ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್.ಡಿ. ಅಸಲಿಗೆ ನಕಲಿಯ ಲೇಪನ ಬಳಿದಿರಬಹುದು ನೋಡುಕಂಗಳಿಗೆ ಆವರಿಸಿರುವ ಪೊರೆಯ ಸರಿಸಿ ಅರಿಯಬಹುದು ನೋಡು ಭಿತ್ತಿಯ ಮೇಲೆ ಬಿದ್ದ ಛಾಯೆಯು ಮಿಥ್ಯವಿರಬಹುದು ಒಮೊಮ್ಮೆಅಂತಃಕರಣದ ಅಕ್ಷಿಯರಳಿಸಿ ದಿಟವ ತಿಳಿಯಬಹುದು ನೋಡು ತಳವಿಲ್ಲದ ಬಾವಿ ಅನಂತ ಆಳವ ತೋರಿರಬಹುದು ಅಲ್ಲಿಭ್ರಮೆಯಿಂದ ಹೊರಬಂದು ನೈಜತೆಯ ಕಾಣಬಹುದು ನೋಡು ದಿಗಂತವು ಇಳೆ ಆಗಸವು ಸಂಧಿಸಿದಂತೆ ಭಾಸವಾಗುವುದುವಿಶ್ವವನ್ನೊಮ್ಮೆ ಪರ್ಯಟಿಸಿ ಅವಲೋಕಿಸಬಹುದು ನೋಡು ಅಖಂಡ ಆಗಸವು ನೀಲವರ್ಣದಿ ಗೋಚರಿಸುವುದು ಮೇಲೆಬೆಳಕಿನ ಮೂಲದ ಸತ್ಯಾಸತ್ಯತೆಯನ್ನು ಪರಾಮರ್ಶಿಸಬಹುದು ನೋಡು ********

ಪುಸ್ತಕ ಸಂಗಾತಿ

“ಪಮ್ಮಿ” ಹನಿಗವಿತೆಗಳು ಕನ್ನಡದಲ್ಲಿ ಚುಟುಕು ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ.ನಮ್ಮ‌ಜನಪದ ತ್ರಿಪದಿಗಳು ಮೂರೆ ಸಾಲಿನಲ್ಲಿ ಥಟ್ ಅಂತ ಒಂದು ವಸ್ತುವಿಷಯದ ಮೇಲೆ ಬೆಳಕು ಚೆಲ್ಲಿ ಬೆಳಗಿಸಿಬಿಡುವ ಮಿಣುಕು ಹುಳುಗಳಂತಹವು.ಜೀವನಾನುಭವದಿಂದ ಮೂಡಿದ ನುಡಿಮುತ್ತುಗಳು.ಹೊಸಗನ್ನಡದಲ್ಲಿ ಚುಟುಕುಗಳ ಬ್ರಹ್ಮನೆಂದೆ ಖ್ಯಾತರಾದ ದಿನಕರ ದೇಸಾಯಿ ಅವರ ದ್ವಿಪದಿ, ಬೀಚಿ ಅವರ ಹಾಸ್ಯದ ಚುಟುಕುಗಳು,ದುಂಡೀರಾಜ್ ಅವರ ಪಂಚ್ ಗಳು ಪ್ರಸಿದ್ದಿಯಾದವು.ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದ ಕಂದ ಪದ್ಯಗಳು ತಾತ್ವಿಕ ವಿಚಾರಗಳನ್ನು ತುಂಬಿಕೊಂಡೆ‌ ತೆನೆಗಳು.ಚುಟುಕುಗಳ ಮುಖ್ಯ ಲಕ್ಷಣವೇ ಯಾವ ವಿಷಯವನ್ನಾದರೂ ಪರಿಣಾಮಕಾರಿಯಾಗಿ ಚಿಕ್ಕದಾಗಿ ಚೊಕ್ಕಾವಾಗಿ ಭಾವ ಸ್ಪುರಿಸುವಂತೆ […]

ದಿಕ್ಸೂಚಿ

ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ ಜಯಶ್ರೀ ಅಬ್ಬಿಗೇರಿ ನಾನು ಕೈ ಹಾಕಿದ ಯಾವ ಕೆಲಸದಲ್ಲೂ ಗೆಲುವು ಸಿಗುತ್ತಲೇ ಇಲ್ಲ. ನನ್ನ ಹಣೆ ಬರಹವೇ ಚೆನ್ನಾಗಿಲ್ಲ. ನಸೀಬು ಕೆಟ್ಟಿದೆ. ಸಾಲು ಸಾಲು ಸೋಲುಗಳು ನನ್ನ ಬೆನ್ನು ಹತ್ತಿವೆ. ಹೀಗೇ ಇನ್ನೊಂದಿಷ್ಟು ಸಮಯ ಕಳೆದರೆ ಜೀವನದ ಆಸೆಗಳೇ ಕಮರಿ ಹೋಗಿ ಬಿಡುತ್ತವೆ. ನನ್ನಿಂದೇನೂ ಮಾಡಲು ಸಾಧ್ಯವಿಲ್ಲವೆಂದು ಊಟ ತಿಂಡಿ ಬಿಟ್ಟು ಕೈ ಕಟ್ಟಿ ಕುಳಿತು ಚಿಂತಿಸಿದರೆ ಬದುಕು ನಿಂತ ನೀರಾಗಿ ಬಿಡುತ್ತದೆ. ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಉಗ್ರ ರೂಪ […]

ಬಣ್ಣ-ರೇಖೆಗಳ ಜೊತೆಯಾಟ ಪಕ್ಷಾತೀತ ಕಲಾವಿದ ಅನಾಥ ಶಿಶುವಿನಂತೆ’ ಎಂ.ಎಲ್.ಸೋಮವರದ ಎಂ.ಎಲ್.ಸೋಮವರದ ದೇಶ ಕಂಡ ಉತ್ತಮ ಕಲಾವಿದರಲ್ಲಿ ಒಬ್ಬರು. ಮಂಡ್ಯದ ವಿ.ವಿ.ನಗರದ ಕಲ್ಲಹಳ್ಳಿ ನಿವಾಸಿ. ತುಂಬಾ ನಿಷ್ಠುರ ವ್ಯಕ್ತಿತ್ವದ ಸೋಮವರದ , ಜೀವನದಲ್ಲಿ ಕಷ್ಟಗಳನ್ನೇ ಹೆಚ್ಚು ಹೊದ್ದವರು. ನ್ಯಾಯ, ನೈತಿಕ ಮತ್ತು ವೈಚಾರಿಕ ನಿಲುವಿನ ಕಲಾವಿದ. ವೈಚಾರಿಕ ಮನೋಭಾವದಿಂದ ಅನೇಕ ಅವಕಾಶಗಳನ್ನು ಕಳೆದುಕೊಂಡವರು. ಎಂ.ಎಲ್.ಸೋಮವರದ ಬೆಂಗಳೂರಿನ ಕೆನ್ ಕಲಾ ಶಾಲೆಯಿಂದ 1987ರಲ್ಲಿ ಡಿ.ಎಂ.ಸಿ. ಪದವಿ ಪಡೆದವರು. 2008 ರಲ್ಲೇ ಮೈಸೂರು ಮುಕ್ತ ವಿ.ವಿ.ಯಿಂದ ಬಿ.ಎಫ್.ಎ. ಅಧ್ಯಯನ ಮಾಡಿದರು. ಮಂಡ್ಯ, […]

ಗಝಲ್

ಗಝಲ್ ತೇಜಾವತಿ ಹೆಚ್.ಡಿ. ಕೊರೆಯುವ ಚಳಿಯಲ್ಲೂ ವಹ್ನಿಯೊಡಲು ದಹಿಸುತ್ತಿದೆ ಸಾಕಿಬಹಿರಂಗದ ತೊಗಲು ಅಂತರಂಗದ ಜ್ವಾಲೆಯಲ್ಲಿ ಮೈ ಕಾಯಿಸುತ್ತಿದೆ ಸಾಕಿ ಹೆಪ್ಪುಗಟ್ಟಿದ್ದ ಹೃದಯ ರಂಧ್ರ ಮುಚ್ಚಿದ್ದ ಕಾಯದ ಬಾಯಿ ತೆರೆದುನರನಾಡಿಯಲ್ಲೂ ಶರವೇಗದಿ ಕಾವು ಮಿಂಚಂತೆ ಸಂಚರಿಸುತ್ತಿದೆ ಸಾಕಿ ರೆಕ್ಕೆ ಮೂಡದ ಹಕ್ಕಿಯ ಕನಸೊಳಗೆ ಮೌನದ ನೀರವತೆ ಮಡುಗಟ್ಟಿದೆಹನಿವ ಮಳೆಯೊಡನೆ ಹರಿವಕಂಬನಿ ಧರೆಯಲಿ ಲೀನವಾಗುತ್ತಿದೆ ಸಾಕಿ ಸಲಿಲದಿಂದ ಬೇರ್ಪಟ್ಟ ಮತ್ಸ್ಯದ ಒದ್ದಾಟದ ಚಡಪಡಿಕೆಯಲಿಜಾತಕಪಕ್ಷಿ ಜೀವಸೆಲೆಗಾಗಿ ಕಾತರಿಸಿ ಜವವ ಕಾಯುತ್ತಿದೆ ಸಾಕಿ ಇರುಳ ತಿಂಗಳ ತೇಜಸ್ಸನ್ನು ಭ್ರಮಿಸಿ ಸ್ಮೃತಿಪಟಲದ ಅಕ್ಷಿಗಳಲ್ಲಿಜಾರಿದ ಅಶ್ರುಬಿಂದುಗಳ […]

ಕಾವ್ಯಯಾನ

ಸಮುದ್ರ ಸಂಗೀತ ಫಾಲ್ಗುಣ ಗೌಡ ಅಚವೆ. ದೂರ ದಿಗಂತದಿಂದ ಓಡಿ ಬರುವಅಲೆಗಳು ದಂಡೆಗೆ ಅಪ್ಪಳಿಸುತ್ತಿವೆನಿರಾಳವಾಗುತ್ತಿವೆ.ಗುರಿಯ ಸಾಫಲ್ಯತೆಪ್ರಯತ್ನದ ಫಲವತ್ತತೆಸಾರುತ್ತಿದೆ ಕಡಲುಹಾಗೆ ಒಳಗೆ ಇಣುಕಿದರೆದಂಡೆಯ ಮೌನ ಸಂಗೀತಕೇಳುವುದು. ಸತ್ತ ಮೀನು ಸೌದೆ ಕೋಲುಎಲ್ಲವನ್ನೂ ದಂಡೆಗೆಸೆವತಾನು ಶುಭ್ರಗೊಳ್ಳುವ ಪರಿಅಚ್ಚರಿ!ಒಂದು ಕ್ಷಣ ಮನದಲ್ಲಿಣುಕಿದರೆನಿನ್ನೊಳಗಿನ ದ್ವೇಷ, ಅಸೂಯೆಕೋಪ ಸಣ್ಣತನಗಳ ಇದೇದಂಡೆಯಲ್ಲಿ ಬಿಟ್ಟು ಹೊರಡುವೆನಿಶ್ಕಲ್ಮಶ ಮನಸ ಹೊತ್ತು. ಶರಧಿಯೋಳಗಿನ ಆಳ ವಿಸ್ತಾರಭೋರ್ಗರೆತ,ಭರತ ಇಳಿತಗಳುಲಾಗಾಯ್ತಿನಿಂದಿಲ್ಲಿವರೆಗೆಸೇರುವ ಹೊಳೆಹಳ್ಳ,ನದಿಗಳುಕೂಡುತ್ತಲೇ ಇವೆ.ಎಲ್ಲ ಇದ್ದು ಇಲ್ಲದಂತಿರುವಸಮುದ್ರ ಸಮತೋಲನದ ಪಯಣನಿನ್ನೊಳಗೆ ಬಿಂದು ಸಿಂಧುವಾಗಲಿ. ಆಗಾಗ್ಗೆ ಅಥವಾ ಸಂಜೆಯಲ್ಲಿಸಣ್ಣಗೆ ಅಲೆವ ಅಲೆ ತನ್ನೊಳಗಿನಸುಪ್ತ ಸಂಗೀತ ಸೃಷ್ಟಿಸುವುದುನಿನ್ನೊಳಗಿನ […]

ಪ್ರಸ್ತುತ

ಕೊರೊನಾ ಕಾಲದ ರಂಗಸಂಸ್ಕೃತಿ ಚಿಂತನೆಗಳು ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಕರಾಳ ರಾಕ್ಷಸ ಹಾವಳಿಯಿಂದಾಗಿ ಮನುಷ್ಯರ ಬದುಕು ತೀವ್ರ ಸ್ವರೂಪದ ಆಘಾತವನ್ನು ಎದುರಿಸುವಂತಾಗಿದೆ. ಸಾಂಸ್ಕೃತಿಕ ಬದುಕಿಗೂ ತೀವ್ರವಾದ ಪೆಟ್ಟು ಬಿದ್ದಿದೆ. ನಿಸ್ಸಂದೇಹವಾಗಿ ಅದನ್ನು ಯಾರೂ ಅಲ್ಲಗಳೆಯಲಾರರು. ಹಾಗಂತ ಕೊರೊನಾ ಪೂರ್ವದಲ್ಲಿ ನಮ್ಮ ಸಾಹಿತ್ಯ, ಸಂಗೀತ, ನಾಟಕ ಹೀಗೆ ಎಲ್ಲಾ ಕಲೆಗಳಿಗೆ ಸಿಗುತ್ತಿದ್ದ ಪ್ರೋತ್ಸಾಹ, ಸಹಾಯ, ಸಹಕಾರ, ಅಭಿವ್ಯಕ್ತಿ ಸ್ವಾತಂತ್ರ್ಯ ಅಮೋಘವಾಗಿತ್ತು. ಅದರಿಂದಾಗಿ ಅತ್ಯಂತ ಸಮೃದ್ಧವಾದ ಸಾಂಸ್ಕೃತಿಕ ಬದುಕು ಮೈಮನ ತುಂಬಿ ಚೆಂಗುಲಾಬಿಯಂತೆ ಅರಳಿಕೊಂಡಿತ್ತೆಂದು ಭ್ರಮಿಸಬೇಕಿಲ್ಲ. ಈಗ ಕೊರೊನಾ […]

ಕಾವ್ಯಯಾನ

ಅಪ್ಪ ವೀಣಾ ನಿರಂಜನ್ ಯಾಕೋ ನಾನುಇವತ್ತಿಗೂ ಕೂಡಬೆಳೆದು ದೊಡ್ಡವಳಾಗಲೇ ಇಲ್ಲ! ಅಪ್ಪ ಮಾತ್ರಎಂದಿನಂತೆ ನನ್ನೊಳಗೆಬೆಳೆಯುತ್ತಲೇ ಇದ್ದಾನೆಅಪ್ಪನ ಅಸ್ಪಷ್ಟ ನೆನಪುಕಾಡಿದಾಗಲೆಲ್ಲನನ್ನವನೆದುರಿಗೆ ಮಗುವಾಗಿಬಿಡುವ ನಾನುಸುಖಾಸುಮ್ಮನೆರಚ್ಚೆ ಹಿಡಿಯುತ್ತೇನೆ ಹುಸಿ ರಂಪಎರಡು ಹನಿ ಕಣ್ಣೀರುಬಾಲ್ಯದ ಸವಾರಿಮಾಡಿಬಿಡುವ ಮನಸ್ಸುಅಪ್ಪನ ಕಾಯಿಲೆಅಮ್ಮನ ಗೋಳುಸರೀಕರ ತಾತ್ಸಾರನಮ್ಮಗಳ ಅಕಾಲ ಗಾಂಭೀರ್ಯತೆಎಷ್ಟು ನೀರು ಹಿಡಿದೀತುಪುಟ್ಟ ಬೊಗಸೆ ! ಪಾಳುಬಿದ್ದ ಅಪ್ಪನ ಮಹಾಮನೆಗೋಡೆ ಮಣ್ಣ ತಾರಸಿಯಮೇಲೆಲ್ಲ ಹುಲ್ಲು ಕಳೆಸಸ್ಯಗಳದೇ ಕಾರುಬಾರುಬಿರಿದು ಚೂರಾದ ಕಂಬಗಳುಎಷ್ಟು ಕತೆಗಳ ಹೇಳಿದರೂಮುಗಿಯದು ಇತಿಹಾಸ. ಮುದಿ ಹೆಂಗಸು ಹಜರತ್ ಬಿಇಂದಿಗೂ ಸ್ಮರಿಸುತ್ತಾಳೆಅಪ್ಪ ಕೊಡಿಸಿದ ಸರ್ಕಾರಿ ಮನೆಮತ್ತು ವಿಧವಾ ಪಿಂಚಣಿಯನ್ನು […]

ಅನುವಾದ ಸಂಗಾತಿ

ಕಡಲೊಳಗೆ ಕಡಲಾಮೆಗಳು ಇಂಗ್ಲೀಷ್ ಮೂಲ:Melvin B Tolson ಕನ್ನಡಕ್ಕೆ: ವಿ.ಗಣೇಶ್ ವಿಚಿತ್ರ ಆದರೂ ಸತ್ಯವಿದು ಕೇಳಿ     ಕಡಲಿನಲಿರುವ ಕಡಲಾಮೆಗಳ ಕಥೆ     ಕಡಲಾದರೇನು ಒಡಲಾದರೇನು?     ಕುಣಿದು ಕುಪ್ಪಳಿಸುವುದಕೆ ಚಿಂತೆ     ಒಮ್ಮೊಮ್ಮೆ ಅನ್ನ ಆಹಾರಗಳಿಲ್ಲದೆ     ಶಾರ್ಕಗಳು ಕಡಲಲ್ಲಿ ಒದ್ದಾಡುವುವು     ಬೇಟೆಯನು ಹುಡುಕುತ್ತ ಬರುವ     ಶಾರ್ಕ್‍ಗಳಿಗೆ ಸಿಗುವುದೀಆಮೆಗಳು     ಉದರವನು ತಣಿಳಿಸಲು ಆಕ್ರಮಿಸಿ     ನುಂಗುವುವು ಇಡಿ ಕಡಲಾಮೆಗಳನು     ಬೆಣ್ಣೆಯಂತಹ  ದೇಹದೊಳಗಿಳಿಯುತ್ತ     ಜಾರುವುದು ಆಮೆಯು ಉದರದೊಳಗೆ     ಒಳಸೇರಿದೊಡೆ […]

ಕಾವ್ಯಯಾನ

ಪ್ರೀತಿ ಬಡತನ ವಾಣಿ ಭಂಡಾರಿ ಅವ್ವನ ಸದ್ದಿರದ ಖಾಲಿ ಅಡಿಗೆ ಮನೆಯು,ಬಣಬಣ ಎನುತಲಿ ಮನವನು ಹಿಂಡಿದೆ.ಒಡಲೊಪ್ಪತ್ತಿಗೆ ಕೂಳು ತರಲು ಆಚೆಮನೆ,ಕಂಡ್ಲಿಲಿ ನಿಂತ ಅವ್ವನ ಬಂಗಿ ಕಾಣದಾಗಿದೆ. ಒಲೆಯೊಳು ಉರಿವ ಬೆಂಕಿಗೆ ಬೇಸರವು,ಚೆರ್ಗೆಯೊಳು ಕಾದಾರಿದ ಎಸರ್ನೀರಿತ್ತು.ತಣ್ಣಗಾಗಿ ಮತ್ತೊತ್ತುರಿಯಲು ಮನಸಿಲ್ಲದೆ, ಹೊಗೆಯುಗುಳುತಲಿ ನೋವಲಿ ಮಲಗಿತು. ಹಸಿ ಸೌದೆಯೊಳು ಉಗುಳೊ ಹೊಗೆಯಂತೆ,ಮನವು ಜಡ್ಡುಗಟ್ಟಿದಂತಹ ಮಸಿಯರಬೆ.ಇಲ್ಲಣವಿರದ ಖಾಲಿಪಾತ್ರೆ ಹೊರಳಿ ಮಲಗಿ,ಗಿಲಾವಿರದ ಗೋಡೆ ಕಥೆ ಹೇಳಿ ಮನದಲಿ ಹಬೆ. ತೊಳೆದ ಪಾತ್ರೆಯೊಳು ಪಾವಕ್ಕಿಯಿರದೆ,ಮನೆಮನದ ಮೂಲೆಯಲ್ಲಿ ರಶ್ಮಿ ಚೆಲ್ಲಿದೆ.ಬಡತನಕಿರುವ ಸಾವು ಪ್ರೀತಿಗಿರದಿಲ್ಲಿ ಎನುತ,ನೆಮ್ಮದಿ ತಾಣವೆ ಅಮ್ಮನಡಿಗೆ […]

Back To Top