Category: ಕಾವ್ಯಯಾನ

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಮತ್ತದೇ ಮನವರಿಕೆ ಸರೋಜಾ ಶ್ರೀಕಾಂತ್ ಅಮಾತಿ, ತೇಲುತ ಬರುವ ಮಧುರ ನೆನಪಾಗಿದಿನವೂ ಕಾಡುತಿರುವೆಯಲ್ಲತೊರೆದ ಘಳಿಗೆ ಅರಿತ ಉಸಿರುನನ್ನನೇ ಮರೆತಿರುವೆನಲ್ಲ ದೊರೆವೆ ಹೇಗೆ ಮರಳಿ ಪ್ರೀತಿಗೆಕನಸು ಕೂಗುತಿದೆಯಲ್ಲಹೃದಯದಿ ಬೆರೆತ ನಿನ್ನ ಒಲವುಬಳಿ ಬಂದು ಸತಾಯಿಸುತ್ತಿದೆಯಲ್ಲ ಒಪ್ಪಿದ ಪ್ರೇಮವೇ ಚೆಲುವ ತುಂತುರುತಪ್ಪನು ಸರಿಪಡಿಸುವೆನಲ್ಲಮತ್ತದೇ ತುಡಿತ ಜೊತೆಯ ಹೆಜ್ಜೆಗೆಹರಸು,ಪರಿತಪಿಸುತ್ತಿರುವೆನಲ್ಲ ನಿನ್ನಯ ನೋಟಕೆ ಕಾದಿಹ ಕಂಗಳುಲಜ್ಜೆಗೆ ಹೊಳೆಯುತ್ತಿರುವವಲ್ಲಮತ್ತೊಮ್ಮೆ ಭೇಟಿಗೆ ವೇಳೆಯ ತಿಳಿಸುಕರೆಗೆ ಕಾಯುತಿರುವೆ ನಲ್ಲ!!.

ಸಂಕ್ರಾಂತಿ ಕಾವ್ಯ ಸುಗ್ಗಿ ನದಿ ನಾಗರಾಜ್ ಹರಪನಹಳ್ಳಿ ನದಿ ಕುಲು ಕುಲು ನಕ್ಕಿತುಅವಳು ಜೊತೆ ಇದ್ದಾಗ ನದಿ ಉಸಿರೆಳೆಯಿತುಅವಳು ಕಿವಿಯಲ್ಲಿ ಉಸುರಿದಾಗ ನದಿ ಮಾತಾಡಿತುಅವಳು ನನ್ನ ಭುಜಕ್ಕೆ ಭುಜ ತಾಗಿಸಿ ಕುಳಿತಾಗ ನದಿ ವೈಯಾರದಿ ಬಳುಕಿತುಅವಳು ಹೊಸ ಸೀರೆಯುಟ್ಟುನನ್ನೆದುರು ಬಂದಾಗ ನದಿ ಕಣ್ಣೀರಾಯಿತುಅವಳು ವಿರಹದಿ ಬೆಂದಾಗ ನದಿ‌ ಮಗ್ಗಲು ಬದಲಿಸಿತುಅವಳು ದೂರವಿದ್ದಾಗ ನದಿ ನಿಟ್ಟುಸಿರಾಯಿತುಅವಳು ನಾಳೆಗಳಿವೆ ಬರುವೆಎಂದಾಗ ನದಿ ಮೌನವಾಯಿತುಅವಳು ಮಾತೇ ಆಡದೆ ಹೋದಾಗ ನದಿ ನಿದ್ದೆ ಹೋಯಿತುಅವಳೂ ನಿದ್ದೆಹೋದಾಗ ನದಿ ಬೆಳಕಾಯಿತುಅವಳು ಮರಳಿ ಬಂದಾಗ

ಸಂಕ್ರಾಂತಿ ಕಾವ್ಯ ಸುಗ್ಗಿ ಹುಟ್ಟು ಪೂರ್ಣಿಮಾಸುರೇಶ್ ಹಚ್ಚಡದ ಗಂಟಿನಲಿನೆನೆದುಬೆದರಿ ಅವಚಿಕೂತ ಕಾಳು ಎದೆಯ ಮೇಲೆ ಬುಲ್ ಡೋಜರ್ ನೋವಿನ ಹಿಡಿತಆವರಿಸಿದ ಕಪ್ಪು ತಡೆಯಲಾರೆ ಹೊರೆಅಂತರಾಳದ ಮೊರೆ ಬಿಗಿದ ಸೆರೆ ಸಡಿಲಆಯಾಸದ ದಿಟ್ಟಿತೆರೆದರೆತೂರಿ ಬಂದ ಬೆಳಕು ಒಡಲು ಹಗುರಒಳಗೆ ಹಸಿರು ಹೊಸ ಕನಸುಹೊಸ ಹುಟ್ಟು ಬಾಹು ಚಾಚಿದ ಆಗಸನಾನು ಊರ್ಧ್ವಮುಖಿ

ಸಂಕ್ರಾಂತಿ ಕಾವ್ಯ ಸುಗ್ಗಿ ಬಿಟ್ಟು ಯೋಚಿಸಬಹುದೇ..? ಸ್ಮಿತಾ ಅಮೃತರಾಜ್. ಸಂಪಾಜೆ ದಿನದ ಕನಸುಗಳೆಲ್ಲಾಗುಲಾಬಿ ಬಣ್ಣ ಮೆತ್ತಿದಬೊಂಬಾಯಿ ಮಿಠಾಯಿಸವಿಯುವ ಮುನ್ನವೇ ಕರಗಿಬರೇ ಅಂಟು ಜಿನುಗಷ್ಟೇಉಳಿಯುವ ನಂಟು. ಈ ಹೊತ್ತಲ್ಲದ ಹೊತ್ತಿನಲ್ಲಿನೀ ಬಂದು ಮೈದಡವಿ ತಲೆನೇವರಿಸದೇ ಇರುತ್ತಿದ್ದರೆ..ನಾಳೆಯ ಕನಸುಗಳಿಗೆ ಬಣ್ಣಬಳಿಯಲು ನನ್ನ ಬಳಿ ರಂಗುಉಳಿಯುತ್ತಿತ್ತೇ? ಕಣ್ಣಾಲಿ ತೆರೆದಷ್ಟೂಸಂತೆ ನೆರೆಯುವ ಬಿನ್ನಾಣ ಲೋಕಹೊರಗೆ ತೆಳ್ಳಗೆ ಹಚ್ಚಿದ ಬೆಡಗಿನ ಲೇಪಲೋಪವೇ ಇಲ್ಲದ ಬದುಕಿದೆ ಒಳಗೆಬಗೆದು ಕಂಡವರಿಲ್ಲ ಪಾಪ! ಆಳದಲ್ಲೆಲ್ಲೋ ಛಳಕ್ ಎಂದ ನೋವು..ಹೊತ್ತಿಗೆ ನೀ ಬಂದು ಮುಲಾಮುಹಚ್ಚದೇ ಹೋಗುತ್ತಿದ್ದರೆ..ಗಾಯವೇನೋ ಮಾಯುತ್ತಿತ್ತು.ನೋವು ಮಾಸುತ್ತಿತ್ತೇ..? ಮುದುಡಿಕೊಂಡಷ್ಟೂ […]

ಸಂಕ್ರಾಂತಿ ಕಾವ್ಯ ಸುಗ್ಗಿ ನೀವಾದರೂ ಹೇಳಬಲ್ಲಿರಾ ? ನೂತನದೋಶೆಟ್ಟಿ ಕಾಸಿಗಾದರೂ ಒಂದಷ್ಟುನಿರುಮ್ಮಳತೆ ಸಿಕ್ಕರೆ ವಿಳಾಸ ಹೇಳುವಿರಾ?ಕವಿತೆ ಬರೆಯುವ ಕೈಗೆ ಪ್ರಶ್ನೆಗಳ ಸೂಜಿಮೊನೆಯ ಸೆಳಕು ಶನಿ, ರಾಹು, ಕೇತು ಗ್ರಹಣಗಳಗ್ರಹಚಾರ ಬಿಡಿಸಿಕೊಂಡಿರಲ್ಲಾಹೊಳೆವ ಉಂಗುರದ ಬೆರಳುಗಳು ಹಾಕಿದಕವಡೆಯಭೀತಿಗೆ ಏನು ಮಾಡುವಿರಿ ? ಪುರಭವನದೆದುರುಜೈಕಾರದಜಿದ್ದಾಜಿದ್ದಿನಲ್ಲಿನಸುಕಿನ ಕಸಪೊರಕೆಯ ಕೈಬಾಚುವ ಸತ್ತ ನಾಯಿಯ ವಾಕರಿಕೆಯಲ್ಲಿಉಣಲಾರದ ಸಂಕಟಕ್ಕೆಯಾರಕೈತುತ್ತು ? ಮಾತಿನಲ್ಲಿ ಮತದಘಾಟು ಹಿಡಿಯುವವರುಗಾಂಧಿ, ಬಸವ, ಅಂಬೇಡ್ಕರರನ್ನುಬೇಕಾದಾಗ ಅಷ್ಟಷ್ಟು ಬಳಸುತ್ತಾರೆಬಿಸಿಗೆ ಮಂಜುಕರಗಿದ್ದುಅರಿವಿಗೂ ಬಾರದಂತೆತತ್ವಗಳನ್ನು ಹೊದಿಕೆಯಿಂದಾಚೆಎಳೆಯುವವರ ಕಂಡಿರಾ? ಕವಿತೆಯದಾದರೂಅದೇಕಥೆರೊಚ್ಚು, ರಚ್ಚೆಗಳ ದಂಡಿಗೆಕೊAಬು, ಕಹಳೆಗಳ ದಾಂಗುಡಿಬರೆಯುವ ಕೈಗಳು ಕುಲುಕಿದ್ದುಉಂಟೇ ?ಸಿದ್ಧಾಂತದ […]

ಸಂಕ್ರಾಂತಿ ಕಾವ್ಯ ಸುಗ್ಗಿ ಗೂಸಬಮ್ಸ ನಿರೀಕ್ಷೆಯಲ್ಲಿ ನಾಗರೇಖಾ ಗಾಂವಕರ್ ಕಡಲ ತಡಿಯಲ್ಲಿ ನಿಂತುವಿರುದ್ಧ ಮುಖವಾಗಿಚಿತ್ತೈಸಿದರೆ ಎಂಥ ಸಹಜತೆಲ್ಯಾಂಡಸ್ಕೇಪ್ ಮಾಡಿದಮಹಾನ್ ತೋಟಗಾರನೊಬ್ಬಅಂಚಂಚನ್ನು ಬಿಡದೆಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ.ನೋಡುತ್ತ ಮೈಮೇಲೆಗೂಸಬಮ್ಸಗಾಗಿ ಕಾದೆ. ಗಗನ ಚುಂಬಿ ಕಟ್ಟಡದಏರುವ ಇಳಿಯುವಎಸ್ಕಲೇಟರಗಳ ಮೇಲೆಕಿರು ಸೊಂಟದಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನುಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರಜೀವ ಹೊತ್ತ ಗಜಗಾಮಿನಿಯರನ್ನುಕಂಡು ಅರೆರೆ.. ಎಂದುಕೊಳ್ಳುತ್ತಮೈ ರೋಮ ನಿಮಿರಿತೇ?ಕಾಣದೇ ವ್ಯಗ್ರಗೊಂಡೆ. ಮೆಟ್ರೋ ಸಿಟಿಗಳಲ್ಲಿಯ ರಸ್ತೆಗಳಲ್ಲಿಸೂಟುಬೂಟು ಹಾಕಿದಮಿಂಚು ಕಂಗಳಸುಂದರಾಂಗರ ಕಣ್ಣಿನ ಸಂಚಲನೆಗೆಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದಸೆಳೆತಕ್ಕೆ ಮನಸ್ಸು ಜೋಲಿ ಹೊಡೆದುಕೈ ನೋಡಿದರೆರೋಮಾಂಚನ […]

ಸಂಕ್ರಾಂತಿ ಕಾವ್ಯ ಸುಗ್ಗಿ ಉತ್ತರಾಯಣಕ್ಕೆ ಹೊರಟ ಸೂರ್ಯ ಅನಿತಾ ಪಿ. ಪೂಜಾರಿ ತಾಕೊಡೆ ಆ ವಸಂತ ಕಳೆದು ಈ ವಸಂತದವರೆಗೆಮೌನ ಧ್ಯಾನದ ತಪದೊಳಿದ್ದವಳುಕಳಚಿ ಬಂದಿಹಳು ತನ್ನ ತೋಳ ತೆಕ್ಕೆಯಲಿಆತುಕೊಂಡಿದ್ದ ಹಳೆಯ ನೆನಪಿನೆಲೆಗಳನು ಹಾಗೆ ಬಂದವಳೇಚಿಗುರು ಬದುಕಿನ ಮಾಧುರ್ಯಕೆ ಮುನ್ನುಡಿ ಬರೆದುಮೊಗ್ಗಿನ ಮೋಹದಿ ಅರಳಿನೊಡವೆಯ ತೊಟ್ಟುನವೋಲ್ಲಾಸದ ವಸಂತದಿ ಮೈದಳೆದು ನಿಂತಿಹಳು ಪ್ರಕೃತಿ,ತಿಳಿಹಸಿರಲಿ ಕೆಂಪು ಕುಸುರಿಯ ಸೀರೆಯನುಟ್ಟು ಸಿಹಿಗಾಳಿಯ ತಂಪು ತಳಿರು ಹೂವುಗಳಿಂಪಲಿಓಲಾಡಿ ನಲಿದಾಡಿ ವಿಹರಿಸಲೆಂದುಊರೂರಿಂದ ಅಲೆದಲೆದು ಬಂದಿಹವುಹೊಸಪುಕ್ಕ ಮೂಡಿದ ಹೊಸಭಾವದ ಹಕ್ಕಿ ಕರಿಮೋಡ ದೂರ ಸರಿದು ಬೆಳ್ಮುಗಿಲು ಸನಿಹ […]

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ. ಸಾತುಗೌಡ ಬಡಗೇರಿ ರೈತರ ಮೊಗದಿ ನಲಿವು ಕಾಣುವವರುಷದ ಮೊದಲ ಹಬ್ಬದಿನ.ಉತ್ತರಾಯಣದ ಪುಣ್ಯದ ಕಾಲವುಸಂಕ್ರಾಂತಿ ಹಬ್ಬದ ಈ ಸುದಿನ. ಬನ್ನಿ!ಬಂಧುಗಳೇ..ನಾಡ ಪ್ರಜೆಗಳೇಎಳ್ಳು ಬೆಲ್ಲದ ಸಿಹಿ ಸವಿಯೋಣ.ಹಳೆಯದು ಮರೆತು ಹೊಸ ಕನಸನ್ನುಕಟ್ಟುತ ಹರುಷದಿ ತೇಲೋಣ. ಗಿಡಮರ ಚಿಗುರಿ ಹೂವದು ಅರಳಿಕೇಳಲು ಕೋಗಿಲೆ ಇಂಚರವು.ನಾಡಜನತೆಯ ಮನೆಮನ ಪುಳಕವುಕಾಣಲು ಸಂಕ್ರಾಂತಿ ಸಡಗರವು. ಎತ್ತಿಗೆ ಬಣ್ಣದ ಚಿತ್ತಾರ ಬಳಿಯುತಹಬ್ಬದ ಖುಷಿಯ ಕಾಣುವರು.ಸಕಲರ ಮನೆಯಲಿ ರಂಗೋಲಿ ಹಾಕುತದೇವನ ಭಕ್ತಿಲಿ ಭಜಿಸುವರು. ಸಂಕ್ರಾಂತಿ ಸಡಗರ ಉಳಿಯಲಿ ಅನುದಿನನಾಡಿನ ಸಂಸ್ಕೃತಿ ಹಿರಿತನವು.ಸಕಲರ ಬಾಳು […]

ಸಂಕ್ರಾಂತಿ ಕಾವ್ಯ ಸುಗ್ಗಿ  ಖುಷಿ ಬೆಳೆಯಬಹುದು. ತಮ್ಮಣ್ಣ ಬೀಗಾರ ಅದೆಲ್ಲೋ ಕಾಣಿಸಿದಬಣ್ಣದ ಚಂಡಿನಂತಹುದೊಂದು ಟಿವಿಯಲ್ಲಿ ಕಾಣಿಸಿತುಮತ್ತೆ ಮತ್ತೆ ಕಾಣುತ್ತ ಜಗತ್ತನ್ನೇ ಆವರಿಸಿತುಜನರೆಲ್ಲ… ದಿಕ್ಕೆಟ್ಟು ಓಡತೊಡಗಿದರುಚಂಡು ಚಂಡಲ್ಲ… ಉದ್ಯೋಗವನ್ನು ಉಂಡುಹಾಕಿತುಯಾರು ಯಾರನ್ನೋ ಹಿಡಿದು ಬಡಿದು ಆಸ್ಪತ್ರೆ ಸೇರಿಸಿತುಮತ್ತೆ ಅದರದ್ದೇ ಸುದ್ದಿ ಹಾಗೂ ಲದ್ದಿವಿಮಾನ ನಿಲ್ಲಿಸಿ ರೈಲು ಬಂಧಿಸಿಬರಿಗಾಲಲ್ಲಿ ಓಡಿಸಿತು… ಜನರನ್ನು ಪೀಡಿಸಿತುಯಾರು ಯಾರೋ ಈ ಚಂಡನ್ನು ಹಿಡಿದುಗೋಲು ಹೊಡೆದರುಕೆಲವರು ಬಹುಮಾನ ಪಡೆದರು… ಇನ್ನೂ ಕೆಲವರುರೂಪಾಂತರಿಸಿ ಮಾರಿದರು… ಕರಾಳ ಚಿತ್ರ ಬರೆಸಿನಾಲ್ಕು ದಾರಿಯಲ್ಲಿ ನೆಟ್ಟು ಹೆದರಿಸಿದರುಬರಬರುತ್ತ ಚಂಡು ಸಹಜವಾಯಿತುಆದರೆ ಬದುಕು ಸಹಜವಾಗಲಿಲ್ಲಕೆಲವರ ಹೊಟ್ಟೆಯಲ್ಲಿ ಚಂಡು ಆಡುತ್ತಲೇ ಇದೆಈಗ ಅದಕ್ಕೆ ಸೂಜಿ ಚುಚ್ಚಿಪುಸ್ಸ್‍ಗೊಳಿಸಿ ಆಟ ನಿಲ್ಲಿಸುತ್ತಾರಂತೆಮತ್ತೆ ಸಂಕ್ರಾಂತಿಯ ಬಣ್ಣದ ಕಾಳಿನಂತೆಸವಿಮಾತು ಕೇಳುತ್ತಿದೆಸಕ್ಕರೆ ಕಾಳು ಕರಗಿದಂತೆ ಕಷ್ಟ ಕರಗಬಹುದುಅಥವಾ ಸವಿಮಾತೂ ಕರಗಬಹುದುಹಬ್ಬದ ಪ್ರೀತಿಯ ಬೆಸುಗೆ ನಮ್ಮಲ್ಲಿ ಇದ್ದರೆ…ಖುಷಿ ಬೆಳೆಯಬಹುದು.

ಸಂಕ್ರಾಂತಿ ಕಾವ್ಯ ಸುಗ್ಗಿ ಕತ್ತಲೆಯನ್ನು ಹಿಂಜಿ ಪಡೆದ ಬೆಳಕು ಹೇಮಾ ಸದಾನಂದ್ ಅಮೀನ್ ಕಣ್ಣೆದುರು ಹಾದುಹೋಗುವ ಚಿತ್ರಗಳನ್ನುದಂಗಾಗಿ ನೋಡುತ್ತಿದ್ದಂತೆ ಎಲ್ಲವೂಹೊಸದಾಗಿ ಕಾಣಿಸಿಕೊಳ್ಳುವವುಅಪರಿಚಿತ ನಗರದ ಸಂತೆಯಲ್ಲಿಮಾರಾಟದ ಸರಕುಗಳಾಗಿ ಹರಾಜಿಗೆಕಾದು ಕುಳಿತ ವಸ್ತುಗಳಲ್ಲಿಒಂದಿಷ್ಟು ಭಾವನೆಗಳೂ ತಿಳಿಯದಂತೆಮಾರಿ ಹೋಗುವುದು ಸಾಂತ್ವನದ ಕ್ಷಣದಲ್ಲಿ ಹೊಸ ಪರಿಚಯಜೀವವೀಣೆ ತಳಿದು ಮಿಡಿದ ತಂತಿಯಲೆಕ್ಕ ತಪ್ಪಿಹೋದರೂ ಸೋಜಿಗವಲ್ಲ‘ ಸಬ್ ಚಲ್ತಾ ಹೈ’ ಎಂಬ ದನಿಯಲಿಕರಗಿದ ಮೌನ ಆಗಾಗ ಮಿಸುಕಾಡಿದರೂಮಾತಿನ ಚೌಕಟ್ಟಿನಾಚೆ ಸ್ತಬ್ದವಾಗುವಲಾಲಿ ಹಾಡುಗಳನ್ನು ನೀವೂ ಕೇಳಿರಬಹುದು ಇದು ನಶೆ, ಇದ್ದುದ್ದನ್ನು ಮರೆತುಇಲ್ಲದರ ಹಿಂದೆ ಧಾವಿಸುವ ಮತ್ತುತೊದಲು ಹೆಜ್ಜೆಗಳನ್ನಿಡುತ್ತಾ […]

Back To Top