Category: ಕಾವ್ಯಯಾನ

ಕಾವ್ಯಯಾನ

ಅದಿತಿ

ಕವಿತೆ ಅದಿತಿ ಮುರಳಿ ಹತ್ವಾರ್  ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.ಒಂದಿಷ್ಟೂ ಬಿಸಿಯಾಗಲಿಲ್ಲ ಅದುಅದರ ಮೇಲೇ ಕುಳಿತು ಆ ಒಂದೂವರೆ ಕಾಲಿನ, ಒಂಟಿ ಕಣ್ಣಿನಇರಾಕಿನವ ಕಣ್ಣು ಕಿತ್ತು ಬರುವ ಹಾಗೆ ಅವನ ಕಥೆ ಹೇಳಿಕೊಂಡಾಗ ಹೇಗೆ ಬಿಸಿಯಾದೀತು? ನಾಜೂಕಿನಿಂದಧೂಳೊರೆಸಿಕೊಳ್ಳುವದು ಅಭ್ಯಾಸವಾದಮೇಲೆ.ಬೇರು ಕಿತ್ತು, ಕೈ-ಕಾಲು ಕೊಯ್ದು,ನೀರು, ಎಣ್ಣೆಯಲದ್ದಿದ ತುಂಡುಗಳ ಅಂಟಿಸಿ,ಮೇಲೊಂದು ಹತ್ತಿಯ ಮೆತ್ತೆಯಿಟ್ಟು ಕಟ್ಟಿದ ಕುರ್ಚಿಯಲ್ಲವೇ ಅದು. ಆ ಆಫ್ರಿಕಾದ ಅಮ್ಮ, ಅಲ್ಲ, ಎಲ್ಲರ ಅಮ್ಮಅವಳ ಕಥೆ ಹೇಳಿಕೊಂಡಾಗಲೂ ಅಷ್ಟೇ.ಆಕೆ “ಅಯ್ಯೋ, […]

ದ್ವಿಪದಿಗಳು

ಕವಿತೆ ದ್ವಿಪದಿಗಳು ವಿ.ಹರಿನಾಥ ಬಾಬು ಹೊರಗೆ ಚಿಟ್ಟೆ ಹಾರುವುದ ನೋಡಿದೆಮೊನ್ನೆಯಿಂದ ಹೃದಯವೇಕೋ ಖಾಲಿ ಖಾಲಿ ಮೋಡಗಳು ಇದ್ದ ಮಳೆಯೆಲ್ಲಾ ಸುರಿಸಿ ನಿಂತಿವೆಮನಸು ನೀನಿಲ್ಲದೆ ಕತ್ತಲ ಕೋಣೆಯಾಗಿದೆ ನದಿಗಳು ಉಕ್ಕಿ ಹರಿಯುತ್ತಿವೆನಿನ್ನ ಹುಡುಕಿ, ಕೈಚೆಲ್ಲಿ ಕುಳಿತಿರುವೆ ಈಜಲಾಗದೆ ನೀರು ಹರಿದ ನೆಲದ ಮೇಲೆ ಅದರ ಹೆಜ್ಜೆ ಮೂಡಿದೆನಿನ್ನ ಬಂದು ಹೋಗುವಿಕೆಗೂ ಇಂಥದೇ ನವಿರು ಯಾಕೋ ಗಾಳಿ, ಛಳಿಗೆ ಮೂಲೆಯಲಿ ಮುದುಡಿ ಕುಳಿತಿದೆನೀನು ಕಾಣದೆ ಮನಸು ಗರಬಡಿದ ಹಾಗಿದೆ *********************

ದುಃಖ

ಕವಿತೆ ದುಃಖ ಚಂದ್ರಿಕಾ ನಾಗರಾಜ್ ಹಿರಿಯಡಕ ಅಯ್ಯೋಒಡೆದು ಬಿಡುಹೆಪ್ಪು ಗಟ್ಟಿರುವ ದುಃಖವ ಎಷ್ಟುಹೊತ್ತು ಹೊರಲಿಉಬ್ಬಿರುವ ಗಂಟಲ ಎಷ್ಟೆಂದು ಸಮಾಧಾನಿಸಲಿಅಡರಿರುವ ಕತ್ತಲಬೆಳಕೆಂದು ಕಂಗಳಿಗೆಷ್ಟು ನಂಬಿಸಲಿಹರಿದು, ಒಡೆದುಕಡಲಾಗಿಸುಹರಿಯಲಿಕಪ್ಪು ನೆತ್ತರುಹಾಳು ನೆತ್ತರುಬಸಿದಿಟ್ಟ ಒಲವಸುಡು ಸುಡುವಆಟದಲಿಕೈ ಸುಟ್ಟಿದ್ದಲ್ಲಕರಟಿ ಹೋಗಿದೆಬದುಕುಒಂದಷ್ಟು ಬವಣೆಗಳ ರಾಶಿಇನ್ನೊಂದಷ್ಟು ಖುಷಿಸತ್ತು ಸತ್ತು ನರಳುತಿದೆಎದೆ ಎತ್ತರಕ್ಕೆ ಬೆಳೆದು ನಿಂತಿದೆಇಲ್ಲ ಭಾವಗಳೆತ್ತರವ ಮೀರುತಿದೆಅಪನಂಬಿಕೆಯೆಂಬೋ ಅರ್ಥಹೀನತೆಗೆ‘ನೀನು’ ಎಂಬನಾಮಕರಣ ಮಾಡಿಸಿಹಿ ಹಂಚುವುದಿಲ್ಲಅಯ್ಯೋಒಡೆದು ಬಿಡುಹಂಚಿ ಹೋಗಲಿಕಹಿಯ ಒಗರೆಲ್ಲಾಆತ್ಮೋದ್ಧಾರದ ಸಣ್ಣ ಬೆಳಕೊಂದುಹಾಯಲಿಕದವಿಕ್ಕದಎದೆಯಂಗಳದ ತುಂಬೆಲ್ಲಾ ************************

ಹಸಿವು

ಕವಿತೆ ಹಸಿವು  ಗಂಗಾಧರ ಬಿ ಎಲ್ ನಿಟ್ಟೂರ್ ಹಸಿದು ಬಸವಳಿದವರಿಗೆ  ಪ್ರಾಣ ಹೋಗುವ ಸಂಕಟ ಉಳ್ಳವರಿಗೆ ಬರೀ ಚೆಲ್ಲಾಟ ಅನ್ನ ಚೆಲ್ಲುವ ಮಂದಿಗೆ ಅರ್ಥವಾದೀತೆ ಹಸಿದ ಕರುಳಿನ ಆಕ್ರಂದನ ಎದೆಯೊಳಗೆ ನಡುಕ  ಕರುಳು ಹಿಂಡುವ ಕಥನ  ಜಗದಿ ಹಸಿವಿನ ಮರಣ ಮೃದಂಗ  ಪ್ರಕೃತಿಗೆ ಕಣ್ಣಿಲ್ಲ ಕರುಣೆಯೂ ಇಲ್ಲ ಗಂಜಿಗೂ ಗತಿ ಇಲ್ಲದೆ ಸಾಯುವ ಕಂದಮ್ಮಗಳ ಸಂಖ್ಯೆ  ನಿತ್ಯ 20 ಸಾವಿರಕೂ ಅಧಿಕ ಹಿಡಿ ಅನ್ನ ಬೊಗಸೆ ನೀರಿಗೂ ತತ್ವಾರ  ಅಪೌಷ್ಟಿಕತೆ – ಸಾಂಕ್ರಾಮಿಕಗಳ ಪ್ರಹಾರ  ಎಂಥಾ ವಿಚಿತ್ರ […]

ಮತ್ತೆ ಹುಟ್ಟಲಿ ದುರ್ಗಿ…

ಕವಿತೆ ಮತ್ತೆ ಹುಟ್ಟಲಿ ದುರ್ಗಿ… ಮಹಿಷನ ಪೂಜಿಸಿದರೇನಂತೆತ್ರಿಲೋಕ ದಹಿಸೆಂದು ಅವನು ಹೇಳಲಿಲ್ಲಬ್ರಹ್ಮನಿಂದ ವರಪಡೆದರೇನಂತೆಅಬಲೆಯ ಬಲಾತ್ಕರಿಸೆಂದು ಅವನು ಹರಸಲಿಲ್ಲಹುಣ್ಣಿಮೆಯೋ ಮಹಾಲಯವೋಮಹಿಷಾಸುರನ ಕ್ರೌರ್ಯಕ್ಕೆ ಎಣೆಯಿಲ್ಲ ,ಬಗೆ ಬಗೆಯ ಛಧ್ಮವೇಶವೂ ರಕ್ಷಿಸಲಿಲ್ಲಕೊನೆಗೆಮಹಿಳೆಯೋರ್ವಳ ರೋಷಕ್ಕೆಪುರುಷನೊಬ್ಬನ ಅಹಂಕಾರಕ್ಕೆಅಲಂಕಾರಿಕ ಅಂತ್ಯ…ಕರುಳು ಚೆಲ್ಲಿತ್ತು ತ್ರಿಶೂಲ ಹೊಕ್ಕಿತ್ತುಮೂಜಗದ ಶಾಪಕ್ಕೆ ದುರ್ಗೆಯ ಕೋಪಕ್ಕೆಮಹಿಷಾಸುರನ ಪ್ರಾಣ ಹಾರಿತ್ತು…. ಹಾಗೆಂದು ಬದಲಾಯಿಸಿಬಿಟ್ಟಿತೇ ಕಾಲ?ಬಣ್ಣ,ವೇಷ, ವಾಸನೆಗಳ ಈಜಗ?ಇಲ್ಲ ಇಲ್ಲ ಆಗಾಗ ಮತ್ತೊಮ್ಮೆ ಮಗದೊಮ್ಮೆಮತ್ತೆ ಮತ್ತೆ ನಗ್ನವಾಗುತ್ತಲೇ ಇದೆಪುರುಷನೊಳಗಿನಮೃಗಮರಳಿ ಬಾ ದುರ್ಗಾಮಾತೆ …ರಕ್ತ ಬೀಜಾಸುರರಿವರುಅಬಲೆಯರ ಹುಡುಕುವರುಹೇಡಿಗಳಂತೆ ಹೊಂಚುವರು,ಒಬ್ಬಳ ಮೇಲೆ ಹಲವು ಹತ್ತು ಜನರುಕಾಮಾಂಧರಾಗಿ ಎರಗಿ ಭೋಗಿಸಿಸಾಯಿಸಿ,ಅಡಗುತ್ತ […]

ಇಲ್ಲೆ ಎಲ್ಲಾ..

ಕವಿತೆ ಇಲ್ಲೆ ಎಲ್ಲಾ.. ಜ್ಯೋತಿ ಡಿ.ಬೊಮ್ಮಾ ಬಿಡು ಮನವೆ ಕೊರಗುವದುನಿನಗಾರಿಲ್ಲ ಇಲ್ಲಿ ಆಪ್ತ ನಿನಗೆ ನೀನೆ ಶತ್ರು ನಿನಗೆ ನೀನೆ ಮಿತ್ರನಿನಗೆ ನೀನೆ ಆಗು ಪರಮಾಪ್ತ ಆಪೇಕ್ಷಿಸಿ ಕಾತರಿಸಿದಷ್ಟು ಹೆಚ್ಚುವದು ದುಃಖನೀರಿಕ್ಷಿಸದಿರು ಯಾರಿಂದ ಎನನ್ನೂ ,ಅದೇ ಸುಖ ಅಲೆಯದಿರು ಹುಡುಕುತ್ತಾ ಹೊರಗೆಲ್ಲೂ ಮುಕ್ತಿಬಾಹ್ಯದಲ್ಲೆಲ್ಲೂ ದೊರಕದದು ಅರಿ ನೀ, ಅದೇ ಯುಕ್ತಿ ನೆಮ್ಮದಿಯ ಬೆಂಬತ್ತಿ ಓಡೋಡದಿರುದ್ಯಾನದಲ್ಲೆ ಅಡಗಿರುವದದು ಮರೆಯದಿರು ಕೋಪ ಅಸೂಯೆಗಳು ಚಿಗುರದಂತೆ ತಡೆಪ್ರೀತಿ ಕರುಣೆಗಳು ಹಂಚುತ್ತ ನಡೆ ಸ್ವರ್ಗ ನರಕಗಳು ಮತ್ತೆಲ್ಲೂ ಇಲ್ಲತನ್ನ ತಾ ಅರಿತವನಿಗೆ ಇಲ್ಲೆ […]

ನಡುವೆ ಸುಳಿಯುವ ಆತ್ಮ!

ಕವಿತೆ ನಡುವೆ ಸುಳಿಯುವ ಆತ್ಮ! ನಡುವೆ ಸುಳಿಯುವ ಆತ್ಮಗಂಡೂ ಅಲ್ಲ ಹೆಣ್ಣೂ ಅಲ್ಲ!ಜೇಡರ ದಾಸಿಮಯ್ಯ ನೆನಪಾದ…ಗೋಡೆಯಲ್ಲಿದ್ದ ಗೌಳಿಹಲ್ಲಿ ಲೊಚಲೊಚ ಲೊಚ್ಚಲೊಚಗುಟ್ಟಿತುಪಚಪಚ ಪಚ್ಚ ಕಾಯಿ ಕಡೆಯುತ್ತಿದ್ದ ಬೋಳಜ್ಜಿಥತ್! ಅಪಶಕುನ! ಎಂದಳು.ಹೊಟ್ಟೆಗಂಟಿಕೊಂಡ ಬಿಳಿ ಮೊಟ್ಟೆಯನ್ನು ಹೊತ್ತಹೆಣ್ಣು ಜೇಡವುಗೋಡೆಯ ಮೇಲಿಂದವರಹಾವತಾರ ಕ್ಯಾಲೆಂಡರಿನ ಭೂಮಂಡಲದಮರೆಗೆ ಸರಿಯಿತು! ದಾಸಿಮಯ್ಯನ ಈ ವಚನ ಕಂಠಪಾಠ ಅವನಿಗೆ!ಪ್ರತಿ ಭಾಷಣದಲ್ಲೂ ಸ್ತ್ರೀ… ಸ್ತ್ರೀ… ಎಂದು ಸಂವೇದನೆಯಇಸ್ತ್ರೀ ಸೀರೆಸೀರೆಗಳಿಗೆ ಜೋರಲ್ಲೇ ಎಳೆಯುತ್ತಿರುತ್ತಾನೆವೇದಿಕೆಯಲ್ಲಿ!ಮನೆಯಲ್ಲಿ ‘ನಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!’ಇಸ್ತ್ರಿಯೇ ಇಲ್ಲದ ಹರಕು ಸೀರೆಯಲ್ಲಿಬಾಯಿ ಮುಚ್ಚಿಕೊಂಡೇ ಹೆಂಡತಿಯೋಜನಗಂಧಿಯರ ಮೀನು ಹೂವು ಮೂರಿಗಂಧ ಬೆರೆತುಬೆಂತರಾದಅವನ ಶರ್ಟ್ […]

ನೆನಪಾಗುತ್ತಾರೆ

ಕವಿತೆ ನೆನಪಾಗುತ್ತಾರೆ ಡಾ.ಯ.ಮಾ.ಯಾಕೊಳ್ಳಿ ನೆನಪಾಗುತ್ತಾರೆಈ ಇವರುಬಿಸಿಲು ತಾವುಂಡು ಬೆಳದಿಂಗಳಬೆಳೆಯ ಬೆಳೆದವರುಕತ್ತಲೆಯ ಗಾಡಾಂಧಕಾರದೊಳಗೆಯುಬೆಳಕು ಪಂಜನು ಹಿಡಿದುಬೆಳಗ ಹಂಚಿದವರು ಕರುಣೆ ಪ್ರೀತಿ‌ ಮಾತ್ರಇಲ್ಲಿ ಬದುಕ ಉಳಿಸಬಹುದುಎಂದು‌ ಬಲವಾಗಿ ನಂಬಿಅದರ ಬೀಜವನೆ ಬಿತ್ತಿದವರುಅಂಗುಲಿಮಾಲನ ಕ್ರೂರ ಎದೆಯೊಳಗುಪ್ರೀತಿ ಅರಳಿಸಬಹುದೆಂದುತಿಳಿದವರು ವಸ್ತ್ರ ವಡವೆ ಅಧಿಕಾರ ಅಂತಸ್ತುಎಲ್ಲವನು ಧಿಕ್ಕರಿಸಿಮನುಷ್ಯತ್ವಕ್ಕಿಂತ‌ ಮಿಗಿಲಾದುದಿಲ್ಲವೆಂದವರು ನುಡಿಯಹದನ ಕಿಂತ ನಡೆಯ ಬೆಳಕಹರಡಿದವರು ನಮ್ಮ ನಡುವೆ ಎಲ್ಕವೂನಿಂತಂತೆನಿಸಿರುವಾಗಮುಚ್ಚಿದ ಬೀಗವ ತಗೆಯವಕೊಂಡಿಯಂತಿವರುಮತ್ತೆ‌ ಮತ್ತೆ ನೆನಪಾಗುತ್ತಾರೆ ಬಂಧಗಳನು ಒಗ್ಗೂಡಿಸುವಮಂತ್ರದಂಡದಂತೆ!ಮರೆಯದೆ ಹೋಗಬೇಕಿದೆಅಲ್ಲಿಗೆರಾಜ್ಯ ಬಿಟ್ಟವರ,ತುಂಡು‌ಬಟ್ಟೆ ತೊಟ್ಟವರಎಲ್ಲ ನಮ್ಮವನೆಂದವರಅಕ್ಷರದ ಬಲವಿಡಿದುಸಮಾನತೆಯಹೊತ್ತಗೆಯನಿತ್ತವರ ಬಳಿಗೆ…ಮತ್ತೆ‌ಮತ್ತೆ ನೆನಪಾಗುವಅವರದೆ ಆಸರೆಗೆ *************************** ಡಾ.ವೈ.ಎಂ.ಯಾಕೊಳ್ಳಿ

ಗಝಲ್

ಗಝಲ್ ರತ್ನ ರಾಯಮಲ್ಲ . ಬದಲಾಗುವ ಋತುಮಾನಗಳಲ್ಲಿ ನೀನೇ ನನ್ನ ವಸಂತನಿನಗಾಗಿ ಮನೆ-ಮಠಗಳನ್ನು ತೊರೆದ ನಾನೇ ನಿನ್ನ ಸಂತ ಶಶಿಗೂ ಬೆಳದಿಂಗಳನು ನೀಡಿರುವ ಚಂದ್ರಮುಖಿ ನೀನುಹೃದಯದಿ ನಿನಗಾಗಿ ಪಾರಿಜಾತ ಹೂ ನೆಟ್ಟ ಹೃದಯವಂತ ನೀನು ಇಲ್ಲದ ಕತ್ತಲೆ ವೈರಿಯಾಗಿ ಕಾಡುತ್ತಿದೆ ಅನುದಿನವೂನಿನಗಾಗಿ ಪ್ರೇಮದ ಕಂದೀಲು ಹಿಡಿದು ಕುಳಿತಿರುವ ಗುಣವಂತ ವಿರಹವನ್ನೇ ಹಾಸಿ ಹೊದ್ದುಕೊಂಡು ಮಲಗಿರುವೆ ನೆನಪಿನಲ್ಲಿನಿನಗಾಗಿ ಸರಸದ ಪಲ್ಲಂಗ ಹಾಕಿರುವೆನು ಪ್ರೀತಿಯ ಸಿರಿವಂತ ನಿನಗೋಸ್ಕರ ಹಗಲನ್ನು ತಡೆದು ನಿಲ್ಲಿಸುತಿರುವನು ಈ ಮಲ್ಲಿಆಗಸದ ತಾರೆಗಳನ್ನು ನಿನ್ನ ಮುಡಿಗಾಗಿ ಹೆಣೆದ […]

ಗಝಲ್

ಗಝಲ್ ಎ . ಹೇಮಗಂಗಾ ಕಲ್ಲುಮುಳ್ಳುಗಳ ಹಾದಿಯಲ್ಲಿ ನಡೆಯುತ್ತಲೇ ಇದ್ದೇನೆ ನಾನೇಕೆ ಹೀಗೆಕಷ್ಟ ಕಾರ್ಪಣ್ಯಗಳಲ್ಲಿ ಮುಳುಗುತ್ತಲೇ ಇದ್ದೇನೆ ನಾನೇಕೆ ಹೀಗೆ ಮೇಲೇರಬೇಕೆಂದರೂ ಕಾಲು ಹಿಡಿದು ಜಗ್ಗುವವರೇ ಹೆಚ್ಚುನಿತ್ಯ ಬೆನ್ನಿಗೆ ಇರಿಸಿಕೊಳ್ಳುತ್ತಲೇ ಇದ್ದೇನೆ ನಾನೇಕೆ ಹೀಗೆ ಮೋಡಿ ಮಾತುಗಳಿಗೆ ಮರುಳಾದರೂ ಎಚ್ಚೆತ್ತುಕೊಳ್ಳಲಿಲ್ಲಕುಹಕಿಗಳ ನೋಟಕೆ ಗುರಿಯಾಗುತ್ತಲೇ ಇದ್ದೇನೆ ನಾನೇಕೆ ಹೀಗೆ ಬೆಳ್ಳಗಿರುವುದೆಲ್ಲಾ ಹಾಲೆಂಬ ನಂಬಿಕೆ ಹೆಜ್ಜೆಹೆಜ್ಜೆಗೂ ಹುಸಿಯಾಗಿದೆವಂಚನೆಯ ಹಾಲಾಹಲವ ಕುಡಿಯುತ್ತಲೇ ಇದ್ದೇನೆ ನಾನೇಕೆ ಹೀಗೆ ಬೇಲಿಯೇ ಎದ್ದು ಹೊಲ ಮೇಯುವ ಕಾಲ ಇದಲ್ಲವೇ ಹೇಮತಿದ್ದಲಾಗದ ನನ್ನ ನಾನು ಹಳಿಯುತ್ತಲೇ ಇದ್ದೇನೆ […]

Back To Top