್ತಅನತಿ ದೂರದಲ್ಲೇ ಇವೆಅನೇಕ ಪ್ರವಾಸಿ ಸ್ಥಳಕಣ್ಣು ತುಂಬಿಸಿಕೊಂಡು ಬನ್ನಿ ಎಲ್ಲಊರೊಳಗೆ ಬೀಡು ಬಿಟ್ಟಿರುವ ಅನೇಕಾನೇಕ ಥರದ ಮೇಳ…ಕಾಯ್ದಿರುವೆವು ದಿನವೂ ನಿಮಗಾಗಿನಮ್ಮದೇ ಮನೆಯ ನಮ್ಮ […]

ವಿಪ್ಲವ

ಕವಿತೆ ವಿಪ್ಲವ ಚಂದ್ರಪ್ರಭ ಬಿ. ಇಂದೇಕೊ ಅವ್ವ ನೆನಪಾಗುತ್ತಿದ್ದಾಳೆ…ಅಪ್ಪನ ಬನಿಯನ್ನುತಮ್ಮನ ಚಡ್ಡಿತನ್ನ ಲಂಗವನ್ನುಢಾಳಾಗಿ ಬಿಸಿಲಿಗೆಎಲ್ಲೆಂದರಲ್ಲಿ ಒಣಗಲು ಹಾಕುತ್ತಿದ್ದ ಅವ್ವನನ್ನ ಕಂಚುಕವನ್ನು ಒಣ ಹಾಕಲುಹುಡುಕುತ್ತಿದ್ದಳುಮರೆಯಾದ ಒಂದು ಜಾಗವನು… ಈಗ ತಾನೆ ಮನೆಗೆ ಮರಳಿದವಲುಂಗಿಯುಟ್ಟುಬನಿಯನ್ನೆಂಬ ಮಾಯಕವನುಹಗ್ಗಕ್ಕೆ ಇಳಿಬಿಟ್ಟು ಗಾಳಿಗೆ ಮೈಯೊಡ್ಡಿಹಾಯಾಗಿ ನಿಂತುಕೊಂಡುದ ಕಂಡುಮತ್ಸರಗೊಳ್ಳುತ್ತೇನೆ ಒಳಗೊಳಗೇ… ತೆರೆದುಕೊಳ್ಳುತ್ತ ಸಂಜೆಯ ಕೆಲಸಗಳಿಗೆಗಡಿಬಿಡಿಯಲಿರುವ ನನ್ನ ನೋಡಿಗದರುತ್ತಾರೆ ಅತ್ತೆ :ಅದೆಂತದು ಚೂಡೀ ದಾರ..?ಉಡಬಾರದೆ ಒಪ್ಪವಾಗಿ ಸೀರೆ…ನೆಂಟರಿಷ್ಟರು ಬಂದು ಹೋಗುವ ಮನೆ! ಈ ಚೂಡೀದಾರ ಎನುವ ಮಾಯೆಕೆಲಸ ಕಾರ್ಯದಲಿ ನನಗೆಷ್ಟು ಹಿತಎನ್ನುವುದನುಅರಿಯಲಾರರೇಕೆನೆಂಟರು…ಇಷ್ಟರು…ಅತ್ತೆ…? ತನ್ನವ್ವನ ಗದರುವಿಕೆಇನಿಯಳ ಗೊಣಗಾಟ ಯಾವುದೂಕೇಳಿಸುವುದೇ […]

Back To Top