ಮೌನ’ದ್ವನಿ’

ಮೌನ’ದ್ವನಿ’

ಕವಿತೆ ಮೌನ’ದ್ವನಿ’ ರೇಖಾ ಭಟ್ ರಕ್ಕಸರು ಸುತ್ತುವರೆದುಕತ್ತಲಾಗಿದೆಹೆಜ್ಜೆ ಹೊರಗಿಡಲೂ ಭಯವಿಕೃತಿಗೆ ಸಜ್ಜಾಗಿ ನಿಂತಿದೆದುಶ್ಯಾಸನನ ಸಂತತಿ ಬರೀ ಸೀರೆ ಸೆಳೆಯುವುದಿಲ್ಲ ಈಗಮೌನದೇವಿಯನಾಲಿಗೆಯೂ ಬೇಕುಮಾಂಸ ಮಜ್ಜೆಯ ಹರಿದು ತಿನ್ನುವವರಿಗೆ ಕೇವಲ ಕಾಮುಕರೆನ್ನಲಾಗದುಇವರಧರಿಸಲು ಹೇಗೆ ಬಂದಾವುಅರ್ಥಕೋಶದ ಪದಗಳುಹೇಸಿಕೊಳ್ಳುತ್ತಿವೆ ಸ್ತ್ರೀ ಅಸ್ಮಿತೆ ನರನಾಡಿಗಳುಒಳಗೊಳಗೆ ಕುದಿಯುತ್ತಿವೆರೋಷದ ಲಾವಾಗ್ನಿಚಿಮ್ಮಿದರೆದೂಷಿಸಬೇಡಿ ನೀವು ****************

ಅಂಕಣ ಬರಹ ಒಂದು ಹೃದ್ಯ ಕಾವ್ಯ ರಂಗಮ್ಮಹೊದೇಕಲ್ ತುಮಕೂರು ಜಿಲ್ಲೆಯ ಹೊದೇಕಲ್ ಗ್ರಾಮದ ಪ್ರತಿಭೆ ರಂಗಮ್ಮ ಹೊದೇಕಲ್.ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ.ಸಾಹಿತ್ಯ,ಸಂಘಟನೆ ಆಸಕ್ತಿಯ ಕ್ಷೇತ್ರಗಳು.ಒಳದನಿ,ಜೀವಪ್ರೀತಿಯ ಹಾಡು ಕವನ ಸಂಕಲನಗಳ ನಂತರ ಇದೀಗ ‘ನೋವೂ ಒಂದು ಹೃದ್ಯ ಕಾವ್ಯ’ ಹನಿಗವಿತೆಗಳ ಸಂಕಲನ ಹಾಸನದ “ಇಷ್ಟ” ಪ್ರಕಾಶನದಿಂದ ಪ್ರಕಟವಾಗಿದೆ. ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿತೆ ಅವ್ಯಕ್ತಗಳ ಅಭಿವ್ಯಕ್ತಿ.ಆತ್ಮದ ಬೆಳಕು.ಮತ್ತು ಕವಿತೆ ಮಾತ್ರವೇ ಆತ್ಮದ ಸಂಗಾತ ಅನ್ನಿಸಿದ್ದಕ್ಕೆ! ಕವಿತೆ ಹುಟ್ಟುವ ಕ್ಷಣ ಯಾವುದು ? ಕರುಳು ಕಲಕುವ ಯಾವುದೇ ಸಂಕಟವೂ […]

ಬೀಜಕ್ಕೊಂದು ಮಾತು

ಕವಿತೆ ಬೀಜಕ್ಕೊಂದು ಮಾತು ರಜಿಯಾ ಬಳಬಟ್ಟಿ ಎಲೆ ಬೀಜವೇನೀ ಹೆಣ್ಣೋ ಗಂಡೋ ಹೀಗೇಕೆ ಕೇಳುವಳೀ ಅಮ್ಮಎಂದು ಆಶ್ಚರ್ಯ ವೇನು ಕಂದಾ , ಹೌದು ಕೇಳುವ ಸ್ಧಿತಿ ಈಗ. ಒಂದು ಕಾಲವಿತ್ತುಸುತ್ತೆಲ್ಲ ಗುಲಾಬಿ ತೋಟನಡುವೆ ಕೆಂಗುಲಾಬಿನನ್ನ ಮಗಳೆಂದುಖುಷಿ ಪಡುವದು. ಈಗಿಲ್ಲವಮ್ಮ. ಗುಲಾಬಿಯ ತೋಟದಲ್ಲೆಲ್ಲಹೊಂಚು ಹಾಕಿದ ಕಾಮದ ಕಂಗಳುಕ್ಷಣ ಕ್ಷಣವೂ ಅಭದ್ರತೆಕೀಚಕ – ದುಶ್ಯಾಸನರವಂಶಾವಳಿಯಲ್ಲಿಅದೆಂತು ರಕ್ಷಿಸಲಿ ಮಗಳೆ,ಭೀತಿಯ ಬಾಹುಗಳಲಿನನ್ನನ್ನೇ ನಾ ಉಳಿಸಿಕೊಂಡುಗೂಡು ಸೇರುವದೇದುಸ್ಸಾಹಸವಾಗಿರುವಾಗ,ನೀ ಮೊಳಕೆಯೊಡೆಯಬೇಡತಿಳಿ, ಈ ಅಸಹಾಯಕತೆಯ. ಅಪ್ಪಾ ಮಗಾ ರಾಜಕುಮಾರಾವಂಶಕ್ಕೆ ಹೆಸರು ತಂದುದೃಷ್ಟಿ ತುಂಬ ಸಹಾಯ ಭಾವದಿಆದರ್ಶದಿ ಬದುಕುವದಿದ್ದರೆ […]

ಅಂಕಣ ಬರಹ ತ್ವರಿತವಾಗಿಉತ್ತಮನಿರ್ಧಾರತೆಗೆದು ಕೊಳ್ಳುವುದುಹೇಗೆ? ಹಿಂದೆ ಮಾಡಿದ ನಿರ್ಧಾರಗಳು ಇಂದು ನಾವಿರುವ ಸ್ಥಿತಿಗೆ ಕಾರಣ.ಎಂಬುದು ನಮಗೆಲ್ಲ ಗೊತ್ತಿರುವ ವಿಷಯವೇ. ಆದರೂ ಹಲವೊಮ್ಮೆ ನಾವು, ಛೇ! ನಾನು ಅಷ್ಟು ತಡವಾಗಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಈಗ ನೋಡು ಎಷ್ಟೊಂದು ನೋವು ಅನುಭವಿಸುವ ಹಾಗಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು. ನನ್ನ ವಿಳಂಬ ನಿರ್ಧಾರದಿಂದ ಸಾಕಷ್ಟು ನಷ್ಟವಾಗುತ್ತಿದೆ ಅಂತ ತಿಳಿಯುತ್ತಿದ್ದರೂ ಅದನ್ನು ಬದಲಿಸಿಕೊಳ್ಳಲು ಆಗುತ್ತಿಲ್ಲ ಎಂದು ಹಲಬುತ್ತೇವೆ.ನಿರ್ಧಾರಗಳು ಇಡೀ ಜೀವನವನ್ನೇ ಆವರಿಸಿವೆ. ವೃತ್ತಿ ಪ್ರವೃತ್ತಿ ಆರೋಗ್ಯ ಸಂಬಂಧಗಳು ಎಲ್ಲವೂ ನಿರ್ಧಾರದಿಂದ […]

ಸಂತೆಯಲ್ಲಿ ನಿಂತ ಅವಳು

ಲೇಖನ ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು) ಸಂತೆಯಲ್ಲಿ ನಿಂತ ಅವಳು (ಮಹಿಳಾ ಜಾಹಿರಾತು)             ಪ್ರಾಚೀನ ಕಾಲದಿಂದ ಇಂದಿನವರೆಗೂ ಮಾರುಕಟ್ಟೆಗೆ ಒಂದು ಆರೋಗ್ಯಕರವಾದ ನೀತಿ ಸಂಹಿತೆಯನ್ನು ರೂಪಿಸುವ ವಿವೇಕ ಮತ್ತು ವ್ಯವಧಾನ ಸಾಮುದಾಯಿಕ ಜವಾಬ್ದಾರಿಯಾಗಿ ಯಾವ ಕಾಲದಲ್ಲಿ ಯಾರಲ್ಲಿಯೂ ಕಾಣಿಸಿಕೊಂಡಿಲ್ಲ. ಆರೋಗ್ಯಕರ ಸಮಾಜಕ್ಕೆ ಲಾಭಗಳಿಕೆಯ ವ್ಯವಹಾರಿಕತೆಯನ್ನು ನಿಯಂತ್ರಿಸುವ ಶಕ್ತಿಯಿಲ್ಲದಿದ್ದರೆ ಇಡೀ ವ್ಯವಸ್ಥೆಯೇ ನರಳಬೇಕಾಗುತ್ತದೆ. ಮಾರುಕಟ್ಟೆ ಸಂಸ್ಕೃತಿ ಗಳಿಕೆಯ ತೂಗು ಕತ್ತಿಯನ್ನು ನಿರಂತರ ಗ್ರಾಹಕನ ಮೇಲೆ ಬೀಸುತ್ತಿರುತ್ತದೆ. ಇದರಿಂದ ವ್ಯಕ್ತಿ […]

ಕತ್ತಲಿನಲಿ ನ್ಯಾಯ

ಕವಿತೆ ಕತ್ತಲಿನಲಿ ನ್ಯಾಯ ಸಾಯಬಣ್ಣ ಮಾದರ ಎಳೆಯ ಬಾರದೆಕ್ಕೆಅವರ ಕರಳು ಬಳ್ಳಿಗಳನ್ನುಕ್ರೀಯಗೆ ಪ್ರತಿಕ್ರೀಯೇ ?ಆಗುವದ್ಯಾವಾಗಿನ್ನುಎಷ್ಟು ದಿನವಂತೆಕೂಗುವಿರಿ ದಿಕ್ಕಾರಮೇಲಿನವರ ಕುರ್ಚಿಗಳಿಗೆಕಿವಿ ಕುರುಡಮನಿಷಾಗೆ ಸಿಗುವುದೇಕತ್ತಲಿನಲ್ಲಿರುವನ್ಯಾಯ ಬೆಳಕು !! ಜೋಳದ ಹೊಲದ ದಂಟುಗಳೆಕಣ್ಣೀರುಗೈದವುಯೋನಿಯಿಂದರಿದ ರಕ್ತಮಡುಗಟ್ಟಿತ್ತಲಕೂಗಲು ಬಾರದಂತೆನಾಲಿಗೆ ಸೀಳಿಅಟ್ಟಹಾಸ ಗೈದರಲ್ಲಸಬಲರುಆಗಬೇಕಲ್ಲವೇ ಅವರಿಗೂಆ ನೋವು ಜಾತಿ ಬಲವಿದ್ದರೆಮಾಡುವರು ಎನ್ಕೌಂಟರ್ಸುಡುವರು ದಮನಿತರನ್ನುನಡುರಾತ್ರೀ ಹಗಲು !! ನಾಟ್ಯದವರು ಬಸಿರಾದರುದೇಶದ ದೊರೆಕುಣಿದಾಡುವನು ಹಿರಿ ಹಿರಿ ಹಿಗ್ಗಿಬೆನ್ನು ಮೂಳೆ ಮುರಿದುಯೋನಿ ಹರಿದರುಇವರಿಗೆಕನಿಕರಿಸದವನು !! ಭಯಭರವಸೆ ಕಳೆದುಕೊಂಡರೆಹಾವೇ ಹಗ್ಗಭಯ ಬುಗ್ಗೆಯಚಿಲುಮೆ ಹುಟ್ಟಿಸಿನ್ಯಾಯ ದೀಪಕ್ಕೆಬತ್ತಿ ಹತ್ತಿಸಿಕಣ್ಣಿಗೆ ಕಣ್ಣು ಕಳೆಯಲುಸಿದ್ದರಾಗ ಬೇಕಲ್ಲವೆನಾವು !! *********************************

ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ

ಲಹರಿ ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ ಸ್ಮಿತಾ ಭಟ್ ತವರು ಎನ್ನುವದು ಮುಗಿಯಲಾರದ ಸೆಳೆತ ಮತ್ತದು ಹೆಣ್ಮಕ್ಕಳಿಗೆ ಮಾತ್ರ ಸೀಮಿತ. ತಲೆ ತಲಾಂತರಗಳಿಂದಲೂ ತವರು ಮತ್ತು ಹೆಣ್ಣು ಸಯಾಮಿಯಂತೆ ಬದುಕುತ್ತ ಬಂದಿದ್ದಾರೆ. ಹೆಣ್ಣಿನೊಳಗೆ ತವರಿನ ಸೆಳೆತ,ಪುಳಕ,ಅಪ್ಯಾಯ ಭಾವಗಳು ಶುರುವಾಗುವದೇ ಮದುವೆಯೆಂಬ ಬಂಧನದಲಿ,ಭಾವದಲಿ,ಸಿಲುಕಿ ತವರ ತೊರೆದು ಹೊರನಡೆದಾಗಲೇ. ಅಲ್ಲಿಯವರೆಗೆ ಸುಪ್ತವಾಗಿದ್ದ ನಯ ನಾಜೂಕಿನ ಭಾವನೆಗಳೆಲ್ಲ ಕಟ್ಟೆಯೊಡೆದು ಹೃದಯವನ್ನು ತಲ್ಲಣಗೊಳಿಸಿಬಿಡುತ್ತವೆ. ಎಂತಹ ಐಶಾರಾಮಿ ಗಂಡನಮನೆಯೇ ಸಿಗಲಿ ತವರಿನಿಂದ ಬರುವ ಪುಟ್ಟ ಉಡುಗೊರೆಗಾಗಿ  ಹೆಣ್ಣು ಕಾತರದಿಂದ ಕಾಯುತ್ತಾಳೆ. ತವರೂರಿನ ಹೆಸರು […]

ಒಂದು ಜೀವನ ಸಾಲದು ( ಆತ್ಮ ಕಥೆ) ಒಂದು ಜೀವನ ಸಾಲದು ( ಆತ್ಮ ಕಥೆ)ಮೂಲ : ಕುಲದೀಪ್ ನಯ್ಯರ್ಅನುವಾದ : ಆರ್. ಪೂರ್ಣಿಮಾಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ :೨೦೧೮ಬೆಲೆ :ರೂ.೪೪೬ಪುಟಗಳು : ೫೯೨ ಇದು ಪ್ರಸಿದ್ಧ ಪತ್ರಕರ್ತ ಕುಲದೀಪ ನಯ್ಯರ್ ಅವರ ಆತ್ಮಕಥೆಯ ಅನುವಾದ.  ಸಾಕಷ್ಟು ದೀರ್ಘವಾಗಿರುವ ಈ ಕೃತಿಸ್ವಾತಂತ್ರ್ಯೋತ್ತರ.      ಭಾರತದಲ್ಲಿ ಘಟಿಸಿದ ಅನೇಕ ದುಃಖಕರ ಘಟನೆಗಳನ್ನು ನಿರೂಪಿಸುತ್ತದೆ.  ಹಾಗೆಯೇ  ಸ್ವಾತಂತ್ರ್ಯ   ಪೂರ್ವದಲ್ಲಿ ದೇಶವನ್ನು ವಿಭಜನೆಯತ್ತ ಕೊಂಡೊಯ್ದ ರಾಜಕೀಯ ಸನ್ನಿವೇಶಗಳನ್ನು ಕುರಿತೂ ಹೇಳುತ್ತದೆ. ಸಾಮಾನ್ಯ […]

ಮನಿಷಾಗೊಂದು ಗಝಲ್

ಮನಿಷಾಗೊಂದು ಗಝಲ್ ಅರುಣಾ ನರೇಂದ್ರ ನಾನಿಲ್ಲಿ ಮೂಕಳಾಗಿರಬೇಕು ಮಾತನಾಡಿದರೆ ನಾಲಿಗೆ ಕತ್ತರಿಸುತ್ತಾರೆನೀನಿಲ್ಲಿ ಜೀವಂತ ಶವವಾಗಿರಬೇಕು ಪ್ರತಿಭಟಿಸಿದರೆ ಗುಂಡಿ ತೋಡಿಸುತ್ತಾರೆ ರಾಮನಾಳಿದ ಈ ನೆಲದಲ್ಲಿ ನಾನು ಮತ್ತೆ ಹೆಣ್ಣಾಗಿ ಹುಟ್ಟಿದ್ದೇನೆ ಗೆಳತಿಹೊಸಿಲು ದಾಟಿ ಲಕ್ಷ್ಮಣ ರೇಖೆಯನ್ನೂ ದಾಟುತ್ತೇನೆಂದರೆ ವನವಾಸ ಕಳಿಸುತ್ತಾರೆ ನಿರ್ಭಯಾ ಮಧು ದಿಶಾ ಮತ್ತೆಲ್ಲರ ಆರ್ತನಾದ ಇನ್ನೂ ಕೇಳಿಸಿದರೂ ಮತ್ತೆ ಎಂಥ ನಿರ್ಲಕ್ಷ್ಯಇಂದು ಮನಿಶಾ ನಾಳೆ ನನ್ನ ಸರದಿ ಬೇಡವೆಂದರೆ ಮಸಣದ ಮನೆ ತೋರಿಸುತ್ತಾರೆ ಯುಗ ಯುಗಗಳು ಅಳಿದರೂ ಇನ್ನೆಷ್ಟು ಹೆಣ್ಣು ಬಲಿಯಾಗಬೇಕು ಇವರ ಕಾಮದ ತೀಟೆಗೆಅಂಗಾಂಗಗಳ […]

ಶಾಂತಲಾ ಮಧು ಬಹುಮುಖ ಪ್ರತಿಭೆ

ಶಾಂತಲಾ ಮಧು ಬಹುಮುಖ ಪ್ರತಿಭೆ ಶಾಂತಲಾ ಮಧು ಅವರ ಪರಿಚಯ ಶಾಂತಲಾ ಮಧು ಅವರು ಅಂತಾರಾಷ್ಟ್ರೀಯ ಯೋಗ ಗುರುವಾಗಿ ಕೆಲಸ ಮಾಡುತ್ತಿದ್ದಾರೆ. ಉಸ್ತಾದ್ ಬಾಲೇಖಾನ್ ಶಿಷ್ಯೆಯಾಗಿ ಸಿತಾರ್ ವಾದನ ಕಲಿತಿದ್ದಾರೆ. ಬಯಲು ಕವನ ಸಂಕಲನ ಪ್ರಕಟಿಸಿದ್ದಾರೆ. ಚಿತ್ರಕಲಾವಿದೆ ಸಹ . ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ . ಪತಿ ಮಧು ಅವರು ಯಾರ್ಡ್ಲಿ ಸಂಸ್ಥೆಯ ಉಪಾಧ್ಯಕ್ಷರು. ಪುತ್ರಿ ರಶ್ಮಿ ಅವರು ವೈದ್ಯೆ . ಮಗ ಗೌತಮ್ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಶಾಂತಲಾ ಅವರು ಕನ್ನಡ ಸಾಹಿತ್ಯ ಸ್ನಾತಕೋತ್ತರ ಪದವೀಧರೆ […]

Back To Top