Category: ಕಾವ್ಯಯಾನ

ಕಾವ್ಯಯಾನ

ಹಾವಿನ ಹಾಸಿಗೆಯಾದರೂ ವಿಷಕ್ಕೆ ಅಂಜದೇ ಕೇದಿಗೆಯ ಪರಿಮಳ ಹೊಮ್ಮಿದೆ
ಅನ್ಯಭಾವವಲ್ಲದ ಅನ್ವಯ ಮನಕ್ಕೆ ಹೇಳಲಾರದೆ ಕಲೆತಿವೆ ಇಬ್ಬನಿಯ ಮುತ್ತು

ಹೃದಯದ ಪಿಸುಮಾತು ಕೇಳಿ ನಗುಬರುತಿದೆಯೇ ಕೇಶವಾ ನಿನಗೆ
ಉದಯ ರವಿಯ ಕಾಣುವ ಸೊಗಸಿಗೆ ಬೆಳ್ಮುಗಿಲ ಮೋಡವ ಸರಿಸಿದೆಯಲ್ಲ ನೀನು

ಕಾವ್ಯ ಸಂಗಾತಿ ಎದೆಗೊಳದ ಸ್ಪೂರ್ತಿ ಪುಷ್ಪಾ ಮಾಳ್ಕೊಪ್ಪ ಎದೆಗೊಳದಿ ತುಂತುಂಬಿತುಳುಕಿರಲು ಗೈವಛಲಚಿಮ್ಮದಿಹುದೇ ಸ್ಪೂರ್ತಿ ಚಿಲುಮೆಯಾಗಿ |ಧೈರ್ಯವೂ ಜೊತೆಗಿರಲುಗೆಲುವು ಬೆಂಬಿಡದಿಲ್ಲಿಹಿಂದೆ ಸರಿಯುವುದು ಹಿನ್ನಡೆಯು ಇಲ್ಲಿ || ಮೂಡಿರಲು ಮನದಲ್ಲಿಕನಸ ಕಾಮನಬಿಲ್ಲುಮುದ ನೀಡಿಹುದು ಬಾನ ಚಿತ್ತಾರ ನೋಡಾ |ಶಕ್ತಿ ಯುಕ್ತಿಯು ನರನ ನಾಡಿಯಲಿ ಹರಿದಿರಲುಸರಿದಿಹುದು ಪಕ್ಕದಲಿ ಕಪ್ಪು ಮೋಡಾ || ಓಟದಲಿ ಸರಿಸಮಕೆ ಯಾರಿಲ್ಲ ಮೀರಿಸಲುಮೇಘಾಳಿಗಳೆ ನಾಚಿ ಸ್ಥಬ್ಧವಾಗಿಹವು |ವಿಕಲಾಂಗನಲ್ಲನಿವ ಸಕಲ ಬಲ ಸಂಪೂರ್ಣಮಾದರಿಯು ಮನುಜಕುಲಕೆ ಚಣಚಣವು || ಆಂತರ್ಯದಾಶಯವೆಲ್ಲಹೊಮ್ಮಿಹೊರಪುಟಿದಿಹುದುಬಿಂಬಬಿಂಬದ ತುಂಬಅಚ್ಚಳಿಯದೆ |ನಾ ಮುಂದೆ ತಾಮುಂದೆನುವ ಪಾದಗಳೋಟಗುರಿಯ ರೇಖೆಯು ಸನಿಸನಿಹಬರದೆ […]

ಕಾವ್ಯ ಸಂಗಾತಿ ಗಜಲ್ ಪ್ರಕಾಶಸಿಂಗ್ ರಜಪೂತ್ ಜೀವಿಗೆ ನೋವಿನಾ ಅಭ್ಯಾಸ ಬೇಕುಜೀವನಕ್ಕೆ ತನ್ನದೇ ಇತಿಹಾಸ ಬೇಕು ಊಟದಾ ಅತಿರೇಕ ರೋಗಕ್ಕೆ ಮೂಲವೋದೇಹಕ್ಕೆ ಅದಕ್ಕಾಗಿ ಉಪವಾಸ ಬೇಕು ಕಣ್ಣಲ್ಲಿ ಹೊಸತನದ ಬಯಕೆ ನಿತ್ಯವಿಲ್ಲಿದೇಹಕ್ಕೆ ಆಕರ್ಷಿಸುವ ವಿನ್ಯಾಸ ಬೇಕು ನಿತ್ಯವೆ ಜಗದಿ ಬದಲಾವಣೆಯ ಬಯಕೆಅರಳಲು ಮನ ಹೂವಿಗೆ ಮಧುಮಾಸ ಬೇಕು ಬಿಸಿಲುಗಾಳಿಯ ಮಧ್ಯೆ ತೃಷೆಯು ತಣಿಸಲುಮಳೆಯಲಿ ಮನ ನೆನೆಯುವ ಉಲ್ಲಾಸ ಬೇಕು ಆಶಾ ಚಕ್ರದಿ ತಿರುಗಿ ಸೋತಿದ ಚಾಂಚಲ್ಯಕೆ“ಪ್ರಕಾಶ”ಕೊನೆಯ ಘಟ್ಟಲಿ ಸನ್ಯಾಸ ಬೇಕು

ಕಾವ್ಯ ಸಂಗಾತಿ ನಮ್ಮಮ್ಮ ಹೀಗಿದ್ದಳು ಡಾ.ಸುರೇಖಾ ರಾಠೋಡ್ ಯಾವ ಭೂಮಿಗೆಯಾವ ಬೆಳೆ ಬರುತ್ತದೆಂದುಯಾವ ಬೀಜ ಬಿತ್ತಬೇಕೆಂದುನೆಲ ಎಷ್ಟುಹಸಿಯಾಗಿರಬೇಕೆಂದುತಿಳಿದಿರುವನಮ್ಮಮ್ಮ ಭೂವಿಜ್ಞಾನಿ ಏನಲ್ಲ ಯಾವ ಸಮಯಕ್ಕೆಯಾವ ಮಳೆಗೆಯಾವ ಬೆಳೆಬಿತ್ತಬೇಕೆಂದು,ಎಷ್ಟು ಗೊಬ್ಬರ,ಯಾವ ಗೊಬ್ಬರಹಾಕಬೇಕೆಂದುತಿಳಿದಿರುವನಮ್ಮಮ್ಮ ಬೆಳೆ ವಿಜ್ಞಾನಿಯಾಗಿರಲಿಲ್ಲ ಯಾವ ಬೀಜಎಷ್ಟು ದಿನಕ್ಕೆಮೊಳಕೆ ಒಡೆಯುವುದೆಂದು,ಯಾವ ಸಮಯಕ್ಕೆಕಳೆ ತಗೆಯಬೇಕೆಂದು,ಯಾವ ಸಮಯಕ್ಕೆನೀರು ಹಾಯಿಸಬೇಕೆಂದುತಿಳಿದಿರುವನಮ್ಮಮ್ಮ ಸಹಜ ಮನುಷ್ಯಳಾಗಿದ್ದಳು ಯಾವಾಗ ಮಳೆ ಬಂದರೆಬೆಳೆ ಚೆನ್ನಾಗಿಬೆಳೆಯತ್ತ,ಯಾವಾಗ ಮಳೆ ಬಂದರೆಬೆಳೆ ಹಾಳಾಗತ್ತೆ,ಯಾವಾಗ ಬೆಳೆಗೆರೋಗ ಬರತ್ತೆಂದು,ರೋಗಕ್ಕೆ ಯಾವಔಷಧಿಸಿಂಪಡಿಸಬೇಕೆಂದುತಿಳಿದಿರುವನಮ್ಮಮ್ಮ ಪದವೀಧರೆಯಾಗಿರಲಿಲ್ಲ ನಮ್ಮಮ್ಮ ಅಕ್ಷರಕಲಿಯದೇಕೃಷಿ ಕಲಿತಿರುವಭೂಮಿಯೇ ಆಗಿದ್ದಳು…..————————–

ಬಿ.ಶ್ರೀನಿವಾಸರ ಹೊಸ ಕವಿತೆಗಳು

ಬೊಗಸೆ ನೀರಿಗಾಗಿ
ಮೈಮೇಲೆ ಮಲ ಸುರುವಿಕೊಂಡ ದಿನ
ಮತ್ತೆ
ಹುಟ್ಟುತ್ತಲೇ ಇರುತ್ತಾರೆ

Back To Top