ಸಂಕ್ರಾಂತಿ ಕಾವ್ಯ ಸುಗ್ಗಿ

 ಖುಷಿ ಬೆಳೆಯಬಹುದು.

ತಮ್ಮಣ್ಣ ಬೀಗಾರ

ಅದೆಲ್ಲೋ ಕಾಣಿಸಿದ
ಬಣ್ಣದ ಚಂಡಿನಂತಹುದೊಂದು ಟಿವಿಯಲ್ಲಿ ಕಾಣಿಸಿತು
ಮತ್ತೆ ಮತ್ತೆ ಕಾಣುತ್ತ ಜಗತ್ತನ್ನೇ ಆವರಿಸಿತು
ಜನರೆಲ್ಲ… ದಿಕ್ಕೆಟ್ಟು ಓಡತೊಡಗಿದರು
ಚಂಡು ಚಂಡಲ್ಲ… ಉದ್ಯೋಗವನ್ನು ಉಂಡುಹಾಕಿತು
ಯಾರು ಯಾರನ್ನೋ ಹಿಡಿದು ಬಡಿದು ಆಸ್ಪತ್ರೆ ಸೇರಿಸಿತು
ಮತ್ತೆ ಅದರದ್ದೇ ಸುದ್ದಿ ಹಾಗೂ ಲದ್ದಿ
ವಿಮಾನ ನಿಲ್ಲಿಸಿ ರೈಲು ಬಂಧಿಸಿ
ಬರಿಗಾಲಲ್ಲಿ ಓಡಿಸಿತು… ಜನರನ್ನು ಪೀಡಿಸಿತು
ಯಾರು ಯಾರೋ ಈ ಚಂಡನ್ನು ಹಿಡಿದು
ಗೋಲು ಹೊಡೆದರು
ಕೆಲವರು ಬಹುಮಾನ ಪಡೆದರು… ಇನ್ನೂ ಕೆಲವರು
ರೂಪಾಂತರಿಸಿ ಮಾರಿದರು… ಕರಾಳ ಚಿತ್ರ ಬರೆಸಿ
ನಾಲ್ಕು ದಾರಿಯಲ್ಲಿ ನೆಟ್ಟು ಹೆದರಿಸಿದರು
ಬರಬರುತ್ತ ಚಂಡು ಸಹಜವಾಯಿತು
ಆದರೆ ಬದುಕು ಸಹಜವಾಗಲಿಲ್ಲ
ಕೆಲವರ ಹೊಟ್ಟೆಯಲ್ಲಿ ಚಂಡು ಆಡುತ್ತಲೇ ಇದೆ
ಈಗ ಅದಕ್ಕೆ ಸೂಜಿ ಚುಚ್ಚಿ
ಪುಸ್ಸ್‍ಗೊಳಿಸಿ ಆಟ ನಿಲ್ಲಿಸುತ್ತಾರಂತೆ
ಮತ್ತೆ ಸಂಕ್ರಾಂತಿಯ ಬಣ್ಣದ ಕಾಳಿನಂತೆ
ಸವಿಮಾತು ಕೇಳುತ್ತಿದೆ
ಸಕ್ಕರೆ ಕಾಳು ಕರಗಿದಂತೆ ಕಷ್ಟ ಕರಗಬಹುದು
ಅಥವಾ ಸವಿಮಾತೂ ಕರಗಬಹುದು
ಹಬ್ಬದ ಪ್ರೀತಿಯ ಬೆಸುಗೆ ನಮ್ಮಲ್ಲಿ ಇದ್ದರೆ…
ಖುಷಿ ಬೆಳೆಯಬಹುದು.


3 thoughts on “

Leave a Reply

Back To Top