ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ತೇಜಾವತಿ .ಎಚ್ .ಡಿ. ಅವರ ಕವಿತೆ “ಸೀಮೆ ಜಾಲಿ”

ಕಾವ್ಯ ಸಂಗಾತಿ ತೇಜಾವತಿ .ಎಚ್ .ಡಿ. “ಸೀಮೆ ಜಾಲಿ” ಅಂಕುಡೊಂಕಾದ ಕರಿ ನಾಗರಗಳಾಗಿಉದಯರಶ್ಮಿಗೆ ಮೈಯೊಡ್ಡಿರುವರಸ್ತೆಯ ಇಕ್ಕೆಲಗಳಲ್ಲಿದಶದಿಕ್ಕಿಗೂ ಕಬಂಧ ಬಾಹುಗಳನ್ನು ಚಾಚಿರುವಸಾಲು ಸಾಲು ಸೀಮೆಜಾಲಿಯ ಮರಗಳುಮೈತುಂಬಾ ಮುಳ್ಳು, ಕೆಸರು ದುರ್ನಾತ ಅವುಗಳ ನಡುವಲ್ಲೊಂದು ಪುಟ್ಟ ರಾಯಸಕ್ಕರಿ ಮರ ತಲೆಯೆತ್ತಿ ನಿಂತು ಸೂರ್ಯನೆಡೆಗೆ ಮುಖಮಾಡಿ ಕಂಗೊಳಿಸಿಚಿಗುರು ಹೂ ಮಿಡಿ ಕಾಯಿಹಣ್ಣು ತೊಟ್ಟು ಹಸಿರು ಉಟ್ಟು ಸಂಭ್ರಮಿಸಿದೆ ಅದೇ ಕೊಳಕು ಅದೇ ಕೆಸರು ಅದೇ ಗಾಳಿ ಅದೇ ಬಿಸಿಲನ್ನು ಉಂಡುಬರಡು ಭೂಮಿಯಲ್ಲಿ ತಂಪೆರೆದು ಅತ್ಮಾಭಿಮಾನವ ಸೂಸುತ್ತಿದೆಪರಿಸರದ ಹಂಗು ತೊರೆದು ಸುತ್ತಲಿದ್ದರೇನಂತೆ ಸೀಮೆಜಾಲಿ ಮುಳ್ಳು ಕಳ್ಳಿ ತಾನು ಮಧುಫಲವನ್ನೇ ನೀಡುವೆನೆಂದುಭೀಷ್ಮಪ್ರತಿಜ್ಞೆ ಮಾಡಿದೆಮುಳ್ಳಿನ ನಡುವೆ ಸುಳಿವ ಹೂಗಳಿಗೆ ಅಲ್ಲಿಂದಲೇ ಹರಕೆಯ ಕೊಟ್ಟಿದೆ ಜಾಲಿಯ ಮರದಾಗಗುಬ್ಬಿ ಗೂಡು ಕಟ್ಟಲಿಕಟ್ಟಿದ ಗೂಡು ನೂರಾಗಿಹಕ್ಕಿಗಳ ಬಾಳು ಹಸನಾಗಲಿ ಹಸನಾದ ಬದುಕು ಹೊನ್ನಾಗಿ ಸುಡು ಬಿಸಿಲ ಈ ನಾಡು ತಂಪಾಗಲಿ ತೇಜಾವತಿ .ಎಚ್ .ಡಿ. ಕ

ತೇಜಾವತಿ .ಎಚ್ .ಡಿ. ಅವರ ಕವಿತೆ “ಸೀಮೆ ಜಾಲಿ” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ”

ಕಾವ್ಯಸಂಗಾತಿ ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ” ನೀಲಿ ನೀಲಿ ಆಕಾಶ ಚುಕ್ಕಿಗಳಿಲ್ಲದೆ ಹೊಳೆಯುವುದೇಸೂರ್ಯನು ಕೊಡದಿರೆ ಆ ಶಾಖ ಚಂದಿರ ಸುಮ್ಮನೆ ಹೊಳೆಯುವನೇ ಹೂವುಗಳಿರದ ತೋಟಗಳು ಪರಿಮಳ ಬೀರಲು ಸಾಧ್ಯವೇಜೇನುಗಳಿರುವ ಗೂಡಿನಲಿ ಸಿಹಿಗಳು ಸಿಗದೇ ಇರುವುದೇ ಪ್ರೀತಿಯೇ ಇರದ ಹೃದಯದಲಿ ನಗುವನ್ನು ಕಾಣಲು ಸಾಧ್ಯವೇನಂಬಿಕೆ ಇಲ್ಲದ ಬದುಕಿನಲಿ ನೆಮ್ಮದಿ ಹುಡುಕಲು ಸಾಧ್ಯವೇ ವಿಶ್ವಾಸದ ನಡೆಯಲಿ ಬೆರೆತಾಗ ಜೀವನ ಸಾರ್ಥಕ ಆಗದೇಸೃಷ್ಟಿಗಳೆಲ್ಲ ಹೇಳುವುದು ಶಾಶ್ವತವಾದ ಸತ್ಯವೇ ನದಿಯು ಸಾಗರ ಸೇರದೆ ಭೂಮಿಯ ಒಡಲಲ್ಲಿ ನಿಲ್ಲುವುದೇಗಾಳಿಯು ಸನಿಹಕ್ಕೆ ಬರದಿರಲು ಉರಿಯುವ ದೀಪವು ಕೂಡ ಶಾಶ್ವತವೇ ಪ್ರೀತಿ ಇರದ ಮನುಜನಲಿ ಬದುಕಿನ ಅರ್ಥವು ತಿಳಿಯುವುದೇನ್ಯಾಯದ ಬದುಕೇ ಜಗದ ನಿಯಮ ಎಂದು ಮನುಜನು ಅರಿಯುವನೇ ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು” ತಿರುಗಿ ಬಾರದ  ಪುಟಗಳು,ನೆನಪಿನ ಬಂಡಿಯಲಿ ಮರೆ ಕ್ಷಣಗಳು,ಚಿನ್ನದ ರಥದಲ್ಲಿ ಓಡಿದ  ಬಾಲ್ಯ,ಇಂದಿನ ನೆನಪಲಿ ಅರಳಿದ ಕಾವ್ಯ. ಕೆಸರಲಿ ಹೊರಳಾಡಿದ  ದಿನಗಳು,ಹಸಿರಲಿ ಓಡಿದ  ಹೆಜ್ಜೆಗಳು,ಅಮ್ಮನ ಮಡಿಲ ಸವಿ ನಿದ್ದೆಯ ಸುಖ, ಇಂದು ಬರಿ ನೆನಪಿನ ಮುಖ. ಗೆಳೆಯರ ಜೊತೆಗೂಡಿ ನಕ್ಕ  ದಿನಗಳು,ಕಾಗದದ ದೋಣಿ ತೇಲಿದ ದಿನಗಳು,ಚಿಂತೆಯಿಲ್ಲದ ನಿರಾತಂಕದ ನಗೆ,ಮರಳಿ ಬಾರದು  ಸಂಭ್ರಮ ಜಗತ್ತಿನೆಡೆಗೆ. ಕಾಲ ಚಕ್ರ ಉರುಳುತ ಸಾಗಿದೆ,ವರ್ತಮಾನದ ಬದುಕು ಯಾಂತ್ರಿಕ,ಹಳೆಯ ದಿನಗಳ ನೆನೆದ ಮನಕೆ, ಮಧುರ ಮೌನ ಆವರಿಸಿದೆ ತನಗೆ. ಹಿಂತಿರುಗಿ ನೋಡಿದೆ  ನೆನಪಿನ ಸಾಲು,ಕಳೆದು ಹೋದ  ದಿನಗಳು ಜೀವನದ ಹಾಲು.ಬಾಲ್ಯ ಯೌವನ ಮುಪ್ಪು  ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು” Read Post »

ನಿಮ್ಮೊಂದಿಗೆ

“ಇಂದಿರಾ ಲಂಕೇಶ್ ನಿಧನ”

ವ್ಯಕ್ತಿ ಸಂಗಾತಿ ಇಂದಿರಾ ಲಂಕೇಶ್ ನಿಧನ “ಹುಳಿ ಮಾವು ಮತ್ತು ನಾನು” ಕೃತಿಯ  ಲೇಖಕಿ ಮತ್ತು ಸಾಹಿತಿ ,ಪತ್ರಕರ್ತ  ಪಿ. ಲಂಕೇಶ್ ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಇಂದು  ನಿಧನರಾಗಿದ್ದಾರೆ.  ‘ಲಂಕೇಶ್ ಪತ್ರಿಕೆ’ಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಅವರು, ‘ಹುಳಿಮಾವು ಮತ್ತು ನಾನು’ ಕೃತಿಯ ಮೂಲಕವೂ ಗುರುತಿಸಿಕೊಂಡಿದ್ದರು. ಕನ್ನಡ ಸಾರಸ್ವತ ಲೋಕದ ಮಹತ್ವದ ಲೇಖಕ ,  ಹಿರಿಯ ಪತ್ರಕರ್ತ ಹಾಗೂ ಖ್ಯಾತ ಬರಹಗಾರ ಪಿ. ಲಂಕೇಶ್ ಅವರ ಧರ್ಮಪತ್ನಿ, ಲೇಖಕಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಸೋಮವಾರ (ಜೂನ್ 15, 2026) ಮುಂಜಾನೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.  ಬೆಂಗಳೂರಿನ ರಾಜಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದು, ಇವರ ನಿಧನದಿಂದ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಒಂದು ಮಹತ್ವದ ಪರಂಪರೆಯ ಕೊಂಡಿ ಕಳಚಿದಂತಾಗಿದೆ.  ಗೌರಿ ಲಂಕೇಶ್ ( ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ) ,ಕವಿತಾ ಲಂಕೇಶ್ (ಚಿತ್ರನಿರ್ದೇಶಕಿ), ಇಂದ್ರಜಿತ್ ಲಂಕೇಶ್ (ಚಿತ್ರನಿರ್ದೇಶಕ ಹಾಗೂ ಪತ್ರಕರ್ತ) ಸೇರಿದಂತೆ ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ತಾಯಿ ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ, ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಲಂಕೇಶ್ ಪತ್ರಿಕೆಯ ಯಶಸ್ಸಿನ ಹಿಂದಿನ ಮಹಾಶಕ್ತಿಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಲಂಕೇಶ್ ಪತ್ರಿಕೆ’ಯ ಆರಂಭದ ದಿನಗಳಿಂದಲೂ ಇಂದಿರಾ ಲಂಕೇಶ್ ಅವರು ಪತಿ ಪಿ. ಲಂಕೇಶ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಕೇವಲ ವೈವಾಹಿಕ ಜೀವನದಲ್ಲಷ್ಟೇ ಅಲ್ಲದೆ, ಪತ್ರಿಕೆಯ ಆಡಳಿತ, ಮುನ್ನಡೆ ಹಾಗೂ ಪ್ರಕಾಶನದ ಜವಾಬ್ದಾರಿಯನ್ನು ತೆರೆಮರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. 2000 ಇಸವಿಯಲ್ಲಿ ಪಿ. ಲಂಕೇಶ್ ಅವರ ನಿಧನದ ನಂತರ ಮತ್ತು ತದನಂತರದ ದಿನಗಳಲ್ಲಿ ಹಿರಿಯ ಪುತ್ರಿ, ದಿ. ಗೌರಿ ಲಂಕೇಶ್ ಅವರ ಅಗಲಿಕೆಯ ನಂತರವೂ ಧೃತಿಗೆಡದ ಇಂದಿರಾ ಅವರು, ಕುಟುಂಬ ನಿರ್ವಹಣೆ ಜೊತೆಗೆ,  ಸಾಹಿತ್ಯ  ಮತ್ತು ಪತ್ರಿಕೋದ್ಯಮದ ಪರಂಪರೆಯನ್ನು ಮುನ್ನಡೆಸಿದ್ದರು. ನಾಗರಾಜ್‌ ಹರಪನಹಳ್ಳಿ

“ಇಂದಿರಾ ಲಂಕೇಶ್ ನಿಧನ” Read Post »

ಇತರೆ, ಜೀವನ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ

ಸಂಬಂಧಗಳ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” *ಬೆಳಗಾಗೆದ್ದು Good Morning ಕಳಿಸೋ ನೂರು ಜನ ಇದಾರೆ. ಆದ್ರೆ ರಾತ್ರಿ ನಿದ್ದೆ ಬರದೇ ಒದ್ದಾಡಿದಾಗ ಮಾತಾಡೋ ಒಬ್ಬನೂ ಇಲ್ಲ.* ಇದೇ ಇವತ್ತಿನ ಸಂಬಂಧಗಳ ಸ್ಥಿತಿ.ಯಾಕೆ ಹೀಗಾಯ್ತು? ಮುಂದೆ ಓದುತ್ತಾ ಹೋಗಿ.ಮೊಬೈಲ್ ಮೊದಲಾಯ್ತು, ಮನುಷ್ಯ ಎರಡನೆಯವನಾದ*ಒಂದೇ ಮನೆಯಲ್ಲಿ ನಾಲ್ಕು ಜನ ಇದ್ರೂ ನಾಲ್ಕು ಮೂಲೆಯಲ್ಲಿ ಕುಳಿತು ನಾಲ್ಕು ಮೊಬೈಲ್ ನೋಡ್ತಾರೆ. ಅಪ್ಪನಿಗೆ ಮಗ ಏನ್ ಓದ್ತಿದ್ದಾನೆ ಗೊತ್ತಿಲ್ಲ. ಮಗನಿಗೆ ಅಮ್ಮನ ಆರೋಗ್ಯದ ಚಿಂತೆ ಇಲ್ಲ. ಊಟದ ಟೇಬಲ್‌ನಲ್ಲಿ ಮಾತಿಗಿಂತ ರೀಲ್ಸ್ ಮುಖ್ಯವಾಯ್ತು. “ಸಂಪರ್ಕ ಇದೆ, ಸಂಬಂಧ ಇಲ್ಲ.”. ಸಲುಗೆ ಸ್ವಾತಂತ್ರ್ಯವಾಯ್ತು ಹೇಗೆ ಅಂದರೆ,“ನನ್ನ ಲೈಫ್, ನನ್ನ ರೂಲ್ಸ್” ಅಂತ ಮಕ್ಕಳು ಅಂದ್ರೆ, “ನಮ್ಮ ಕಾಲದಲ್ಲಿ ಹೀಗಿರಲಿಲ್ಲ” ಅಂತ ಹೆತ್ತವರು ಅಂದ್ರೆ. ಇಬ್ಬರ ಮಧ್ಯೆ ಗೋಡೆ ಬೆಳೆಯುತ್ತೆ. 8-9 ತಿಂಗಳು ಹೊತ್ತು ಹೆತ್ತ ತಾಯಿಯ ಮಾತಿಗಿಂತ 3 ದಿನದ ಹಿಂದೆ Insta ದಲ್ಲಿ ಪರಿಚಯವಾದವನ ಮೆಸೇಜಿಗೆ ಬೆಲೆ ಜಾಸ್ತಿ ಆಯ್ತು. “ಹೆತ್ತವರ ಪ್ರೀತಿ ಹಳೇದಾಯ್ತು, ಅಪರಿಚಿತರ ಮಾತು ಹೊಸದಾಯ್ತು.” ಈಗ ಎಲ್ಲವೂ Instant. ನೂಡಲ್ಸ್ 2 ನಿಮಿಷ, ಪ್ರೀತಿ 2 ದಿನ. ಸಣ್ಣ ಜಗಳಕ್ಕೆ Block, ಸಣ್ಣ ತಪ್ಪಿಗೆ Disconnect. ಸಂಬಂಧ ಕಟ್ಟೋಕೆ ವರ್ಷ ಬೇಕು, ಮುರಿಯೋಕೆ ಒಂದು Status ಸಾಕು. “ಕ್ಷಮಿಸೋ ಮನಸ್ಸು ಸತ್ತು, ಅಹಂ ಬೆಳೆದು ನಿಂತಿದೆ.”“ಹೋಲಿಕೆ ರೋಗ ಇದ್ದಂತೆ”“ಅವನ ಮಗ BMW ತಂದ, ನನ್ನವನು ಯಾಕೆ ತರಲಿಲ್ಲ?” ಅಂತ ಅಪ್ಪ. “ಅವಳ ಗಂಡ ವಿದೇಶಕ್ಕೆ ಕರ್ಕೊಂಡು ಹೋದ, ನೀನು ಯಾಕೆ ಹೋಗಲಿಲ್ಲ?” ಅಂತ ಹೆಂಡತಿ. ಪಕ್ಕದ ಮನೆ ಹುಲ್ಲು ಯಾವಾಗಲೂ ಹಸಿರು. “ನಮ್ಮ ಬಳಿ ಇರೋದರ ಬೆಲೆ ಮರೆತು, ಇಲ್ಲದ್ದಕ್ಕೆ ಹಂಬಲಿಸೋಕೆ ಶುರು ಮಾಡಿದ್ವಿ.”ದುರಂತ ಏನು ಗೊತ್ತಾ?ಮನೆ ತುಂಬಾ ಜನ ಇದ್ದರೂ ಒಂಟಿತನ. ಅಪ್ಪ ಅಮ್ಮ ದುಡಿದು ದುಡಿದು ಮಕ್ಕಳಿಗೆ ಎಲ್ಲಾ ಕೊಟ್ಟರೂ, ಕೊನೆಗೆ ವೃದ್ಧಾಶ್ರಮ. ಮಕ್ಕಳು ಪ್ರೀತಿಗಾಗಿ ಪರದಾಡಿ, ಕೊನೆಗೆ ಮೋಸ ಹೋಗಿ ಜೀವ ಕಳೆದುಕೊಳ್ಳೋದು. *ಗೋಡೆ ಕಟ್ಟೋಕೆ ಗೊತ್ತಿದ್ದ ನಮಗೆ, ಸೇತುವೆ ಕಟ್ಟೋಕೆ ಮರೆತು ಹೋಯ್ತು. ದಿನಾ 15 ನಿಮಿಷ ಮೊಬೈಲ್ ದೂರ ಇಟ್ಟು ಮನೆಯವರ ಜೊತೆ ಕೂತು ಮಾತಾಡಿ. ಊಟ ಒಟ್ಟಿಗೆ ಮಾಡಿ.   ಬುದ್ಧಿ ಹೇಳೋಕಿಂತ ಮೊದಲು, ಮಕ್ಕಳ ಮನಸ್ಸಿನ ಮಾತು ಕೇಳಿ. ಹೆತ್ತವರ ನೋವು ಅರ್ಥ ಮಾಡಿಕೊಳ್ಳಿ.  :ತಪ್ಪು ಮಾಡದ ಮನುಷ್ಯ ಇಲ್ಲ. ಒಂದು ತಪ್ಪಿಗೆ ಸಂಬಂಧವನ್ನೇ ಕಡಿದುಕೊಳ್ಳಬೇಡಿ.  ಸಮಯ ಕೊಡಿ, ದುಡ್ಡು, ಬಟ್ಟೆ, ಬೈಕ್ ಕೊಟ್ರೆ ಸಾಲದು. ನಿಮ್ಮ ಸಮಯ, ನಿಮ್ಮ ಪ್ರೀತಿ ಕೊಡಿ.  ಮೆಚ್ಚುಗೆ ಸೂಚಿಸಿ: “ಥ್ಯಾಂಕ್ಸ್ ಕಣೋ”, “ಚೆನ್ನಾಗಿ ಮಾಡಿದ್ದೀಯ” ಅನ್ನೋ ಎರಡು ಮಾತು ಸಂಬಂಧ ಗಟ್ಟಿ ಮಾಡುತ್ತೆ. ಕೊನೆಯ ಮಾತು:ಸಂಬಂಧ ಅಂದ್ರೆ AC ರೂಮಲ್ಲಿಡೋ ಹೂವಿನ ಹಾಗಲ್ಲ. ಬಿಸಿಲು, ಮಳೆ, ಗಾಳಿ ಎಲ್ಲಾ ತಾಗಬೇಕು. ಜಗಳ ಬರಬೇಕು, ಮುನಿಸು ಬರಬೇಕು, ಆದ್ರೆ ಬಿಟ್ಟು ಹೋಗೋ ಯೋಚನೆ ಬರಬಾರದು.*ಮೊಬೈಲ್‌ನಲ್ಲಿ ಸಾವಿರ Friend Request ಇರಬಹುದು. ಆದ್ರೆ ಕಷ್ಟ ಅಂದಾಗ ಹೆಗಲು ಕೊಡೋದು ರಕ್ತ ಸಂಬಂಧ, ಮನಸ್ಸಿನ ಸಂಬಂಧ ಮಾತ್ರ.*ಸಂಬಂಧಗಳು ಸರಿಯಿಲ್ಲ ಅಂದ್ರೆ, ಸರಿ ಮಾಡೋಕೆ ಶುರು ಮಾಡೋಣ. ಇವತ್ತಿಂದ, ಈಗಿಂದ, ನಮ್ಮಿಂದಲೇ. ವನಜಾ ಮಹಾಲಿಂಗಯ್ಯ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-121 ಒಬ್ಬ ಅಮ್ಮನ ಕಥೆ ರುಕ್ಮಿಣಿನಾಯರ್ ಅಮ್ಮನ ಆರೋಗ್ಯದ ಸತ್ಯ ಅರಿತತಂಗಿಯ ಗೋಳಾಟ ಸ್ವಲ್ಪ ಹೊತ್ತು ಇಬ್ಬರೂ ಅಮ್ಮನ ಜೊತೆ ಮಾತನಾಡುತ್ತಾ ಕಾಲ ಕಳೆದರು. ಡಾಕ್ಟರ್ ರೌಂಡ್ಸ್ ಗೆ ಬರುವ ಹೊತ್ತಾಯ್ತು ಎಂದು ವಾರ್ಡಿನ ಆಯಾ ಕೂಗಿ ಹೇಳಿದಾಗ ಅಕ್ಕ-ತಂಗಿ ಇಬ್ಬರೂ ಹೊರಗೆ ನಡೆದರು. ಆಸ್ಪತ್ರೆಯ ಹೊರಾಂಗಣದಲ್ಲಿ ಮೆಟ್ಟಿಲ ಮೇಲೆ ಕುಳಿತು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅಕ್ಕ ಇಷ್ಟೊಂದು ಮೌನವಾಗಿರುವುದನ್ನು ನೋಡಿ ಅಮ್ಮನ ಆರೋಗ್ಯದಲ್ಲಿ ಏನೋ ದೊಡ್ಡ ಸಮಸ್ಯೆ ಇರಬಹುದು ಎಂದು ತಂಗಿ ಊಹಿಸಿದಳು. ಆದರೂ ಅಕ್ಕ ಹೇಳುವವರೆಗೂ ಕಾಯ್ದಳು. ಸ್ವಲ್ಪ ಹೊತ್ತಿನ ನಂತರ ಅಕ್ಕನೇ ಮೌನ ಮರಿದಳು…. “ನಿನಗೆ ಗೊತ್ತು ತಾನೆ ಅಮ್ಮನಿಗೆ ಡಯಾಬಿಟಿಸ್ ಇರುವುದು…. ಅದಕ್ಕಾಗಿ ಅಮ್ಮ ನಿರಂತರವಾಗಿ ಇನ್ಸುಲಿನ್ ತೆಗೆದುಕೊಳ್ಳುತ್ತಿರುವುದು….. ಹಾಗೂ ಮೂರು ತಿಂಗಳಿಗೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಬರುವುದು….ಆದರೆ….. ಅದರ ಜೊತೆಗೆ ಅದ್ಯಾವಾಗ ಬಿ.ಪಿ ಬಂದು ಅಮ್ಮನ ಒಡಲನ್ನು ಸೇರಿತು ಎಂಬುದು ಅಮ್ಮನಿಗೂ ನಮಗೂ ತಿಳಿಯಲಿಲ್ಲ”…. ಎಂದು ಅಲ್ಲಿಗೆ ನಿಲ್ಲಿಸಿ, ತಂಗಿಯ ಮುಖವನ್ನು ಒಮ್ಮೆ ದಿಟ್ಟಿಸಿದಳು. ಅಚ್ಚರಿಯಿಂದ ತಂಗಿ ಅಕ್ಕನ ಮುಖವನ್ನು ನೋಡಿದಳು. ಆಗ ಅಕ್ಕ ‘ಹೌದು’ ಎನ್ನುವಂತೆ ತಲೆ ಆಡಿಸಿದಳು…. “ಮಧುಮೇಹ ಮತ್ತು ರಕ್ತದೊತ್ತಡ ಎರಡೂ ಅಣ್ಣತಮ್ಮಂದಿರು ಇದ್ದಂತೆ ಎಂದು ವೈದ್ಯರು ಹೇಳಿದರು….. ಒಂದು ಬಂದ ನಂತರ ನಿಧಾನವಾಗಿ ಮತ್ತೊಂದು ಜೊತೆಗೂಡುತ್ತದೆ ಎಂದು ಕೂಡ ಹೇಳಿದರು…. ಈಗ ನಮ್ಮ ತಾಯಿಗೆ ಇರುವ ಆರೋಗ್ಯ ಸಮಸ್ಯೆ ಗಂಭೀರವಾದದ್ದು…..  ಮಧುಮೇಹ ಹಾಗೂ ರಕ್ತದೊತ್ತಡದಿಂದಾಗಿ ನಮ್ಮ ತಾಯಿಯ ಶರೀರದ ಒಳಗಿರುವ ಅಂಗಾಂಗಗಳು, ಎಂದರೆ ಹೃದಯ, ಯಕೃತ್ತು ಮೂತ್ರಪಿಂಡಗಳು ಎಲ್ಲವೂ ಊದಿಕೊಂಡಿವೆ…. ಅವು ಸರಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿಲ್ಲ… ಹಾಗಾಗಿ ರಕ್ತ ಶುದ್ಧಿ ಆಗುತ್ತಿಲ್ಲ…. ಎಂದು ವೈದ್ಯರು ತಿಳಿಸಿದ್ದಾರೆ…. ಎಂದಳು.  ಅಕ್ಕ ಹೇಳಿದ ಸಂಗತಿಯನ್ನು ಕೇಳುತ್ತಾ ತಂಗಿಯ ಮುಖ ಬಾಡಿತು…. ಅಕ್ಕಾ ಇದಕ್ಕೆ ಔಷಧೋಪಚಾರಗಳು ಇಲ್ಲವೇ?….ಎಂದು ತಂಗಿ ಕೇಳಿದಾಗ…. ಇಲ್ಲಾ… ಕಣೇ…. ಎಂದವಳ ಧ್ವನಿ ಭಾರವಾಗಿತ್ತು…… ಯಾಕಕ್ಕಾ?…..ಅದು ಹೇಗೆ? ….ಎಂದು ಕೇಳಿದಾಗ…. ಶರೀರದ ಒಳ ಅಂಗಗಳು ವೈಫಲ್ಯವಾದರೆ ಯಾವ ಔಷಧಿಗಳೂ ಪರಿಣಾಮ ಬೀರುವುದಿಲ್ಲ… ತಾತ್ಕಾಲಿಕ ಉಪಶಮನಗಳು ದೊರೆಯುತ್ತವೆ ಅಷ್ಟೇ…. ಆದರೆ ಪೂರ್ಣವಾಗಿ ಗುಣಮುಖವಾಗುವುದಿಲ್ಲ…. ಹಾಗಾಗಿ ವೈದ್ಯರು ಹೇಳಿದರು,”…. ಎಂದು ತನ್ನ ಮಾತನ್ನು ಮುಂದುವರೆಸದೆ ಅರ್ಧಕ್ಕೇ ನಿಲ್ಲಿಸಿ, ತಂಗಿಯ ಮುಖವನ್ನೇ ತದೇಕ ಚಿತ್ತದಿಂದ ನೋಡಿದಳು.‌ ಮುಂದೆ ಮಾತು ಬಾರದೇ ಗಂಟಲು ಕಟ್ಟಿತು. ಕಣ್ಣುಗಳಲ್ಲಿ ಧುತ್ತನೇ ನೀರು ತುಂಬಿಕೊಂಡವು. ತಂಗಿಗೆ ಹೇಗೆ ಹೇಳಲಿ ಇರುವ ಸತ್ಯವನ್ನು? ಅವಳು ಖಂಡಿತಾ ಸಹಿಸಲಾರಳು. ದೇವರೇ ನನಗೊಂದಿಷ್ಟು ಶಕ್ತಿ ಕೊಡು. ನನ್ನಲ್ಲಿರುವ ಶಕ್ತಿ ಉಡುಗಿ ಹೋಗುತ್ತಿದೆ. ಇಂತಹಾ ಘೋರ ಸತ್ಯವನ್ನು ನಾನವಳಿಗೆ ಹೇಗೆ ಹೇಳಲಿ? ಎಂದು ಚಿಂತಾಕ್ರಾಂತಳಾಗಿ ಒಂದು ಕ್ಷಣ ಕಣ್ಣು ಮುಚ್ಚಿದಳು. ಕಣ್ಣುಗಳಲ್ಲಿ ತುಂಬಿದ್ದ ನೀರು ಕೆನ್ನೆಯ ಮೇಲೆ ಇಳಿಯಿತು.  ತಂಗಿಯು ಕುಳಿತಲ್ಲಿಂದ ನಿಧಾನವಾಗಿ ಎದ್ದು ಬಂದು ಅಕ್ಕನ ಕೆನ್ನೆಯ ಮೇಲೆ ಹರಿದ ಕಣ್ಣೀರನ್ನು ಒರಸಿ, ಅಕ್ಕನ ಮುಖವನ್ನು ಬೊಗಸೆಯಲ್ಲಿ ಹಿಡಿದು…”ಅಕ್ಕಾ ….ಏನಾಯ್ತು ಹೇಳು…. ಕಷ್ಟ ಸುಖ, ನೋವು ನಲಿವು, ಏನೇ ಇರಲಿ ನಾವು ಪರಸ್ಪರ ಹೇಳಿಕೊಂಡು ಮನಸ್ಸನ್ನು ಹಗುರಾಗಿಸಿಕೊಂಡಿದ್ದೇವೆ….. ಒಬ್ಬರಿಗೊಬ್ಬರು ಸದಾ ಜೊತೆಯಲ್ಲಿ ಇದ್ದೇವೆ…. ನೀನು ಇರುವ ಸ್ಥಿತಿಯನ್ನು ಕಂಡು ಪರಿಸ್ಥಿತಿಯ ಗಂಭೀರತೆ ನನಗೂ ಅರ್ಥವಾಗುತ್ತಿದೆ…. ನೀನು ಹೀಗೆ ಮಾತನಾಡದೆ ದುಃಖಿಸುತ್ತಿದ್ದರೆ ನನ್ನ ಮನ ಇನ್ನೂ ವ್ಯಾಕುಲಗೊಳ್ಳುತ್ತದೆ…. ಪರಿಸ್ಥಿತಿ ಏನೇ ಇರಲಿ ಅದನ್ನು ನಾವು ಎದುರಿಸಲೇಬೇಕು…. ದಯವಿಟ್ಟು ಏನಾಯ್ತು ಎಂದು ಹೇಳು ಅಕ್ಕಾ”…. ಎಂದು ತಂಗಿ ಹೇಳಿದಾಗ ಅವಳ ದುಃಖವು ಇನ್ನೂ ಹೆಚ್ಚಾಯಿತು. ತಂಗಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಪಕ್ಕ ಕುಳಿತುಕೊಳ್ಳುವಂತೆ ಸನ್ನೆ ಮಾಡಿ…. “ನೀನು ಈಗ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ…. ವೈದ್ಯರು ಹೇಳಿದಾಗ ನನಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅನುಭವವಾಯಿತು… ಈಗ ನಿನಗೆ ಇಂತಹ ಸಂಕಟದ ವಿಷಯವನ್ನು ಹೇಗೆ ಹೇಳಲಿ ಎಂಬುದೇ ನನ್ನ ಯೋಚನೆಯಾಗಿದೆ…. ಆದರೂ ಹೇಳದೇ ಬೇರೆ ದಾರಿ ಇಲ್ಲ”…. ಎಂದಾಗ ತಂಗಿ…._ಅದೇನೇ ಇರಲಿ ಹೇಳು” …ಎಂದಳು….. _ವೈದ್ಯರು ಹೇಳಿದರು…. ನಮ್ಮ ತಾಯಿ ಇನ್ನು ಕೇವಲ ಆರು ತಿಂಗಳಷ್ಟೇ…. ನಮ್ಮೊಂದಿಗೆ ಇರುತ್ತಾರೆ”… ಎಂದಳು.‌ ಅಕ್ಕ ಹೇಳಿದ ಮಾತು ತಂಗಿಗೆ ಸರಿಯಾಗಿ ಅರ್ಥವಾಗಲಿಲ್ಲ…. _ಬಿಡಿಸಿ ಹೇಳಕ್ಕ…. ನನಗೆ ಏನೂ ಅರ್ಥವಾಗುತ್ತಿಲ್ಲ….”ಎಂದಳು. ….”ಅಂದರೆ…. ನಮ್ಮ ತಾಯಿ ಜೀವಂತವಾಗಿರುವುದು ಇನ್ನು ಕೇವಲ ಆರು ತಿಂಗಳು ಮಾತ್ರ….. ಈ ಮಾತನ್ನು ಕೇಳಿದ ತಂಗಿ ಗರಬಡಿದಂತೆ ಅಲುಗಾಡದೆ ಹಾಗೆ ಕುಳಿತುಬಿಟ್ಟಳು. ತನ್ನ ಕಿವಿಗಳನ್ನು ತಾನೆ ನಂಬದಾದಳು. ತಾನು ಕೇಳುತ್ತಿರುವುದು ಏನು? ಅಕ್ಕ ಇದೇನು ಹೇಳುತ್ತಿದ್ದಾಳೆ? ಇದು ನಿಜವಲ್ಲ ಎಂದುಕೊಳ್ಳುತ್ತಾ, ಅಕ್ಕನ ಎರಡೂ ಭುಜಗಳನ್ನು ಹಿಡಿದು ಬಲವಾಗಿ ಅಲುಗಾಡಿಸುತ್ತಾ… “ನೀನು ಏನು ಹೇಳುತ್ತಿರುವೆ? ಸುಮ್ಮನೆ ಏನೇನೋ ಹೇಳಬೇಡ….. ಅಮ್ಮನಿಗೆ ಏನೂ ಆಗಿಲ್ಲ…. ಈಗ ನೋಡು ಸ್ವಲ್ಪ ಹೊತ್ತಿಗೆ ಮುಂಚೆ ನಮ್ಮ ಜೊತೆ ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದಳು…. ಏನೋ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಅಷ್ಟೇ…. ವೈದ್ಯರು ಹಾಗೆ ಹೇಳಿರಲಿಕ್ಕಿಲ್ಲ…. ಬಹುಶಃ ನೀನು ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಅನಿಸುತ್ತದೆ…. ಇಷ್ಟು ಬೇಗ ನಮ್ಮನ್ನಗಲಿ ಅಮ್ಮ ಎಲ್ಲಿಗೂ ಹೋಗುವುದಿಲ್ಲ….. ನಿನ್ನ ವಿದ್ಯಾಭ್ಯಾಸ ಮುಗಿದು ನೀನು ಕೆಲಸಕ್ಕೆ ಸೇರಿಕೊಳ್ಳುವುದನ್ನು …. ನಾವೆಲ್ಲರೂ ಸಂತೋಷದಿಂದ ಕಳೆಯುವ ಕಾಲವನ್ನು ಅಮ್ಮ ನೋಡಬೇಕಿದೆ….. ತಂಗಿ ನವೋದಯ ವಿದ್ಯಾಲಯದಿಂದ ಈ ವರ್ಷ 10ನೇ ತರಗತಿ ಮುಗಿಸಿ, ಅವಳು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸುವುದನ್ನು ಅಮ್ಮ ನೋಡಬೇಕಿದೆ…. ದೇವರು ಅಷ್ಟು ನಿಷ್ಕರುಣಿಯಲ್ಲ…. ವೈದ್ಯರನ್ನು ಭೇಟಿಯಾಗಿ ಮತ್ತೊಮ್ಮೆ ಕೇಳು….. ಅಮ್ಮನ ಆರೋಗ್ಯ ಸುಧಾರಿಸಲು ಏನಾದರೂ ಔಷಧೋಪಚಾರ ಇರಬಹುದೇ?….ಸ್ವಲ್ಪಕಾಲವಾದರೂ ಅಮ್ಮ ನಮ್ಮೊಟ್ಟಿಗೆ ಬದುಕಿರಲು ಅವಕಾಶವಿದೆಯೇ ಎಂದು…. ಅಕ್ಕಾ ದಯವಿಟ್ಟು ವೈದ್ಯರನ್ನು ಮತ್ತೊಮ್ಮೆ ಭೇಟಿ ಮಾಡಿ ಕೇಳು ಎಂದು ಬೆಕ್ಕಿ ಬಿಕ್ಕಿ ಅಳುತ್ತಾ ದಂಬಾಲು ಬಿದ್ದಳು. ರುಕ್ಮಿಣಿ ನಾಯರ್

Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ “ಪ್ರೀತಿ ಕಳೆದುಹೋಗಿದೆ…”

ಕಾವ್ಯ ಸಂಗಾತಿ ಸವಿತಾ ದೇಶಮುಖ “ಪ್ರೀತಿ ಕಳೆದುಹೋಗಿದೆ…” ಮನೆ ಮೂಲೆ ಮೂಲೆಯಲಿ ಹುಡಕಿದೆನಿನ್ನ ಪುಟ್ಟ ಹೆಜ್ಜೆಯ ಸದ್ದು ಕೇಳದೆಆತುರದಿ ಓಡಿಬರುವ ನಿನ್ನ ನೋಟದ,ನೆನಪಾಗಿ ಹೃದಯ ತುಂಬಿ ಕಾಡುತ್ತಿದೆ.!!೧!! ತಿಂಡಿ ಬಟ್ಟಲೂ ಹಾಗೆಯೇ ಉಳಿದಿದೆ,ಕಾಯುತ ನಿನ್ನ ದಾರಿ ನೋಡುತ್ತಿದೆ.ಎಲ್ಲಿ ಹೋದೆ ಕಣ್ಮರೆಯಾಗಿ ಹೊರಟೆನಿನ್ನಿಲ್ಲದೆ ಮನವು ಖಾಲಿಯಾಗಿದೆ.!!೨!! ಮಡಿಲ ಮೇಲೆ ಮಲಗಿದ ಕ್ಷಣಗಳು,ಮನದಾಳದಿ ಜೀವಂತವಾದ ದಿನಗಳುಮುದ್ದಿನ ಮ್ಯಾವ್ ಮ್ಯಾವ್ ಕೇಳಿದ ಕ್ಷಣಕಣ್ಣಂಚಿನಲಿ ಕಂಡ ನಿನ್ನ ತುಂಟಾಟಗಳು!!೩!! ಕರೆಗೆ ಕಿವಿಗೊಡದೆ ಗಾಳಿಗೆ ತೂರಿದ ಓಟಬೇಡವೆಂದರು ಮತ್ತೆ ನನ್ನ ಮನೆಗೆ ಬಂದ ಆಟನಿನ್ನ ಪುಟ್ಟ ಪಾದಗಳ ಗುರುತು ಕಂಡರೆ,ನಲಿ ನಲಿದಾಡಿದ ದಿನಗಳ ನೆನಪಿನ ಕಾಟ!!೪!! ದುಃಖದ ಮೋಡಗಳ ದೂರವಾಗದದುಅದೇತ್ತೋ ದೂರ ಮರೆಯಾಗಿ ಹೋದೆನೀ ನೇಟ್ಟಿದ ಪ್ರೀತಿ ಕಳೆದು ಹೋಗದು,ನೆನಪುಗಳ ಬೆಳಕು ಎಂದಿಗೂ ಆರದು. !!೫!! ಹೃದಯ ನಿನ್ನನು ದೂರ ತಿಳ್ಳಿದರೂ ನೀಕಲಿಸಿದ ಪ್ರೀತಿ ಹಿಡಿಸಿದೆ ಮನಸ್ಸಿಗೆ,ಆ ನಿನ್ನ ಮುದ್ದು ಕಣ್ಣುಗಳು, ನಿಷ್ಕಲ್ಮಶಆ ಪುಟ್ಟ ಮುಖ, ನನ್ನ ದಿನದ ನಗು!!೬!! ಆ ಚೂಪಾದ ಕಿವಿಗಳು ಹೆಜ್ಜೆಯ ಸದ್ದಿಗೆಎಚ್ಚರವಾಗಿ ನಿಲುವ ನಿನ್ನ ಮೈಮಾಟದಸೊಬಗು, ಸವಿಯಲು ಹಬ್ಬವಾಗಿತ್ತು ನನಗೆನೀ ಬಂದರೆ ಮನೆ ತುಂಬಾ ಜೀವ ತುಂಬಿತ್ತ !!೭!! ನೀ ಹೋದರೆ ಮೌನವೇ ಉಳಿಯುತ್ತಿತ್ತು.ಮತ್ತೆ ಮತ್ತೆ ಬಂದು ಪ್ರೀತಿ ಹರಿಸಿದ ಬೆಕ್ಕುನೋಡದೆ ಮನದ ಬಾಗಿಲು ಮುಚ್ಚಿದೆ.ಆದರೆ ನೀ ಮಾತ್ರ ಹಠಮಾರಿ ಮಗು, ಮತ್ತೆ ಮತ್ತೆ ಬಂದು ಹೃದಯ ತಟ್ಟಿದ್ದೆ.ಆ ನಿನ್ನ ಮುದ್ದು ಮುದ್ದಾದ ಕಣ್ಣುಗಳು…ಎರಡು ಪುಟ್ಟ ನಕ್ಷತ್ರಗಳು ಹೊಳಪುಒಮ್ಮೆ ನೋಡಿದರೆ ಸಾಕೆನಸದು ….. ಕಲ್ಲಿನ ಮನಕರಗುತ್ತು ಆ ಪುಟ್ಟ ಮುಖ,ಹಾಲಿನ ನೊರೆ ಮೃದು, ಚೂಪಾದ ಕಿವಿಗಳು,ಮಾತು ಕೇಳುತಿರೆ ನೆಟ್ಟಗೇ ನಿಲುವ ಆಟಮೈ ತುಂಬಿದ್ದ ಬಣ್ಣವೋ ದೇವರು ಬಿಡಿಸಿದ ಚಿತ್ರವೊಂದು! ಕಂದು ಮೋಡದ ನಡುವೆಕಪ್ಪು ಮಳೆಯ ಗೆರೆಗಳಂತೆ, ನಿನ್ನ ಮೈಮಾಟಕಣ್ಣಿಗೆ ಹಬ್ಬವಾಗಿತ್ತು.ಪುಟ್ಟ ಹೆಜ್ಜೆಗಳ ಸದ್ದು,ಮೃದುವಾದ ಬಾಲದ ನಾಟ್ಯ ಹೇಳ್ತಿರೋದು, ಸುತ್ತ ಸುತ್ತುವ ನಿನ್ನ ಪ್ರೀತಿ, ಮಾತಿಲ್ಲದಮಮತೆಯ ಭಾಷೆಯಾಗಿತ್ತು.ನಾನು ದೂರಸರಿದರು,ಮತ್ತೇ ಮತ್ತೇ ಬಂದೆ… ಅಂದುಅರಿಯಲಿಲ್ಲ ಅದು ಕೊನೆಯ ಬೆಟ್ಟೆಂದು.. ಈಗ ಮನೆ ತುಂಬಾ ನಿಶ್ಯಬ್ದ, ನಿನು ಪ್ರತಿಮೂಲೆಯಲ್ಲೂ ಜೀವಂತವಾಗಿರುವೆ ಹಾಗೆಮುದ್ದಾದ ಚೇಷ್ಟೆಗಳೆಲ್ಲ ಕಂಗಳ‌ ನೀರುಅದೆಂದು ನಿನ್ನ ಮೋಹದಿ ಸಿಲುಕಿದೆ…. ಎಲ್ಲೋ ಒಂದು ಕಡೆ ನೀ ಇದ್ದರೆ, ಒಮ್ಮೆಮಾತ್ರ ಬಂದು ನೋಡು ಜೀವಾ.ಕಣ್ಣಗಳ ನೋಟಕ್ಕೆ ಕಾಯುತ್ತಿವೆ,ಮನದ ಮನೆಯ ಬಾಗಿಲು ತೆರೆದು ಮತ್ತೇ ಬರುವಿಗಾಗಿ ಕಾಯುತ್ತಿರುವೆ ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ಪ್ರೀತಿ ಕಳೆದುಹೋಗಿದೆ…” Read Post »

ಕಾವ್ಯಯಾನ, ಗಝಲ್

ಡಾ ರೇಣುಕಾತಾಯಿ ಸಂತಬಾ ರೇಮಾಸಂತರವರ ಗಜಲ್

ಕಾವ್ಯ ಸಂಗಾತಿ ಡಾ ರೇಣುಕಾತಾಯಿ ಸಂತಬಾ  ರೇಮಾಸಂತರವರ ಗಜಲ್ ನೀ ಒಪ್ಪದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ನೀ ಸುಮ್ಮನಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll ಅಂತರಾತ್ಮ ನಿನ್ನ ಪ್ರೀತಿಗೆ ಶರಣಾಗಿ ಬಿಟ್ಟೇತಿ,ನೀ ಕಾಣದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll ರಾಧೆಯಾಗಿ ನಿನ್ನ ದನಿ ಪೂಜಿಸುತ್ತೇನಿ ಗೊತ್ತೇನ,ನೀ ನೋಡದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll ಸದ್ದಿಲ್ಲದ ಮನಸ್ಸಿನ್ಯಾಗ ಮೆತ್ತಗ ಬಂದಬಿಟ್ಟಿ,ನೀ ಒಲಿದಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll ತಾಯಿಗೆ ಗೊತ್ತಿಲ್ಲದ ನಾ ಹೃದಯದೊಳಗಿಟ್ಟಿನಿ,ನೀ ದೂರವಿದ್ದರೂ ನಾ ನಿನ್ನ ಬಯಸುತ್ತೇನೋ ಸಖಾ.ll ಡಾ ರೇಣುಕಾತಾಯಿ ಸಂತಬಾ ರೇಮಾಸಂತ    

ಡಾ ರೇಣುಕಾತಾಯಿ ಸಂತಬಾ ರೇಮಾಸಂತರವರ ಗಜಲ್ Read Post »

ಇತರೆ

“ಅಪ್ಪನ ಮಡಿಲು”ವಿಶೇಷ ಬರಹ ಪೃಥ್ವಿರಾಜ್ ಟಿ ಬಿ

ವಿಶೇಷ ಸಂಗಾತಿ ಪೃಥ್ವಿರಾಜ್ ಟಿ ಬಿ “ಅಪ್ಪನ ಮಡಿಲು” ಅಪ್ಪನ ಮಡಿಲು…ಅದು ಕೇವಲ ಒಬ್ಬ ತಂದೆಯ ಮಡಿಲಲ್ಲ.ಅದು ನನ್ನ ಬದುಕಿನ ಮೊದಲ ಆಶ್ರಯ,ಮೊದಲ ಪಾಠಶಾಲೆ,ಮೊದಲ ದೇವಾಲಯ.ನಾನು ಈ ಜಗತ್ತಿಗೆ ಬಂದಾಗ ನನಗೆ ಯಾವುದರ ಅರಿವೂ ಇರಲಿಲ್ಲ. ಬೆಳಕು, ಕತ್ತಲೆ, ಮುಖಗಳು, ನಗು, ಅಳು—ಯಾವುದೂ ನನಗೆ ಅರ್ಥವಾಗಲಿಲ್ಲ. ಕಿವಿಗೆ ಬಿದ್ದ ಶಬ್ದಗಳೇ ನನ್ನ ಮೊದಲ ಪರಿಚಯ. ಆ ಶಬ್ದಗಳ ಅರ್ಥ ಗೊತ್ತಾಗುವ ಮೊದಲೇ ನಾನು ಬದುಕಿನೊಳಗೆ ಕಾಲಿಟ್ಟಿದ್ದೆ.ಅದು ನನ್ನ ಜನನ.ಆ ಕ್ಷಣದಿಂದಲೇ ಆರಂಭವಾಯಿತು ಒಂದು ಪಯಣ—ನಾನು ಅರ್ಥಮಾಡಿಕೊಳ್ಳುವ ಮೊದಲು ನನ್ನನ್ನು ಅರ್ಥಮಾಡಿಕೊಳ್ಳುತ್ತಿದ್ದ ಬದುಕಿನ ಪಯಣ.ಬದುಕು ಯಾವಾಗಲೂ ನಮಗೆ ತಿಳಿಸಿ ನಡೆಯುವುದಿಲ್ಲ.ಅದು ನಮ್ಮನ್ನು ಎತ್ತಿಕೊಂಡು ಹೋಗುತ್ತದೆ.ಕೆಲವೊಮ್ಮೆ ಮುದ್ದಾಗಿ,ಕೆಲವೊಮ್ಮೆ ಕ್ರೂರವಾಗಿ.ನಮ್ಮ ಮನೆ ಚಿಕ್ಕದಾಗಿತ್ತು. ನಾಲ್ಕು ಗೋಡೆಗಳು, ಒಂದು ಚಿಕ್ಕ ಅಡುಗೆಮನೆ, ಒಂದು ಹಳೆಯ ಬಾಗಿಲು. ಆದರೆ ಆ ಮನೆಯೊಳಗೆ ಅಪಾರವಾದ ಉಷ್ಣತೆ ಇತ್ತು. ಅಪ್ಪ, ಅಮ್ಮ, ನಾನು ಮತ್ತು ನನ್ನ ತಂಗಿ—ನಾಲ್ವರೂ ಸೇರಿ ನಮ್ಮದೇ ಒಂದು ಪುಟ್ಟ ಲೋಕವನ್ನು ಕಟ್ಟಿಕೊಂಡಿದ್ದೆವು.ಅಪ್ಪ ಮನೆಯ ಹೊರಗಿನ ಜಗತ್ತಿನ ಹೊರೆ ಹೊತ್ತವರು.ಅಮ್ಮ ಮನೆಯೊಳಗಿನ ಜಗತ್ತಿನ ಶಕ್ತಿಯು.ತಂಗಿ ಅಪ್ಪನ ಜೀವದ ತುಣುಕು.ನಾನು ಎಲ್ಲವನ್ನೂ ಮೌನವಾಗಿ ನೋಡುತ್ತಾ ಬೆಳೆದುಬಂದ ಮಗ.ಅಪ್ಪ ನಮ್ಮನ್ನು ಯಾವಾಗಲೂ ಕೊರತೆಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದರು. ಹಣ ಇದ್ದರೂ ಇಲ್ಲದಿದ್ದರೂ, ನಗುವಿನ ಕೊರತೆ ನಮ್ಮ ಮನೆಯಲ್ಲಿರಲಿಲ್ಲ. ಅವರ ಜೀವನದ ಉದ್ದೇಶ ಒಂದೇ—ಮಕ್ಕಳಿಗೆ ನೋವು ತಟ್ಟಬಾರದು.ಅಪ್ಪನ ಕೈಗಳು ಕಠಿಣವಾಗಿದ್ದರೂ, ಹೃದಯ ಮೃದುವಾಗಿತ್ತು.ಅವರು ಹೆಚ್ಚು ಮಾತನಾಡುವುದಿಲ್ಲ. ಆದರೆ ಅವರು ಮಾಡಿದ ಕೆಲಸಗಳೇ ಮಾತಾಡುತ್ತಿತ್ತು.ನಾನು ಚಿಕ್ಕಂದಿನಿಂದಲೇ ಹಠ ಹಿಡಿದು ಅಳುವ ಮಕ್ಕಳಲ್ಲಿ ಒಬ್ಬನಲ್ಲ. ಏನಾದರೂ ಬೇಕು ಎಂದರೆ ಅಪ್ಪನ ಮುಖ ನೋಡುತ್ತಿದ್ದೆ. ಅವರ ಕಣ್ಣುಗಳಲ್ಲಿ “ಇಲ್ಲ” ಅಂದರೆ, ಅದು ನನ್ನಿಗೆ ಅಂತಿಮ ಉತ್ತರ. ಅವರ ಮೌನದಲ್ಲೇ ನನಗೆ ಉತ್ತರ ಸಿಗುತ್ತಿತ್ತು.ಹಂಚಿಕೊಂಡು ತಿನ್ನುವುದು, ಇತರರ ನೋವನ್ನು ಅರ್ಥಮಾಡಿಕೊಳ್ಳುವುದು, ಅಗತ್ಯಕ್ಕಿಂತ ಹೆಚ್ಚು ಬೇಡ ಅನ್ನಿಸುವುದು—ಇವೆಲ್ಲ ನನ್ನಲ್ಲಿ ಸಹಜವಾಗಿಯೇ ಬೆಳೆದ ಗುಣಗಳು. ಬಹುಶಃ ಅದು ಅಪ್ಪನಿಂದ ನನಗೆ ಬಂದ ಉಡುಗೊರೆ.ಅಪ್ಪನ ಮಡಿಲು ನನಗೆ ದೇವಾಲಯದಂತಿತ್ತು.ಅಲ್ಲಿ ಕುಳಿತರೆ ಜಗತ್ತು ಮೌನವಾಗುತ್ತಿತ್ತು.ಅಪ್ಪ ತಲೆಗೆ ಕೈ ಇಟ್ಟರೆ, ನನ್ನೊಳಗಿನ ಭಯಗಳು ಕರಗುತ್ತಿತ್ತು.ಅವರು ನನ್ನ ಮೊದಲ ದೇವರು.ಮೊದಲ ಹೀರೋ.ನನ್ನ ಬಾಲ್ಯ ಸಂಪೂರ್ಣ ಸಂತೋಷದಿಂದ ತುಂಬಿತ್ತು ಎಂದು ಹೇಳಿದರೆ ಅದು ಅರ್ಧ ಸತ್ಯ. ಹೊರಗೆ ನೋಡಿದರೆ ಎಲ್ಲವೂ ಸರಿಯೇನೋ ಎಂಬಂತೆ ಕಾಣುತ್ತಿತ್ತು. ಆದರೆ ಮನೆಯೊಳಗೆ ಮೌನವಾಗಿ ಬೆಳೆಯುತ್ತಿದ್ದ ಕೆಲ ನೋವುಗಳು, ಅರ್ಥವಾಗದ ನಿಶ್ಶಬ್ದಗಳು ನನ್ನೊಳಗೆ ಪ್ರಶ್ನೆಗಳಾಗಿ ಉಳಿಯುತ್ತಿತ್ತು.ಅಪ್ಪ–ಅಮ್ಮನ ನಡುವೆ ಮಾತಿಲ್ಲದ ದಿನಗಳು.ನಗು ಇದ್ದರೂ, ಹೃದಯಗಳು ದೂರವಾಗುತ್ತಿರುವ ಕ್ಷಣಗಳು.ಆ ನೋವುಗಳನ್ನು ನಾನು ಪದಗಳಲ್ಲಿ ಅರ್ಥಮಾಡಿಕೊಳ್ಳುವ ಮೊದಲೇ ಮನಸ್ಸಿನಲ್ಲಿ ಸಂಗ್ರಹಿಸಿಕೊಂಡಿದ್ದೆ.ನಾನು ಐದನೇ ತರಗತಿಯಲ್ಲಿ ಓದುತ್ತಿದ್ದಾಗ, ನಮ್ಮ ಬದುಕಿನ ಮೇಲೆ ಬಿರುಗಾಳಿ ಬಂತು.ಅಪ್ಪ ಮತ್ತು ಅಮ್ಮ ದೂರವಾದರು.ಗೋಡೆಗಳು ಹಾಗೆಯೇ ಇದ್ದವು.ಬಾಗಿಲು, ಕಿಟಕಿ, ನೆಲ— ಯಾವುದು ಬದಲಾಗಿರಲಿಲ್ಲಆದರೆ ಮನೆಯ ಆತ್ಮ ಒಡೆದಿತ್ತು.ಅಮ್ಮ ಮನೆ ಬಿಟ್ಟು ಹೋದ ದಿನ ಮನೆ ಮೌನವಾಗಿತ್ತು. ಆ ಮೌನವು ಕಿವಿಗೆ ಕೇಳಿಸದ ಶಬ್ದವಾಗಿ ನನ್ನ ಮನಸ್ಸಿನಲ್ಲಿ ಕೂಗುತ್ತಿತ್ತು.“ಅಮ್ಮ ಏಕೆ ಹೋದಳು?”ಈ ಪ್ರಶ್ನೆಗೆ ಉತ್ತರ ಯಾರಲ್ಲೂ ಇರಲಿಲ್ಲ.ಅಮ್ಮ ಎಂದರೆ ದೇವರು ಎನ್ನುತ್ತಾರೆ.ಆದರೆ ನನ್ನ ಬದುಕಿನಲ್ಲಿ ‘ಅಮ್ಮ’ ಎಂಬ ಪದ ನೋವಿನ ಅರ್ಥ ಹೊತ್ತುಕೊಂಡಿತ್ತು.ಎಲ್ಲಾ ತಾಯಂದಿರು ಮಕ್ಕಳಿಗಾಗಿ ತ್ಯಾಗ ಮಾಡುತ್ತಾರೆ ಎಂಬ ಮಾತು ನನ್ನಿಗೆ ಸುಳ್ಳಾಗಿ ಕಾಣಿಸಿತು.ನನ್ನ ತಾಯಿ ತನ್ನ ಸುಖವನ್ನು ಆರಿಸಿಕೊಂಡಳು.ಮಕ್ಕಳ ಕಣ್ಣೀರನ್ನು ನೋಡದೆ.ದೇವರ ಮುಂದೆ ನಾನು ಒಂದು ಮೌನ ಪ್ರಾರ್ಥನೆ ಮಾಡಿಕೊಂಡೆ—“ದೇವರೆ, ಈ ತರದ ತಾಯಿ ಯಾರಿಗೂ ಕೊಡಬೇಡ.”ಇದು ಎಲ್ಲಾ ತಾಯಂದಿರ ವಿರುದ್ಧದ ಮಾತಲ್ಲ.ಇದು ನನ್ನ ಬದುಕಿನ ಸತ್ಯ. ಮೌನದಲ್ಲಿ ಬದುಕಿದ ತಂದೆ ಅಮ್ಮ ಮನೆ ಬಿಟ್ಟು ಹೋದ ನಂತರ ನಮ್ಮ ಮನೆ ಮೌನವನ್ನು ಕಲಿತಿತು.ಆ ಮೌನ ಮಾತಾಡುತ್ತಿರಲಿಲ್ಲ, ಆದರೆ ಎಲ್ಲವನ್ನೂ ಹೇಳುತ್ತಿತ್ತು.ಅಪ್ಪ ಮೊದಲ ಕೆಲವು ದಿನಗಳು ಏನೂ ಆಗದಂತೆ ನಡೆದುಕೊಂಡರು.ಅವರು ಅಳಲಿಲ್ಲ.ಕೋಪಗೊಂಡಿಲ್ಲ.ಪ್ರಶ್ನೆ ಕೇಳಲಿಲ್ಲ.ಆದರೆ ನಾನು ಗಮನಿಸಿದ್ದೆ—ಅಪ್ಪನ ನಗು ನಿಧಾನವಾಗಿ ಕಡಿಮೆಯಾಗುತ್ತಿತ್ತು. ಸಮಾಜ ಮಾತ್ರ ಮೌನವಾಗಿರಲಿಲ್ಲ.“ಹೆಂಡತಿ ಹೋದಳು” ಅನ್ನೋದು ನಮ್ಮ ಮನೆಯ ಪರಿಚಯವಾಗಿ ಬಿಟ್ಟಿತು.ಕೆಲವರು ಸಹಾನುಭೂತಿ ತೋರಿಸಿದರು.ಹೆಚ್ಚಿನವರು ಕುತೂಹಲ ತೋರಿಸಿದರು.ಕೆಲವರು ಮೌನವಾಗಿ ನಿಂದಿಸಿದರು.ಅಪ್ಪನಿಗೆ ಸಲಹೆಗಳು ಬಂತು—“ಮಕ್ಕಳಿಗಾಗಿ ಮರುಮದುವೆ ಮಾಡಿ”“ಒಬ್ಬ ಹೆಣ್ಣು ಮನೆಗೆ ಬಂದರೆ ಎಲ್ಲವೂ ಸರಿಯಾಗುತ್ತದೆ”“ಮಕ್ಕಳು ತಾನೇ ಹೊಂದಿಕೊಳ್ಳುತ್ತಾರೆ”ಆದರೆ ಅಪ್ಪನ ಉತ್ತರ ಒಂದೇ.ಅದು ಗಟ್ಟಿಯಾಗಿರಲಿಲ್ಲ.ಆದರೆ ಅಚಲವಾಗಿತ್ತು.“ನನ್ನ ಮಕ್ಕಳ ಮನಸ್ಸಿಗೆ ನೋವಾಗಬಾರದು.”ಅಪ್ಪನಿಗೆ ತಮ್ಮ ಬದುಕಿನ ಬಗ್ಗೆ ಚಿಂತೆಯೇ ಇರಲಿಲ್ಲ.ಅವರ ಪ್ರಶ್ನೆ ಒಂದೇ—ನನ್ನ ಮಕ್ಕಳು ಸುರಕ್ಷಿತರಾಗಿದ್ದಾರೆಯೇ?ಮರುಮದುವೆ ಅಂದ್ರೆ ಕೇವಲ ಒಂದು ಸಂಬಂಧ ಅಲ್ಲ.ಅದು ಮಕ್ಕಳ ಬದುಕಿನೊಳಗೆ ಮತ್ತೊಬ್ಬರ ಪ್ರವೇಶ.ಆ ಪ್ರವೇಶ ಒಳ್ಳೆಯದಾಗುತ್ತದೆಯೋ, ಗಾಯವಾಗುತ್ತದೆಯೋ—ಅಪ್ಪನಿಗೆ ಅದರ ಭಯ ಇತ್ತು.ಆ ಭಯವೇ ಅವರನ್ನು ಜೀವನಪೂರ್ತಿ ಒಬ್ಬಂಟಿಯಾಗಿಸಿದರೂ, ಮಕ್ಕಳಿಗಾಗಿ ಅವರು ಒಪ್ಪಿಕೊಂಡರು.ಅಪ್ಪ ಅಮ್ಮನ ಕೊರತೆಯನ್ನು ನಮಗೆ ತೋರಿಸಲಿಲ್ಲ.ಅಡುಗೆ ಮನೆಯಲ್ಲಿ ಅವರೇ ನಿಂತರು.ಬಟ್ಟೆ ತೊಳೆಯುವುದು, ಊಟ ಮಾಡಿಸುವುದು, ಶಾಲೆಗೆ ಕಳುಹಿಸುವುದು—ಎಲ್ಲವನ್ನೂ ಅವರು ಮೌನವಾಗಿ ಮಾಡುತ್ತಿದ್ದರು.ಅಪ್ಪನ ಕೈಗಳಿಂದ ಬಂದ ಊಟದಲ್ಲಿ ಅಮ್ಮನ ಕೈರೇಖೆಗಳು ಕಾಣಿಸದಿದ್ದರೂ, ತ್ಯಾಗ ಸ್ಪಷ್ಟವಾಗಿತ್ತು.ತಂಗಿ ದೊಡ್ಡದಾಗುತ್ತಾ ಹೋಗುತ್ತಿದ್ದಳು.ಅವಳಿಗೆ ಅಪ್ಪ ತಾಯಿ ಎರಡೂ ಆಗಿದ್ದರು.ಅವಳ ಕೂದಲನ್ನು ಬಿಚ್ಚಿ ಜಡೆ ಹಾಕುವುದು, ಅವಳ ಕಣ್ಣೀರನ್ನು ಒರೆಸುವುದು—ಅಪ್ಪ ಕಲಿತರು.ಅವಳು ನಗಿದರೆ ಅಪ್ಪ ಬದುಕಿದ್ದಂತೆ.ಅವಳು ಮೌನವಾದರೆ ಅಪ್ಪನ ಹೃದಯ ನಡುಗುತ್ತಿತ್ತು.ನಾನು ಅಷ್ಟರಲ್ಲಿ ಮೌನದಿಂದ ಜವಾಬ್ದಾರಿಯತ್ತ ಸಾಗುತ್ತಿದ್ದೆ.ನನ್ನೊಳಗೆ ಅಪ್ಪನಂತಾಗಬೇಕು ಅನ್ನೋ ಆಸೆ ಬೆಳೆದುಬಂದಿತ್ತು.ಅವರ ನೋವನ್ನು ಕೇಳದೆ ಅರ್ಥಮಾಡಿಕೊಳ್ಳಬೇಕು ಎಂದು ಕಲಿತಿದ್ದೆ.ಅಪ್ಪ ಮಾತಾಡದ ದಿನಗಳಲ್ಲಿ ನಾನು ಅವರ ಪಕ್ಕ ಕುಳಿತುಕೊಳ್ಳುತ್ತಿದ್ದೆ.ಮಾತು ಬೇಡ.ಹಾಜರಾತಿಯೇ ಸಾಕಾಗುತ್ತಿತ್ತು.ಕಾಲ ಸಾಗಿತು.ತಂಗಿ ಕಾಲೇಜಿಗೆ ಹೋದಳು.ಅಪ್ಪ ಅವಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು.ಅಷ್ಟು ನಂಬಿಕೆ ಅಂದ್ರೆ—ಮನೆಯ ಹಣದ ಜವಾಬ್ದಾರಿಯನ್ನೇ ಅವಳ ಕೈಗೆ ಕೊಟ್ಟಿದ್ದರು.ಲೆಕ್ಕ ಕೇಳಲಿಲ್ಲ.ಅನುಮಾನ ಮಾಡಲಿಲ್ಲ.“ನನ್ನ ಮಗಳು ತಪ್ಪು ಮಾಡೋದಿಲ್ಲ”ಅದು ಅಪ್ಪನ ವಿಶ್ವಾಸ.ಆ ವಿಶ್ವಾಸವೇ ಮುಂದೆ ಅಪ್ಪನ ಹೃದಯವನ್ನು ಹೆಚ್ಚು ನೋಯಿಸಿದ ಸಂಗತಿ ಅನ್ನೋದು ಆ ಕ್ಷಣದಲ್ಲಿ ಯಾರಿಗೂ ಗೊತ್ತಿರಲಿಲ್ಲ.ನಾನು ಡಿಗ್ರಿ ಓದುತ್ತಿದ್ದೆ.ಬದುಕಿನ ಹೊಣೆಗಾರಿಕೆ ನನ್ನತ್ತ ನಿಧಾನವಾಗಿ ಜಾರುತ್ತಿತ್ತು.ಅಪ್ಪ ವಯಸ್ಸಾಗುತ್ತಿದ್ದರು.ಆದರೆ ಅವರ ಮನಸ್ಸು ಮಾತ್ರ ನಮ್ಮ ಭವಿಷ್ಯದಲ್ಲೇ ಸಿಲುಕಿತ್ತು.ಆ ದಿನ ಬಂತು.ತಂಗಿಗೆ ಕೊನೆಯ ಪರೀಕ್ಷೆ.ನಾನೇ ಅವಳನ್ನು ಕಾಲೇಜಿಗೆ ಬಿಟ್ಟು ಬಂದೆ.“ಪರೀಕ್ಷೆ ಮುಗಿದ ಮೇಲೆ ಬೇಗ ಮನೆಗೆ ಬಾ” ಎಂದು ಸಹಜವಾಗಿ ಹೇಳಿದ್ದೆ.ಅವಳು ನಗುತ್ತಾ ತಲೆ ಆಡಿ ಹೋಗಿದ್ದಳು.ಸಂಜೆಯಾಯಿತು.ರಾತ್ರಿ ಆಯಿತು.ಅವಳು ಬರಲಿಲ್ಲ.ಅಪ್ಪ ಮೊದಲಿಗೆ ಗಾಬರಿಯಾಗಲಿಲ್ಲ.“ಇನ್ನೂ ಬರ್ತಾಳೆ” ಅಂದರು.ಆದರೆ ಸಮಯ ಸಾಗಿದಂತೆ ಮೌನ ಗಟ್ಟಿಯಾಗುತ್ತಿತ್ತು.ಆಮೇಲೆ…ಅಪ್ಪನ ಫೋನ್‌ಗೆ ಒಂದು ವಾಟ್ಸ್‌ಆ್ಯಪ್ ಮೆಸೇಜ್ ಬಂತು.ಒಂದು ಫೋಟೋ.ಆ ಫೋಟೋದಲ್ಲಿ—ಅಪ್ಪನ ಮುದ್ದಿನ ಮಗಳುಮದುವೆಯ ಉಡುಪಿನಲ್ಲಿಬೇರೊಬ್ಬನ ಕೈ ಹಿಡಿದು ನಿಂತಿದ್ದಳು.ಅಪ್ಪ ಆ ಫೋಟೋವನ್ನು ನೋಡಿದರು.ಒಮ್ಮೆ ನೋಡಿದರು.ಮತ್ತೊಮ್ಮೆ ನೋಡಿದರು.ಅವರು ಕುಸಿದಿಲ್ಲ.ಅವರು ಕೂಗಿಲ್ಲ.ಅವರು ಶಪಿಸಲಿಲ್ಲ.ಆದರೆ ಅವರ ಕಣ್ಣುಗಳಲ್ಲಿ ನಂಬಿಕೆ ಒಡೆದ ಶಬ್ದವಿತ್ತು.ಅದು ನಾನು ಜೀವನದಲ್ಲಿ ಮೊದಲ ಬಾರಿ ನೋಡಿದ ಅಪ್ಪ.ಆ ದಿನ ಅಪ್ಪ ಒಳಗೊಳಗೆ ಕುಸಿದರು.ಅವರ ನೋವಿಗೆ ಮಾತು ಸಿಗಲಿಲ್ಲ.ಮೌನವೇ ಅವರ ಭಾಷೆಯಾಯಿತು.ಆದರೂ…ಅಪ್ಪ ಸಂಪೂರ್ಣವಾಗಿ ಮುರಿಯಲಿಲ್ಲ.ಅವರು ನನ್ನತ್ತ ನೋಡಿದರು.ಆ ದೃಷ್ಟಿಯಲ್ಲಿ ಒಂದು ಪ್ರಶ್ನೆ ಇತ್ತು—“ನೀನು ಇದ್ದೀಯಾ?”ನಾನು ಉತ್ತರ ಕೊಟ್ಟಿಲ್ಲ.ಆದರೆ ಅವರ ಪಕ್ಕ ಕುಳಿತೆ.ಅದು ಸಾಕಾಗಿತ್ತು. ಪೃಥ್ವಿರಾಜ್ ಟಿ ಬಿ

“ಅಪ್ಪನ ಮಡಿಲು”ವಿಶೇಷ ಬರಹ ಪೃಥ್ವಿರಾಜ್ ಟಿ ಬಿ Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಅದೆಷ್ಟು ಮುದ್ದಿಸಿ ಹಿಡಿದರೂ,ಮೂಷ್ಟಿಯಲ್ಲಿನ ಮರಳು ಸೋರಿದಾಗ ನೀ ನೆನಪಾದೆರಾತ್ರಿಯಿಡೀ ನಿಟ್ಟಿಸುತ ಕೂತರೂ,ಬೆಳಕಾದಂತೆ ಚಂದ್ರ ಮರೆಯಾದಾಗ ನೀ ನೆನಪಾದೆ ಹೊರೆಯೆನಿಸಿದರೂ ಎಂದೂ ಹೊರಗೆಲ್ಲೂ ಹೇಳಿಕೊಳ್ಳಲಿಲ್ಲಹಗಲನು ಹೊಂಗನಸಿನಂತೆ ಬದುಕಿದರೂ ,ಕತ್ತಲಾದಂತೆ ರವಿಯು  ಕರಗಿದಾಗ ನೀ ನೆನಪಾದೆ ಪ್ರತಿದಿನವೂ ಮಮತೆಯಿಂದ, ನಗು ನಗುತಾ ನೋಡಿಕೊಂಡೆಅಡಿಗಡಿಗೆ ನೀರುಣಿಸಿ ಪೋಷಿಸಿದರೂ, ಗಿಡವು ಹೂ ಬಿಡದಾದಾಗ ನೀ ನೆನಪಾದೆ ನನ್ನದೆನ್ನುವ ಮೋಹದಲಿ ಪ್ರತಿ ಹೊಡೆತವನೂ ಅಪ್ಪಿಕೊಳ್ಳುತಾ ಹೋದೆಸುನಾಮಿಯಿಂದ ಭೋರ್ಗರೆದು ಸಾಗರ ಅತ್ತರೂ, ಆ ಬಂಡೆ ಅನುನಯಿಸದಾಗ ನೀ ನೆನಪಾದೆ ತನ್ನ ಶಾಂತ ಕಂಗಳನೇ ತಂಗುದಾಣದಂತೆ  ನೀಡಿದಳು ವಾಣಿ,ಬೇಡೆಂದರೂ ಕೃತಘ್ನನಂತೆ ಅನ್ಯರೆದುರು ಕಂಬನಿ ಸುರಿದಾಗ ನೀ ನೆನಪಾದೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

You cannot copy content of this page

Scroll to Top