Category: ಕಾವ್ಯಯಾನ

ಕಾವ್ಯಯಾನ

ವಿಪರ್ಯಾಸ

ಕವಿತೆ ವಿಪರ್ಯಾಸ ಸಂಗಮೇಶ್ವರ ಶಿ.ಕುಲಕರ್ಣಿ ಜಗವ ಗೆಲ್ಲಲು ದಾಳಿಯಿಟ್ಟುನೆರೆಯ ರಾಜ್ಯದಲಿ ನೆತ್ತರದ ನದಿಹರಿಸುವ ಚಕ್ರವರ್ತಿಯಸಾಮ್ರಾಜ್ಯದ ನಡುನಾಡ ಜನರುಹಸಿವಿನಿಂದ ಸಾಯುವರು! ನೆಲಕೇ ಗೊತ್ತಾಗದಂತೆ ನೇಗಿಲಸರಿಸಿ, ಮ್ಯಾರಿ ಹಿಗ್ಗಿಸಿಮತ್ತೊಬ್ಬನ ಹೊಲ ಆಕ್ರಮಿಸುವರೈತನೊಬ್ಬನ ನಡುಹೊಲವೆಬೀಳುಬಿದ್ದು ಬೋಳಾಗುವುದು! ಕಚ್ಚೆ ಬಿಚ್ಚಿದ ಹುಂಬನಂತೆಕಂಡ ಹೆಣ್ಣುಗಳ ಕಾಮಿಸುವಚಪಲ ಗಂಡಸಿನ ಮನೆಗೆಅವನಿಗೇ ತಿಳಿಯದೆ ಅದೆಷ್ಟೋಗಂಡಸರು ರಾತ್ರಿ ದಾಳಿಯಿಡುವರು! ತೂಕದಲ್ಲಿ, ಲೆಕ್ಕದಲ್ಲಿ ಮತ್ಯಾವುದೊಮೋಸದ ಹಾದಿಯಲ್ಲಿ ಕೋಟಿ ಗಳಿಸಿಮಹಲು ಕಟ್ಟಿ ಮೆರೆದ ಶೇಟುಬೀಪಿ, ಶುಗರಿಗೆ ಬಂಧುವಾಗಿ, ಇದ್ದೊಬ್ಬಇಪ್ಪತ್ತೊಂದರ ಮಗನ ಸಾವು ನೋಡುವನು! ನಿನ್ನದಲ್ಲದ ದೇಹದ ದಾಹಕೆಮನ ಬಯಸುವ ಮೋಹಕೆ ಸೋತುಮಾನವ […]

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಕವಿತೆಯ ಸಾವು

ಕವಿತೆ ಕವಿತೆಯ ಸಾವು ಅಬ್ಳಿ,ಹೆಗಡೆ ಸಖೀ,,,ಜೊತೆಗಾತಿ,,,,!ನೀ,,ಅಳುವಾಗ,ನಾ,,ನಗುತ್ತಿರುವೆ.ನಾ,,ಅಳುವಾಗ,ನೀ,,ನಗುತ್ತಿರುವೆ.ನಾ ಆತ್ಮರತಿಯಾದರೂನನ್ನ-ನಿನ್ನ ನಡುವೆ-ಕೊನೆಯಿರದ,ವಿಲಕ಼ಣ,, ನಂಟು.ಬಿಡಿಸಲಾಗದ,ಸುಭದ್ರ ಅಂಟು.ನಗು-ಅಳುವಿನ ಮಧ್ಯೆ,ವೈರುದ್ಧದ ಕತ್ತಲಲ್ಲಿಬಚ್ಚಿಟ್ಟುಕಾಯುತ್ತಿವೆ–ನೂರೆಂಟು ದೇವರು-ಧರ್ಮ,ಕಟ್ಟುಪಾಡುಗಳುನೋಡಲು,–ಕವಿತೆ ಸಾಯುವದನ್ನು.ನೋವಿದ್ದರೂ ಮನದಿ,ಹಚ್ಚಿಬಿಡು ಕತ್ತಲಲ್ಲಿಒಂದು ಸಣ್ಣ ಹಣತೆ,ಸಾಯುವ ಕ಼ಣವನ್ನುಬೆಳಕಲ್ಲಿ ಆಸ್ವಾದಿಸಲು.ಆನಂದಿಸಲು. **********

ಕಾಡಿದ ಗಜಲ್ ಹಿಂದಿನ ಕಥನ

ಯಾತಕ್ಕೆ ಈ ದಿನಗಳು ಬಂದವೋ..ಮುಂಚಿನ ಆರೋಗ್ಯಯುತ ಸದಾ ಚೆಂದನೆಯ ದುಡಿದುಣ್ಣೋ ದಿನಗಳು ಮತ್ತೆ ಮರಳಲಿ. ಆ ಸೃಷ್ಟಿಕರ್ತನೇ ಇದನ್ನು ಇರುವ ವ್ಯವಸ್ಥೆಯ ಮೂಲಕ ನಿಯಂತ್ರಿಸಲಿ ಎಂದು ಇಲ್ಲಿಯ ಜನಪರ ಕವಿಯಾದವ ಕೇಳಿಕೊಂಡು ಎಲ್ಲರಿಗೂ ಒಳ್ಳೆಯ ಆರೋಗ್ಯ, ಜೀವ ಇದ್ದರೆ ಜೀವನ ಅದು ಕಾಪಾಡಿಕೊಳ್ಳಿ ಅಂತ ಕೋರಿಕೊಂಡು ಇದನ್ನು ಚಿಂತಿಸಿ ಬರೆಯಲು ಹಚ್ಚಿದ ಮಿತ್ರರಿಗೂ, ಓದಿದ ನಿಮಗೆಲ್ಲಾ ವಂದಿಸಿ ಮುಗಿಸುವೆ.

ನೀನಿತ್ತ ಹುಟ್ಟು

ಪ್ರೇಮ ತುಂಬಿದ ಮನದಲಿ ಜಗವ ತಬ್ಬಿದ
ಹೊಂಬಣ್ಣದ ಗುಂಡು ಮೊಗದಲಿ
ಹೊಳೆದಿತ್ತು ಕಂಗಳು
ಮನದಲ್ಲಿ ಹರಿದಿತ್ತು ತಿಂಗಳೂರಿನ ತೇರು

ಅಪ್ಪನೆಂಬೋ ಆಗಸ

ಕವಿತೆ ಅಪ್ಪನೆಂಬೋ ಆಗಸ ಯಾಕೊಳ್ಳಿ.ಯ.ಮಾ ಊರ ದೇವಿಯ ಆವಾಹಣೆಮೈಮೇಲೆ ಬಂದ ದಿನ ಊರಗೌಡರಿಗೆ,.ಯಜಮಾನರಿಗೆ,ಅಪ್ಪ‘ಏನರಲೆ ಮಕ್ಕಳ್ರಾ’ ಅಂತಿದ್ದದಿನವೆಲ್ಲಾ ಅವರ ಮುಂದೆಕೈಕಟ್ಟಿ ನಿಲ್ಲುತ್ತಿದ್ದ ಅಪ್ಪನ ,ದೇಹದೊಳಗೆಖಾಯಮ್ಮಾಗಿ ದೇವಿ ಬರಬಾರದೇಅಂದುಕೊಳ್ಳುತ್ತಿದ್ದೆ. ವಾದ್ಯಗ಼ಳ ಸಾಥು‌ ನಡುವೆರಾಗ ತಗೆದು‌ಹಾಡುತ್ತಿದ್ದಅಪ್ಪ, ಥೇಟ್ದೇವಲೋಕದ ಗಂಧರರ್ವನಂತೆಕಾಣಿಸುತ್ತಿದ್ದ ವರುಷವೆಲ್ಲಾ ಜೀತದಾಳಾಗಿದುಡಿವ ಅಪ್ಪ ಮನೆಗೆ ಬಂದೊಡನೆಮೈಮೇಲಿನ ಅರಿವೆಹೊರಗೆ ಕಳೆದು ನೀರಲ್ಲಿತೊಯ್ಯಿಸಿ ಒಳಗೆ ಬರುತ್ತಿದ್ದಆವರೆಗೆ ನಮ್ಮನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲಅರಿವೆ ಕಳೆದ ನಂತರ ನಮ್ಮಅಪ್ಪ ಅನಿಸುತ್ತಿತ್ತು ಕಾಣದೂರಿಗೆ ಅಕ್ಷರದ ಬಿಕ್ಷೆಎತ್ತಲು ನನ್ನ ಕಳಿಸಿ ಮಗಸಾಹೆಬನಾಗಿ ಬರುವಕನಸು ಕಾಣುತ್ತಿದ್ದ ಅಪ್ಪ ನನ್ನ ವಿದ್ಯೆಯ ಚಂದಾ ಕಟ್ಟಲು‌ಕಂಡವರನ್ನೆಲ್ಲ ಹಣಕೇಳುತ್ತಿದ್ದುದನೆನಪಾಗಿ […]

Back To Top