Category: ಕಾವ್ಯಯಾನ

ಕಾವ್ಯಯಾನ

ಬೀಜವೊಂದನು ಊರಬೇಕು

ಕವಿತೆ ಬೀಜವೊಂದನು ಊರಬೇಕು ವಿಜಯಶ್ರೀ ಹಾಲಾಡಿ ಕಣ್ಣೀರಿಗೆ ದಂಡೆ ಕಟ್ಟಿಬೀಜವೊಂದನ್ನು ಊರಬೇಕುಬೇರೂರಿ ಮಳೆ ಗಾಳಿ ಬಿಸಿಲಿಗೆಮೈಯ್ಯೊಡ್ಡಿ ಚಿಗುರುವುದಕಾಣುತ್ತ ಮೆಲು ನಗಬೇಕು ಬಿಕ್ಕುಗಳ ಬದಿಗೊತ್ತಿಹಕ್ಕಿ ನಾಯಿ ಬೆಕ್ಕುಗಳಿಗೆತುತ್ತುಣಿಸಿ ಮುದ್ದಿಸಬೇಕುತಿಂದು ತೇಗಿ ಆಕಳಿಸಿನಿದ್ದೆ ತೆಗೆವಾಗ ನೇವರಿಸಿಎದೆಗವಚಿಕೊಳಬೇಕು ನೋವುಂಡ ಜೀವಗಳಕೈ ಹಿಡಿದು ನಡೆಯಬೇಕುಹೆಗಲಿಗೆ ಹೆಗಲಾಗಿ ಕರುಳಾಗಿಮಮತೆ ತೇಯುತ್ತಗಂಧ ಚಂದನವಾಗಬೇಕು ಕಡು ಇರುಳುಗಳ ತೆರೆದಿಡುವಹಿತ ಬೆಳಗುಗಳ ನೇಯುವಬುವಿಗೆ ಮಂಡಿಯೂರಿಹಸಿರಾಗಿ ತರಗೆಲೆಯಾಗಿಮಣ್ಣಾಗಿ ಕೆಸರಾಗಿ ಕರಗಬೇಕುಕೊನೆ ಉಸಿರೆಳೆದ ದೇಹಗೊಬ್ಬರವಾಗಿ ಹೂ ಅರಳಬೇಕು!*********************************************************

ಸಾವಿನ ಆರ್ಭಟ

ಕವಿತೆ ಸಾವಿನ ಆರ್ಭಟ ಡಾ.ಜಿ.ಪಿ.ಕುಸುಮ ನಮ್ಮಮುಂಬಯಿ ಆಸ್ಪತ್ರೆಗಳುಮತ್ತೆ ಮತ್ತೆಸಾವಿನ ಮಾರಕ ತುಳಿತಗಳನ್ನುಸದ್ದು ಗದ್ದಲವಿಲ್ಲದೆಸ್ವೀಕರಿಸುತ್ತಿವೆ.ಅಂಬುಲೆನ್ಸ್ ಗಳ ಚೀತ್ಕಾರಕ್ಕೆನಡುಗುತಿಹ ನಗರದೊಳಗೆನಿಗಿನಿಗಿ ಕೆಂಡದೊಳು ಬೇಯುವಸ್ಮಶಾನಗಳುಮೂಕವಾಗಿವೆ. ಬೆಡ್ಡುಗಳ ತೆರೆದೊಡಲಲಿಉಸಿರಿಲ್ಲದವರಲ್ಲಲ್ಲಿಹೂಡಿದ್ದಾರೆ ಡೇರೆ.ಗೋಡೆಗಳನ್ನು ಕಟ್ಟಿದವರೆಲ್ಲಕೆಡವುವ ಮುನ್ನವೇಮಣ್ಣಲ್ಲಿ ಮಣ್ಣಾಗಲೂಸಾಲಲಿ ಸರಿಯುತ ತೆರಳುತಿಹರುಸುಟ್ಟು ಸುಟ್ಟುಬೆಂಕಿಯೂ ಸೋತಿದೆ.ಸಾಲು ಕೊನೆಯಿಲ್ಲದೆ ಕೊರಗಿದೆ. ಜೀವಿತದ ಕೊನೆಯ ಕ್ರಿಯೆಕ್ರಿಯೆಯಾಗದೆಮನುಷ್ಯನು ಮನುಷ್ಯನ ಕೆಲಸಕ್ಕೆಬಾರದೆಸಂಸ್ಕೃತಿ, ಸಂಸ್ಕಾರಗಳ ಕೈ ಹಿಡಿಯಲೂಆಗದೆಹೊರಡುತ್ತವೆ ಹೃದಯಗಳುಮಾತೂ ಆಡದೆ.ಚಕಾರವೆತ್ತದೆ ಸಾಗಿದೆಆಸ್ಪತ್ರೆಯ ಹೊರಗೆ ಕಂಬನಿಯ ನದಿಒಳಗೆ ಹೆಣಗಣತಿಯ ತರಾತುರಿ. *******************************

ಗಜಲ್

ಗಜಲ್ ಸುಜಾತ ಲಕ್ಷ್ಮೀಪುರ. ಕಳಚಿಕೊಂಡು ಸೋಗು ಅಹಂಕಾರ ಮಗುವಾಗಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರುಮನದಲಿ ಭಯ ಆತಂಕ ನೋವು ಪರಿತಾಪವಿದ್ದರೂನನ್ನ ಬಳಿ ಬರಲಿಲ್ಲ ನನ್ನ ದೇವರು ಮಂಜಾನೆ ನೇಸರ ಇರುಳು ಚುಕ್ಕಿ ಚಂದ್ರಮ ನಡುವೆ ಬೀಸುವಗಾಳಿಯೂ ಅವನ ನೆನಪಿಸಿದೆಹಸಿವು ನಿದಿರೆ ಸನಿಹ ಸುಳಿಯದೆ ಧ್ಯಾನದಲ್ಲಿದ್ದರೂ ನನ್ನ ಬಳಿ ಬರಲಿಲ್ಲ‌ ನನ್ನ ದೇವರು ಋತುಮಾನಗಳು ಉರುಳುತ್ತಿವೆ ಚಳಿಗೆ ಚಳಿ ಕಾಣದೆ ಬೇಸಿಗೆ ಸುಡುದೆ ಕೊರಡಾಗಿದೆ ಬದುಕುಕಾಯ ಕರಗಿ ಚಿತ್ತ ಮಾಗಿ ತಾನಳಿದು ಶೂನ್ಯವಾದರೂನನ್ನ ಬಳಿ ಬರಲಿಲ್ಲ ನನ್ನ […]

ಕನಸುಗಳ ಕಮರಿಸುವವರಿಗೆ

ಕವಿತೆ ಕನಸುಗಳ ಕಮರಿಸುವವರಿಗೆ ಡಾ.ಸುರೇಖಾ ರಾಠೋಡ ಕೊಡಬೇಡಿ ಮಗಳಹಣವ ಕೇಳುವಹಣವಂತರಿಗೆ… ಕೊಡಬೇಡಿಬಂಗಾರದಂತಹ ಮಗಳಬಂಗಾರವ ಕೇಳುವವರಿಗೆ… ಕೊಡಬೇಡಿಅಧಿಕಾರಿಯಾಗುವ ಮಗಳ ;ಅಧಿಕಾರಿಗಳಾದವರಿಗೆ ಕೊಟ್ಟು ,ಅವಳು ಅಧಿಕಾರಿಯಾಗುವಅವಕಾಶವನ್ನೆಕಿತ್ತುಕೊಳ್ಳುವವರಿಗೆ…. ಕೊಡಬೇಡಿಶಿಕ್ಷಣ ಪಡೆಯುವ ಮಗಳನ್ನು ;ಅವಳಿಗೆ ಶಿಕ್ಷಣವನ್ನು ನೀಡಲುನಿರಾಕರಿಸುವವರಿಗೆ…. ಕೊಡಬೇಡಿಕನಸು ಕಾಣುವ ನಿಮ್ಮ ಮಗಳನ್ನು ;ಅವಳ ಕನಸುಗಳನ್ನೆಕಮರಿಸುವವರಿಗೆ …. ಕೊಡಬೇಡಿಹಕ್ಕಿಯಂತೆ ಹಾರ ಬಯಸುವ ಮಗಳನ್ನು ;ಅವಳ ರಕ್ಕೆಯನ್ನೆಕತ್ತರಿಸುವವರಿಗೆ… ಕೊಡಬೇಡಿಜನ್ಮ ನೀಡುವ ಮಗಳನ್ನು ;ಅವಳ ಜೀವವನ್ನೇತಗೆಯುವವರಿಗೆ…. ಕೊಡಬೇಡಿಜಗವ ರಕ್ಷಿಸುವ ಮಗಳಿಗೆಅವಳ ಜಗತ್ತನ್ನೇಕಸಿದುಕೊಳ್ಳುವವರಿಗೆ… ಕೊಡಬೇಡಿನಿಮ್ಮ ಗೌರವ,ಅಂತಸ್ತಿಗೆದಕ್ಕೆ ತರುವವರಿಗೆಹಾಗೂಅವಳ ಗೌರವವನ್ನೇನಾಶಪಡಿಸುವವರಿಗೆ… ಕೊಡಬೇಡಿ ಮಗಳಿಗೆವಿವಾಹದ ಹೆಸರಿನಲ್ಲಿಬೇರೆಯವರಿಗೆಮಾರುವವರಿಗೆ….*************************************

ಗಝಲ್

ಗಝಲ್ ಆಸೀಫಾ ಬೇವು ಬೆಲ್ಲದೊಳಿಟ್ಟು ಕಷ್ಟ ಸುಖದ ಸಾಂಗತ್ಯ ಸಾರುತಿದೆ ಯುಗಾದಿಅಭ್ಯಂಜನವ ಮಾಡಿಸಿ ನವಚೈತನ್ಯ ಚೆಲ್ಲುತಿದೆ ಯುಗಾದಿ. ಹೊಸ ಚಿಗುರಿನ ಹೊದಿಕೆಯಲಿ ಕಂಗೊಳಿಸುತಿವೆ ಗಿಡಮರಗಳುಯುಗದ ಆದಿಯ ನೆನಪಿಸಿ ಹರ್ಷ ಹಂಚುತಿದೆ ಯುಗಾದಿ ಮೈಮರೆತ ದುಂಬಿಗಳ ಝೇಂಕಾರ ಹೊಂಗೆ ಬೇವು ಮಾಮರದ ತುಂಬಾಸವಿಜೇನಿನೊಲವು ಮನದ ಗೂಡುಗಳಲಿ ತುಂಬುತಿದೆ ಯುಗಾದಿ ತಳಿರು ತೋರಣ ಚೈತ್ರದಾಗಮನಕೆ ಸೂಚನೆಯನಿತ್ತು ನಗುತಿದೆಬ್ರಹ್ಮ ಸೃಷ್ಟಿಗೆ ಶಿರಬಾಗಿ ಶತಕೋಟಿ ನಮನ ಹೇಳುತಿದೆ ಯುಗಾದಿ ಹಳೆಯ ಹಗೆಯ ಕಳಚಿ ನಿಲ್ಲೋಣ ವಸಂತನಾಗಮನಕೆ ಎಲ್ಲಾಹೊಸ ವರುಷಕೆ ಕೈಬೀಸಿ ಆಸೀಯ ಕರೆಯುತಿದೆ […]

ಹಬ್ಬದ ಸಂತೆ

ಕವಿತೆ ಹಬ್ಬದ ಸಂತೆ ಡಾ. ಅರಕಲಗೂಡು ನೀಲಕಂಠ ಮೂರ್ತಿ ಇನ್ನೇನುಹತ್ತಿರ ಹಬ್ಬದ ಕಾಲಸಂತೆಗಳಲಿ ಮಾರಾಟಕೆಪಂಚೆ ಸೀರೆ ಒಂದೆರಡು ಪಿಂಡಿಮುತುವರ್ಜಿ ವಹಿಸಿನೇಯತೊಡಗಿರುವನುನೇಕಾರ ಹಗಲು ರಾತ್ರಿ ಎನ್ನದೆಮುಂದಿನ ನಾಲ್ಕಾರು ತಿಂಗಳಹೊಟ್ಟೆಪಾಡಿಗೆ! ಇನ್ನು ವಾರದಲ್ಲೆಸಂತೆಗಳ ಸುರಿಮಳೆ…ಅಷ್ಟರಲ್ಲಿ ಅದೆಂಥದೋ ಕಾಯೆಲೆಜಗಕೆಲ್ಲ ಸುಂಟರಗಾಳಿಯ ಹಾಗೆಹಬ್ಬಿಅದೇನೋ ಸಂಜೆ ಕರ್ಫ್ಯೂಅಂತ ಹೇರಿದರುಜೊತೆಜೊತೆಗೆ ಘಂಟೆ ಜಾಗಟೆಬಾರಿಸಿರೆಂದರುದೀಪ ಬೆಳಗಿಸಿ ಕುಣಿಸಿದರುಎಲ್ಲರೊಡನೆ ತಾವೂ ಕೂಡಿಕೊಂಡರುಈ ನೇಕಾರರುಅಮಾಯಕರು… ಹಾಗೆ ಕುಣಿಕುಣಿದುದೀಪ ಜಾಗಟೆಗಳಶಬ್ದ ಬೆಳಕಿನಾಟದ ನಡುವೆಯಲಿದಿಢೀರನೆ ಸಿಡಿಲು ಬಡಿದುಮರಗಳು ಬೆಂದು ಉರಿದ ಹಾಗೆಲಾಕ್ ಡೌನ್! ಲಾಕ್ ಡೌನ್!ಎಂದು ಗುಡುಗಿದರುನಾಡೆಲ್ಲ ಒಟ್ಟೊಟ್ಟಿಗೆ ಬಂದ್ ಬಂದ್!ಮತ್ತೆ ಗುಡುಗುಟ್ಟಿದರು… […]

ಹೊಸ ಹಿಗ್ಗು…..!!

ಕವಿತೆ ಹೊಸ ಹಿಗ್ಗು…..!! ಯಮುನಾ.ಕಂಬಾರ ಎಲ್ಲಿಹುದು ಹೊಸಹಿಗ್ಗು – ಕ್ಷಣ ನಾನುಕಣ್ತೆರೆವೆ – ಮೈ ಮನ ಒಂದಾಗಿ ಕಾಯುತಿರುವೆಬೆಳ್ಳಿ ಮೋಡದಕಪ್ಪಿನಲ್ಲೋ …ಇಲ್ಲಾಕರಿಯ ನೆಲದ ಕಣ್ಣಿನಲ್ಲೋ …ಅಂತೂ ರಚ್ಚೆಹಿಡಿದು ಕುಳಿತಿರುವೆ. //ಪ// ನೀಲಿ ಆಗಸದಎದೆ ತುಂಬಿತುಳುಕಿದೆ – ಮೊಗ್ಗಿನೊಲು ಹೊಸ ಕಬ್ಬ ಹೀರಲು ಮುಂದಾಗಿಅದೇ ಆ ಎಂದಿನಕಲುಷಿತ ಹವೆಏರಿ ಬರುತಿದೆ ಮುಗಿಲ ಮಾರಿಗೆ ನಾಚಿಕೆಯ ಸರಿಸಿ //ಪ// ಋಷಿ ಮುನಿಯತಪದಂತೆ ಏಕವೃತಸ್ಥೆಯಾಗಿ ಹಸಿರು ಚಿಮ್ಮಿದ ಚಲುವೆ ದೀನಳಾಗಿಹಳುಹೊಸ ಚಿಗುರುಹಸಿರೆಲೆಯು ಕಳೆಗುಂದಿ ನಲುಗುತಿವೆ ನುಂಗದ ವಿಷ ಜಲವ ಒಕ್ಕಿ //ಪ// […]

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1)ಹೆಣ್ಣಲ್ಲವೇ ನೀ :ಕಲ್ಲು ರೂಪದಿ ಕೂಡಾಮಮತೆ ಸೆಲೆ. 2)ಕಲ್ಲಾಗಿ ಹೋದೆ :ಸ್ವಾರ್ಥಿ ಜಗವು ಕೊಟ್ಟನೋವು ಕಾಣಿಕೆ. 3)ಹಣೆಯ ಬೊಟ್ಟುಅವನಿಟ್ಟ ನೆನಪುಹೃದಯೋಡೆಯ 4)ಕಾದು ಕಲ್ಲಾದೆ :ನಲ್ಲನ ಆಗಮನಕಾಮನಬಿಲ್ಲು. 5)ಅಹಲ್ಯ ರೂಪಶ್ರೀ ರಾಮ ಬರುವನೇ,ಕಲಿಯುಗದಿ. 6)ಗಂಭೀರ ಮೊಗಕಂದನಂದದ ಮನಬಾಳು ನಂದನ. 7)ಮೌನದ ತಾಣಹೆಣ್ಣು ಜೀವದ ಕಣ್ಣು,ತೀರದ ಋಣ. *************************************

ಗಜಲ್

ಗಜಲ್ ಅಶೋಕ ಬಾಬು ಟೇಕಲ್ ಹಾಲುಂಡ ಹಸುಳೆಯೇ ಹದ್ದಂತೆ ಕುಕ್ಕಿ ಕುಕ್ಕಿ ತಿನ್ನುತ್ತಿದೆ ಈಗಹೊತ್ತೊತ್ತಿಗೂ ಮಡಿಲೇರಿದ ಕೂಸೇ ಕಾಳ ಸರ್ಪದಂತೆ ಬುಸುಗುಟ್ಟುತ್ತಿದೆ ಈಗ ನಿತ್ರಾಣಗೊಂಡು ಪಾತಾಳ ತುಳಿದಾಗ ಕೈ ಹಿಡಿದು ಮೇಲೆತ್ತಿದ್ದೆಕೃತಜ್ಞತೆಯ ಮರೆತು ನೇಣು ಕುಣಿಕೆ ಹುರಿಗೊಳಿಸುತ್ತಿದೆ ಈಗ ಮಾನವೀಯತೆ ಮುಂದೆ ಮಿಕ್ಕೆಲ್ಲವೂ ಗೌಣವೆಂದೇ ಭಾವಿಸಿದ್ದೆಅದೇ ಮಾನವೀಯತೆಗೆ ಚಟ್ಟ ಕಟ್ಟಿ ಬೀದಿಗಿಟ್ಟು ಹರಾಜಾಕುತ್ತಿದೆ ಈಗ ಊರಿಗೆ ಊರೇ ಅಪಸ್ವರದ ಕೊಳಲು ನುಡಿಸುತಿತ್ತು ಅಲ್ಲಿ !ಬುದ್ಧ ಸಾಗಿ ಬಂದ ಹಾದಿಯೂ ಮುಳ್ಳುಗಳನು ಮೊಳೆಸುತ್ತಿದೆ ಈಗ ಈಚಲು ಮರದ ನೆರಳು […]

ಕವಿತೆ ಮತ್ತೆ ಯುಗಾದಿ ಹೊಸ ವರ್ಷವ ಸ್ವಾಗತಿಸುತ ಬಂದಿದೆ ಯುಗಾದಿಯುಗ ಯುಗಗಳ ಹೊಸ ಪಲ್ಲವಿಯನು ಹಾಡಿ. ಮಾರನ ಹೂ ಬಾಣದ ಜುಮ್ಮೆನ್ನುವ ಅಮಲುಪ್ರತಿ ಹೃದಯದ ಮೇಲೆರಗಿದೆ ಮೈಗಂಧದ ಘಮಲು. ಎಲೆಯುದುರುವ ಕಾಡಲ್ಲಿ ಚಿಗುರಿನ ದನಿ ಹಾಡುಪ್ರತಿ ಗಿಡಗಳು ಹಸಿರುಟ್ಟಿವೆ ಹೂ ಬಟ್ಟೆಯ ನೋಡು. ಹೂ ಹೂಗಳ ಕೇಸರದಲಿ ದುಂಬಿಯ ಹೂ ಮುತ್ತುಗಿಡ ಮರಗಳು ಅನುಭವಿಸಿವೆ ಪ್ರಣಯದ ನಶೆ ಮತ್ತು! ಒಣ ಶಿಶಿರವು ಚೇತರಿಸದು ಹೂ ಚೈತ್ರದ ಹೊರತುವನಮಾಲಿಯ ಅಡಿ ಅಡಿಯಲು ಮಧು ಮಾಸದ ಗುರುತು. ಪ್ರತಿ ಕಾಡಲು […]

Back To Top