ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮತ್ತೊಮ್ಮೆ ಬೆಳಕು

ಹುಳಿಯಾರ್ ಷಬ್ಬೀರ್

ಹುಳಿಯಾರ್ ಷಬ್ಬೀರ್

ಅಂದಿನ ಅರೆಬೆತ್ತಲೆ ಫಕೀರನ ಬಿಡದ ನೆರಳು ಇಂದು ಮತ್ತೊಮ್ಮೆ ಆಗಿದೆ ಗೋವರ್ಧನ ಗಿರಿಗೆ ಹಿಡಿದ ಶ್ರೀ ಕೃಷ್ಣನ ಬೆರಳು

ಅಂದು ಹರಡಿದ್ದ ಫರಂಗಿಯವರ ಮುಳುಗದ ಸಾಮ್ರಾಜ್ಯದ ಗುಲಾಮಗಿರಿ
ಗುಡಿಸಿ ಹಾಕಿ ಸ್ವಚ್ಛ ಮಾಡಿ,
ಜಯಭೇರಿ ಹೊಡೆದಿತ್ತು
ನಮ್ಮ ಗಾಂಧಿಗಿರಿ.

ಇಂದು ಎತ್ತ ಸಾಗುತ್ತಿದೆ ಸ್ವಾತಂತ್ರ್ಯ ಪಡೆದ ಈ ಪುಟ್ಟ
ವಿಶ್ವಧಾಮ…..?
ಮೀರ್ ಸಾಧಿಕ್ ರ ದರ್ಬಾರಿನಲ್ಲಿ ನೀತಿ ನಿಯಮಗಳಲ್ಲ ಅಯೋಮಯವೋ ರಾಮ ರಾಮ….

ತೋರಿಕೆಗೆ ಆಚಾರ, ಮಾತೆಲ್ಲ ಬಂಗಾರ ನಡೆ ನೋಡಿದಡೆ ರೂಢಿಗತ ಭ್ರಷ್ಟಾಚಾರ
ಪ್ರಜೆ ಮೋಸ ಹೋದ ಮೇಕೆ
ಕತ್ತಲೆಯೊಳಗೆ ಕೋತಿಗಳದೇ ಕೇಕೆ
ಗಿಳಿ, ಕೋಗಿಲೆ, ನವಿಲುಗಳೆಲ್ಲ
ನಮಕ್ ಹರಾಮರ ವಜ್ರ ಪಂಜರದಲ್ಲಿ ಬಂಧಿಗಳಾಗಿವೆ ಏಕೆ…?

ಗಾಂಧಿ ಅಂದು ‘ ಗಿರಿ ‘ ಯಾದಂತೆ ಅಣ್ಣಾ ಇಂದು ‘ಧರೆ ‘
ಯಾಗಿ ಅವತರಿಸಿ ಛಲವ
ನೂಲಲು ಕುಳಿತಾಗ ನೀನು
ನೂಲಾಗು ಬಾ, ನೀನು ನೂಲಾಗು ಬಾ ಭಾರತೀಯ
ಮತ್ತೊಂದು ಸ್ವಾತಂತ್ರ್ಯದ ಬಟ್ಟೆಗೆ…!!

***************************

About The Author

2 thoughts on “ಮತ್ತೊಮ್ಮೆ ಬೆಳಕು”

Leave a Reply

You cannot copy content of this page

Scroll to Top