ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಕನಕ -ಷರೀಫ್ ಕಾವ್ಯ ಪುರಸ್ಕಾರಕ್ಕೆ ಸಾಹಿತಿ, ಎ. ಎಸ್. ಮಕಾನದಾರ ಆಯ್ಕೆ

ಪ್ರಶಸ್ತಿ ಸಂಗಾತಿ ಕನಕ -ಷರೀಫ್ ಕಾವ್ಯ ಪುರಸ್ಕಾರಕ್ಕೆ ಸಾಹಿತಿ, ಎ. ಎಸ್. ಮಕಾನದಾರ ಆಯ್ಕೆ ಕನಕ -ಷರೀಫ್ ಕಾವ್ಯ ಪುರಸ್ಕಾರಕ್ಕೆ ಸಾಹಿತಿ, ಎ. ಎಸ್. ಮಕಾನದಾರ ಆಯ್ಕೆ      ಗದಗ -5- ಹಿರಿಯ ಸಾಹಿತಿ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ, ನಿರಂತರ ಪ್ರಕಾಶನದ ಸಂಚಾಲಕ ಎ. ಎಸ್. ಮಕಾನದಾರ ಅವರು 2024ನೇ ಸಾಲಿನ ರಾಜ್ಯ ಮಟ್ಟದ ಕನಕ -ಷರೀಫ್ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆಂದು  ಆಯ್ಕೆ ಸಮಿತಿಯ ಅಧ್ಯಕ್ಷ, ಹಿರಿಯ ಬಂಡಾಯ ಸಾಹಿತಿ  ಡಾ. ಸತೀಶ್ ಕುಲಕರ್ಣಿ ಕಾರ್ಯಕ್ರಮದ ಸಂಚಾಲಕ ಪ್ರೊ. ರಂಜಾನ್ ಹೆಬಸೂರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.     ದೊಡ್ಡಟ ಕಲೆಗೆ ಹೊಸ ಸ್ಪರ್ಶ ನೀಡಿದ ಹಿರಿಯ ರಂಗಕರ್ಮಿ ಉತ್ಸವ ರಾಕ್ ಗಾರ್ಡನ್ ನ ಸಂಸ್ಥಾಪಕರಾದರಾದ ಕಲಾ ಗುರು ಡಾ. ಟಿ.ಬಿ.ಸೊಲಬಕ್ಕನವರ ಅವರ 79ನೇ ಹುಟ್ಟುಹಬ್ಬದ ಸ್ಮರಣಾರ್ಥ ಶಿಗ್ಗಾವಿ ತಾಲೂಕಿನ ಉತ್ಸವ ರಾಕ್ ಗಾರ್ಡನ್ ನಲ್ಲಿ ಧಾರವಾಡ ಜಿಲ್ಲೆಯ ಹೆಬಸೂರ್ ನ ಉತ್ತರ ಸಾಹಿತ್ಯ ವೇದಿಕೆ ಸಂಯುಕ್ತ ಆಶ್ರಯ ದಲ್ಲಿ ರಾಜ್ಯ ಮಟ್ಟದ ಕವಿ ಗೋಷ್ಠಿ. ಗಜಲ್ ಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವದುರಾಜ್ಯ ಮಟ್ಟದ ಕನಕ -ಷರೀಫ್ ಕಾವ್ಯ ಪ್ರಶಸ್ತಿ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯ, ಹಿರಿಯ ಕವಿ ಡಾ. ಚನ್ನಪ್ಪ ಅಂಗಡಿ 2022ನೇ ಸಾಲಿಗೆ, ಶಿಂಧನೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಹಿರಿಯ ವಿಮರ್ಶಕ, ಡಾ. ಜಾಜಿ ದೇವೇಂದ್ರಪ್ಪ ಅವರು 2023ನೇ ಸಾಲಿಗೆ, ಕರ್ನಾಟಕ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ಪಡೆದ ನ್ಯಾಯಾಂಗ ಇಲಾಖೆಯ ನಿವೃತ್ತ ಉದ್ಯೋಗಿ ಹಿರಿಯ ಸಾಹಿತಿ ಎ ಎಸ್. ಮಕಾನದಾರ ಅವರು 2024ನೇ ಸಾಲಿಗೆ ಮತ್ತು ಹಿರಿಯ ಅನುವಾದಕಿ ಪತ್ರ ಕರ್ತೆ ಮಂಜುಳಾ ಕಿರುಗಾವಲು ಇವರು 2025 ನೇ ಸಾಲಿನ ಪುರಸ್ಕಾರ ಕ್ಕೆ ಭಾಜನರಾಗಿದ್ದಾಗಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಸತೀಶ್ ಕುಲಕರ್ಣಿ, ಸದಸ್ಯರಾದ ಅಬ್ದುಲ್ ಹೈ ತೋರಣಗಲ್ಲು, ಶ್ರೀಶೈಲ ಮಾದಣ್ಣವರ, ರಂಜಾನ್ ಹೆಬಸೂರ, ದೀಪಾ ಗೋನಾಳ ಡಾ. ವೇದಾ ರಾಣಿ ದಾಸನೂರ ಮುಂತಾದವರು ಆಯ್ಕೆ ಸಮಿತಿಯಲ್ಲಿದ್ದರು ಈ ಪೂರ್ವ ಕನಕ -ಷರೀಫ್ ಪ್ರಶಸ್ತಿಗೆ  ಹಾವೇರಿ ಜಿಲ್ಲೆಯ ವಿಜಯ ಕಾಂತ್ ಪಾಟೀಲ್, ಗಜಲ್ ಕವಿ ಕೊಪ್ಪಳ ಜಿಲ್ಲೆಯ ಅಲ್ಲಾ ಗಿರಿರಾಜ್, ದಾವಣಗೆರೆ ಜಿಲ್ಲೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದ ಮುಖ್ಯ ಆಡಳಿತಾಧಿಕಾರಿ, ಕವಿ ಬಿ. ಶ್ರೀನಿವಾಸ್, ಆಕಾಶವಾಣಿ ಧಾರವಾಡ ಕೇಂದ್ರದ ನಿರ್ದೇಶಕ, ಕತೆಗಾರ ಬೆಳಗಾವಿ ಜಿಲ್ಲೆಯ ಡಾ. ಬಸು ಬೇವಿನ ಗಿಡದ ಅವರು ಭಾಜನರಾಗಿದ್ದನ್ನಿಲ್ಲಿ  ಸ್ಮರಿಸಬಹುದು.

ಕನಕ -ಷರೀಫ್ ಕಾವ್ಯ ಪುರಸ್ಕಾರಕ್ಕೆ ಸಾಹಿತಿ, ಎ. ಎಸ್. ಮಕಾನದಾರ ಆಯ್ಕೆ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-124 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಮೊಮ್ಮಕ್ಕಳು ಬಂದ ಖುಶಿ ಆಸ್ಪತ್ರೆಗೆ ಬಂದ ಸುಮತಿಯ ಎರಡನೇ ಮಗಳು ಸಂಜೆ ವಾರ್ಡಿಗೆ ಕಾಫಿ-ಬ್ರೆಡ್ ಬಂದಾಗ ಸರತಿಯಲ್ಲಿ ನಿಂತು ಪಡೆದುಕೊಂಡು ಅಮ್ಮನಿಗೆ ಕೊಟ್ಟಳು. ಕಾಫಿ ಕುಡಿದು ತಾಯಿ ಮಲಗಿದ ನಂತರ ವಾರ್ಡಿನ ಹೊರಗಿನ ವೆರಾಂಡಾದ ಮೆಟ್ಟಿಲಿನ ಮೇಲೆ ಕುಳಿತು ತನ್ನ ಪಠ್ಯ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಓದಿನಲ್ಲಿ ಸಂಪೂರ್ಣ ಮಗ್ನಳಾಗಿದ್ದ ಅವಳ ಕುತ್ತಿಗೆಯನ್ನು ಎರಡು ಪುಟ್ಟ ಕೈಗಳು ಬಿಗಿಯಾಗಿ ಅಪ್ಪಿಕೊಂಡವು. ತಿರುಗಿ ನೋಡಿದಾಗ ತನ್ನ ಹಿಂದೆ ತುಂಟತನದಿಂದ ನಗುತ್ತಾ ನಿಂತಿದ್ದ ಅಕ್ಕನ ಮಗನನ್ನು ಕಂಡಳು. ತಲೆ ಎತ್ತಿ ನೋಡಿದಾಗ ಬಾವ ಹಾಗೂ ಮಗುವನ್ನು ಎತ್ತಿಕೊಂಡು ನಿಂತಿರುವ ಅಕ್ಕನನ್ನು ಕಂಡಳು. ಅವಳಿಗೆ ಬಹಳ ಆನಂದವಾಯಿತು. ಅಕ್ಕನ ಮಗನನ್ನು ಎತ್ತಿಕೊಂಡು…”ಬನ್ನಿ…ಅಮ್ಮ ಈಗತಾನೇ ಮಲಗಿದ್ದಾಳೆ”…ಎಂದು ಹೇಳುತ್ತಾ ಅಕ್ಕ-ಬಾವನನ್ನು ಒಳಗೆ ಕರೆದುಕೊಂಡು ನಡೆದಳು. ಅಕ್ಕನ ಕಂಕುಳಲ್ಲಿ ಇದ್ದ ಪುಟ್ಟ ಮಗು ಚಿಕ್ಕಮ್ಮನ ಕಡೆಗೆ ಎತ್ತಿಕೋ ಎನ್ನುವಂತೆ ಎರಡೂ ಕೈಗಳನ್ನು ಚಾಚಿತು. ಅಕ್ಕನ ಮಗನ ಕೆನ್ನೆಯನ್ನು ಮೃದುವಾಗಿ ಸವರುತ್ತಾ… “ಪುಟ್ಟಾ ನೀನು ಇಲ್ಲಿ ಕುಳಿತು ಅಜ್ಜಿಯನ್ನು ಎಬ್ಬಿಸು….ನಾನು ನಿನ್ನ ತಂಗಿಯನ್ನು ಎತ್ತಿಕೊಳ್ಳುತ್ತೇನೆ”… ಎಂದ ಚಿಕ್ಕಮ್ಮನ ಮಾತಿಗೆ… “ಹೂಂ”….ಎಂದ ಆ ಮಗು ಖುಷಿಯಿಂದ ಅಜ್ಜಿಯ ಪಕ್ಕ ಕುಳಿತು…..”ಅಮ್ಮಾಮ್ಮಾ…ಣೀಚೇ…ಞಾಯೀ.. ವನ್ನಿಟ್ಟುಂಡ್”….( ಅಜ್ಜೀ ಎದ್ದೇಳು ನಾನು ಬಂದಿದ್ದೇನೆ) ಎಂದು ತೊದಲು ನುಡಿಯಲು, ಮೊಮ್ಮಗನ ಧ್ವನಿ ಕೇಳಿ ಎಚ್ಚೆತ್ತ ಸುಮತಿ ಎದ್ದು ಕುಳಿತು ಮೊಮ್ಮಗನನ್ನು ಅಪ್ಪಿಕೊಂಡಳು. ಹಿರಿಯ ಮಗಳು, ಪುಟ್ಟ ಮೊಮ್ಮಗಳು ಮತ್ತು ಅಳಿಯ ಎಲ್ಲರನ್ನೂ ಕಂಡು ಸುಮತಿ ಹರ್ಷಿತವಾದಳು. ಅಳಿಯನನ್ನು ಉದ್ದೇಶಿಸಿ ಅಲ್ಲಿಯೇ ಇದ್ದ ಸ್ಟೂಲ್ ನ ಮೇಲೆ ಕುಳಿತುಕೊಳ್ಳುವಂತೆ ಹೇಳಿದಳು.  ಅಳಿಯ ‘ಹ್ಮೂ’ಎಂದು ತಲೆಯಾಡಿಸಿ ಸ್ಟೂಲ್ ಮೇಲೆ ಕುಳಿತುಕೊಂಡ. ಹಿರಿಯಮಗಳು ಅಮ್ಮನ ಪಕ್ಕದಲ್ಲಿಯೇ ಕುಳಿತುಕೊಂಡಳು. ಮೊಮ್ಮಗ ಅಜ್ಜಿಯ ತೊಡೆಯನ್ನು ಏರಿ ಕುಳಿತುಕೊಂಡ….”ಅಜ್ಜಿಗೆ ಹುಷಾರಿಲ್ಲ ಕಂದಾ… ಬೆಡ್ ಮೇಲೆ ಕುಳಿತುಕೋ”…. ಎಂದು ಸುಮತಿಯ ಅಳಿಯ ತನ್ನ ಮಗನಿಗೆ ಹೇಳಿದರೂ ಅವನು ಕೇಳಲಿಲ್ಲ. …”ಉಹೂಂ… ಞಾ…. ಇವೀಡೆಯೇ ಇಚ್ಚಾಂ”… (ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇನೆ) ಎಂದು ಹೇಳುತ್ತಾ ಅಜ್ಜಿಯ ಮುಖವನ್ನೊಮ್ಮೆ ನೋಡಿದ. ಸುಮತಿ ಪ್ರೀತಿಯಿಂದ ಮೊಮ್ಮಗನ ಕೆನ್ನೆಗೆ ಹೂ ಮುತ್ತೊಂದನ್ನು ಕೊಟ್ಟು….”ಕುಳಿತುಕೊಳ್ಳಲಿ ತೊಂದರೆಯಿಲ್ಲ”…. ಎಂದು ಹೇಳುತ್ತಾ ಮೊಮ್ಮಗನ ತಲೆಯನ್ನು ನೇವರಿಸಿದಳು.‌ ಅಳಿಯ ಒಂದು ಕ್ಷಣ ಏನನ್ನೋ ಯೋಚಿಸುತ್ತಾ …”ಅಮ್ಮಾ ಹೇಗಿದ್ದೀರಿ?…ಎಂದು ಕೇಳಿದಾಗ….”ಪರವಾಗಿಲ್ಲಪ್ಪ”… ಎಂದು ಉತ್ತರಿಸಿದಳು ಸುಮತಿ…. “ಡಾಕ್ಟರ್ ಏನು ಹೇಳಿದರು ಅಮ್ಮಾ”…..ಎಂದು ಹಿರಿಯ ಮಗಳು ಸುಮತಿಯನ್ನು ಕೇಳಲು,…”ಸ್ವಲ್ಪ ದಿನ ಇಲ್ಲಿದ್ದು ಔಷಧೋಪಚಾರ ತೆಗೆದುಕೊಂಡರೆ ಸರಿ ಹೋಗುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆ”….ಎಂದು ಹೇಳುತ್ತಾ ಸುಮತಿ ಎರಡನೇ ಮಗಳ ಕಡೆಗೆ ನೋಡಿದಳು. ಅಕ್ಕನ ಮಗಳನ್ನು ಎತ್ತಿಕೊಂಡು ಅವಳನ್ನು ಮುದ್ದು ಮಾಡುತ್ತಿದ್ದ ಎರಡನೇ ಮಗಳ ಮುಖ ಅಮ್ಮನ ಮಾತು ಕೇಳಿ ಮ್ಲಾನವಾಯಿತು. ಇದನ್ನು ಗಮನಿಸಿದ ಹಿರಿಯ ಮಗಳು ತಂಗಿಯ ಕಡೆಗೆ ನೋಡುತ್ತಾ….”ಏನು ಹೇಳಿದರು ಡಾಕ್ಟರ್?…ನೀನೇಕೆ ಹೀಗೆ ಇದ್ದಕ್ಕಿದ್ದ ಹಾಗೆ ಮಂಕಾದೆ”…. ಎಂದು ಕೇಳಲು ಆಮೇಲೆ ಹೇಳುತ್ತೇನೆ ಎಂಬಂತೆ ಸನ್ನೆ ಮಾಡಿದಳು. ಸುಮತಿ ಇದ್ಯಾವುದನ್ನೂ ಗಮನಿಸದೇ ಮೊಮ್ಮಗನ ಬಾಲಭಾಷೆಯನ್ನು ಕೇಳುವುದರಲ್ಲೇ ಮಗ್ನಳಾಗಿದ್ದಳು.  ತನ್ನ ಅಣ್ಣ ಅಜ್ಜಿಯ ತೊಡೆಯ ಮೇಲೆ ಕುಳಿತು ಮುದ್ದು ಮಾಡಿಸಿಕೊಳ್ಳುತ್ತಿರುವುದನ್ನು ಕಂಡ ಅವನ ಪುಟ್ಟ ತಂಗಿ ತಾನೂ ಅಜ್ಜಿಯ ಬಳಿ ಹೋಗುತ್ತೇನೆ ಎನ್ನುವಂತೆ ಚಿಕ್ಕಮ್ಮನ ತೋಳಿಂದ ಕೆಳಗೆ ಇಳಿಯುವ ಪ್ರಯತ್ನ ಮಾಡುತ್ತಿದ್ದಳು. ಅದನ್ನು ಗಮನಿಸಿದ ಸುಮತಿ…. “ಬಾ ನನ್ನ ಮುದ್ದು ಮೊಮ್ಮಗಳೇ…. ಅಜ್ಜಿಯ ತೊಡೆ ಮೇಲೆ ಕುಳಿತುಕೋ”… ಎಂದು ಹೇಳುತ್ತಾ ಮೊಮ್ಮಗಳನ್ನು ಎತ್ತಿಕೊಂಡು ಮಗುವಿನ ಕೆನ್ನೆಗೆ ಮುತ್ತಿಟ್ಟಳು. ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಾ ಸುಮತಿ ತನ್ನ ಅನಾರೋಗ್ಯದ ಆಯಾಸವನ್ನು ಮರೆತಳು. ಅವರಿಬ್ಬರನ್ನು ಮುದ್ದಾಡುತ್ತಾ ಅವಳಿಗೆ ಸಮಯ ಹೋದದ್ದೇ ತಿಳಿಯಲಿಲ್ಲ. ವಾರ್ಡಿನ ಬಾಗಿಲಿನ ಮುಂದೆ ಆಸ್ಪತ್ರೆಯ ಊಟದ ತಳ್ಳುಗಾಡಿ ಬಂದು ನಿಂತಿತು. ಅಡುಗೆಯವ…..” ಎಲ್ಲರೂ ಬನ್ನಿ ಬೇಗ ಊಟ ತೆಗೆದುಕೊಳ್ಳಿ”…. ಎಂದು ಕೂಗಿದ. ಸುಮತಿಯ ಎರಡನೇ ಮಗಳು ಊಟದ ತಟ್ಟೆ ಹಾಗೂ ಒಂದು ಬಟ್ಟಲನ್ನು ಹಿಡಿದು ಸರತಿಯ ಸಾಲಿನಲ್ಲಿ ನಿಂತಳು. ರಾತ್ರಿಯ ಊಟಕ್ಕೆ ಅನ್ನ ಮತ್ತು ಸಾರು ಇತ್ತು. ಮಧ್ಯಾಹ್ನದ ಊಟಕ್ಕೆ ಅನ್ನ ಸಾರು ಒಂದು ಮೊಟ್ಟೆ ಎರಡು ಬಾಳೆಹಣ್ಣು ಆಸ್ಪತ್ರೆಯಿಂದ ಕೊಡುತ್ತಿದ್ದರು. ಅಡುಗೆಯವರು ಊಟ ಬಡಿಸಿದಾಗ ಅದನ್ನು ತೆಗೆದುಕೊಂಡು ಬಂದು ಅಲ್ಲಿದ್ದ ಸಣ್ಣ ಕಪಾಟಿನ ಮೇಲೆ ಮತ್ತೊಂದು ತಟ್ಟೆಯಿಂದ ಮುಚ್ಚಿಟ್ಟಳು….”ಬನ್ನಿ ಮಕ್ಕಳೇ…. ಅಜ್ಜಿ ಊಟ ಮಾಡಲಿ…. ನಾವು ಈಗ ಮನೆಗೆ ಹೋಗೋಣ…. ನಾಳೆ ಮತ್ತೆ ಅಜ್ಜಿಯನ್ನು ನೋಡಲು ಅಮ್ಮನ ಜೊತೆ ನೀವಿಬ್ಬರೂ ಇಲ್ಲಿಗೆ ಬರಬಹುದು”… ಎಂದು ಹೇಳಿ, ಹೆಂಡತಿಯ ಕಡೆಗೆ ತಿರುಗಿ ಹೋಗೋಣವೇ ಎಂಬಂತೆ ನೋಡಿದ. ಪತಿಯ ನೋಟದ ಅರ್ಥವನ್ನು ಅರಿತ ಸುಮತಿಯ ಹಿರಿಯ ಮಗಳು ‘ಸರಿ’ ಎನ್ನುವ ತಲೆ ಆಡಿಸಿ ಮಗಳನ್ನು ಸುಮತಿಯ ಮಡಿಲಿನಿಂದ ಎತ್ತಿಕೊಂಡಳು.  ಆ ಪುಟ್ಟ ಮಗು ತಾನು ಬರುವುದಿಲ್ಲವೆಂದು ಹಠ ಮಾಡಿತು. ಮೊಮ್ಮಗನೂ ಅಜ್ಜಿಯ ಕುತ್ತಿಗೆಯನ್ನು ಬಿಗಿಯಾಗಿ ಅಪ್ಪಿಕೊಂಡು ಞಾಯಿ…ವನ್ನಿಲ್ಲ….ಅಮ್ಮಾಮ್ಮೆಡೆ ಕೂಡೆ ಇಚ್ಚಾಂ….(ನಾನು ಬರುವುದಿಲ್ಲ ಅಜ್ಜಿಯ ಜೊತೆ ಇಲ್ಲೇ ಇರುತ್ತೇನೆ) ಎಂದು ಹೇಳಿದ. ಅವನನ್ನು ಪುಸಲಾಯಿಸಿ ಕರೆದುಕೊಂಡು ಹೋಗಲು ಅಳಿಯ ಹರಸಾಹಸ ಪಡಬೇಕಾಯಿತು…._ನಾಳೆ ಮತ್ತೆ ಬರೋಣ”… ಎಂದು ಹೇಳಿದಾಗ ಒಲ್ಲದ ಮನಸ್ಸಿನಿಂದ ವಾರ್ಡಿನ ಬಾಗಿಲಿನಿಂದ ಆಚೆ ಮರೆಯಾಗುವವರೆಗೂ ಅಜ್ಜಿಯನ್ನೇ ನೋಡುತ್ತಾ ಅಪ್ಪ ಅಮ್ಮನ ಜೊತೆಗೆ ಹೋದ. ಮೊಮ್ಮಕ್ಕಳನ್ನು ಕಳುಹಿಸಲು ಸುಮತಿಗೆ ಮನಸ್ಸಿಲ್ಲದಿದ್ದರೂ ಮತ್ತೆ ಬರುತ್ತಾರೆ ಅಲ್ಲವೇ ಎನ್ನುವ ಕಾರಣದಿಂದ ಕಳುಹಿಸಿಕೊಟ್ಟಳು.‌….”ಅಮ್ಮ ಈಗ ಊಟ ಮಾಡು…. ನರ್ಸ್ ಬಂದು ಔಷಧಿ ಕೊಡುವ ಸಮಯವಾಯಿತು…. ತಡ ಮಾಡಬೇಡ”… ಎಂದ ಮಗಳ ಮಾತಿಗೆ ತಲೆಯಾಡಿಸಿ, ಊಟದ ತಟ್ಟೆಯನ್ನು ಅವಳ ಕೈಯಿಂದ ಪಡೆದಳು. ತಾಯಿ ಊಟ ಮುಗಿಸಿದ ನಂತರ ಅಲ್ಲಿಯೇ ತಟ್ಟೆಯಲ್ಲಿ ಕೈ ತೊಳೆಯಲು ನೀರನ್ನು ಕೊಟ್ಟಳು. ಆಸ್ಪತ್ರೆಯ ಕೈ ತೊಳೆಯುವ ಜಾಗ ಸ್ವಲ್ಪ ದೂರ ಇದ್ದಿದ್ದರಿಂದ ದಿನವೂ ಹೀಗೆ ತಟ್ಟೆಯಲ್ಲಿ ಕೈ ತೊಳೆಯಲು ಹೇಳುತ್ತಿದ್ದಳು. ನಂತರ ತಾನು ಹೋಗಿ ಶುಚಿಯಾಗಿ ತಟ್ಟೆಯನ್ನು ತೊಳೆದುಕೊಂಡು ಬಂದು ಇಡುತ್ತಿದ್ದಳು. ನರ್ಸ್ ಬಂದು ರಾತ್ರಿಯ ಔಷಧಿಯನ್ನು ಕೊಟ್ಟರು. ಔಷಧಿಯನ್ನು ಕುಡಿದು ಸುಮತಿ ದಿಂಬನ್ನು ಬೆನ್ನಿನ ಹಿಂದೆ ಇಟ್ಟು ಒರಗಿ ಕುಳಿತುಕೊಂಡಳು. ತಾಯಿಯ ಹಾಸಿಗೆ ಪಕ್ಕದಲ್ಲಿಯೇ ಸ್ಟೂಲನ್ನು ಎಳೆದುಕೊಂಡು ಮಗಳು ಕುಳಿತುಕೊಂಡು ತಾಯಿಯ ಹಸ್ತವನ್ನು ತನ್ನ ಎರಡೂ ಕರಗಳಲ್ಲಿ ಹಿಡಿದುಕೊಂಡ ತಾಯಿಯ ಮುಖವನ್ನೇ ಎವೆಯಿಕ್ಕದೇ ದಿಟ್ಟಿಸಿ ನೋಡಿದಳು.

Read Post »

ಕಾವ್ಯಯಾನ

ಡಾ.ಲತಾ ಎ. ಆರ್. ಬಾಳೆಹೊನ್ನೂರು ಕವಿತೆ “ಸವಿಗಾನ”

ಕಾವ್ಯಸಂಗಾತಿ ಡಾ.ಲತಾ ಎ. ಆರ್. ಬಾಳೆಹೊನ್ನೂರು “ಸವಿಗಾನ” ಹೃದಯದಲಿ ವೀಣೆಯ ತಂತಿ ಮೀಟಿದೆಸುಖ ಸ್ವಪ್ನದ ಸವಿಗಾನ ನುಡಿಸಿದೆಮಧುರ ಮಮತೆಯ ಭಾವ ಬಿಂಬಿಸಿದೆಒಡಲಿನೊಳಗೆ  ಬಿಸಿ ಅನುಭವ ಮೊಳಗಿಸಿದೆ ನೀ ನೀಡಿದ ಪ್ರೀತಿ ಕಾಣಿಕೆ ಮರೆಯಲಾರೆಎಂದೆಂದೂ ಜೊತೆಯ ಪಾತ್ರ ತೊರೆಯಲಾರೆಭರವಸೆಯ ಜೊತೆಗಾರ ಬಾಳಲಿ ನೀನಾಸರೆನೆನಪಿಡುವೆ ಸದಾಕಾಲ ಮರೆಯದೆ ಮನಸಾರೆ ನಂಬಿಕೆಯ ನಡೆಯಲಿ ಸದಾ ನನ್ನೊಂದಿಗಿರುಬದುಕಲಿ ಬದುಕುವ ಭರವಸೆ ನೀನಾಗಿರುಯಾವ ಜನ್ಮದ ಋಣವೋ ತಿಳಿದಿರುಕೈ ಹಿಡಿದು ಬಾಳಲಿ ಮುನ್ನಡೆಸುತ್ತಿರು ಮುಗಿಯುವ ಪಯಣದಲಿ ಕಾವ್ಯವಾಗಿರುನಾ ಬರೆವ ಕವಿತೆಯಲಿ ಹಸಿರಾಗಿರುನೆಮ್ಮದಿಯ ಬದುಕಿಗೆ ನಿರಾಳ ಉಸಿರಾಗಿರುನಾ ಕಂಡ ಸುಂದರ ಕನಸುಗಳಲಿ ನನಸಾಗಿರು. ಡಾ.ಲತಾ ಎ. ಆರ್. ಬಾಳೆಹೊನ್ನೂರು

ಡಾ.ಲತಾ ಎ. ಆರ್. ಬಾಳೆಹೊನ್ನೂರು ಕವಿತೆ “ಸವಿಗಾನ” Read Post »

ಕಾವ್ಯಯಾನ

“ಭೂದೇವಿಯಮದುವೆ” ಶ್ರೀದೇವಿ ಗುಮ್ಮಗೋಳ

ಕಾವ್ಯ ಸಂಗಾತಿ ಶ್ರೀದೇವಿ ಗುಮ್ಮಗೋಳ “ಭೂದೇವಿಯಮದುವೆ” (ಜಾನಪದ ಶೈಲಿಯ‌ಲ್ಲಿ‌ ಬರೆದ ಗೀತೆ)ಮಳೆರಾಯ ಮದುಮಗ ಬಂದಾನಭೂದೇವಿಗ ಮದುವ್ಯಾಗಕ ನಿಂದಾನ| ಮೋಡಗಳ ದಿಬ್ಬಣ ಹೊತ್ತ ಬಂದಾನಸುರಗಿನೀರ ಬರಬರ ಸುರಸ್ಯಾನ| ಭೂದೇವಿಗೆ ಮನಸೋತು ಕರಿಗ್ಯಾನಮುತ್ತು ಹನಿಗಳ ಹೂಹಾರ ಹಿಡಿದಾನ| ರೈತ ಬೀಗನ್ನ ಹಂದರಕ ಕರೆದಾನಜೊಡೆತ್ತಿನ್ಯಾಗ ಸಾರೂಟ ಹೊರಟಾಣ| ಜೋಳಗ್ಯಾಗ ಮುತ್ತಿನ ಜೋಳ ಹಿಡದಾನಬಸವಣ್ಣ ನೇಗಿಲ ಹೊತ್ತಾನ| ಬಸವಣ್ಣ ಬಿತ್ತುತ ನೇಯ್ಗಿ ನೇಯ್ದಾನಭೂದೇವಿಯ ಹಸಿರು ಸೀರೆಯ ಉಟ್ಟಾಳ| ಹಸಿರು ಉಸುರಾಗಿ ಫಲವಾಗಿ ನಿಂತಾಳದವಸದ ಉಡಿ ತಂದೇನಿ ಅಂದಾಳ| ಹಿಗ್ಗಿ ಹಿರಿದು ಊರ ಮಂದಿನನಮ್ಮಣ್ಣ ಸುಗ್ಗಿ ಊಟಕ್ಕ ಕರದಾನ| ಉಂಡ ಮಂದಿ ಬಾಯಿತುಂಬ ಅಣ್ಣನ ಹರಸ್ಯಾರಭೂತಾಯವ್ವಗ ಕೈ ಎತ್ತಿ ಮುಗದಾರ|  ಶ್ರೀದೇವಿ ಗುಮ್ಮಗೋಳ

“ಭೂದೇವಿಯಮದುವೆ” ಶ್ರೀದೇವಿ ಗುಮ್ಮಗೋಳ Read Post »

ಇತರೆ, ಜೀವನ

“ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ”ಲೇಖನ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ

ಜೀವನ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ “ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ” ಸಾಂಸಾರಿಕ ತಾಪತ್ರಯಗಳ ಬಿರುಗಾಳಿಗೆ ಸಿಲುಕಿದಾಗ, ಒಂಟಿತನ ಕಾಡುವುದು ಸಹಜ. ಅಂತಹ ಕಠಿಣ ಸಮಯದಲ್ಲಿ ಆತ್ಮೀಯ ಸ್ನೇಹಿತರು ಚಾಚುವ ಸಹಾಯದ ಹಸ್ತ ಮತ್ತು ಅವರು ತೋರುವ ಆತ್ಮೀಯತೆ ಒಬ್ಬ ವ್ಯಕ್ತಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಆದರೆ, ಒಬ್ಬ ಜವಾಬ್ದಾರಿಯುತ ವ್ಯಕ್ತಿ ಆ ಆತ್ಮೀಯತೆಯನ್ನು ಅಹಂಕಾರವಿಲ್ಲದೆ, ಹಾಗೆಯೇ ಅತಿಯಾದ ದೈನ್ಯತೆಯೂ ಇಲ್ಲದೆ ಹೇಗೆ ಗೌರವದಿಂದ ಸ್ವೀಕರಿಸಬೇಕು ಎಂಬುದನ್ನು ಕೆಲವೊಂದಿಷ್ಟು ವಾಕ್ಯಗಳಿಂದ ಅರ್ಥೈಸಿಕೊಳ್ಳಬಹುದು:,,” ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು” …ಕಷ್ಟಗಳು ಬಂದಾಗ “ನನಗೇ ಯಾಕೆ ಹೀಗಾಯಿತು?” ಎಂದು ಅಳುತ್ತಾ ಕೂರುವುದು ಜವಾಬ್ದಾರಿಯುತ ವ್ಯಕ್ತಿಯ ಲಕ್ಷಣವಲ್ಲ ಎಂದು ಹಿರಿಯರು ಹೇಳುತ್ತಾರೆ ಹಗಲು-ರಾತ್ರಿಗಳು ಹೇಗೆ ಚಕ್ರಾಕಾರವಾಗಿ ಬರುತ್ತವೆಯೋ, ಕಷ್ಟ-ಸುಖಗಳೂ ಹಾಗೆಯೇ ಬರುತ್ತವೆ ಎಂಬುದನ್ನು ಅರಿಯಬೇಕು. ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ || ಈ ಶ್ಲೋಕವು ….ಸುಖದ ನಂತರ ದುಃಖ, ದುಃಖದ ನಂತರ ಸುಖ ಬರುವುದು ಪ್ರಕೃತಿಯ ನಿಯಮ. ಗಾಡಿಯ ಚಕ್ರವು ತಿರುಗುವಂತೆ ಸುಖ ಮತ್ತು ದುಃಖಗಳು ಜೀವನದಲ್ಲಿ ಸದಾ ಬದಲಾಗುತ್ತಾ ಇರುತ್ತವೆ. ಎಂಬುದನ್ನು ತಿಳಿಸುತ್ತದೆ.ಆದ್ದರಿಂದ ಕಷ್ಟ ಬಂದಾಗ ಇದು ಶಾಶ್ವತವಲ್ಲ, ಇದೂ ಕೂಡ ಕಳೆದುಹೋಗುತ್ತದೆ ಎಂಬ ದೃಢ ನಂಬಿಕೆ ಇರಬೇಕು. ಈ ಅರಿವು ವ್ಯಕ್ತಿಗೆ ತಾಪತ್ರಯಗಳ ನಡುವೆಯೂ ಶಾಂತವಾಗಿರಲು ನೆರವಾಗುತ್ತದೆ.*. “ಫಲದ ನಿರೀಕ್ಷೆಯಿಲ್ಲದೆ ಕರ್ತವ್ಯ ಮಾಡಬೇಕು “ಸಾಂಸಾರಿಕ ಸಮಸ್ಯೆಗಳು ಎದುರಾದಾಗ ಅನೇಕರು “ನಾನು ಇಷ್ಟೆಲ್ಲಾ ಕಷ್ಟಪಟ್ಟರೂ ಏನೂ ಪ್ರಯೋಜನವಾಗುತ್ತಿಲ್ಲ” ಎಂದು ನಿರಾಶರಾಗುತ್ತಾರೆ. ಆದರೆ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನೀಡಿದ ಸಂದೇಶವೇ ಇದಕ್ಕೆ ಪರಮ ಔಷಧ.ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |ಮಾ ಕರ್ಮಫಲಹೇತುರ್ಭೂಮಾ ತೇ ಸಂಗೋಸ್ತ್ವಕರ್ಮಣಿ ||ಇದು ತಿಳಿಸುವ ವಿಷಯ ಏನಂದರೆ.. ನಿನಗೆ ಕರ್ತವ್ಯವನ್ನು ಮಾಡಲು ಮಾತ್ರ ಅಧಿಕಾರವಿದೆ, ಅದರ ಫಲದ ಮೇಲಲ್ಲ. ಕರ್ಮಫಲಕ್ಕೆ ನೀನು ಕಾರಣನಾಗಬೇಡ, ಹಾಗೆಯೇ ಕರ್ಮವನ್ನು ಮಾಡದೆ ಕೂರಬೇಡ ಎಂದು.ಜವಾಬ್ದಾರಿಯುತ ವ್ಯಕ್ತಿಯಾದವನು ಪರಿಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ ತನ್ನ ಪಾಲಿನ ಕರ್ತವ್ಯಗಳನ್ನು (ಕುಟುಂಬವನ್ನು ಸಾಕುವುದು, ದುಡಿಯುವುದು) ಪ್ರಾಮಾಣಿಕವಾಗಿ ಮಾಡುತ್ತಾ ಹೋಗಬೇಕು. ಚಿಂತೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಕರ್ಮ ಮಾಡುವುದರಿಂದ ಮಾತ್ರ ದಾರಿ ಸಿಗುತ್ತದೆ.*. “ಧೈರ್ಯವೇ ಪರಮ ಆಸ್ತಿ”ಎಲ್ಲವೂ ಕೈಬಿಟ್ಟು ಹೋದಾಗಲೂ ಒಬ್ಬ ವ್ಯಕ್ತಿಯನ್ನು ಕೈಹಿಡಿದು ನಡೆಸುವ ಏಕೈಕ ಶಕ್ತಿ ಎಂದರೆ ಆತನ ಒಳಗಿನ ಧೈರ್ಯ ಮತ್ತು ಆತ್ಮವಿಶ್ವಾಸ. ಆಪತ್ತು ಬಂದಾಗ ಧೈರ್ಯ ತಳೆಯುವುದು, ಐಶ್ವರ್ಯ ಬಂದಾಗ ಕ್ಷಮಾ ಗುಣವನ್ನು ಹೊಂದುವುದು, ಸಾಂಸಾರಿಕ ಆಪತ್ತುಗಳು ಬಂದಾಗ ಧೈರ್ಯವಾಗಿ ನಿಲ್ಲುವುದೇ ಒಬ್ಬ ನಿಜವಾದ ಗೃಹಸ್ಥನ ಲಕ್ಷಣ. ಧೈರ್ಯಗೆಟ್ಟರೆ ಬುದ್ಧಿ ಕೆಲಸ ಮಾಡುವುದಿಲ್ಲ. ನಿಶ್ಚಲ ಮನಸ್ಸಿನಿಂದ ಯೋಚಿಸಿದರೆ ಕಠಿಣ ಸಮಸ್ಯೆಗೆ ಸುಲಭ ಪರಿಹಾರ ಸಿಗುತ್ತದೆ.*. ಸಂಕಷ್ಟದ ಸಮಯದಲ್ಲಿ ತಾಳ್ಮೆಯ ಮಹತ್ವಕಷ್ಟದ ಸಮಯದಲ್ಲಿ ಕೋಪ, ಉದ್ವೇಗ ಅಥವಾ ಆತುರದ ನಿರ್ಧಾರಗಳು ಸಾಂಸಾರಿಕ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. ಅಲ್ಲಿ ತಾಳ್ಮೆ ಅತ್ಯಂತ ಅಗತ್ಯ.ಧೃತಿಃ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹಃ |ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ||ಅಂದರೆ …ಧೈರ್ಯ (ತಾಳ್ಮೆ), ಕ್ಷಮೆ, ಮನಸ್ಸಿನ ನಿಗ್ರಹ, ಕದಿಯದಿರುವುದು, ಬಾಹ್ಯ-ಅಭ್ಯಂತರದ ಶುದ್ಧಿ, ಇಂದ್ರಿಯ ನಿಗ್ರಹ, ಬುದ್ಧಿವಂತಿಕೆ, ಜ್ಞಾನ, ಸತ್ಯ ಮತ್ತು ಕೋಪ ಮಾಡದಿರುವುದು – ಇವು ಧರ್ಮದ ಹತ್ತು ಲಕ್ಷಣಗಳು.ಇವುಗಳನ್ನು ಅರಿತು,ಸಾಂಸಾರಿಕ ತಾಪತ್ರಯಗಳಿದ್ದಾಗ ಮನೆಯವರ ಮೇಲೆ ಕೋಪಗೊಳ್ಳದೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ಇಂದ್ರಿಯ ನಿಗ್ರಹ ಮತ್ತು ಬುದ್ಧಿವಂತಿಕೆಯನ್ನು  ಬಳಸಬೇಕು. ಕೋಪವಿಲ್ಲದ ಜಾಗದಲ್ಲಿ ನೆಮ್ಮದಿ ಇರುತ್ತದೆ. ನಿಜವಾದ ಸ್ನೇಹಿತ(ತೆಯ)ನ ಪ್ರೀತಿ ಮತ್ತು ಆತ್ಮೀಯತೆಯ ಸ್ವೀಕಾರ”ಕಷ್ಟಕಾಲದಲ್ಲಿ ನಮ್ಮ ಜೊತೆ ನಿಲ್ಲುವವನೇ ನಿಜವಾದ ಮಿತ್ರ. ಇಂತಹ ಸಂದರ್ಭದಲ್ಲಿ ಸ್ನೇಹಿತರು ತೋರುವ ಪ್ರೀತಿಯನ್ನು “ನನ್ನ ಪರಿಸ್ಥಿತಿ ಹೀಗಾಗಿಬಿಟ್ಟಿತಲ್ಲ” ಎಂದು ಕೀಳರಿಮೆಯಿಂದ ನೋಡದೆ, ಅದನ್ನೊಂದು ದಿವ್ಯ ರಕ್ಷೆಯಾಗಿ ಸ್ವೀಕರಿಸಬೇಕು.ಪಾಪಾನ್ನಿವಾರಯತಿ ಯೋಜಯತೇ ಹಿತಾಯ |ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ ||ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ |ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತ: ||ತಪ್ಪು ದಾರಿಗೆ ಹೋಗದಂತೆ ತಡೆಯುವವನು, ಹಿತವನ್ನು ಬಯಸುವವನು, ರಹಸ್ಯಗಳನ್ನು ಕಾಪಾಡುವವನು, ಗೆಳೆಯನ ಒಳ್ಳೆಯ ಗುಣಗಳನ್ನು ಸಮಾಜದ ಮುಂದೆ ಕೊಂಡಾಡುವವನು, ಆಪತ್ತು ಬಂದಾಗ ಕೈಬಿಡದೆ ಸಮಯಕ್ಕೆ ಸರಿಯಾಗಿ ನೆರವಾಗುವವನು – ಇವನೇ ಸನ್ಮಿತ್ರ (ಆತ್ಮೀಯ ಸ್ನೇಹಿತ/ತೆ) ಎಂದು ಸಜ್ಜನರು ಹೇಳುತ್ತಾರೆ.ಸ್ವೀಕರಿಸುವ ಮಾರ್ಗ: ಸಾಂಸಾರಿಕ ಕಷ್ಟಗಳಲ್ಲಿದ್ದಾಗ ಸನ್ಮಿತ್ರನು ತೋರುವ ಆತ್ಮೀಯತೆ ಮತ್ತು ಕೊಡುವ ಸಲಹೆಗಳನ್ನು ಗೌರವದಿಂದ ಸ್ವೀಕರಿಸಬೇಕು. “ನನ್ನ ಕಷ್ಟವನ್ನು ಹಂಚಿಕೊಳ್ಳಲು ಒಬ್ಬನಿದ್ದಾನೆ” ಎಂಬ ಧೈರ್ಯವೇ ಅರ್ಧದಷ್ಟು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಸ್ನೇಹಿತರ ಮುಂದೆ ಅಹಂಕಾರವನ್ನು ಬದಿಗಿಟ್ಟು ಮನಸ್ಸು ಬಿಚ್ಚಿ ಮಾತನಾಡುವುದು ಬುದ್ಧಿವಂತಿಕೆ.  “ಕೃತಜ್ಞತಾ ಭಾವ ಮತ್ತು ಸಂಬಂಧದ ಪಾವಿತ್ರ್ಯತೆ”ಸ್ನೇಹಿತರು ನೀಡುವ ಆರ್ಥಿಕ ಅಥವಾ ಮಾನಸಿಕ ಬೆಂಬಲವನ್ನು ಕೇವಲ ಸಹಾಯ ಎಂದು ತಿಳಿಯದೆ, ಅವರ ಪ್ರೀತಿಯ ಸಂಕೇತವೆಂದು ಭಾವಿಸಿ ಕೃತಜ್ಞತೆಯಿಂದ ಸ್ವೀಕರಿಸಬೇಕು.ಪ್ರಿಯಂಪ್ರೌಢಂ ಚ ವಚನಂ ಸ್ನೇಹಸೌಹಾರ್ದಲಕ್ಷಣಮ್ |ಸಂಗ್ರಹಶ್ಚ ಯಥಾಶಕ್ತ್ಯಾ ಕೃತಜ್ಞತ್ವಮಲೋಲುಪತಾ || ಮಧುರವಾದ ಮತ್ತು ಪ್ರೌಢವಾದ ಮಾತುಗಳು ಸ್ನೇಹ ಮತ್ತು ಸೌಹಾರ್ದತೆಯ ಲಕ್ಷಣಗಳಾಗಿವೆ. ಕಷ್ಟದಲ್ಲಿದ್ದಾಗ ಶಕ್ತ್ಯಾನುಸಾರ ಸಹಾಯ ಮಾಡುವುದು, ಅದನ್ನು ಕೃತಜ್ಞತೆಯಿಂದ ಸ್ವೀಕರಿಸುವುದು ಮತ್ತು ದುರಾಶೆ ಇಲ್ಲದಿರುವುದು ಉದಾತ್ತ ಸಂಬಂಧದ ಸಂಕೇತ. ಸ್ನೇಹಿತರು ತೋರುವ ಆತ್ಮೀಯತೆಯನ್ನು ಸ್ವೀಕರಿಸುವಾಗ ಮನಸ್ಸಿನಲ್ಲಿ ಸದಾ ಕೃತಜ್ಞತೆ (Gratitude) ಇರಬೇಕು. ಇಂದು ಅವರು ನಮ್ಮನ್ನು ಸಂಕಷ್ಟದಿಂದ ಪಾರು ಮಾಡಲು ಬಂದಿದ್ದಾರೆ ಎಂದರೆ, ಅದು ಅವರ ದೊಡ್ಡ ಗುಣ. ಆ ಸ್ನೇಹದ ಹಸ್ತವನ್ನು ನಮ್ರತೆಯಿಂದ ಹಿಡಿದು, “ಮುಂದೊಂದು ದಿನ ನಾನು ಚೇತರಿಸಿಕೊಂಡಾಗ ಈ ಸ್ನೇಹಕ್ಕೆ ಖಂಡಿತಾ ದ್ರೋಹ ಬಗೆಯುವುದಿಲ್ಲ, ನಾನೂ ಅವರ ಕಷ್ಟಕ್ಕೆ ನಿಲ್ಲುತ್ತೇನೆ” ಎಂಬ ಸಂಕಲ್ಪದೊಂದಿಗೆ ಮುನ್ನಡೆಯಬೇಕು.ಸಂಕ್ಷಿಪ್ತವಾಗಿ ಹೇಳುವುದಾದರೆ: ಸಂಸಾರದ ಕಷ್ಟಗಳು ಸುಡುತ್ತಿರುವಾಗ, ಆತ್ಮೀಯ ಸ್ನೇಹಿತರ ಸೌಹಾರ್ದತೆ ಎಂಬುದು ತಂಪಾದ ನೆರಳಿನಂತೆ. ಜವಾಬ್ದಾರಿಯುತ ವ್ಯಕ್ತಿಯಾದವನು ಆ ನೆರಳನ್ನು ಸಂಕೋಚವಿಲ್ಲದೆ ಸ್ವೀಕರಿಸಿ, ಮಾನಸಿಕ ಶಕ್ತಿಯನ್ನು ಮರಳಿ ಪಡೆದು, ಮತ್ತೆ ಸಂಸಾರದ ಹಾದಿಯಲ್ಲಿ ಧೈರ್ಯವಾಗಿ ಹೆಜ್ಜೆ ಇಡಬೇಕು.ಒಟ್ಟಿನಲ್ಲಿ ಹೇಳಬೇಕೆಂದರೆ…ಸಾಂಸಾರಿಕ ಜೀವನ ಎಂಬುದು ಒಂದು ಸಮುದ್ರವಿದ್ದಂತೆ. ಅದರಲ್ಲಿ ಅಲೆಗಳು ಏಳುವುದು ಸಹಜ. ಜವಾಬ್ದಾರಿಯುತ ವ್ಯಕ್ತಿಯಾದವನು ಅಲೆಗಳನ್ನು ನೋಡಿ ಹೆದರಿ ದೋಣಿಯನ್ನು ಮುಳುಗಿಸುವುದಿಲ್ಲ; ಬದಲಿಗೆ ದೋಣಿಯ ಚುಕ್ಕಾಣಿಯನ್ನು ಗಟ್ಟಿಯಾಗಿ ಹಿಡಿದು ತೀರದ ಕಡೆಗೆ ಮುನ್ನಡೆಸುತ್ತಾನೆ.ಕಷ್ಟಗಳು ನಮ್ಮನ್ನು ಕುಗ್ಗಿಸಲು ಬರುವುದಿಲ್ಲ, ಬದಲಿಗೆ ನಮ್ಮೊಳಗಿನ ನೈಜ ಶಕ್ತಿಯನ್ನು ನಮಗೆ ನೆನಪಿಸಲು ಬರುತ್ತವೆ. ಧರ್ಮ, ಧೈರ್ಯ, ಕರ್ತವ್ಯ ಪ್ರಜ್ಞೆ ಮತ್ತು ಪರಿಶ್ರಮ ಎಂಬ ನಾಲ್ಕು ಚಕ್ರಗಳ ಸಹಾಯದಿಂದ ಸಾಂಸಾರಿಕ ತಾಪತ್ರಯಗಳ ಕಠಿಣ ಹಾದಿಯನ್ನೂ ಸುಲಭವಾಗಿ ದಾಟಬಹುದು ಎಂಬುದೇ ಜ್ಞಾನಿಗಳ ಸಂದೇಶ. ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ

“ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ”ಲೇಖನ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ Read Post »

ನಿಮ್ಮೊಂದಿಗೆ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ( ಲಕ್ಷ್ಮಣ ಶರೆಗಾರ ಸರ್ ಅವರ ಮಿಸ್ರಾ ತೆಗೆದುಕೊಂಡು ಬರೆದದ್ದು.ಒಮ್ಮೆ ಹಿಂತಿರುಗಿ ನೋಡಿದ್ದರೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತಿತ್ತೇನೋ..) ಒಮ್ಮೆ ಹಿಂದಿರುಗಿ ನೋಡಿದ್ದರೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತಿತ್ತೇನೋಮರಣಿಸಿದ ನಿನ್ನ ಆ ಸ್ಮೃತಿಗೆ ಮರುಜನ್ಮ ಸಿಗುತ್ತಿತ್ತೇನೋ ಒಂದೇ ಕ್ಷಣ ನಿಂತು, ನನ್ನ ಬಿಂಬವ  ಕಣ್ತುಂಬಿಕೊಳ್ಳಬೇಕಿತ್ತು ಆರ್ದ್ರಗೊಂಡ ಮನವು ಮತ್ತೆ ಒಲವಿನೆಡೆಗೆ ವಾಲುತ್ತಿತ್ತೇನೋ ಚಂದ್ರ ತಾರೆಗಳೂ ಸೋತಿದ್ದವು ನಮ್ಮಿಬ್ಬರ  ಬಾಂಧವ್ಯಕೆನೀ ತಲೆ ಎತ್ತಿದ್ದರೆ ಆ ಬಾನು ಬಾಗಿ ಸಾಕ್ಷಿ ಹೇಳುತ್ತಿತ್ತೇನೋ ಬರಬರನೇ ಹಾಗೆಯೇ ನಡೆದು ಹೋದೆಯಲ್ಲ ನಲ್ಲನೇನಿಂತಿದ್ದರೆ ನನ್ನೂರಿನ ತಂಗಾಳಿ ನಿನ್ನೆದೆಗೆ ಸೋಕುತ್ತಿತ್ತೇನೋ ಕೆಲ ಮೈಲುಗಳಾದರೂ ವಾಣಿಯ ಕೈ ಹಿಡಿದು ಪಯಣಿಸಿದ್ದೆನಿನ್ನದೇ ಬೆರಳ ನಿಟ್ಟಿಸಿದ್ದರೆ ,ನಿನಗದರ ತವಕ ಕಾಣುತ್ತಿತ್ತೇನೋ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಎ.ಹೇಮಗಂಗಾ ಅವರ ಗಜಲ್

ಕಾವ್ಯ ಸಂಗಾತಿ ಎ.ಹೇಮಗಂಗಾ ಅವರ ಗಜಲ್ ಬೇಕೆನಿಸಿದ ಕ್ಷಣಗಳಲಿ ನೀ ತೊರೆದು ಹೋದೆವಿರಹದ ಕಾವ್ಯಕೆ ಮುನ್ನುಡಿ ಬರೆದು ಹೋದೆ ನಡೆವ ಹಾದಿಗೆ ಸುರಿದ ಪ್ರೀತಿ ಸುಮಗಳೆಷ್ಟೋಕೊಂಚವೂ ದಯೆಯಿರದೇ ತುಳಿದು ಹೋದೆ ನಿನ್ನ ಕೈಯಲಿ ಕೀಲುಗೊಂಬೆ ನಾನಾಗಿ ಕುಣಿದೆಕಟು ಮಾತಿನ ಕೂರಂಬುಗಳಲಿ ಇರಿದು ಹೋದೆ ನಂಬಿ ಬಂದ ಈ ಜೀವಕೆ ಅದೆಷ್ಟು ಆಘಾತಗಳು !ತೋರಿದ ಅಸೀಮ ಒಲವನು ಜರೆದು ಹೋದೆ ನನಸಾಗದ ಕನಸುಗಳ ನೀ ಕಾಣದಿರು *ಹೇಮ*ನಿನಗಾಗಿ ಮಿಡಿದ ಹೃದಯವ ಮುರಿದು ಹೋದೆ ಎ. ಹೇಮಗಂಗಾ

ಎ.ಹೇಮಗಂಗಾ ಅವರ ಗಜಲ್ Read Post »

ಇತರೆ

“ಕಾಣೆಯಾಗಿದೆ….” ಲೇಖನ, ಕೆ.ಎಂ. ಕಾವ್ಯ ಪ್ರಸಾದ್

ವಿಶೇಷ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ಕಾಣೆಯಾಗಿದೆ….” ಕಾಣೆಯಾಗುವುದು ಮನುಷ್ಯರಲ್ಲ; ಉಳಿದ ಬದುಕಿನ ಅರ್ಥವೇ!*  ಬದುಕಿನ ಕನ್ನಡಿಯಾದ ಒಂದು ವಿಶೇಷ ಲೇಖನ* ಕೆಲವು ಪದಗಳು ಕೇವಲ ಅಕ್ಷರಗಳಾಗಿರುವುದಿಲ್ಲ. ಅವು ಬದುಕಿನ ಅನೇಕ ಅಧ್ಯಾಯಗಳನ್ನು ತೆರೆದುಬಿಡುವ ಕೀಲಿಕೈಗಳಾಗಿರುತ್ತವೆ. “ಕಾಣೆಯಾಗಿದ” ಎಂಬ ಒಂದೇ ಪದದಲ್ಲೂ ಅಸಂಖ್ಯಾತ ನೆನಪುಗಳು, ಸಾವಿರಾರು ಕಣ್ಣೀರುಗಳು, ಹೇಳಲಾಗದ ಭಾವನೆಗಳು, ಮರಳಿ ಬಾರದ ಕ್ಷಣಗಳು ಮತ್ತು ಕಾಲದ ನಿರ್ದಯ ಹೆಜ್ಜೆಗಳ ಸದ್ದು ಅಡಗಿದೆ. ಒಬ್ಬ ವ್ಯಕ್ತಿ ಕಾಣೆಯಾಗುತ್ತಾನೆ ಎಂದರೆ ಅವನ ದೇಹ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಬದುಕಿನಲ್ಲಿ ಇನ್ನೂ ಭಯಾನಕವಾದ ಒಂದು ಕಾಣೆಯಾಗುವಿಕೆ ಇದೆ. ಅದು ಕಣ್ಣಿಗೆ ಕಾಣುವುದಿಲ್ಲ; ಆದರೆ ಪ್ರತಿಯೊಂದು ಮನೆಯ ಗೋಡೆಯೊಳಗೂ, ಪ್ರತಿಯೊಂದು ಹೃದಯದ ಮೌನದಲ್ಲೂ, ಪ್ರತಿಯೊಂದು ಸಂಬಂಧದ ಬಿರುಕುಗಳಲ್ಲೂ ಜೀವಂತವಾಗಿದೆ. ಅದು ಮಾನವೀಯತೆಯ ಕಾಣೆಯಾಗುವಿಕೆ. ಇಂದಿನ ಮನುಷ್ಯ ಚಂದ್ರನನ್ನು ತಲುಪಿದ್ದಾನೆ. ಸಮುದ್ರದ ಆಳವನ್ನು ಅಳೆಯುತ್ತಿದ್ದಾನೆ. ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿಸಿದ್ದಾನೆ. ಆದರೆ ತನ್ನ ಮನೆಯಲ್ಲೇ ಮೌನವಾಗಿ ಅಳುತ್ತಿರುವ ಹೃದಯವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಇದು ಅಭಿವೃದ್ಧಿಯಲ್ಲ; ಇದು ಆತ್ಮೀಯತೆಯ ಕುಸಿತ. ಒಂದು ಕಾಲದಲ್ಲಿ ಮನೆ ಎಂದರೆ ನಾಲ್ಕು ಗೋಡೆಗಳಲ್ಲ; ನಾಲ್ಕು ಹೃದಯಗಳ ಸಂಗಮವಾಗಿತ್ತು. ಸಂಜೆ ಮನೆಗೆ ಬಂದಾಗ ಮಕ್ಕಳ ನಗು, ತಾಯಿಯ ಕರೆಯುವ ಧ್ವನಿ, ತಂದೆಯ ಅನುಭವದ ಮಾತು, ಅಜ್ಜ-ಅಜ್ಜಿಯ ಕಥೆಗಳು – ಇವೆಲ್ಲ ಸೇರಿ ಒಂದು ಕುಟುಂಬವನ್ನು ಕಟ್ಟುತ್ತಿದ್ದವು. ಇಂದು ಅದೇ ಮನೆಯಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಒಂದು ಮೊಬೈಲ್ ಇದೆ; ಆದರೆ ಒಬ್ಬರ ಮನಸ್ಸಿನ ಬಾಗಿಲು ಮತ್ತೊಬ್ಬರಿಗೆ ಮುಚ್ಚಿದೆ. ಮಾತುಗಳು ಕಡಿಮೆಯಾಗಿವೆ. ಸಂದೇಶಗಳು ಹೆಚ್ಚಾಗಿವೆ. ಭೇಟಿಗಳು ಕಡಿಮೆಯಾಗಿವೆ. ವಿಡಿಯೋ ಕರೆಗಳು ಹೆಚ್ಚಾಗಿವೆ. ಹೃದಯದ ಸ್ಪರ್ಶ ಕಡಿಮೆಯಾಗಿದೆ. ಪರದೆಯ ಬೆಳಕು ಹೆಚ್ಚಾಗಿದೆ. ಈ ಬೆಳಕಿನ ನಡುವೆ ಸಂಬಂಧಗಳ ಉಷ್ಣತೆ ನಿಧಾನವಾಗಿ ತಣ್ಣಗಾಗುತ್ತಿದೆ. “ನಂತರ ಮಾತಾಡೋಣ” ಎಂಬ ಒಂದು ವಾಕ್ಯ, ಎಷ್ಟೋ ಸಂಬಂಧಗಳನ್ನು ಅರ್ಧದಲ್ಲೇ ನಿಲ್ಲಿಸಿದೆ. “ಸಮಯ ಇಲ್ಲ” ಎಂಬ ಎರಡು ಪದಗಳು ಎಷ್ಟೋ ತಂದೆ-ತಾಯಿಯ ನಿರೀಕ್ಷೆಯನ್ನು ಮುರಿದಿವೆ. “ನಾನೇನು ತಪ್ಪು ಮಾಡಿಲ್ಲ” ಎಂಬ ಅಹಂಕಾರ ಎಷ್ಟೋ ದಾಂಪತ್ಯಗಳನ್ನು ಒಡೆದಿದೆ. “ಮೊದಲು ಅವನೇ ಬರಲಿ” ಎಂಬ ಹಠ ಎಷ್ಟೋ ಸ್ನೇಹಗಳನ್ನು ಸಮಾಧಿ ಮಾಡಿದೆ. ಕಾಣೆಯಾಗುವುದು ಎಂದರೆ ಯಾವಾಗಲೂ ದೇಹವಲ್ಲ. ಕೆಲವರು ನಮ್ಮ ಎದುರೇ ಇರುತ್ತಾರೆ. ಅವರೊಂದಿಗೆ ಒಂದೇ ಮನೆಯಲ್ಲಿರುತ್ತೇವೆ. ಒಂದೇ ಊಟ ಮಾಡುತ್ತೇವೆ. ಒಂದೇ ಪ್ರಯಾಣ ಮಾಡುತ್ತೇವೆ. ಆದರೂ ಅವರು ನಮ್ಮ ಜೀವನದಿಂದ ಬಹಳ ಹಿಂದೆಯೇ ಕಾಣೆಯಾಗಿರುತ್ತಾರೆ. ಏಕೆಂದರೆ ಹೃದಯಗಳ ನಡುವಿನ ಸೇತುವೆ ಕುಸಿದು ಹೋಗಿರುತ್ತದೆ. ಮಾನವ ಜೀವನದಲ್ಲಿ ಸಂಬಂಧಗಳು ಗಿಡಗಳಂತಿವೆ. ಅವುಗಳಿಗೆ ಪ್ರತಿದಿನ ಪ್ರೀತಿಯ ನೀರು ಬೇಕು. ನಂಬಿಕೆಯ ಗೊಬ್ಬರ ಬೇಕು. ಕ್ಷಮೆಯ ನೆರಳು ಬೇಕು. ಸಮಯದ ಬೆಳಕು ಬೇಕು. ಇವುಗಳಲ್ಲಿ ಒಂದಾದರೂ ಇಲ್ಲದಿದ್ದರೆ ಸಂಬಂಧ ಒಣಗಲು ಆರಂಭಿಸುತ್ತದೆ. ಒಣಗಿದ ಗಿಡಕ್ಕೆ ನೀರು ಹಾಕಿದರೂ ಅದು ಮೊದಲಿನ ಹಸಿರನ್ನು ಮರಳಿ ಪಡೆಯುವುದಿಲ್ಲ. ಹಾಗೆಯೇ ಒಡೆದ ನಂಬಿಕೆಯನ್ನು ಮತ್ತೆ ಕಟ್ಟುವುದು ಅತ್ಯಂತ ಕಷ್ಟ. ಪ್ರೀತಿಯ ಭಾಷೆ ಯಾವತ್ತೂ ದೊಡ್ಡ ಮಾತುಗಳಲ್ಲಿ ಇರುವುದಿಲ್ಲ. ಕೆಲವೊಮ್ಮೆ ಮೌನದಲ್ಲೇ ಅದು ಹೆಚ್ಚು ಮಾತನಾಡುತ್ತದೆ. ಅಳುವವನ ಪಕ್ಕದಲ್ಲಿ ಮಾತಿಲ್ಲದೆ ಕುಳಿತುಕೊಳ್ಳುವುದು ಪ್ರೀತಿ. ಕೋಪದಲ್ಲಿದ್ದರೂ ಕೈ ಬಿಡದೆ ನಿಲ್ಲುವುದು ಪ್ರೀತಿ. “ನಾನು ಇದ್ದೇನೆ” ಎಂದು ಹೇಳದೆ ಅದನ್ನು ಅನುಭವಿಸುವಂತೆ ಮಾಡುವುದು ಪ್ರೀತಿ. ಆದರೆ ಇಂದು ಪ್ರೀತಿಗೂ ಬೆಲೆ ಕಟ್ಟಲಾಗುತ್ತಿದೆ. ಸಂಬಂಧಗಳಿಗೂ ಲಾಭ-ನಷ್ಟದ ಲೆಕ್ಕ ಹಾಕಲಾಗುತ್ತಿದೆ. ಮನುಷ್ಯನ ಮೌಲ್ಯವನ್ನು ಅವನ ಹೃದಯದಿಂದಲ್ಲ, ಅವನ ಹುದ್ದೆಯಿಂದ ಅಳೆಯಲಾಗುತ್ತಿದೆ. ಹಣ ಹೆಚ್ಚಾದಂತೆ ಆತ್ಮೀಯತೆ ಕಡಿಮೆಯಾಗುತ್ತಿದೆ. ಸೌಲಭ್ಯಗಳು ಹೆಚ್ಚಾದಂತೆ ಸಂತೋಷ ಕಡಿಮೆಯಾಗುತ್ತಿದೆ. ಒಂದು ಮಗು ಹುಟ್ಟಿದಾಗ ಅದು ಯಾವುದೇ ಭಾಷೆಯನ್ನು ತಿಳಿಯುವುದಿಲ್ಲ. ಆದರೆ ತಾಯಿಯ ಸ್ಪರ್ಶವನ್ನು ಅರ್ಥಮಾಡಿಕೊಳ್ಳುತ್ತದೆ. ಒಂದು ವೃದ್ಧನು ಮರಣದ ಹಾಸಿಗೆಯಲ್ಲಿದ್ದಾಗ ಅವನಿಗೆ ಹಣದ ಲೆಕ್ಕ ನೆನಪಾಗುವುದಿಲ್ಲ; ತನ್ನವರ ಮುಖಗಳು ಮಾತ್ರ ನೆನಪಾಗುತ್ತವೆ. ಬದುಕಿನ ಆರಂಭವೂ ಸಂಬಂಧ, ಅಂತ್ಯವೂ ಸಂಬಂಧ. ಮಧ್ಯದಲ್ಲಿ ಮಾತ್ರ ನಾವು ಸಂಬಂಧಗಳಿಗಿಂತ ಸಂಪತ್ತನ್ನು ದೊಡ್ಡದು ಎಂದು ಭ್ರಮಿಸುತ್ತೇವೆ. ಪ್ರಕೃತಿಯೂ ಇದೇ ಪಾಠವನ್ನು ಕಲಿಸುತ್ತದೆ. ಮರ ತನ್ನ ಹಣ್ಣುಗಳನ್ನು ತನ್ನಿಗೋಸ್ಕರ ಉಳಿಸಿಕೊಳ್ಳುವುದಿಲ್ಲ. ನದಿ ತನ್ನ ನೀರನ್ನು ತನ್ನಿಗೋಸ್ಕರ ಹರಿಸುವುದಿಲ್ಲ. ಸೂರ್ಯ ತನ್ನ ಬೆಳಕಿಗೆ ಬೆಲೆ ಕೇಳುವುದಿಲ್ಲ. ಪ್ರಕೃತಿಯ ಪ್ರತಿಯೊಂದು ಅಂಶವೂ ಕೊಡುವುದನ್ನೇ ಕಲಿಸುತ್ತದೆ. ಮನುಷ್ಯ ಮಾತ್ರ ಪಡೆಯುವುದನ್ನು ಕಲಿತು, ಕೊಡುವುದನ್ನು ಮರೆತಿದ್ದಾನೆ. ಇಂದು ಸಮಾಜದಲ್ಲಿ ಮತ್ತೊಂದು ಮೌನದ ದುರಂತ ನಡೆಯುತ್ತಿದೆ. ಬದುಕಿರುವವರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಅವರ ದೇಹ ನಮ್ಮೊಂದಿಗೆ ಇದೆ; ಆದರೆ ಅವರ ಮನಸ್ಸು ಏಕಾಂತದಲ್ಲಿ ಮುಳುಗಿದೆ. ಎಷ್ಟೋ ತಂದೆ-ತಾಯಿಗಳು ಮಕ್ಕಳಿಗಾಗಿ ಕಾಯುತ್ತಿದ್ದಾರೆ. ಎಷ್ಟೋ ಮಕ್ಕಳು ಪೋಷಕರ ಒಂದು ಮುದ್ದಿನ ಮಾತಿಗಾಗಿ ಕಾಯುತ್ತಿದ್ದಾರೆ. ಎಷ್ಟೋ ಹೆಂಡತಿಯರು ಗಂಡನ ಒಂದು ಕ್ಷಣದ ಗಮನಕ್ಕಾಗಿ ಕಾಯುತ್ತಿದ್ದಾರೆ. ಎಷ್ಟೋ ಗಂಡಂದಿರು ಹೆಂಡತಿಯ ಒಂದು ನಂಬಿಕೆಯ ಮಾತಿಗಾಗಿ ಕಾಯುತ್ತಿದ್ದಾರೆ. ಈ ಕಾಯುವಿಕೆಗಳೇ ಒಂದು ದಿನ ನೆನಪುಗಳಾಗಿ ಉಳಿಯುತ್ತವೆ. ನಂತರ ಕಣ್ಣೀರು ಕೇಳುತ್ತದೆ – “ಇಷ್ಟೊಂದು ಹತ್ತಿರ ಇದ್ದರೂ ನಾವು ಹೇಗೆ ದೂರವಾದೆವು?” ಜೀವನದ ಅತ್ಯಂತ ದೊಡ್ಡ ದುರಂತ ಮರಣವಲ್ಲ. *ಬದುಕಿದ್ದಾಗಲೇ ಒಬ್ಬರ ಹೃದಯದಿಂದ ಮತ್ತೊಬ್ಬರು ಕಾಣೆಯಾಗುವುದು. ಅದೇ ಈ ಕಾಲದ ನಿಜವಾದ ದುರಂತ.* ಕೆಲವೊಮ್ಮೆ ಜೀವನ ನಮ್ಮ ಕೈಯಲ್ಲಿ ಒಂದು ಹೂವನ್ನು ಇಡುತ್ತದೆ. ಅದರ ಪರಿಮಳವನ್ನು ಅನುಭವಿಸುವ ಮುನ್ನವೇ ಕಾಲ ಅದನ್ನು ನಮ್ಮಿಂದ ಕಸಿದುಕೊಳ್ಳುತ್ತದೆ. ಆಗ ನಾವು ಅರಿಯುವುದು, ಕಳೆದುಹೋದ ಹೂವಿನ ಬೆಲೆಯಲ್ಲ; ಅದನ್ನು ಪ್ರೀತಿಸಲು ನಾವು ತೆಗೆದುಕೊಂಡ ವಿಳಂಬದ ಬೆಲೆ. ಮನುಷ್ಯನ ಜೀವನದಲ್ಲಿ “ನಂತರ” ಎಂಬ ಪದಕ್ಕಿಂತ ಅಪಾಯಕಾರಿ ಮತ್ತೊಂದು ಪದವಿಲ್ಲ. “ನಂತರ ಭೇಟಿಯಾಗೋಣ”, “ನಂತರ ಮಾತನಾಡೋಣ”, “ನಂತರ ಕ್ಷಮೆ ಕೇಳೋಣ”, “ನಂತರ ಸಮಯ ಕೊಡೋಣ” ಎಂದು ಮುಂದೂಡುತ್ತಾ ಬದುಕುವಾಗ, ಒಂದು ದಿನ ಜೀವನವೇ ನಮ್ಮನ್ನು ಕೇಳುತ್ತದೆ – “ಈಗ ಸಮಯ ಎಲ್ಲಿದೆ?” ಕಾಲ ಎಂದಿಗೂ ಹಿಂದಿರುಗುವುದಿಲ್ಲ. ಅದು ಮುಂದೆ ಸಾಗುತ್ತದೆ. ಆದರೆ ಅದು ಬಿಟ್ಟುಹೋದ ನೆನಪುಗಳು ಮಾತ್ರ ನಮ್ಮ ಮನಸ್ಸಿನ ಬಾಗಿಲನ್ನು ಮತ್ತೆ ಮತ್ತೆ ತಟ್ಟುತ್ತಲೇ ಇರುತ್ತವೆ. ಕೆಲವೊಮ್ಮೆ ಒಂದು ಹಳೆಯ ಫೋಟೋ, ಒಂದು ಪತ್ರ, ಒಂದು ಹಾಡು, ಒಂದು ಪರಿಮಳ, ಒಂದು ಖಾಲಿ ಕುರ್ಚಿ – ಇವು ಸಾಕು, ವರ್ಷಗಳ ಹಿಂದೆ ಮರೆತುಹೋದ ಭಾವನೆಗಳು ಮತ್ತೆ ಜೀವಂತವಾಗಲು. ನೆನಪುಗಳು ಮನುಷ್ಯನ ದೊಡ್ಡ ಸಂಪತ್ತೂ ಹೌದು, ದೊಡ್ಡ ಶಿಕ್ಷೆಯೂ ಹೌದು. ಸುಂದರ ನೆನಪುಗಳು ಬದುಕಲು ಶಕ್ತಿ ಕೊಡುತ್ತವೆ. ನಿರ್ಲಕ್ಷಿಸಿದ ಕ್ಷಣಗಳ ನೆನಪುಗಳು ಜೀವಮಾನವಿಡೀ ಕಾಡುತ್ತವೆ. ಅದಕ್ಕಾಗಿಯೇ ಹಿರಿಯರು ಹೇಳುತ್ತಿದ್ದರು – “ಮಾತು ಆಡಲು ಮುನ್ನ ಯೋಚಿಸು; ಆದರೆ ಪ್ರೀತಿಯನ್ನು ಹೇಳಲು ತಡ ಮಾಡಬೇಡ.” ಇಂದಿನ ಸಮಾಜದಲ್ಲಿ ಕ್ಷಮೆ ಕೇಳುವುದು ದುರ್ಬಲತೆ ಎಂಬ ತಪ್ಪು ಕಲ್ಪನೆ ಬೆಳೆದಿದೆ. ಆದರೆ ನಿಜವಾದ ಶಕ್ತಿ ಅಹಂಕಾರದಲ್ಲಲ್ಲ, ಕ್ಷಮೆಯಲ್ಲಿದೆ. “ನನ್ನಿಂದ ತಪ್ಪಾಯಿತು” ಎಂದು ಹೇಳುವ ಧೈರ್ಯ ಎಲ್ಲರಲ್ಲೂ ಇರುವುದಿಲ್ಲ. ಅದೇ ರೀತಿ “ನಿನ್ನನ್ನು ಕ್ಷಮಿಸಿದ್ದೇನೆ” ಎಂದು ಮನಸ್ಸು ತೆರೆಯುವ ಹೃದಯವೂ ಅಪರೂಪ. ಒಂದು ಕುಟುಂಬವನ್ನು ನಾಶಮಾಡುವುದು ದೊಡ್ಡ ಜಗಳವಲ್ಲ. ಪ್ರತಿದಿನದ ಸಣ್ಣ ಸಣ್ಣ ನಿರ್ಲಕ್ಷ್ಯಗಳು. ಕೇಳದ ಪ್ರಶ್ನೆಗಳು. ಹೇಳದ ಉತ್ತರಗಳು. ಗಮನಿಸದ ಕಣ್ಣೀರು. ಮೆಚ್ಚದ ಪ್ರಯತ್ನಗಳು. ಇವೆಲ್ಲವೂ ಸೇರಿ ಒಂದು ದಿನ ಪ್ರೀತಿಯ ಗೋಡೆಯನ್ನು ಕುಸಿಯಿಸುತ್ತವೆ. ತಾಯಿಯನ್ನು ನೋಡಿ. ಅವಳು ತನ್ನ ಮಗುವಿನ ಮೊದಲ ಅಳುವಿನಿಂದ ಕೊನೆಯ ನಗುವಿನವರೆಗೂ ಬದುಕುತ್ತಾಳೆ. ಮಗುವಿಗೆ ಜ್ವರ ಬಂದರೆ ಅವಳಿಗೆ ನಿದ್ರೆ ಬರುವುದಿಲ್ಲ. ಮಗು ನಗಿದರೆ ಅವಳ ದಣಿವು ಮಾಯವಾಗುತ್ತದೆ. ಆದರೆ ದೊಡ್ಡವನಾದ ಮಗು ತನ್ನ ಜೀವನದಲ್ಲಿ ಬ್ಯುಸಿಯಾಗುತ್ತದೆ. ಒಂದು ದಿನ ತಾಯಿಯ ಕಣ್ಣಲ್ಲಿ ಕಾಣುವ ಕಾಯುವಿಕೆಯನ್ನು ಅವನು ಗಮನಿಸುವುದೇ ಇಲ್ಲ. ಅದು ತಾಯಿಯ ನೋವಲ್ಲ; ಅದು ಸಮಾಜದ ಸೋಲು. ತಂದೆಯ ಬದುಕು ಇನ್ನೂ ವಿಚಿತ್ರ. ಅವನು ತನ್ನ ಕನಸುಗಳನ್ನು ಬಿಟ್ಟು ಮಕ್ಕಳ ಕನಸುಗಳನ್ನು ಕಟ್ಟುತ್ತಾನೆ. ತನ್ನ ಆಸೆಗಳನ್ನು ಮರೆತು ಕುಟುಂಬದ ಅಗತ್ಯಗಳನ್ನು ಪೂರೈಸುತ್ತಾನೆ. ತನ್ನ ನೋವನ್ನು ಯಾರಿಗೂ ಹೇಳದೆ ಮೌನವಾಗಿ ಬದುಕುತ್ತಾನೆ. ಆದರೆ ವೃದ್ಧಾಪ್ಯದಲ್ಲಿ ಅವನಿಗೆ ಬೇಕಾಗಿರುವುದು ದುಬಾರಿ ಉಡುಗೊರೆಗಳಲ್ಲ; ಮಕ್ಕಳೊಂದಿಗೆ ಕೆಲವು ನಿಮಿಷಗಳ ಮಾತುಕತೆ. ದಾಂಪತ್ಯವೂ ಹಾಗೆಯೇ. ಮದುವೆ ಎರಡು ಕೈಗಳನ್ನು ಮಾತ್ರ ಸೇರಿಸುವುದಿಲ್ಲ; ಎರಡು ಮನಸ್ಸುಗಳು, ಎರಡು ಕುಟುಂಬಗಳು, ಎರಡು ಕನಸುಗಳು, ಎರಡು ಬದುಕುಗಳನ್ನು ಜೋಡಿಸುತ್ತದೆ. ಆ ಬಂಧ ಉಳಿಯಬೇಕಾದರೆ ಪ್ರೀತಿಗಿಂತ ಹೆಚ್ಚಾಗಿ ಪರಸ್ಪರ ಗೌರವ ಬೇಕು. ಕೇಳುವ ಮನಸ್ಸು ಬೇಕು. ತಪ್ಪನ್ನು ಒಪ್ಪಿಕೊಳ್ಳುವ ವಿನಯ ಬೇಕು. ಇಂದು ನಾವು ಯಶಸ್ಸಿನ ವ್ಯಾಖ್ಯಾನವನ್ನೇ ಬದಲಾಯಿಸಿದ್ದೇವೆ. ದೊಡ್ಡ ಸಂಬಳ, ದೊಡ್ಡ ಮನೆ, ದೊಡ್ಡ ಕಾರು – ಇವುಗಳನ್ನು ಯಶಸ್ಸು ಎಂದು ಕರೆಯುತ್ತಿದ್ದೇವೆ. ಆದರೆ ರಾತ್ರಿ ಮಲಗುವಾಗ ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ, ಮನೆಯೊಳಗೆ ನಗುವಿಲ್ಲದಿದ್ದರೆ, ಮಕ್ಕಳೊಂದಿಗೆ ಮಾತನಾಡಲು ಸಮಯವಿಲ್ಲದಿದ್ದರೆ, ಆ ಯಶಸ್ಸು ಯಾರಿಗಾಗಿ? ಪ್ರಕೃತಿಯ ಕಡೆಗೆ ನೋಡಿದರೆ ಬದುಕಿನ ಉತ್ತರಗಳು ಸಿಗುತ್ತವೆ. ಎಲೆ ಮರದಿಂದ ಉದುರಿದಾಗ ಮರ ಅದನ್ನು ಹಿಡಿದುಕೊಳ್ಳುವುದಿಲ್ಲ. ನದಿ ಹರಿಯುವಾಗ ಹಿಂದಿರುಗಿ ನೋಡುವುದಿಲ್ಲ. ಸೂರ್ಯ ಮುಳುಗಿದರೂ ನಾಳೆ ಮತ್ತೆ ಉದಯಿಸುತ್ತಾನೆ. ಪ್ರಕೃತಿ ನಮಗೆ ಕಲಿಸುವುದು ಒಂದೇ – ಬದಲಾವಣೆ ಅನಿವಾರ್ಯ. ಆದರೆ ಆ ಬದಲಾವಣೆಯ ನಡುವೆ ಮಾನವೀಯತೆಯನ್ನು ಕಳೆದುಕೊಳ್ಳಬಾರದು. ನಾವು ಬದುಕಿನಲ್ಲಿ ಅನೇಕ ವಸ್ತುಗಳನ್ನು ಸಂಗ್ರಹಿಸುತ್ತೇವೆ. ಆದರೆ ಕೊನೆಯ ಕ್ಷಣದಲ್ಲಿ ನಮ್ಮ ಜೊತೆ ಬರುವುದು ಯಾವುದೂ ಅಲ್ಲ. ನಮ್ಮ ಹಿಂದೆ ಉಳಿಯುವುದು ನಮ್ಮ ಮನೆಗಳಲ್ಲ, ನಮ್ಮ ಆಸ್ತಿ ಅಲ್ಲ, ನಮ್ಮ ಹುದ್ದೆಯೂ ಅಲ್ಲ. ನಮ್ಮ ಬಗ್ಗೆ ಜನರು ಹೇಳುವ ಎರಡು ಒಳ್ಳೆಯ ಮಾತುಗಳು ಮಾತ್ರ. ಆದ್ದರಿಂದ ಬದುಕನ್ನು ದೊಡ್ಡದಾಗಿಸುವುದಕ್ಕಿಂತ, ಹೃದಯವನ್ನು ದೊಡ್ಡದಾಗಿಸಬೇಕು. ಸಂಬಂಧಗಳನ್ನು ಉಳಿಸಿಕೊಳ್ಳಬೇಕು. ಪ್ರೀತಿಯನ್ನು ವ್ಯಕ್ತಪಡಿಸಬೇಕು. ಕ್ಷಮೆಯನ್ನು ಕಲಿಯಬೇಕು. ಸಮಯವನ್ನು ಕೊಡಬೇಕು. ಏಕೆಂದರೆ ಇವೆಲ್ಲವೂ ಒಮ್ಮೆ ಕಾಣೆಯಾಗಿದರೆ, ಮತ್ತೆ ಹುಡುಕಿದರೂ ಸಿಗುವುದಿಲ್ಲ. ಕಾಲ ಬದಲಾಗುತ್ತದೆ. ಋತುಗಳು ಬದಲಾಗುತ್ತವೆ. ಮನುಷ್ಯನ ವಯಸ್ಸು ಬದಲಾಗುತ್ತದೆ. ಆದರೆ ಬದಲಾಗಬಾರದ ಒಂದು ಸಂಗತಿ ಇದೆ—ಅದು ಮಾನವೀಯತೆ. ದುರದೃಷ್ಟವಶಾತ್, ಇಂದಿನ ಸಮಾಜದಲ್ಲಿ ಮೊದಲು ಕಾಣೆಯಾಗುತ್ತಿರುವುದೇ ಅದಾಗಿದೆ. ತಂತ್ರಜ್ಞಾನ ನಮ್ಮ ಬದುಕನ್ನು ಸುಲಭಗೊಳಿಸಿದೆ. ಆದರೆ ಮನಸ್ಸುಗಳನ್ನು ಹತ್ತಿರ ತಂದಿದೆಯೇ? ಸಾವಿರಾರು ಸ್ನೇಹಿತರ ಪಟ್ಟಿಯಿರುವ ಒಬ್ಬ ವ್ಯಕ್ತಿ, ತನ್ನ ನೋವನ್ನು ಹಂಚಿಕೊಳ್ಳಲು ಒಬ್ಬ ನಿಜವಾದ ಸ್ನೇಹಿತನಿಗಾಗಿ ಹುಡುಕುತ್ತಿರುವುದು ಇಂದಿನ ಕಹಿ ಸತ್ಯ. ಪರದೆಯ ಮೇಲಿನ ನಗುವಿನ ಚಿಹ್ನೆಗಳು ಹೆಚ್ಚಾಗಿವೆ; ಆದರೆ ಮುಖಾಮುಖಿಯಾಗಿ ನಗುವ ಮುಖಗಳು ಕಡಿಮೆಯಾಗಿವೆ. ಇಂದಿನ ಮಕ್ಕಳು ಆಟದ ಮೈದಾನಕ್ಕಿಂತ ಮೊಬೈಲ್ ಪರದೆಯನ್ನು ಹೆಚ್ಚು ನೋಡುತ್ತಿದ್ದಾರೆ. ಮರದ ನೆರಳಿನಲ್ಲಿ ಕಥೆ ಕೇಳುತ್ತಿದ್ದ ಬಾಲ್ಯ ಈಗ ಕೃತಕ ಬೆಳಕಿನೊಳಗೆ ಸೆರೆಯಾಗಿದೆ. ಪಕ್ಷಿಗಳ ಕಲರವ ಕೇಳುತ್ತಿದ್ದ ಬೆಳಗ್ಗೆ ಈಗ ಅಧಿಸೂಚನೆಗಳ ಶಬ್ದದಲ್ಲಿ ಆರಂಭವಾಗುತ್ತಿದೆ. ಈ ಬದಲಾವಣೆ ಕೇವಲ ಜೀವನಶೈಲಿಯಲ್ಲ; ಅದು ಮನಸ್ಸಿನ ಸಂಸ್ಕೃತಿಯ ಬದಲಾವಣೆ. ಯುವಜನತೆ ಕನಸುಗಳನ್ನು ಕಾಣುವುದು ತಪ್ಪಲ್ಲ. ಸಾಧನೆ ಮಾಡುವುದು ತಪ್ಪಲ್ಲ. ಆದರೆ ಸಾಧನೆಯ ಓಟದಲ್ಲಿ ಸಂಬಂಧಗಳನ್ನು ಕಳೆದುಕೊಳ್ಳುವುದು ಮಾತ್ರ ದೊಡ್ಡ ನಷ್ಟ. ಯಶಸ್ಸಿನ ಶಿಖರದಲ್ಲಿ ನಿಂತರೂ, ಕೆಳಗೆ ನಮ್ಮವರೇ ಇಲ್ಲದಿದ್ದರೆ ಆ ಶಿಖರದ ಎತ್ತರಕ್ಕೂ ಅರ್ಥವಿರುವುದಿಲ್ಲ. ಏಕಾಂತ ಎಂಬುದು ಜನರಿಲ್ಲದ ಸ್ಥಳವಲ್ಲ. ನಮ್ಮ ಮಾತನ್ನು ಅರ್ಥಮಾಡಿಕೊಳ್ಳುವ ಮನಸ್ಸು ಇಲ್ಲದ ಸ್ಥಳವೇ ನಿಜವಾದ ಏಕಾಂತ. ಅನೇಕರು ಜನಸಂದಣಿಯ ಮಧ್ಯೆಯೇ ಒಂಟಿಯಾಗಿದ್ದಾರೆ. ನಗುವ ಮುಖದ ಹಿಂದೆ ಅಳುವ ಹೃದಯವನ್ನು

“ಕಾಣೆಯಾಗಿದೆ….” ಲೇಖನ, ಕೆ.ಎಂ. ಕಾವ್ಯ ಪ್ರಸಾದ್ Read Post »

ಇತರೆ

“ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ.” ಗೊರೂರು ಅನಂತರಾಜು

ವಿಶೇಷ ಸಂಗಾತಿ ಗೊರೂರು ಅನಂತರಾಜು “ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ.”  ಡಾ. ರಾಮಸ್ವಾಮಿ ಅಯ್ಯಂಗಾರ್ ಅವರ ೧೨೨ನೇ ಜನ್ಮದಿನದ ಪ್ರಯುಕ್ತ ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ವತಿಯಿಂದ ಹಾಸನದ ಟೈಮ್ಸ್ ಪಿಯು ಕಾಲೇಜು, ಸತ್ಯಮಂಗಲ ಇಲ್ಲಿ ಮದ್ಯಾಹ್ನ ೨ ಗಂಟೆಗೆ ಡಾ.ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಈ ಸಂದರ್ಭ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರÀ ಪುತ್ರಿ ಸಧ್ಯ ಕೆನಡದ ವಾಸಿ ಗೊರೂರು ವಸಂತಿಮೂರ್ತಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಈ ಸಂದರ್ಭ ಡಾ. ಗೊರೂರರ ಬದುಕು ಬರಹ ಗಾಂಧೀಜಿ ಪ್ರಭಾವ ಗ್ರಾಮನೋಟದ ಒಂದು ಕಿರು ಅವಲೋಕನ ಈ ಲೇಖನ. ಹಾಸನ ಜಿಲ್ಲೆಯ ಹೇಮಾವತಿ ನದಿ ತೀರದ ಗೊರೂರು ನಮ್ಮೂರು. ಇದು ನಾಡಿನ ಇತರ ಎಷ್ಟೋ ಊರುಗಳಂತೆ ಒಂದು ಸಾಮಾನ್ಯ ಊರು. ಆದರೂ ನಮ್ಮೂರಿಗೆ ದೊರೆತಿರುವ ಪ್ರಸಿದ್ಧಿಗೆ ಕಾರಣರಾದವರಲ್ಲಿ ಡಾ. ಗೊರೂರರು ಪ್ರಮುಖರು. ಗೊರೂರರಿಗೆ ಹುಟ್ಟುತ್ತಾ ಒಂದು ವ್ಯಕ್ತಿತ್ವ ಇದ್ದರೆ ಬೆಳೆಯುತ್ತಾ ಆ ವ್ಯಕ್ತಿತ್ವ ಮತ್ತೊಂದು ಆಯಾಮ ಪಡೆದುಕೊಳ್ಳುತ್ತದೆ. ಅದು ಅವರ ಗಾಂಧಿ ಜೀವನ ಚಿಂತನೆ. ಡಾ. ಗೊರೂರರ ಜೀವಸತ್ವ ಇರುವುದು ಹಳ್ಳಿ ಮತ್ತು ಗಾಂಧಿ ಚಿಂತನೆಯ ರಚನಾತ್ಮಕ ಸಂಯೋಗದಿAದ. ಅವರು ಶಾಲಾ ಕಾಲೇಜಿನ ಶಿಕ್ಷಣವಿಲ್ಲದೆ ಜೀವನದಲ್ಲಿ ಕಲಿತ್ತಿದ್ದೆ ಹೆಚ್ಚು. ದೇಶಸೇವೆಗೆ ಸಂಬAಧಿಸಿದ ಅನೇಕ ಕೆಲಸ ಮಾಡುತ್ತಾ ಅನುಭವ ಗಳಿಸಿ ಪುಸ್ತಕ ಬರೆಯುತ್ತಾ ಕೀರ್ತಿವಂತರಾದರು. ಒಬ್ಬ ವ್ಯಕ್ತಿಯಿಂದ ಒಂದು ಗೊರೂರು ಧನ್ಯತೆ ಪಡೆದಿದೆ.ತಾ. ೪-೭-೨೦೦೪ರಂದು ಜನಿಸಿದ ಜಿ.ಕೆ.ರಾಮಸ್ವಾಮಿ ಅವರ ೧ ರಿಂದ ೫ ಕನ್ನಡ ಲೋಯರ್ ಸೆಕಂಡರಿವರೆಗಿನ ವಿದ್ಯಾಭ್ಯಾಸ ಗೊರೂರಿನಲ್ಲಿ ನಡೆಯಿತು. ಆ ಕಾಲದಲ್ಲಿ ಚಿಕ್ಕ ಹಳ್ಳಿಯಾಗಿದ್ದ ಗೊರೂರಿನಲ್ಲಿ ಇದ್ದಿದ್ದು ಇಷ್ಟೇ ತರಗತಿ. ೫ನೇ ಫಾರಂ ಓದುತ್ತಿರುವಾಗಲೇ ರಾಮಸ್ವಾಮಿಯವರು ಮಹಾತ್ಮ ಗಾಂಧೀಜಿಯವರ ಹೆಸರನ್ನು ಕೇಳಿದ್ದರು. ತಮಗೆ ಗಾಂಧೀಜಿಯ ಬಗ್ಗೆ ಅಧಿಕೃತ ವಿಷಯ ಗೊತ್ತಾದ ಬಗ್ಗೆ ಒಂದು ಕಡೆ ಹೀಗೆ ಬರೆಯುತ್ತಾರೆ.ಗಾಂಧೀಜಿ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿ ಮರ‍್ನಾಲ್ಕು ವರ್ಷ ಕಳೆದಿದ್ದರು. ಮೊದಲು ಗಾಂಧೀಜಿಯ ಹೆಸರು ನನ್ನ ಕಣ್ಣಿಗೆ ಬಿದ್ದುದು ಅವರೊಬ್ಬ ರಾಜಕೀಯ ಪವಾಡ ಪುರುಷರೆಂಬುದಾಗಿಯೇ. ಅಲ್ಲಿಯವರೆಗೆ ನಾನು ಹೆಚ್ಚಾಗಿ ಕೇಳಿದ್ದುದು ಬಾಲಗಂಗಾಧರ ತಿಲಕರ ಹೆಸರನ್ನು ಮಾತ್ರ. ಅಂದಿನ ದಿನಗಳಲ್ಲಿ ಬ್ರಿಟಿಷ್ ಆಡಳಿತದ ದೌರ್ಜನ್ಯ ಕುರಿತಂತೆ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿದ್ದವು. ರೌಲತ್ ಆಕ್ಟ್, ಜಲಿನ್‌ವಾಲ ಹತ್ಯಾಕಾಂಡ ಇವು ಭಾರತೀಯರನ್ನು ರೊಚ್ಚಿಗೆಬ್ಬಿಸಿದ್ದವು. ೧೯೨೯ ಆಗಸ್ಟ್ ೭ ರಂದು ಲೋಕಮಾನ್ಯ ಟಳಕರು ನಿಧನರಾದರು. ನಾನು ಕ್ಲಾಸ್‌ನ್ನು ಬಿಟ್ಟು ಇತರ ವಿದ್ಯಾರ್ಥಿಗಳೊಂದಿಗೆ ನಗರದಲ್ಲಿ ಮೆರವಣಿಗೆ ಹೊರಟೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಿದೇಶಿ ಬಟ್ಟೆ ಸುಟ್ಟು ಎಲ್ಲಾ ವಿದ್ಯಾರ್ಥಿಗಳು ಖಾದಿ ತೊಟ್ಟೆವು. ಗಾಂಧೀಜಿ ರಾಷ್ಟçನಾಯಕರಾಗಿ ಮುಂದಾಳತ್ವ ವಹಿಸಿಕೊಂಡರು. ೧೯೧೯ರಲ್ಲಿ ರಾಷ್ಟಿçÃಯ ಚಳುವಳಿ ಮುಗಿಲು ಮುಟ್ಟಿತು. ಗಾಂಧೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಗುಜರಾತ್ ವಿದ್ಯಾಪೀಠ ಸೇರಿ ಆಶ್ರಮದಲ್ಲಿ ಇರುವ ಯೋಚನೆ ಬರುತ್ತಿದ್ದಂತೆ ಗೊರೂರರು ಅಹಮದಾಬಾದಿಗೆ ಹೊರಟರು. ಗುಜರಾತ್ ವಿದ್ಯಾಪೀಠದಲ್ಲಿ ವ್ಯಾಸಂಗಕ್ಕೆ ಸೇರಿದರು. ನಾನು (ಗೊರೂರು ಅನಂತರಾಜು) ಗುಜರಾತ್ ಪ್ರವಾಸ ಹೋಗಿದ್ದಾಗ ಗುಜರಾತ್ ವಿದ್ಯಾಪೀಠ ವೀಕ್ಷಿಸುವಾಗ ತಟ್ಟನೆ ಡಾ.ಗೊರೂರರು ನೆನಪಾಗಿ ಟೂರಿಸ್ಟ್ಗಳಿಗೆಲ್ಲಾ ಆ ವಿಷಯ ತಿಳಿಸಿ ನಾವೆಲ್ಲಾ ಅಲ್ಲಿ ನಿಂತು ಪೋಟೋ ತೆಗೆಸಿಕೊಂಡೆವು. ಡಾ.ಗೊರೂರರು ಇಲ್ಲಿ ಗಾಂಧೀಜಿಯವರ ಪ್ರಾರ್ಥನಾ ಸಭೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಗಾಂಧೀಜಿ ನನ್ನ ಹೃದಯದಲ್ಲಿಯೇ ಕುಳಿತಿದ್ದ ಜ್ಯೋತಿ ಆಗಿದ್ದರು ಎಂದು ಗೊರೂರರು ಮಹಾತ್ಮರನ್ನು ಸ್ಮರಿಸಿದ್ದಾರೆ. ಗಾಂಧೀಜಿ ೧೯೪೬ ರಲ್ಲಿ ಮದ್ರಾಸಿನಲ್ಲಿದ್ದಾಗ ಅವರೊಂದಿಗೆ ಹತ್ತು ದಿನ ಕಳೆದರು. ಅನಂತರ ಪಳನಿ, ಮಧುರೈ ಮೊದಲಾದ ಕ್ಷೇತ್ರಗಳಲ್ಲಿ ಗಾಂಧೀಜಿಯವರೊAದಿಗೆ ಪ್ರವಾಸ ಕೈ ಗೊಂಡರು. ಈ ಪ್ರವಾಸ ಕಥನ ಗಾಂಧೀಜಿಯವರ ದಕ್ಷಿಣ ಯಾತ್ರೆ ಪುಸ್ತಕದಲ್ಲಿದೆ.ನವಜೀವನ ಯಂಗ್ ಇಂಡಿಯ ಪತ್ರಿಕೆಗಳಿಗೆ ಕಂಪೋಜಿಟರ್ ಆಗಿ ಕೆಲಸಕ್ಕೆ ಸೇರಿ ಮದರಾಸ್ ಲೋಕಮಿತ್ರ ಪತ್ರಿಕೆಯ ಉಪ ಸಂಪಾದಕರಾಗಿ, ಬೆಂಗಳೂರು ಕೆಂಗೇರಿಯಲ್ಲಿ ಗುರುಕುಲಾಶ್ರಮದ ವ್ಯವಸ್ಥಾಪಕರಾಗಿ ಮಾಸ್ತರಾಗಿದ್ದರು. ಖಾದಿ ವಸ್ತಾçಲಯದಲ್ಲಿ ಮಾರಾಟಗಾರರಾಗಿ ಖಾದಿ ಬೋರ್ಡಿನಲ್ಲಿ ಮ್ಯಾನೇಜರ್ ಆಗಿದ್ದರು.೧೯೩೮ ರಲ್ಲಿ ಗೊರೂರಿನಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕೃಷಿಕ ಜೀವನದೊಂದಿಗೆ ಸಾಹಿತ್ಯ ಕೃಷಿ ಪ್ರಾರಂಭಿಸಿ ಗೊರೂರಿನಲ್ಲಿ ಯುವಕರನ್ನು ಸಂಘಟಿಸಿ ಮೈಸೂರು ಗ್ರಾಮ ಸೇವಾ ಸಂಘವನ್ನು ಸ್ಥಾಪಿಸಿ ಖಾದಿ ಪ್ರಚಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆ ಮೊದಲಾಗಿ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. ಎಣ್ಣೆಗಾಣ, ಕೈಕಾಗದ, ಮೂಳೆಪುಡಿ, ಬೆಲ್ಲ, ಕೊಟ್ಟದ ಅಕ್ಕಿ, ಜೇನು ಸಾಕಣೆ, ಕಿತ್ತಳೆನಾರಿನ ಪ್ಯಾಕಿಂಗ್ ದಾರ, ತಾಟಿಬೆಲ್ಲ, ಚಾಪೆ ತಯಾರಿಸುವ ಗ್ರಾಮೋದ್ಯೋಗ ಆರಂಭವಾಯಿತು. ಗೊರೂರರ ಈ ಎಲ್ಲ ಕೆಲಸಗಳಲ್ಲಿ ಮತ್ತೋರ್ವ ಸ್ವಾತಂತ್ರö್ಯ ಹೋರಾಟಗಾರರು ಸಾಹುಕಾರ್ ಸಂಪತ್ತಯ್ಯAಗಾರ್ ಮತ್ತು ಗ್ರಾಮದ ಪ್ರಮುಖರು ಬೆಂಬಲ ನೀಡಿದರು. ಗೊರೂರಿನಲ್ಲಿ ೪೦ ದಿವಸ ವಯಸ್ಕರ ಶಿಕ್ಷಣ ಶಿಬಿರ ಏರ್ಪಡಿಸಿ ಪುತಿನ, ತೀನಂಶ್ರೀ ಕರೆಸಿದರು. ಆಗ ಸರ್ಕಾರ ಗೊರೂರರನ್ನು ಜಿಲ್ಲಾ ಆಡಳಿತ ಸಮಿತಿಗೆ, ಸ್ಥಳೀಯ ಶಿಕ್ಷಣ ಸಮಿತಿಗೆ ನಾಮಕರಣ ಮಾಡಿತು. ೧೯೩೯ ರಲ್ಲಿ ಸತ್ಯಾಗ್ರಹ ಕಾಲದಲ್ಲಿ ಸಲಹೆ ಕೊಡಲು ಗೊರೂರರೂ ಒಬ್ಬ ಸದಸ್ಯರಾಗಿದ್ದರು. ೧೯೪೧ ರಲ್ಲಿ ವಾರ್ಧಾದಲ್ಲಿ ಜರುಗಿದ ಎಐಸಿಸಿ ಸಭೆಯಲ್ಲಿ ಭಾಗವಹಿಸಿದ್ದರು. ಕ್ವಿಟ್ ಇಂಡಿಯ ಚಳವಳಿಯಲ್ಲಿ ಪೊಲೀಸರು ಗೊರೂರರನ್ನು ಬಂಧಿಸಿ ಹಾಸನ, ಶಿವಮೊಗ್ಗ, ಸಾಗರ ಮತ್ತು ಬೆಂಗಳೂರು ಸೆರೆಮನೆಗಳಲ್ಲಿ ೧೪ ತಿಂಗಳು ಜೈಲಿನಲ್ಲಿ ಕಳೆದರು. ಸೆರೆಮನೆಯಲ್ಲಿ ಇದ್ದಾಗ ಹಳ್ಳಿಯ ಬಾಳು ಕೃತಿ ಅಚ್ಚಾಗುತ್ತಿತ್ತು. ಸೆರೆಮನೆ ಸೇರಿ ಮೂರು ವಾರಗಳಲ್ಲಿ ಟಾಲ್‌ಸ್ಟಾಯ್‌ರವರ ಕಾಸಕ್ಸ್ ಕಾದಂಬರಿಯನ್ನು ಮಲೆನಾಡವರು ಎಂಬ ಹೆಸರಿನಿಂದ ಅನುವಾದಿಸಿದರು. ಒಂದು ವಾರದೊಲ್ಲಿ ಪುಜರ್ನನ್ಮ ಕಾದಂಬರಿ ಬರೆದರು. ಸ್ವಾತಂತ್ರö್ಯವೇ ಧರ್ಮ ಎಂಬ ಕೃತಿಯ ಬಹುಭಾಗ ೧೯೪೨ ರಲ್ಲಿ ಸೆರೆಮನೆಯಲ್ಲಿ ಬರೆದಿದ್ದು. ಇವರು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಸಂಪಾದಿಸಿದ ಇನ್ನೊಂದು ಮುಖ್ಯ ಸಂಗ್ರಹ ಕೋಲಾಟದ ಪದಗಳು. ವಾರದ ಬಿಡುವಿನ ದಿನದಲ್ಲಿ ಕೈದಿಗಳೆಲ್ಲರೂ ಒಟ್ಟಾಗಿ ಸೇರಿ ಭಜನೆ ಕೀರ್ತನೆ ಕೋಲಾಟದ ಪದ ಹಾಡುತ್ತಿದ್ದರು. ಗೊರೂರರು ನಾಲ್ಕಾರು ವಾರ ಅವರನ್ನು ಆಶ್ರಯಿಸಿ ಈ ಹಾಡುಗಳನ್ನು ಬರೆದುಕೊಂಡರು. ಸೆರೆಮನೆಯಿಂದ ಬಿಡುಗಡೆಯಾಗಿ ಜನಜಾಗೃತಿಗಾಗಿ ರಾಷ್ಟಿçÃಯ ಗ್ರಂಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ರಾಷ್ಟಿçÃಯ ಸಾಹಿತ್ಯ ಸಮಿತಿ ಸ್ಥಾಪಿಸಿದರು. ಸತಿ ಕಸ್ತೂರಿಬಾ, ಮಹದೇವ ದೇಸಾಯಿಯವರ ಕೃತಿಗಳು, ಮೌಲನಾ ಅಬುಲ್‌ಕಲಾಂ ಅಜಾದ್, ಸ್ವಾತಂತ್ರö್ಯವೇ ಧರ್ಮ, ತಾಯ್ನುಡಿಯಲ್ಲಿ ಶಿಕ್ಷಣ ಇವೇ ಗ್ರಂಥಗಳನ್ನು ಪ್ರಕಟಿಸಿದರು.ಭಾರತಕ್ಕೆ ಸ್ವಾತಂತ್ರö್ಯ ಬಂದರೂ ದೇಶೀಯ ಸಂಸ್ಥಾನಗಳ ಮಹಾರಾಜರು ತಮ್ಮ ಪ್ರಜೆಗಳಿಗೆ ಸ್ವಾತಂತ್ರö್ಯ ಕೊಡಲಿಲ್ಲ. ಅದಕ್ಕಾಗಿ ಬೇರೆ ಚಳವಳಿ ಬಲಿದಾನಗಳೇ ಬೇಕಾದವು. ಚಲೋಪ್ಯಾಲೆಸ್ ಚಳವಳಿಯಲ್ಲಿ ಗೊರೂರರ ಹಿರಿಯ ಮಗ ರಾಮಚಂದ್ರ ತುಮಕೂರಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ. ವಿಷಯ ತಿಳಿದ ಗೊರೂರರು ನನ್ನ ಮಗ ಹುತಾತ್ಮನಾಗಿದ್ದಾನೆ. ಮುಂದಿನ ತಲೆಮಾರು ಅವನನ್ನು ನೆನೆಯುತ್ತದೆ ಎಂದರು. ಮೈಸೂರಿನಲ್ಲಿ ಪ್ರಜಾಸರ್ಕಾರ ಸ್ಥಾಪನೆಯಾದ ಮೇಲೆ ಗೊರೂರು ೧೨ ವರ್ಷ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಈ ಸಂದರ್ಭ ಗೊರೂರರು ಮಾಡಿದ ಕೆಲಸಗಳಲ್ಲಿ ಕರ್ನಾಟಕದ ಏಕೀಕರಣದ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಮಾಡಿದ ಭಾಷಣ, ಕನ್ನಡ ನಿಘಂಟು ಕನ್ನಡ ವಿಶ್ವಕೋಶ ಇವುಗಳ ರಚನೆಗಾಗಿ ಮಸೂದೆ ಮಂಡಿಸಿ ಕರ‍್ಯಗತ ಮಾಡಿಸಿದ್ದು.ಗೊರೂರರು ಒಂದು ಕಡೆ ಹೀಗೆ ಹೇಳುತ್ತಾರೆ. ನನ್ನ ಬಾಳನ್ನು ನಾನು ಹಿಂದಿಗುಗಿ ನೋಡಿದಾಗ ನಾನು ಸಾಹಿತಿಗಿಂತ ಹೆಚ್ಚಾಗಿ ಜನ ಸಮಾನ್ಯರ ಮನುಷ್ಯ. ರಾಜಕೀಯದಲ್ಲಿ ಗಾಂಧೀಜಿಯವರ ಅದಮ್ಯ ಚೇತನ ಶಕ್ತಿ ತ್ಯಾಗ ಆದರ್ಶಗಳಿಂದ ಪ್ರೇರಿತನಾಗಿ ಈ ಕ್ಷೇತ್ರದಲ್ಲಿ ನನ್ನಿಂದಾದ ಸೇವೆ ಸಲ್ಲಿಸಲು ಹೊರಟವ. ನಮ್ಮ ದೇಶದ ಜನಸಾಮಾನ್ಯರ ಜಾನಪದವೆಂದರೆ ನನಗೆ ಅವರಲ್ಲಿ ಅತ್ಯಂತ ಪ್ರೇಮ. ಭಾರತವನ್ನು ಆಧುನಿಕ ನಾಗರಿಕತೆಯ ಸರ್ವನಾಶದಿಂದ ತಪ್ಪಿಸಬಲ್ಲದು ಅದೊಂದು ಎಂಬುದು ನನ್ನ ನಂಬಿಕೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ.

“ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ.” ಗೊರೂರು ಅನಂತರಾಜು Read Post »

ಇತರೆ, ಶಿಕ್ಷಣ

“ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..” ಜಯಲಕ್ಷ್ಮಿ ಕೆ.

ಶಿಕ್ಷಣ ಸಂಗಾತಿ ಜಯಲಕ್ಷ್ಮಿ ಕೆ. “ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..”   ಶಿಕ್ಷಣ, ಉದ್ಯೋಗ, ಆರೋಗ್ಯ ಸಂವಹನ ಹೀಗೆ  ಎಲ್ಲಾ ಕ್ಷೇತ್ರಗಳಲ್ಲೂ ಇಂದು ತಂತ್ರಜ್ಞಾನದ್ದೇ ಮೇಲುಗೈ. ವಿಜ್ಞಾನ  ತಂತ್ರಜ್ಞಾನವಿಲ್ಲದೆ  ನಮ್ಮ ಬದುಕೇ ಇಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ . ರಾಷ್ಟ್ರದ ಅಭಿವೃದ್ಧಿಯ ಮಾನದಂಡವೇ ತಂತ್ರಜ್ಞಾನವಾಗಿದೆ. ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿದ ಬಳಿಕ  ಮಕ್ಕಳಿಗಾಗಲಿ  ಅವರ ಪೋಷಕರಿಗಾಗಲೀ ಮಾನವೀಯ ಶಾಸ್ತ್ರಗಳ ಅಧ್ಯಯನ ಇಷ್ಟವಾಗುವುದಿಲ್ಲ. ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳು ತೀರಾ ಕಡಿಮೆ ಎಂದೇ ಹೇಳಬಹುದು.  ಎಷ್ಟೋ ಖಾಸಗಿ  ಕಾಲೇಜುಗಳಲ್ಲಿ ವಿಜ್ಞಾನ ವಾಣಿಜ್ಯ ವಿಭಾಗಗಳನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ.  ಒಂದು ಕಡೆಯಿಂದ ಇನ್ನೊಂದು ಕಡೆಗೆ ತಿರುಗಾಡುತ್ತಾ, ಗೆಡ್ಡೆ ಗೆಣಸು ಹಸಿ ಮಾಂಸಗಳನ್ನು ತಿನ್ನುತ್ತಾ, ವನ್ಯ ಮೃಗಗಳಂತೆ ಗುಹೆಗಳಲ್ಲಿ ಬದುಕುತ್ತಿದ್ದ ಮಾನವ  ಒಂದೆಡೆ ನೆಲೆ ನಿಂತು ಬಾಳಲು ಕಲಿತದ್ದೇ  ಒಂದು ಸುದೀರ್ಘ ಇತಿಹಾಸ. ಅನಾಗರಿಕತೆಯಿಂದ ಹಂತ ಹಂತವಾಗಿ  ಅಭಿವೃದ್ಧಿ ಹೊಂದುತ್ತಾ  ನಾಗರಿಕತೆಯೆಡೆಗೆ  ಸಾಗಿ ಬಂದ ಮಾನವ ಜೀವಯಾನದ ಕಥೆಗಳಲ್ಲಿ ಕಷ್ಟ -ಸುಖ, ಸೋಲು -ಗೆಲುವುಗಳ ಪಾಠವಿದೆ. ಮಾನವನ ಅಸ್ಥಿತ್ವ, ಸಂಸ್ಕೃತಿ ಮತ್ತು ಸಮಾಜದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲುವಂತಹ ಇತಿಹಾಸವೇ ಮೊದಲಾದ ಮಾನವೀಯ ಶಾಸ್ತ್ರಗಳ ಅಧ್ಯಯನ ಇಂದು ಬಲು ದೂರ ಸರಿದಿದೆ.  ಭೂತಕಾಲವನ್ನು ಅರ್ಥೈಸಿಕೊಂಡು ಭವಿಷ್ಯದ ಬಗೆಗೆ ಚಿಂತನೆಗೈಯುತ್ತಾ  ವರ್ತಮಾನದಲ್ಲಿ ಬದುಕುವ ಕಲೆಗಾರಿಕೆಯನ್ನು ಕಲಿಸಿಕೊಡುವ ಇತಿಹಾಸದ ಅಧ್ಯಯನವಾಗಲೀ . ಪ್ರಜೆಗಳ ಹಕ್ಕು ಕರ್ತವ್ಯ, ಸರಕಾರದ ನೀತಿ ನಿಯಮ, ಉದಾತ್ತ ವ್ಯಕ್ತಿಗಳ ಜೀವನ- ಸಾಧನೆ, ಪರಸ್ಪರರ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕುವ ಜೀವನ ಕ್ರಮ, ಮನುಷ್ಯ ತನ್ನ ಸಮಾಜದೊಂದಿಗೆ ಮಾಡಿಕೊಳ್ಳಲೇ ಬೇಕಾದ ಹೊಂದಾಣಿಕೆ ಇತ್ಯಾದಿಗಳನ್ನು ತಿಳಿಸಿಕೊಡುವಂತಹ  ಇತರ ಮಾನವ ಶಾಸ್ತ್ರಗಳ ಅಧ್ಯಯನವಾಗಲೀ ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದಿಲ್ಲ .  ಶ್ರುತಿ  ಮತ್ತು ಸ್ಮೃತಿ ಆಧಾರಿತ ಗುರುಕುಲ ಶಿಕ್ಷಣ ಪದ್ಧತಿ ಬದಲಾವಣೆ ಹೊಂದುತ್ತಾ ಹೊಂದುತ್ತಾ “ತಂತ್ರಜ್ಞಾನವೇ ಶಿಕ್ಷಣದ ಜೀವಾಳ ” ” ಶಿಕ್ಷಣ ಎಂದರೆ   ವಿಜ್ಞಾನ -ತಂತ್ರಜ್ಞಾನ ಎನ್ನುವಲ್ಲಿಗೆ ನಮ್ಮ ಶಿಕ್ಷಣ ಕ್ರಮ ಬಂದು ತಲುಪಿದೆ. ಗುರು-ಶಿಷ್ಯ ಸಂಬಂಧ, ಕಲಿಕಾ ಕ್ರಮ, ಪಠ್ಯಕ್ರಮ, ಕಲಿಕೆಯ ಉದ್ದೇಶ, ಬೋಧನಾ ವಿಧಾನ, ಎಲ್ಲವೂ ಬದಲಾಗಿದೆ.  ಕಲಿಕಾ ವಾತಾವರಣವಷ್ಟೇ ಅಲ್ಲ, ಶಿಕ್ಷಣದ ಮೂಲೋದ್ದೇಶವೇ  ಬದಲಾಗಿರುವ ಯುಗವಿದು. ಶಿಕ್ಷಣದೊಂದಿಗೇ ಬೆಸೆದು ಹೋಗಿದ್ದ ಅಧ್ಯಾತ್ಮ ಇಂದು ಶಿಕ್ಷಣ ವ್ಯವಸ್ಥೆಯಿಂದ  ಕಾಣೆಯೇ ಆಗಿದೆ ಎಂದರೂ ತಪ್ಪಾಗಲಾರದು. ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಜಾಗತಿಕ ವೃತ್ತಿ ಜೀವನಕ್ಕೆ ತಯಾರಿಗೊಳಿಸುವ ಭರದಲ್ಲಿ ತಾಂತ್ರಿಕ ಶಿಕ್ಷಣಕ್ಕೇ ಆಧ್ಯತೆ ನೀಡುತ್ತಿರುವ ನಾವು ಮಾನವೀಯ ಶಾಸ್ತ್ರಗಳನ್ನೇ ಮರೆತಿದ್ದೇವೆ. ಇತಿಹಾಸ, ತತ್ವಜ್ಞಾನ,ಅರ್ಥಶಾಸ್ತ್ರ ಮನಃಶಾಸ್ತ್ರ,ಸಮಾಜಶಾಸ್ತ್ರ ಇತ್ಯಾದಿಗಳನ್ನು ಅಧ್ಯಯನ ಮಾಡುವ  ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದೆ . ಪ್ರಾಥಮಿಕ ಪ್ರೌಢ ಹಂತದಲ್ಲಿ ಅಂಕಗಳಿಕೆ, ನಂತರ ಮೆಡಿಕಲ್ ಇಂಜಿನಿಯರಿಂಗ್ ಸೀಟ್ ಗಳಿಕೆ ತದನಂತರ ಹೆಚ್ಚು ಸಂಬಳದ ಉದ್ಯೋಗ  ಗಳಿಕೆ ಈ ಮೂರನ್ನೇ ಶಿಕ್ಷಣದ ಉದ್ದೇಶ ಎಂದು ಪರಿಭಾವಿಸಿದ್ದರ ಪರಿಣಾಮ ಮಾನವ ಶಾಸ್ತ್ರಗಳ ಅಧ್ಯಯನ ದೂರ ಉಳಿಯಿತು. ಇದರ ಜೊತೆಗೆ ಮೌಲ್ಯಾಧರಿತ ಶಿಕ್ಷಣವೂ…. ವಿಜ್ಞಾನ ತಂತ್ರಜ್ಞಾನಗಳಲ್ಲಿ ಪ್ರಾವೀಣ್ಯತೆ  ಗಳಿಸಿ ಐಟಿ ಬಿಟಿ  ಕಂಪನಿಗಳಲ್ಲಿ   ಉದ್ಯೋಗ ಗಳಿಸಿಕೊಂಡಿರುವ ಯುವ ಜನಾಂಗ  ಕೌಟುಂಬಿಕ ವ್ಯವಸ್ಥೆ, ಸಾಮಾಜಿಕ ಪರಿಸರ, ಸ್ನೇಹಿತ ವರ್ಗದಿಂದ  ಹಂತ ಹಂತವಾಗಿ ದೂರವಾಗುತ್ತಿದ್ದು, ಅವರು ಭಾವನಾತ್ಮಕವಾಗಿ ಬಡವಾಗುತ್ತಿದ್ದಾರೆ. ಈ ನಡುವೆ ತಂತ್ರಜ್ಞಾನದ ಬಳಕೆಯಿಂದ  ಅಮಾಯಕರನ್ನು ಭಾವನಾತ್ಮಕವಾಗಿ ಬೆದರಿಸಿ ಹಣ ಲೂಟಿ ಮಾಡುವ ಸಣ್ಣ ವಯಸ್ಸಿನ ವಿಪರೀತಮತಿಗಳು  ಅಲ್ಲಲ್ಲಿ ತಲೆಯೆತ್ತಿವೆ . ಇಂತಹ ಅಪರಾಧಿಗಳನ್ನು ಕಂಡುಹಿಡಿಯುವುದೇ ಸರಕಾರಕ್ಕೊಂದು ದೊಡ್ಡ ಸವಾಲಾಗಿದೆ. ವಿಜ್ಞಾನ ತಂತ್ರಜ್ಞಾನ ವರಿಯದ ಕಳ್ಳನೊಬ್ಬ ನಮ್ಮ ಹಣ ವಾಚು,ಚಿನ್ನ ಇತ್ಯಾದಿ ಬೌತಿಕ ವಸ್ತುಗಳನ್ನಷ್ಟೇ ಕದ್ದರೆ ತಂತ್ರಜ್ಞಾನದಲ್ಲಿ ಪಳಗಿದ ಕಳ್ಳ ನಮ್ಮ ಹಣ ಸಂಪತ್ತುಗಳ  ಜೊತೆ ಜೊತೆಗೆ  ನಮ್ಮ ಆರೋಗ್ಯ,ಮಾನ, ಕೊನೆಗೆ ಜೀವವನ್ನೇ  ಕಸಿದುಕೊಳ್ಳುತ್ತಾನೆ. ” ಯಂತ್ರಗಳಿಗೆ ಅಂತಃಕರಣವಿಲ್ಲ ” ನಿಜ. ಆದರೆ ಯಾಂತ್ರಿಕ ಬದುಕು ನಡೆಸುತ್ತಿರುವ ಇಂದಿನ ಅದೆಷ್ಟೋ ಯುವಕ ಯುವತಿಯರಿಗೆ ಪ್ರೀತಿ, ಕರುಣೆ, ಸಹನೆ, ಸಹಾನುಭೂತಿ, ಕೃತಜ್ಞತಾ ಭಾವ ಇವಾವುವೂ ಇಲ್ಲ. ಇದಕ್ಕೆ ಇತ್ತೀಚೆಗೆ ಸುದ್ದಿ ಯಾಗುತ್ತಿರುವ ಅವರ ವರ್ತನೆಗಳೇ ಸಾಕ್ಷಿ. ತಮ್ಮ ಸ್ವೇಚ್ಛಾಚಾರದ ಬದುಕಿಗೆ ಅಡ್ಡಿಯಾದರೆ ಹೊತ್ತ ತಂದೆಯೋ, ಹೆತ್ತ ತಾಯಿಯೋ, ರಕ್ತ ಹಂಚಿಕೊಂಡು ಹುಟ್ಟಿದ ಅಕ್ಕ ತಂಗಿಯರೋ.. ಯಾರಾಗಿದ್ದರೂ ಸರಿಯೇ, ಅವರನ್ನು ಕೊಚ್ಚಿ ಕೊಲ್ಲುವಷ್ಟು ಕ್ರೌರ್ಯ, ಮೃಗೀಯ ವರ್ತನೆ ತೋರಿಬಿಡುತ್ತಾರೆ. ಆಟಿಕೆಗಳನ್ನು ಒಗೆದಂತೆ  ತಮ್ಮೊಡನೆಯೇ ಇದ್ದ ಜೀವಗಳನ್ನು ಕಂದಕಕ್ಕೆ ನೂಕಿ ಬದುಕಿನಲ್ಲಿ ನಲಿವು ಕಾಣಬೇಕೆಂದು ಹಂಬಲಿಸುತ್ತಾರೆ!  ಅಂತಃಕರಣ ಅರಳಿಸುವ ಶಿಕ್ಷಣ, ಕೂಡಿ ಬಾಳುವ ಮನೋಭಾವ ಶಾಲಾ ಕಾಲೇಜುಗಳಲ್ಲಿ ಕಲಿತಿಲ್ಲ. ಸೋಲು ಗೆಲುವುಗಳಲ್ಲಿ ಸಮತೋಲನವನ್ನು ಸಾಧಿಸುವ ಕಲೆಗಾರಿಕೆಯನ್ನು ರೂಢಿ ಮಾಡಿಕೊಂಡಿಲ್ಲ. ಮನೆಯಲ್ಲಿ ಮಾನವಿಕ ಶಾಸ್ತ್ರ ಗಳನ್ನು ಹೇಳಲು – ಕೇಳಲು ಯಾರಿಗೂ ಬಿಡುವಿಲ್ಲ. ದೊಡ್ಡವರನ್ನು ನೋಡಿ ಕಲಿಯಲು ಕೂಡು ಕುಟುಂಬ ವ್ಯವಸ್ಥೆ ಮೊದಲೇ ಇಲ್ಲ. ಸಮಾಜಮುಖಿಯಾಗಿ ಬೆಳೆಯಲು ಇಂದಿನ ಮಕ್ಕಳಿಗೆ ಯೋಗ್ಯ ಅವಕಾಶಗಳಾಗಲೀ, ಸಾಮಾಜಿಕ ಭದ್ರತೆಯಾಗಲೀ ಇಲ್ಲ. ಹಸಿವು, ಬಡತನ,ಕಷ್ಟ, ಇತ್ಯಾದಿಗಳ ಅರಿವಿಲ್ಲದೆ’ ಬದುಕೆಂದರೆ ತಮ್ಮ ವೈಯಕ್ತಿಕ ಸುಖ  ಸಂತೋಷಗಳ ಒಂದು ಮೊತ್ತ ‘ ಎಂದೇ ಭಾವಿಸಿಕೊಂಡಿರುವ ಯುವ ಮನಸುಗಳು ಆ ಸುಖ ಸಾಧನೆಗಾಗಿ ಯಾರಿಗೆ ಯಾವ ಕೆಡುಕು ಮಾಡುವುದಕ್ಕೂ ಹೇಸುವುದಿಲ್ಲ. ಅದಕ್ಕೆ ಬೇಕಾದ ತಂತ್ರಜ್ಞಾನ  ಕೂಡಾ ಅವರಲ್ಲಿದೆ!! ಹುಟ್ಟಿ ಬೆಳೆದ ಸಮಾಜದ ಋಣ ತನ್ನ ಮೇಲಿದೆ, ಆದ ಕಾರಣ  ಇತರರಿಗೆ ಬಾಳಗೊಡುತ್ತಾ  ತಾನು ಬಾಳಬೇಕು ಎನ್ನುವ ಸಾಮಾನ್ಯ ಜ್ಞಾನವಿಲ್ಲ ಮಾತ್ರ ಇಲ್ಲ!!!ಅವಿದ್ಯಾವಂತರು ಮಾಡುವ ಮೋಸ ವಂಚನೆಗಳಿಗಿಂತ ವಿದ್ಯಾವಂತ (ಅ ) ನಾಗರಿಕರು ಮಾಡುವ ಮೋಸ ವಂಚನೆಗಳು ಘನ ಘೋರ !!  ಸಾಮಾನ್ಯವಾಗಿ ಮಕ್ಕಳು ಓದಿ ಉದ್ಯೋಗ ಗಿಟ್ಟಿಸಿಕೊಳ್ಳುವ ಹಂತಕ್ಕೆ ಬಂದಾಗ ಅವರ ಜೊತೆಗಿನ ಪೋಷಕರ ಓಟ – ಒಡನಾಟ ನಿಧಾನವಾಗುತ್ತದೆ ಅಥವಾ ಅನಿವಾರ್ಯ  ಪರಿಸ್ಥಿತಿಗಳಿಂದಾಗಿ  ನಿಂತೇ ಹೋಗುತ್ತದೆ. ಆದರೆ ಮಕ್ಕಳ  ನಿಜವಾದ  ಬದುಕು ಆರಂಭವಾಗುವುದೇ ಅಲ್ಲಿಂದ. ತನ್ನನ್ನು  ಪ್ರತ್ಯೇಕವೆಂದು ಭಾವಿಸದೆ ತಾನೂ ಸಮಾಜದ ಒಂದು ಭಾಗ ಎಂದು ಅರಿತುಕೊಳ್ಳುತ್ತಾ, ಭಾವನಾತ್ಮಕವಾಗಿ ಪರಿ ಪರಿಪಕ್ವತೆಯನ್ನು ಪಡೆದುಕೊಳ್ಳುತ್ತಾ  ಯುವ ಜನತೆ ದೇಶದ ಆಸ್ತಿಯಾಗಿ ಉಳಿಯಬೇಕಾದರೆ  ತಂತ್ರಜ್ಞಾನದ ಜೊತೆ ಜೊತೆಗೆ ಮಾನವ ಶಾಸ್ತ್ರಗಳ ಅಧ್ಯಯನವೂ  ಶಿಕ್ಷಣದಲ್ಲಿ ಮಿಳಿತಗೊಂಡಿರಬೇಕು. ಜಯಲಕ್ಷ್ಮಿ ಕೆ ಮಡಿಕೇರಿ.

“ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..” ಜಯಲಕ್ಷ್ಮಿ ಕೆ. Read Post »

You cannot copy content of this page

Scroll to Top