Category: ಕಾವ್ಯಯಾನ

ಕಾವ್ಯಯಾನ

ಮತ್ತೊಮ್ಮೆ ಬೆಳಕು

ಕವಿತೆ ಮತ್ತೊಮ್ಮೆ ಬೆಳಕು ಹುಳಿಯಾರ್ ಷಬ್ಬೀರ್ ಹುಳಿಯಾರ್ ಷಬ್ಬೀರ್ ಅಂದಿನ ಅರೆಬೆತ್ತಲೆ ಫಕೀರನ ಬಿಡದ ನೆರಳು ಇಂದು ಮತ್ತೊಮ್ಮೆ ಆಗಿದೆ ಗೋವರ್ಧನ ಗಿರಿಗೆ ಹಿಡಿದ ಶ್ರೀ ಕೃಷ್ಣನ ಬೆರಳು ಅಂದು ಹರಡಿದ್ದ ಫರಂಗಿಯವರ ಮುಳುಗದ ಸಾಮ್ರಾಜ್ಯದ ಗುಲಾಮಗಿರಿಗುಡಿಸಿ ಹಾಕಿ ಸ್ವಚ್ಛ ಮಾಡಿ,ಜಯಭೇರಿ ಹೊಡೆದಿತ್ತುನಮ್ಮ ಗಾಂಧಿಗಿರಿ. ಇಂದು ಎತ್ತ ಸಾಗುತ್ತಿದೆ ಸ್ವಾತಂತ್ರ್ಯ ಪಡೆದ ಈ ಪುಟ್ಟವಿಶ್ವಧಾಮ…..?ಮೀರ್ ಸಾಧಿಕ್ ರ ದರ್ಬಾರಿನಲ್ಲಿ ನೀತಿ ನಿಯಮಗಳಲ್ಲ ಅಯೋಮಯವೋ ರಾಮ ರಾಮ…. ತೋರಿಕೆಗೆ ಆಚಾರ, ಮಾತೆಲ್ಲ ಬಂಗಾರ ನಡೆ ನೋಡಿದಡೆ ರೂಢಿಗತ ಭ್ರಷ್ಟಾಚಾರಪ್ರಜೆ […]

ಪಟ್ಟದರಸಿಯೊಂದಿಗೆ ಪಟ್ಟಾಂಗ

ಕವಿತೆ ಪಟ್ಟದರಸಿಯೊಂದಿಗೆ ಪಟ್ಟಾಂಗ ಪ್ರೇಮಶೇಖರ ಪಟ್ಟದಕಲ್ಲಿನ ಪಟ್ಟದರಾಣಿಯೇ ಇಷ್ಟದ ಒಡವೆಯ ಕೊಡಿಸುವೆ ಬಾ. ಕಷ್ಟವೇ ಆದರೂ, ನಿದ್ರೆಯೇ ಹೊದರೂ ತರುವೆನು ಸರವನು ನಿನಗೊಂದ. ಮೈಸೂರಿನ ಶೂರನೇ, ಪ್ರಾಣಕಾಂತನೆ ಒಡವೆಯು ನನಗೆ ಬೇಡಪ್ಪ. ಮಳೆಗಾಲಕೆ ಮೊದಲೇ ಸೋರುವ ಸೂರನು ಚಂದಕೆ ನೀನು ಹೊದಿಸಪ್ಪ. ಸೂರಿನ ಕೆಲಸವ ನಂತರ ಮಾಡುವೆ, ಮೊದಲಿಗೆ ನಿನ್ನ ಕೊರಳನು ತುಂಬುವೆ ಕಿವಿಯಲಿ ಓಲೆಗಳೆರಡನು ಅಂಟಿಸುವೆ, ಜುಮಕಿಗಳೆರಡನು ತಂದೂ ಕೂಡಿಸುವೆ. ಓಲೆಯು ಬೇಡ, ಜುಮಕಿಯೂ ಬೇಡ, ಒಡವೆಯ ಗೊಡವೆಯು ಬೇಡವೇಬೇಡ. ಮಳೆಗೇ ಮೊದಲೇ ಕಣಜವ ತುಂಬಪ್ಪ, […]

ಮೌನ ಬೆಳದಿಂಗಳಂತೆ ನಗುತ್ತದೆ…

ಕವಿತೆ ಮೌನ ಬೆಳದಿಂಗಳಂತೆ ನಗುತ್ತದೆ… ಬಿದಲೋಟಿ ರಂಗನಾಥ್ ಮೌನ ಬೆಳದಿಂಗಳಂತೆ ನಗುತ್ತದೆಮಾತಾಡುವುದಿಲ್ಲಎಷ್ಟೋ ದೂರ ನಡೆದು ಮತ್ತೆ ಬಂದುಕೂರುತ್ತದೆ ಮಡಿಲ ಮಗುವಂತೆ ಚಿಂತೆಗಳಿಗೆ ಬಟ್ಟೆ ತೊಡಿಸಿಶೃಂಗಾರ ಮುಡಿಸುತ್ತದೆಎಷ್ಟೊಂದು ಕೈಗಳು ಪರಚಲು ಬರುತ್ತವೆನಗುತ್ತವೆ ಅಳುತ್ತವೆಸೀಳಾದಿಯ ಮೇಲೆ ನಡೆದುಮುಗಿಲ ಚುಕ್ಕಿಗಳ ಮುಟ್ಟುತ್ತವೆ ಕಣ್ಣವೆಗಳ ಒಳಗಿನ ಧ್ಯಾನಬಾಗಿಲ ತೆರೆದುನಖಶಿಕಾಂತ ಕಾರುವ ಬೆಂಕಿಯ ಜ್ವಾಲೆ ನಂದಿಸಿಹೂ ಮುಡಿಸುತ್ತದೆ ನಡುವೆಅಳುವ ಧ್ವನಿಗೆ ಸೋತುಕಿವಿಗಳಿಗೆ ರೆಕ್ಕೆ ಬಂದುಬಹುದೂರ ನಡೆದು ಬೊಗಸೆ ತುಂಬಿನಿಜತ್ವದ ಸಾರಕೆ ಬುದ್ಧಿಯ ಮೆತ್ತಿನಡೆದು ಬರುವಾಗ ಮೋಡ ಗುಡುಗಿಮಳೆಯ ಬಿಲ್ಲುಗಳು ಬೀರಿದವುಭಾವ ಗುಚ್ಚದ ಎದೆಗೆ. ಮೌನದೊಳಗಿನ […]

ಅದೆ ಕೂಗು

ಕವಿತೆ ಅದೆ ಕೂಗು ಶಂಕರಾನಂದ ಹೆಬ್ಬಾಳ ಮತ್ತೆ ಮತ್ತೆ ಅದೆ ಕೂಗುಕೇಳಿದರೆ ಮೈಜುಂ ಎನ್ನುವ ಕ್ರೌರ್ಯಧಿಕ್ಕಾರವಿರಲಿ ನಿಮ್ಮ ಪುರುಷತ್ವಕ್ಕೆಅಬಲೆಯ ಮೇಲೆ ಪೌರುಷತೋರಿಸಿದ ನಾಚಿಕಗೇಡಿನ ಜನ್ಮ…..!! ಬಾಪುವಿನ ಕನಸು ನನಸಾಗಲಿಲ್ಲಒಡಲ ದಳ್ಳುರಿಯು ಹತ್ತಿ ಉರಿದಿದೆನಿಗಿ ನಿಗಿ ಕೆಂಡದಂತೆ…ಆರ್ತನಾದವ ಕೇಳುವರಿಲ್ಲದೆಕೇಳಿದರು ಮಂಗನಂತೆಕೈ ಬಾಯಿ ಕಣ್ಣು ಮುಚ್ಚಿಕುಳಿತಿದ್ದೆವೆ ಹೇಡಿಯಂತೆ……!! ನಿನ್ನ ದೇಹಕ್ಕೆ ಆಸೆ ಪಟ್ಟವರಿಗೆದಫನ್ ಮಾಡಬೇಕುಕಾಮುಕರ ಕೈಕತ್ತರಿಸಿನಾಯಿನರಿಗಳಿಗೆ ಹಾಕಬೇಕುಸತ್ತವಳು ನೀನಲ್ಲ….!! ಮತ್ತೆ ಮತ್ತೆ ಕೇಳುತಿದೆಅಮಾಯಕ ಹೆಣ್ಣುಮಕ್ಕಳಮೇಲಿನ ದೌರ್ಜನ್ಯದ ಕೂಗು..ನರಕದ ಹುಳುವಾಗಿ ಬಳಲಿದಮನುಜನ ಸಹವಾಸ ಸಾಕು….!! **************************

ಅರೆನಗ್ನ ಕನಸು

ಕವಿತೆ ಅರೆನಗ್ನ ಕನಸು ಕಾವ್ಯ ಎಸ್. ನಿನ್ನ ಅರೆ ಬೆಳಕಿನ ಇಬ್ಬನಿಯ ಮನೆಯಲ್ಲಿ ನಾ ಒದ್ದೆಯಾಗಿ ಒಣಗುತ್ತಿರುವಾಗ ಕೋಲ್ಮಿಂಚಂತೆ ನೀ ಹೊಕ್ಕೆ ಚಳಿಯನ್ನು ತಬ್ಬಲಿಯಾಗಿ ಹೊದ್ದಿದ್ದ ನನಗೆ ಕಣ್ಣುಗಳಿಂದ ಬಿಟ್ಟ ಇರುವೆ ಮೈಯೆಲ್ಲಾ ಸುತ್ತುತ್ತಿದೆ ನಿನ್ನ ಎದುರಿನ ಅಂತರದಲ್ಲಿ ನಾ ಮುದುಡಿದರೆ ತುಟಿಯಂಚಿನ ಮೊಗ್ಗಿನ ತಾವರೆಯು ಮುಡಿಯಲ್ಲಿ ಬಿಸಿ ಉಸಿರಿನ ತಾಪಕ್ಕೆ ಹಬ್ಬಿ ಚುಂಬನದ ಅಂಬರಕ್ಕೆ ಅರಳಿದ ಕೊಡೆಯಾಯಿತು ನಿನ್ನ ಕೆಮ್ಮಣ್ಣು ತುಟಿಯಲ್ಲಿ ನನ್ನ ರೂಪು ಬಿತ್ತಿದಾಗ ನನ್ನೊಳಗೆ ನವಿಲುಗಳು ಗುಂಪುಗಟ್ಟಿ ನೃತ್ಯವಾಡಿದ್ದವು ಹಿಡಿದೆಳೆದ ಒರಟು ರಭಸದ […]

ಗಝಲ್

ಗಝಲ್ ಎ.ಹೇಮಗಂಗಾ ನಿನ್ನ ಮನ ಪರಿತಾಪದಿ ಬೇಯುವ ಮೊದಲು ಮರಳಿಬಿಡು ನನ್ನೆಡೆಗೆಅಂತರಾಳದಿ ಕಹಿಭಾವ ಬೇರೂರುವ ಮೊದಲು ಮರಳಿಬಿಡು ನನ್ನೆಡೆಗೆ ಬಾಳದೋಣಿ ಮುನ್ನಡೆಸಲು ಹುಟ್ಟು ಹಾಕಬೇಕಿತ್ತು ಜೊತೆ ಸೇರಿಕಾಲದ ಕಡಲಲಿ ಮುಳುಗುವ ಮೊದಲು ಮರಳಿಬಿಡು ನನ್ನೆಡೆಗೆ ಹೃದಯ ನಿನಗಾಗಿ ಮಿಡಿಯುವುದನ್ನು ಈ ಕ್ಷಣಕ್ಕೂ ನಿಲ್ಲಿಸಿಲ್ಲಅಂತರದ ಕಂದಕ ಆಳವಾಗುವ ಮೊದಲು ಮರಳಿಬಿಡು ನನ್ನೆಡೆಗೆ ಅರಳಿದೊಲವ ಹೂವ ಬಿಸುಟು ನಡೆದ ನಿನ್ನ ನಡೆ ಸರಿಯೇ ಹೇಳುಕಣ್ಣೆದುರೇ ಮಣ್ಣಲಿ ಮಣ್ಣಾಗುವ ಮೊದಲು ಮರಳಿಬಿಡು ನನ್ನೆಡೆಗೆ ಪ್ರೀತಿಸುಧೆಯ ಉಂಡ ಜೀವ ವಿಷವ ಉಣಿಸಬಹುದೇ ಹೇಮ?ಕೊನೆ […]

ಕಂಸ…!

ಕವಿತೆ ಕಂಸ…! ಡಾ. ಅರಕಲಗೂಡು ನೀಲಕಂಠ ಮೂರ್ತಿ ಪ್ರಸ್ತಾವನೆ: ಒಬ್ಬ ದುರಾತ್ಮನ ಕ್ರೂರ ಮನಸ್ಸಿಗೆ ಅತ್ಯಂತ ಹೇಯವಾಗಿ ಬಲಿಯಾದ ಆ ಎಳೆಯ ಕಂದಮ್ಮನ ಆತ್ಮಕ್ಕೆ ಶಾಂತಿ ಕೋರಿ…ಈ ಕವನ ನನ್ನ ನಮನ! ಹಸುಳೆಯೊಂದು ಅಸುನೀಗಿದೆಒಂದು ಪೊದೆಯೊಳಗೆಅನಾಥಬೆತ್ತಲೆ –ಬೀಭತ್ಸ ಕೊಲೆಗೆ…!ಒಂದೇ ಒಂದು ದಿನವೋಒಂದು ವಾರವೋವಯಸು ಎಷ್ಟಾದರೇನು ಪಾತಕಕ್ಕೆ! ಅಚಾನಕ್ಕಾಗಿ ತಾನೆ ಅಂಬೆಗಾಲಿನಲಿನಡೆದಿರಬಹುದೇ ಪೊದೆಯೆಡೆಗೆಆ ಹಸುಳೆ?ಅಥವಾ…?ಪೊದೆಯೇನು ಬಯಲೇನುಏನಾದರೇನು ಅಸುರರೋಷಕ್ಕೆ! ಬಹುಶಃವಿಷದ ಹಾವೂ ಕೂಡ ಮರುಗಿಮುಟ್ಟದೆಭುಸುಗುಡದೆಹರಿದು ಹೋಗಿರಬಹುದು ಸುಮ್ಮನೆನಿಶಬ್ದ! ಆದರೀತ ಹಾಗಿರಲಿಲ್ಲ…ಕುದಿವ ಎಣ್ಣೆಯ ಕೊಪ್ಪರಿಗೆಯಿಂದಲೇ ನೇರಎದ್ದು ಬಂದಿದ್ದವನು!ಆ ಆಯುಧವೋ –ಒಂದೇ ಒಂದು […]

ರೈತನ ಮಗ ನಾ

ಕವಿತೆ ರೈತನ ಮಗ ನಾ ಚಂದ್ರು.ಪಿ.ಹಾಸನ ನಾನೊಬ್ಬ ನಿಮ್ಮೆಲ್ಲರ ಅಚ್ಚ ಕನ್ನಡಿಗಹಳ್ಳಿಯ ಸೀದಾ ಸಾದಾದ ಹುಡುಗಸಿಂಪಲ್ಲಾಗೈತೆ ರೀ ನನ್ನ ಲೈಫ್ ಸ್ಟೈಲುನೋವಾದ್ರೂ ಕೊಡ್ತೀನೊಂದು ಸ್ಮೈಲು ಯಾವಾಗ್ಲು ನಾನಾಗಿರ್ತೀನಿ ಮೌನಿಒಮ್ಮೊಮ್ಮೆ ಹಿಡಿತಿರ್ತೀನಿ ಲೇಖನಿಬರೆಯೋಕ್ ಕುಂತ್ರೆ ಹುಚ್ಚನಂಗಾಗ್ತೀನಿಸುಮ್ ಸುಮ್ನೆ ತೋಚಿದ್ದು ಗೀಚ್ತೀರ್ತೀನಿ ಏನೇನೋ ಹುಚ್ಚ್ ಹುಚ್ಚಾಸೆ ಇಟ್ಕೊಂಡುಸುಮ್ನಿರ್ತೀನಿ ತಲೆ ತುಂಬಾ ಕೆಡ್ಸ್ಕೊಂಡುಅಣುಕಿಸಿದವರ ಮನಸ್ನಲ್ಲೇ ಬೈಕೊಂಡುಉತ್ತರಿಸೋಕ್ಕೆ ಸಮ್ಯಾನ್ನ ಕಾಯ್ಕೊಂಡು ಹಳ್ಳಿಯ ಸೊಗಡಲ್ಲಿ ದಿಲ್ಲೀಯಾ ಕಾಣ್ತೀನಿಕೊಳ್ಳೀಯಾ ಹಿಡಿದಾದ್ರೂ ಗುರಿ ಮುಟ್ತೀನಿಸೋತೆಜ್ಜೇಗಳೊಂದೇ ಮೆಟ್ಲಾಗುಸ್ಕೊಂಡುಸಾಗ್ತೀನಿ ಎದ್ಯಾಗೊಂದ ಛಲವಿಟ್ಕೊಂಡು ದೇಸಕ್ಕೆ ಅನ್ನ ಕೊಡೋ ರೈತಾನ ಮಗಾನಾಮೋಸಕ್ತಲೆಕೊಡೋದಿಲ್ರೀ ಜಾಯ್ಮಾನಾನಂಜಿಲ್ದಾ […]

ನೆರಳು-ಬೆಳಕು

ಕವಿತೆ ನೆರಳು-ಬೆಳಕು ಕಾತ್ಯಾಯಿನಿ ಕುಂಜಿಬೆಟ್ಟು ಕಣ್ಣುಗಳಿಂದ ಉದುರುವನಕ್ಷತ್ರಗಳನ್ನುಆಕಾಶಕ್ಕೆ ಸಿಕ್ಕಿಸುತ್ತಿರುವಶಾಂತ ಇರುಳು… ಮರ ಗಿಡ ಬಳ್ಳಿಗಳುತಮ್ಮ ನೆರಳನು ಬಿಟ್ಟುಲೋಕ ಸಂಚಾರಕೆಹೊರಡುತ್ತವೆ ಕಡಲು ಭೋಗ೯ರೆಯುತಮರಳ ತೀರಕೆನೊರೆನೊರೆ ಹಾಲುಣಿಸುತ್ತನೆರಳಾಗಿಬಿಡುತ್ತದೆ ಹಕ್ಕಿಗಳು ಬೆಳಕು ರೆಕ್ಕೆಗಳನ್ನುಬಿಚ್ಚಿ ಹಾರುತ್ತ ಹಾರುತ್ತಕಪ್ಪು ನೆರಳುಗಳಾಗಿಚುಕ್ಕಿಗಳಾಗಿ ಮರೆಯಾಗುತ್ತವೆ ಈ ದೇಹದಿಂದ ಬೆಳಕೊಂದುಲೋಕ ಸಂಚಾರಕೆ ಹೊರಟಾಗನೆರಳು ನಿದ್ರಿಸುತ್ತದೆಮುಂಜಾನೆ ಮತ್ತೆ ಅದು ಮರಳಿನನ್ನನ್ನು ಪ್ರವೇಶಿಸುವವರೆಗೂ…ಒಂದು ದಿನ ಸಂಚಾರದಲ್ಲೇ ಮೈಮರೆತ ಅದುನನ್ನನ್ನೇ ಮರೆತುಬಿಡಬಹುದುನಾನು ಅದರ ನೆನಪಲ್ಲೇ ಇರುವಾಗಇನ್ನಾರದ್ದೋ ನೆರಳು ಕೊಳ್ಳಿ ಹಿಡಿದುಬೆಳಕು ಹಚ್ಚುವೆನೆಂದು ಬೆಂಕಿ ಹಚ್ಚಬಹುದು ಇರುಳಲ್ಲಿ ಸೂಯ೯ನ ನೆರಳುನಿದ್ರಿಸುತ್ತದೆಭೂಮಿಯ ನೆರಳು ತನ್ನನ್ನು ಭೂಮಿ […]

ನಿನ್ನ ಮೋಹಕೆ

ಕವಿತೆ ನಿನ್ನ ಮೋಹಕೆ ರೇಷ್ಮಾ ಕಂದಕೂರು ನಿನ್ನ ಮೋಹದ ಅರವಳಿಕೆಮೈಮನವ ಮರೆತ ಹಾಗಿದೆಭಾವೋನ್ಮಾದದ ಬೆಸುಗೆಗೆಬಾಚಿ ತಬ್ಬುವ ಇಳೆಯ ಪ್ರೀತಿಯಂತೆ ಸಾಚಾತನಕೆ ಪರಚಿದ ಗಾಯಮಾಸದ ಕಲೆಯ ಸ್ಥಿತಿಬೆಡಗು ಬಿನ್ನಾಣದ ರಿಂಗಣಲಗ್ಗೆ ಹಾಕುವ ನೆರೆಯ ಹಾವಳಿ ಕಣ್ಣ ಹೊಂಬೆಳಕಿನ ಕಿಡಿಹೊತ್ತಿಸಿದೆ ಅನುರಾಗದ ದೀಪ್ತಿಮೌನಕೂ ಕಸಿವಿಸಿಯಾದಂತೆಆಸರೆಯ ಒಡಲಲಿ ತವಕ ಅನುದಿನವು ಬೇಯುತಿದೆಸಹಚರಕೆ ಹಪಹಪಿಸಿದೆ ಕಂಗೆಟ್ಟುಇರುಳ ಬಾನ ತುಂಬಾ ನಗೆಯ ನಕ್ಷತ್ರಚೆಲುವಿನ ಚೈತ್ರಕೂ ಮರುಹುಟ್ಟು ವಿಸ್ಮಿತ ಪ್ರತಿಯ ಸ್ವರೂಪಸ್ವಪ್ನದಿ ಕಾಡಿದೆ ಬೆಂಬಿಡದೆಜ್ವಾಲಾಮುಖಿಯ ಆವೇಗದ ಸಂಚಾರಬೆರಗಿನ ಜಾಡು ಅನವರತ. ****************

Back To Top